ವಿಧ: ರುಚಿ
September 12, 2024
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಗೋದಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಗೋಡಂಬಿ, ದ್ರಾಕ್ಷಿ ಸೇರಿಸಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಹಾಲು, ನೀರು ಹಾಗು ಸಕ್ಕರೆ ಸೇರಿಸಿ ಕುದಿಯಲು ಇಡಿ. ಕುದಿಯುವ ಈ ಹಾಲು, ನೀರಿನ ಮಿಶ್ರಣವನ್ನು ಹುರಿದ ಗೋದಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಗುಚಿ. ಏಲಕ್ಕಿ ಪುಡಿ ಸೇರಿಸಿ ಮತ್ತೆ ಗಂಟಿಲ್ಲದಂತೆ ಮಗುಚಿ ಇಳಿಸಿ. ಇದು ಬೇಗನೇ ಆಗುವ ಸಿಹಿತಿಂಡಿ.
- ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
September 11, 2024
ವಿವೇಕ ದಿವಟೆಯವರ ‘ಹೊಂಗಿರಣ’
ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಭಾರಿ ಪ್ರಾಚಾರ್ಯರಾಗಿರುವ ಬೆಳಗಾವಿ ತಾಲೂಕಿನ ಬಸವನ ಕುಡಚಿಯ ಶ್ರೀ ವಿವೇಕ ದಿವಟೆಯವರು ದ್ವಿಭಾಷಾ ಕವಿಗಳು. ಅವರು ಹಿಂದಿಯಲ್ಲಿ ಬರೆದಿರುವ ಕವನ ಸಂಕಲನ ಪ್ರಕಟವಾಗಿದೆ. ಮೂಲತಃ ಹಿಂದಿ ಅಧ್ಯಾಪಕರಾಗಿರುವ ಅವರು ಕನ್ನಡದಲ್ಲಿಯೂ ಬರೆಯುವ ಪ್ರಯತ್ನವಾಗಿ ಅವರ ಕವನ ಸಂಕಲನ ‘ಹೊಂಗಿರಣ’ ೨೦೨೦ ರಲ್ಲಿ ವಿವೇಕ ಪ್ರಕಾಶನದಿಂದಲೇ ಪ್ರಕಟವಾಗಿದೆ. ಅವರ ಈ ಮೊದಲ ಕವನ ಸಂಕಲನಕ್ಕೆ ಬೆಳಗಾವಿಯ ಹಿರಿಯ ಪತ್ರಕರ್ತರಾದ ಶ್ರೀ ಎಲ್,ಎಸ್…
ವಿಧ: ರುಚಿ
September 11, 2024
ತೊಂಡೆಹಣ್ಣುಗಳನ್ನು ಸಣ್ಣಗೆ ಕತ್ತರಿಸಿ, ಉಪ್ಪು ಹಾಕಿ ಬೇಯಿಸ ಬೇಕು. ಅದು ತಣ್ಣಗಾದ ಮೇಲೆ ಚೆನ್ನಾಗಿ ಕಿವುಚಿಕೊಳ್ಳ ಬೇಕು. ಕಿವುಚಿದ ತೊಂಡೆಹಣ್ಣಿಗೆ ಮೊಸರು, ಹಸಿಮೆಣಸು ಸಣ್ಣಗೆ ಕೊಚ್ಚಿ ಹಾಕಬೇಕು. ಈ ಮಿಶ್ರಣ ಕ್ಕೆ ಬೇವಿನಸೊಪ್ಪು ಒಗ್ಗರಣೆ ಹಾಕಿದರೆ ಪಚ್ಚಡಿ ತಯಾರು.
-ಅಶ್ವಿನಿಮೂರ್ತಿ ಅಯ್ಯನಕಟ್ಟೆ
ವಿಧ: ಪುಸ್ತಕ ವಿಮರ್ಶೆ
September 10, 2024
ರಾಮಕೃಷ್ಣ ಹೆಗಡೆ ಇವರು ಬರೆದ 'ಒಲವ ಧಾರೆ' ಎನ್ನುವ ಕವನ ಸಂಕಲನ ಇತ್ತೀಚೆಗೆ ಕಾರ್ಕಳದ ಪುಸ್ತಕ ಮನೆ ಪ್ರಕಾಶನದ ಮುಖಾಂತರ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಲಕ್ಷ್ಮಿ ಕೆ. ಇವರು ತಮ್ಮ ಮುನ್ನುಡಿ ಬರಹದಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ...
