ಎಲ್ಲ ಪುಟಗಳು

ವಿಧ: ರುಚಿ
September 29, 2024
ಬಸಳೆ ಚಿಗುರನ್ನು ಜೀರಿಗೆ, ಬೆಣ್ಣೆ ಹಾಕಿ ಹುರಿಯಬೇಕು. ಸ್ವಲ್ಪ ತಣ್ಣಗಾದ ಮೇಲೆ ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಬೇಕು. ಅದಕ್ಕೆ ಬೆಲ್ಲ , ಉಪ್ಪು, ಮಜ್ಜಿಗೆ, ಬೇಕಾದಷ್ಟು ನೀರು ಹಾಕಿ ಒಗ್ಗರಣೆ ಹಾಕಿದರೆ ಬಸಳೆ ತಂಬುಳಿ ತಯಾರು. -ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 28, 2024
ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ ‘ವೈಶಾಖದ ಮಳೆ' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನದ ಬಗ್ಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಎಂ ಎಸ್ ಆಶಾದೇವಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ... “ಸುಮತಿ ಕೃಷ್ಣಮೂರ್ತಿಯವರ 'ವೈಶಾಖದ ಮಳೆ' ಯ ಮೊದಲ ಓದು ಕವಿಯ ಮೊದಲ ಕವಿತೆಗಳಿಗಿಂತ ಖಂಡಿತ ತುಸು ಎತ್ತರದಲ್ಲಿದೆ. ಅವರೊಳಗೆ ಕವಿಯ ಕಣ್ಣಿನ ಇರುವಿಕೆಯನ್ನಂತೂ ಇಲ್ಲಿನ ಕವಿತೆಗಳು ಸಾಬೀತು ಮಾಡುತ್ತಿವೆ. ಕವಿತೆಗಳು ಧಿಡೀರ್…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 26, 2024
‘ಆತ್ಮಾನುಸಂಧಾನ' ಎನ್ನುವ ಕವನ ಸಂಕಲನ ಎ ಎನ್ ರಮೇಶ್ ಗುಬ್ಬಿ ಅವರ ೧೨ನೇ ಕೃತಿ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕವಯತ್ರಿ, ಲೇಖಕಿ ಹಾಗೂ ಉಪನ್ಯಾಸಕಿಯಾದ ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಸಾಲುಗಳು ಇಲ್ಲಿವೆ... “ಜೀವನದ ಹಲವು ಸ್ತರಗಳನ್ನು ದಾಟಿಬಂದ ಜೀವವೊಂದು 'ಕವಿಭಾವ'ದಲ್ಲಿ ನಿಶ್ಚಿತವಾದ ನೆಲೆಯೊಂದರಲ್ಲಿ ನಿಂತು ನಿರ್ವಿಕಾರ ಭಾವದಿಂದ ತನ್ನ ಅನುಭವದ ಅನುಸಂಧಾನ ಮಾಡುವ ಪಕ್ವ ಮನಸೊಂದರ ಒಡನಾಟಕ್ಕೆ ಬರುವ ಅನುಭವಗಳನ್ನು…
ವಿಧ: ರುಚಿ
September 26, 2024
ಮಾವಿನ ಹಣ್ಣನ್ನು ಹೋಳು ಮಾಡಿ ಗೊರಟು ಸಹಿತ ೪ ಕಪ್ ನೀರಿನಲ್ಲಿ ಅರಸಿನ ಪುಡಿ, ಕೊತ್ತಂಬರಿ-ಜೀರಿಗೆ ಪುಡಿ, ಉಪ್ಪು, ಬೆಲ್ಲ, ಇಂಗು, ಹಸಿಮೆಣಸು ಹಾಕಿ ಬೇಯಿಸಿ. ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಅನ್ನದೊಂದಿಗೆ ಕಲಸಿ ತಿನ್ನಲು ರುಚಿ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 24, 2024
