ವಿಧ: ಪುಸ್ತಕ ವಿಮರ್ಶೆ
July 06, 2023
ಭಾರತಿ ಹೆಗಡೆ ಇವರು ನಿರೂಪಿಸಿರುವ ವೇದಾ ಮನೋಹರ ಅವರ ‘ಪಂಚಮ ವೇದ’ ಎಂಬ ಕೃತಿ ‘ವೇದಾ’ ಬದುಕಿನ ಸಾರ ಎಂದು ಹೇಳಿದ್ದಾರೆ. ಇವರ ಈ ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ ಖ್ಯಾತ ಸಾಹಿತಿ ನಾಡೋಜ ಪ್ರೊ. ಕಮಲಾ ಹಂಪನಾ. ಇವರ ಬೆನ್ನುಡಿ “ಮಥಿಸುವ ಜೀವನಾನುಭವದ ನವನೀತ" ದಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ…
“ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಂಡ ಕನಸನ್ನು ಛಲ ಬಿಡದೆ ನನಸು ಮಾಡುವುದೇ ಪಂಚಮವೇದದ ಸಾರ. ಇಲ್ಲಿ ನೋವಿದೆ, ನಲಿವಿದೆ, ಕತ್ತಲೆಯೂ ಇದೆ…
ವಿಧ: ಪುಸ್ತಕ ವಿಮರ್ಶೆ
July 04, 2023
ಯಶೋಮತಿ ಬೆಳಗೆರೆ ಇವರು ಬರೆಯುತ್ತಿದ್ದ ‘ಯಶೋವಾಣಿ' ಎಂಬ ಅಂಕಣ ವಿಶ್ವವಾಣಿ ಪತ್ರಿಕೆಯಲ್ಲಿ ಮೂಡಿ ಬರುತ್ತಿತ್ತು. ಆ ಅಂಕಣಗಳನ್ನು ಸೇರಿಸಿ ಮಾಡಿದ ಪುಸ್ತಕವೇ ‘ಯಶೋವಾಣಿ'. ಖ್ಯಾತ ಪತ್ರಕರ್ತ, ಬರಹಗಾರ ದಿ. ರವಿ ಬೆಳಗೆರೆ ಅವರ ದ್ವಿತೀಯ ಪತ್ನಿಯಾಗಿ ಸಮಾಜದ, ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿ ಬದುಕು ಕಟ್ಟಲು ಯಶೋಮತಿ ಪಟ್ಟ ಕಷ್ಟವನ್ನು ತಮ್ಮ ಬರಹಗಳ ಮೂಲಕ ಹೊರಹಾಕಿದ್ದಾರೆ. ೧೬೮ ಪುಟಗಳ ಈ ಪುಸ್ತಕದಲ್ಲಿ ತಮ್ಮ ಮಾತಿನಲ್ಲಿ ಯಶೋಮತಿ ಬೆಳಗೆರೆ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳನ್ನು…
ವಿಧ: ಬ್ಲಾಗ್ ಬರಹ
July 03, 2023
ಗುರು ಪೂರ್ಣಿಮೆ ಹಿಂದೂಗಳ ಧಾರ್ಮಿಕ ಆಚರಣೆ.