“ನವೋದಯ-ನವ್ಯ ಸಾಹಿತ್ಯರಚನೆಯ ಈ ಕಾಲಘಟ್ಟದಲ್ಲಿ ಕವನಗಳನ್ನು ರಚಿಸಲು ನಿರ್ದಿಷ್ಟ ನಿಯಮಗಳೇನೂ ಇಲ್ಲವಾದರೂ ತೋಚಿದ್ದನ್ನೆಲ್ಲ ಗೀಚಿದರೆ ಅದು ಕವನ ಎನಿಸಿಕೊಳ್ಳುವುದಿಲ್ಲ. ಅನುಭವಗಳ ಸಾರವನ್ನು ಕಲ್ಪನೆಯ…
ವಿಧ: ರುಚಿ
September 09, 2024
ಸ್ಟೀಲ್ ಅಥವಾ ಚೆನ್ನಾಗಿ ಕಲಾಯಿ ಇರುವ ಹಿತ್ತಾಳೆ ಪಾತ್ರೆಯಲ್ಲಿಹಾಲು- ಬೆಲ್ಲ ಸೇರಿಸಿ ಕಾಯಿಸುತ್ತಾ ಬನ್ನಿ. ಕಾಯಿಸುತ್ತಿರುವಾಗಲೇ ಏಲಕ್ಕಿ-ಲವಂಗ ಅರೆದು ಪುಡಿಮಾಡಿ ಹಾಕಿ. ಹಾಲು ಪೂರ್ತಿ ಗಟ್ಟಿಯಾಗಿ ಒಣ ಪಂಚಕಜ್ಜಾಯದಂತೆ ಗಟ್ಟಿಯಾಗುವ ತನಕ ಕಾಯಿಸಿ. ಅನಂತರ ಕೆಳಗಿಳಿಸಿಡಿ. ಇದು ಹುಡಿ (ಪುಡಿ) ಯಾಗುತ್ತದೆಯಾದ್ದರಿಂದ " ಸಿಹಿ ಸಿಹಿ ಹುಡಿ ಗಿಣ್ಣ" ಸುಮಾರು ಒಂದು ವಾರದ ತನಕ ಹಾಗೇ ಇಟ್ಟರೂ ಹಾಳಾಗುವುದಿಲ್ಲ. ಬಂಧುಗಳು- ಆತ್ಮೀಯರು ಬಂದಾಗ ಪ್ರೀತಿಯಿಂದ ಕೊಡಿ. ಇದನ್ನು ಹಾಗೆಯೇ ಅಥವಾ ದೋಸೆ-…
ವಿಧ: ಪುಸ್ತಕ ವಿಮರ್ಶೆ
September 08, 2024
ಈಗಾಗಲೇ 2021 ರಲ್ಲಿ."ಮರುಳನ ಶಾಯಿರಿ ಲೋಕ "ಎಂಬ ಶಾಯಿರಿ ಸಂಕಲನದ ಮೂಲಕ ಶಾಯಿರಿ ಕವಿಯಂದು ಹೆಸರಾದವರು ಹುಲಕೋಟಿಯ ಮರುಳಸಿದ್ದಪ್ಪ ದೊಡಮನಿಯವರು.ಅವರ "ಮರುಳನ ಶಾಯಿರಿ" ಲೋಕದ ಗುಂಗು ಇನ್ನು ತಲೆಯಿಂದ ಮಾಸದಿರುವಾಗಲೇ,ಈ ಕವಿ ಎರಡನೆಯ ಶಾಯಿರಿ ಸಂಕಲನವನ್ನು ಓದುಗರ ಎದೆಗೆ ಇತ್ತಿದ್ದಾರೆ.ಅವರು ಸದಾ ಶಾಯಿರಿಯನ್ನೇ ಉಸಿರಾಡಿಸುವದಕ್ಜೆ ಇದೊಂದು ನಿದರ್ಶನ. ಕನ್ನಡದಲ್ಲಿ ಶಾಂತರಸ, ಇಟಗಿ ಈರಣ್ಣ ,ಎಸ್ ಜಿ ಸ್ವಾಮಿ , ಅಸಾದುಲ್ಲಾ ಬೇಗ್,ಮೊದಲಾದ ಹಿರಿಯರಿಂದ ಬರೆಯಲು ಶುರು ಹಚ್ಚಿಕೊಂಡು ಈ ಕಾವ್ಯ…
ವಿಧ: ಬ್ಲಾಗ್ ಬರಹ
September 08, 2024
ಕಣ್ಣು ಬಿಡುವ ಮೊದಲೇ ಅಮ್ಮನ ದನಿ ಕಿವಿಗೆ ತಲುಪಿತ್ತು. ನಿದ್ದೆಯ ಮಂಪರಿನಲ್ಲಿದ್ದ ನನಗೆ ಕೇಳಿದ್ದು ಒಂದು ಪದ, ಸಂಪಿಗೆ. ಅಷ್ಟು ಕೇಳಿದ್ದೇ ತಡ, ಮನಃಪಟಲ ಹದಿನೈದು ವರ್ಷಗಳಷ್ಟು ಹಿಂದೆ ಓಡಿತು. ಆಗ ನಗರದ ಇನ್ನೊಂದು ಮೂಲೆಯಲ್ಲಿ ನಮ್ಮ ಮನೆ. ಮೂರು ಚಕ್ರದ ಸೈಕಲ್ ನಲ್ಲಿ ಊರೆಲ್ಲಾ ಸುತ್ತಿ, ಅರ್ಥಾತ್ ಮನೆಯ ಬಳಿಯಿದ್ದ ಮೂರೂ ಅಡ್ಡರಸ್ತೆಗಳನ್ನು ದಾಟಿ ಹೋದರೆ, ಅಲ್ಲಿ ಒಂದು ಸಂಪಿಗೆ ಮರ. ಬಹಳ ದೊಡ್ಡ ಮರವೇನಲ್ಲ. ಆದರೆ ಇದ್ದ ಗಾತ್ರದ ತುಂಬಾ ಹೂವು. ಆ ಹೂವುಗಳೊಂದಿಗೆ ಅವು ಬೀರುವ ಪರಿಮಳ.…