ಭರವಸೆಯ ಕಾದಂಬರಿಕಾರ ಪ್ರಮೋದ ಕರಣಂ ಅವರು ಬರೆದ ಜನ ಜಾಗೃತಿ ಮೂಡಿಸಬಲ್ಲ ಕಥಾ ಹಂದರವನ್ನು ಹೊಂದಿರುವ ಪುಟ್ಟ ಕಾದಂಬರಿಯೇ ‘ಸಾಧ್ಯ ಅಸಾಧ್ಯಗಳ ನಡುವೆ'. ಈ ಕಾದಂಬರಿಯು ನಮ್ಮ ಈಗಿನ ಯುವ ಜನಾಂಗದ ನಡುವೆ ಪ್ಯಾಷನ್-ಫ್ಯಾಷನ್, ಸ್ಟೈಲ್ ಎಂಬ ನೆಪದಲ್ಲಿ ಹುಟ್ಟಿಕೊಂಡಿರುವ ಮದ್ಯಪಾನ, ಧೂಮಪಾನ, ಮಾದಕ ದ್ರವ್ಯಗಳಂತಹ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುತ್ತದೆ.  ಸ್ವಚ್ಛತೆಯನ್ನರಸಿ ಕಲ್ಬುರ್ಗಿಯಿಂದ ಬೆಂಗಳೂರಿಗೆ ಬರುವ ಗಣೇಶನಿಗೆ, ಅಲ್ಲಿ ಬಾಹ್ಯ ಸ್ವಚ್ಛತೆಗಿಂತ ಆಂತರಿಕ ಸ್ವಚ್ಛತೆ ಮಹತ್ವದೆಂದು…
ವಿಧ: ರುಚಿ
September 24, 2024
ಉಪ್ಪಿನ ಕಾಯಿ ಮಿಡಿಯನ್ನು ತೊಳೆದು ಹೆಚ್ಚಿನ ಖಾರ ತೆಗೆದುಬಿಡಬೇಕು. ಆಮೇಲೆ ಮಾವಿನ ಮಿಡಿಯನ್ನು ತೆಂಗಿನತುರಿಯನ್ನು ನುಣ್ಣಗೆ ಬೀಸಬೇಕು. ಆ ಮಿಶ್ರಣ ವನ್ನು ಮಜ್ಜಿಗೆ ಬೇಕಿದ್ದರೆ ಉಪ್ಪು , ನೀರು ಸ್ವಲ್ಪ ಹಾಕಿ ಕುದಿಸಬೇಕು. ಸಣ್ಣ ಕುದಿ ಬಂದಾಗ ಮೆಣಸು, ಸಾಸಿವೆ ಎಣ್ಣೆ ಹಾಕಿ ಒಗ್ಗರಣೆ ಕೊಟ್ಟರೆ ರುಚಿ ರುಚಿಯಾದ ಪರಿಮಳಯುಕ್ತ ತಂಬುಳಿ ತಯಾರು.  -ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
September 22, 2024
ಗೊರೂರು ರಾಮಸ್ವಾಮಿ ಅಯ್ಯಂಗಾರರ ವೈವಿಧ್ಯಮಯವಾದ 10 ಕತೆಗಳು ಈ ಸಂಗ್ರಹದಲ್ಲಿವೆ. ಹಳ್ಳಿಯ ಬದುಕನ್ನು ತನ್ನ  ಬರಹದಲ್ಲಿ ಸೊಗಸಾಗಿ ಚಿತ್ರಿಸಿದವರು ಇವರು. ಸುಲಲಿತವಾಗಿ ಓದಿಸಿಕೊಂಡು ಹೋಗುವುದೇ ಗೊರೂರರ ಕತೆಗಳ ವಿಶೇಷತೆ. ಜೊತೆಗೆ ಇವು ಸುಮಾರು 60 ವರುಷಗಳ ಮುಂಚೆ ಬರೆದ ಕಥೆಗಳಾದರೂ ಇವೆಲ್ಲದರ ಸಂದೇಶಗಳು ಇಂದಿಗೂ ಪ್ರಸ್ತುತ. ಮೊದಲನೆಯ ಕತೆ “ಕನ್ಯಾಕುಮಾರಿ”. ಚಂದ್ರವಳ್ಳಿಯ ಶ್ರೀಧರ ಬೆಂಗಳೂರಿನಲ್ಲಿ ಬಿ.ಎ. ಓದುತ್ತಿದ್ದ. ಅವನಿಗೆ ಸಂಗೀತ ಒಲಿದಿತ್ತು. ರಜೆಯಲ್ಲಿ ಹಳ್ಳಿಗೆ ಬಂದಾಗ ಅಲ್ಲಿನ ಶಾಲೆಯ…
ಲೇಖಕರು: Kavitha Mahesh
ವಿಧ: ರುಚಿ
September 22, 2024