2023ರ ಗುರು ಪೂರ್ಣಿಮೆಯ ಸಮಯ ಹಾಗೂ ದಿನಾಂಕಹಿಂದೂ ಕ್ಯಾಲೆಂಡರ್ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಗ್ರೆಗೋರಿಯನ್ ತಿಂಗಳ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ಜುಲೈ 3, ಸೋಮವಾರದಂದು ಗುರು ಪೂರ್ಣಿಮಾ ಆಚರಣೆ ಇದೆ. ದೃಕ್ ಪಂಚಾಂಗದ ಪ್ರಕಾರ ಪೂರ್ಣಿಮಾ ತಿಥಿ ಅಥವಾ ಹುಣ್ಣಿಮೆಯ ಅವಧಿಯು ಜುಲೈ 2 ರಂದು ರಾತ್ರಿ 8.20ಕ್ಕೆ ಆರಂಭವಾಗುತ್ತದೆ ಮತ್ತು ಜುಲೈ 3 ರಂದು…
ವಿಧ: ಪುಸ್ತಕ ವಿಮರ್ಶೆ
July 02, 2023
ಮಹಾಭಾರತ, ರಾಮಾಯಣದಲ್ಲಿ ಬರುವ ಎಷ್ಟೋ ಪಾತ್ರಗಳ ಮಧ್ಯೆ ಪ್ರಸಿದ್ದಿಯಾಗದೇ ಉಳಿದ ಪಾತ್ರಗಳು ಅವೆಷ್ಟಿವೆ.!!! ಆ ಪಾತ್ರಗಳೇ ತಾವಾಗಿ ಪ್ರತಿ ಪಾತ್ರಗಳ ತುಮುಲವನ್ನು ಲೇಖಕರು ಎಷ್ಟು ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದಾರೆ ಎಂದರೆ ಅದನ್ನು "ಪರಕಾಯ ಪ್ರವೇಶ " ಓದಿಯೇ ತಿಳಿಯಬೇಕು. ನಾವೂ ಆ ಪಾತ್ರವಾಗಿ ಓದುವ ಆನಂದವನ್ನು, ಆಗ ಉಂಟಾಗುವ ಭಾವ ವೈವಿಧ್ಯವನ್ನು ಬಣ್ಣಿಸಲು ಅಸಾಧ್ಯ.
ಓದುಗರೇ ಬನ್ನಿ, ನೀವೆಲ್ಲರೂ ಒಮ್ಮೆ "ರುಮಾ" ಆಗಿ ನನ್ನ ತಳಮಳವನ್ನು ತಿಳಿದುಕೊಳ್ಳಿ. ನಾನು "ರುಮಾ ". ಕಿಷ್ಕಿಂದೆಯ…
ವಿಧ: ಪುಸ್ತಕ ವಿಮರ್ಶೆ
July 01, 2023
‘Red ವೈನ್ ‘ ಎಂಬ ೧೭೨ ಪುಟಗಳ ಕವನ ಸಂಕಲನವನ್ನು ಹೊರತಂದಿದ್ದಾರೆ ಭರವಸೆಯ ಕವಯತ್ರಿ ವಿ ನಿಶಾ ಗೋಪಿನಾಥ್ ಅವರು. ಅವರ ಕವನ ಸಂಕಲನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಡಿ ಎಸ್ ಚೌಗಲೆ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ಇಲ್ಲಿದೆ...
“ನೀಲಿನಕ್ಷತ್ರ' ಕವನ ಸಂಕಲನದ ಮೂಲಕ ಭರವಸೆ ಮೂಡಿಸಿದ ಕವಿ ವಿ.ನಿಶಾ ಗೋಪಿನಾಥ್ ಅರವತ್ತು ಪ್ರೇಮ ಕವಿತೆಗಳ 'ರೆಡ್ ವೈನ್' ಕೃತಿ ಮೂಲಕ ಕಾವ್ಯ ಕ್ಷೇತ್ರದಲ್ಲಿ ತಮ್ಮ ಗಟ್ಟಿ ಹೆಜ್ಜೆಗಳನ್ನು ಊರಿದ್ದಾರೆ. ಖರೇ…
ವಿಧ: ಪುಸ್ತಕ ವಿಮರ್ಶೆ
June 29, 2023
೧೪೦ ಪುಟಗಳ ಸೊಗಸಾದ ಕವನಗಳ ಸಂಕಲನವೇ ಕಾವ್ಯ ದೀವಿಗೆ. ವರುಣ್ ರಾಜ್ ಮತ್ತು ಧನುಷ್ ಶೇಖರ್ ಎಂಬವರು ಈ ಸಂಕಲನದ ಕವನಗಳನ್ನು ಸಂಪಾದಿಸಿದ್ದಾರೆ. ಬಹಳಷ್ಟು ಉದಯೋನ್ಮುಖ ಕವಿಗಳ ಕವನಗಳು ಈ ಸಂಕಲನ ಒಳಗೊಂಡಿದೆ. ಸ್ವತಃ ಕವಿಗಳಾಗಿರುವ ಅಮರ್ ಬಿ ಎನ್ನುವವರು ಸುದೀರ್ಘವಾದ ಮುನ್ನುಡಿಯನ್ನು ಬರೆದಿದ್ದಾರೆ. ಹಲವು ಕವನಗಳನ್ನು ಸತ್ವಭರಿತವಾಗಿ ವಿಮರ್ಶೆ ಮಾಡಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗ ನಿಮ್ಮ ಓದಿಗಾಗಿ...