ವಿಧ: ರುಚಿ
September 07, 2024
ಬೇವಿನ ಸೊಪ್ಪು, ತೆಂಗಿನ ತುರಿ, ಉಪ್ಪು, ಹುಳಿ, ಹುರಿಕಡಲೆಯನ್ನು ಒಟ್ಟಾಗಿ ಬೀಸಿ ಒಗ್ಗರಣೆ ಹಾಕಿದರೆ ಬೇವಿನ ಸೊಪ್ಪಿನ ಸಾದಾ ಗೊಜ್ಜು ತಯಾರು.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ವಿಧ: ಪುಸ್ತಕ ವಿಮರ್ಶೆ
September 05, 2024
‘ಭೂಮಿ' ಎನ್ನುವುದು ಲೇಖಕ ಈರಣ್ಣ ಬೆಂಗಾಲಿ ಇವರು ಬರೆದ ಕಾದಂಬರಿ. ಈ ಕಾದಂಬರಿಯ ಬಗ್ಗೆ ಮುನ್ನುಡಿಯನ್ನು ಬರೆದಿದ್ದಾರೆ ಶೇಖರಗೌಡ ವೀ ಸರನಾಡಗೌಡರ್ ತಾವರಗೇರಾ ಇವರು. ತಮ್ಮ ಮುನ್ನುಡಿಯಲ್ಲಿ ಶ್ರೀಯುತರು ವ್ಯಕ್ತ ಪಡಿಸಿದ ಭಾವ ಇಲ್ಲಿದೆ...
“ಬಿಸಿಲ ನಾಡು ಕಲ್ಯಾಣ ಕರ್ನಾಟಕದ ಒಂದು ಭಾಗ ರಾಯಚೂರು ಜಿಲ್ಲೆ. ಈ ಬಿಸಿಲ ನಾಡಿನಲ್ಲಿ ಅನೇಕ ಸಾಹಿತ್ಯ ದಿಗ್ಗಜರು ಕಲ್ಯಾಣ ಕರ್ನಾಟಕದ ಘನತೆ, ಗೌರವಗಳನ್ನು ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಬೆಳಗುವಂತೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.…
ವಿಧ: ರುಚಿ
September 04, 2024
ದೊಣ್ಣೆ ಮೆಣಸನ್ನು ಸಣ್ಣಗೆ ಚೌಕಾಕಾರಕ್ಕೆ ಹೆಚ್ಚಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕೆಂಪುಮೆಣಸಿನ ಚೂರುಗಳನ್ನು ಹಾಕಿ ಸಾಸಿವೆ ಸಿಡಿದಾಗ ಕರಿಬೇವು ಮತ್ತು ದೊಣ್ಣೆ ಮೆಣಸಿನ ಚೂರುಗಳನ್ನು ಹಾಕಿ ಬಾಡಿಸಿ. ನಂತರ ಅರಸಿನ ಪುಡಿ, ಉಪ್ಪಿನ ಪುಡಿ ಹಾಕಿ ಬೆರೆಸಿ. ಒಲೆಯಲ್ಲಿ ಸ್ವಲ್ಪ ಹೊತ್ತು ಮಗುಚುತ್ತಾ ಇರಿ. ಬಾಣಲೆಯನ್ನು ಇಳಿಸಿ. ತಣಿದ ನಂತರ ಮೊಸರನ್ನು ಹಾಕಿ ಕಲಸಿ. ಈಗ ದೊಣ್ಣೆಮೆಣಸಿನ ರಾಯಿತ ಸವಿಯಲು ತಯಾರಾಯಿತು.
- ಸಹನಾ ಕಾಂತಬೈಲು, ಮಡಿಕೇರಿ