ಮೈದಾ ಹಿಟ್ಟು, ಕಡಲೆ ಹಿಟ್ಟು, ಉಪ್ಪುಗಳನ್ನು ಸೇರಿಸಿ, ಮೊಸರಿನಲ್ಲಿ ಗಟ್ಟಿಯಾಗಿ ಕಲಸಿಡಿ. ಈ ಮಿಶ್ರಣಕ್ಕೆ ಹಸಿ ಮೆಣಸಿನಕಾಯಿ, ಶುಂಠಿಯ ತುರಿ, ಕರಿಬೇವಿನ ಸೊಪ್ಪು, ತೆಂಗಿನ ಕಾಯಿಯ ಚೂರುಗಳು, ಜೀರಿಗೆ, ಸಕ್ಕರೆ, ಅಡುಗೆ ಸೋಡಾ ಬೆರೆಸಿ ಚೆನ್ನಾಗಿ ಕಲಕಿ ದೋಸೆ ಹಿಟ್ಟಿಗಿಂತ ಗಟ್ಟಿಯಾದ ಮಿಶ್ರಣ ತಯಾರಿಸಿ ಅರ್ಧ ಗಂಟೆ ಇಡಿ. ನೆನೆಸಿದ ಮಿಶ್ರಣದಿಂದ ನಿಂಬೆ ಗಾತ್ರದ ಹಿಟ್ಟನ್ನು ಕಾದ ಎಣ್ಣೆಯಲ್ಲಿ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ. ರುಚಿಯಾದ ಗೋಳಿಬಜೆ ಸವಿಯಲು ಸಿದ್ಧ. ಕಾಯಿ ಚಟ್ನಿಯೊಂದಿಗೆ ಬಹಳ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 21, 2024
140 ಪುಟಗಳ ಈ ಪುಟ್ಟ ಪುಸ್ತಕವು https://archive.org/details/dli.osmania.3597 ಕೊಂಡಿಯಲ್ಲಿ ನಿಮಗೆ ಸಿಗುತ್ತದೆ.  ಇಲ್ಲಿ ಬ್ರಹ್ಮ ಮುಂತಾದ ದೇವತೆಗಳು ದೇವಲೋಕದಿಂದ ಕರ್ನಾಟಕಕ್ಕೆ ಬಂದು ಬೇರೆ ಬೇರೆ ಪಟ್ಟಣಗಳನ್ನು ನೋಡುತ್ತಾರೆ. ಈ ಪುಸ್ತಕವು 1930ರಲ್ಲಿ ಪ್ರಕಟವಾಗಿರುವುದರಿಂದ ಅಂದಿನ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದು.  ಉದಾಹರಣೆಗೆ ಇದರಲ್ಲಿ ಇಂದಿನ ಮಹಾರಾಷ್ಟ್ರದ ಮಿರಜ ಕೊಲ್ಲಾಪುರಗಳನ್ನು ಸೇರಿಸಿದ್ದಾರೆ !. ಹೀಗಾಗಿ ಸ್ವಾತಂತ್ರ್ಯ ಪೂರ್ವ ಭಾರತ ಮತ್ತು ಕರ್ನಾಟಕದ ಏಕೀಕರಣದ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 21, 2024
ಪರಿಸರ ಸಂಬಂಧಿ ಬರಹಗಳನ್ನು ಬರೆಯುವವರು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ನವೀನಕೃಷ್ಣ ಎಸ್. ಉಪ್ಪಿನಂಗಡಿ ಎನ್ನುವ ಹುಡುಗ ‘ಹೆಜ್ಜೆ ಊರುವ ತನಕ' ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಯ ಕುರಿತು ಸೊಗಸಾದ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ ಪರಿಸರ ತಜ್ಞ, ಪತ್ರಕರ್ತ ಶಶಿಧರ ಹಾಲಾಡಿ. ಇವರು ತಮ್ಮ ಬೆನ್ನುಡಿಯಲ್ಲಿ “ ಪರಿಸರ, ಪರಿಸರದೊಂದಿಗಿನ ಒಡನಾಟದ ಅನುಭವಗಳು, ಪರಿಸರ ವ್ಯಾಪಾರಗಳನ್ನು ನಿಕಪಕ್ಕೆ ಒಡ್ಡುವುದು ಮುಂತಾದ ವಿಷಯಗಳ ಕುರಿತಾಗಿ…