“ವರುಣ್ ರಾಜ್ ಜಿ ಮತ್ತು ಧನುಷ್ ಎಚ್ ಶೇಖರ್ ಅವರ ಸಂಪಾದಕತ್ವದಲ್ಲಿ ‘ಕಾವ್ಯ…
ವಿಧ: ಪುಸ್ತಕ ವಿಮರ್ಶೆ
June 29, 2023
ಇದೊಂದು ಅಪರೂಪದ ಪುಸ್ತಕ. ಇದರಲ್ಲಿವೆ ನಮ್ಮ ಬದುಕನ್ನು ಬೆಳಗಿಸಬಲ್ಲ ನೀತಿಯ ಮಾತುಗಳು. ಇದರ 10,000 ಪ್ರತಿಗಳನ್ನು 10 ಸಪ್ಟಂಬರ್ 1973ರಲ್ಲಿ ಮುದ್ರಿಸಲಾಗಿತ್ತು ಎಂದರೆ ನಂಬುತ್ತಿರಾ? ಈಗ ಕನ್ನಡದ ಹಲವು ಪುಸ್ತಕಗಳ ಕೇವಲ 500 ಪ್ರತಿಗಳನ್ನು ಮುದ್ರಿಲಾಗುತ್ತಿದೆ. ಇದನ್ನು ಗಮನಿಸಿದಾಗ, ಐವತ್ತು ವರುಷಗಳ ಮುಂಚೆ, ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಹಲವು ಪಟ್ಟು ಜಾಸ್ತಿಯಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ, ಅಲ್ಲವೇ?
ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಗ್ರಂಥಗಳಿಂದ ಆಯ್ದ…
ವಿಧ: ಪುಸ್ತಕ ವಿಮರ್ಶೆ
June 27, 2023
ವಿಭಿನ್ನ ಭಾಷಾ ಪ್ರಯೋಗದ ‘ಕಾವ್ಯುತ್ಯೋಗರ' ಎಂಬ ಕೃತಿಯನ್ನು ಬರೆದಿದ್ದಾರೆ ಲೇಖಕರಾದ ಬಸವರಾಜ ಕೋಡಗುಂಟಿ ಇವರು. ತಮ್ಮ ೧೩೪ ಪುಟಗಳ ಈ ಪುಟ್ಟ ಪುಸ್ತಕದೊಳಗೆ ಏನಿದೆ ಎಂಬ ಬಗ್ಗೆ ಅವರ ಮಾತುಗಳಲ್ಲೇ ಓದೋಣ ಬನ್ನಿ...
“ಬೇಂದ್ರೆ ಶಬ್ದಗಾರುಡಿಗನೆಂದು ಕನ್ನಡದೊಳಗೆ ಪ್ರಸಿದ್ದ. ಹಾಗೆಯೆ ಬೇಂದ್ರೆ ಅರ್ತಗಾರುಡಿಗನೂ ಹವುದು. ಶಬ್ದಗಳ ಜೋಡಣೆಯೆ ಕುಶಲತೆಯೆಂದು ಅಲ್ಲಿಗೆ ನಿಲ್ಲುವುದು ಮಾತಿನ ಮೋಡಿಯೊ, ಮಾಟವೊ ಆಗಬಹುದು. ಅದರಾಚೆಗೆ ಹೋಗಿ ಅರ್ತಗಳನೊಡೆದೊಡೆದು ಎಲ್ಲವನು ಚೆಲ್ಲಾಪಿಲ್ಲಿಯಾಗಿ ಚೆಲ್ಲಿ…
ವಿಧ: ಪುಸ್ತಕ ವಿಮರ್ಶೆ
June 26, 2023
"ಡುಮಿಂಗ" ಎಂಬ ಕಚಗುಳಿಯಿಕ್ಕುವ ಹೆಸರು ಹೊತ್ತ ಶಶಿ ತರೀಕೆರೆಯವರ ಮೊದಲ ಕಥಾಸಂಕಲನ ಇದು. ಈ ಕತೆಗಳನ್ನು ಓದುವಾಗ ಶಶಿ ತರೀಕೆರೆಯವರು ಕಥೆಗಳಿಗೆ ಹೊಸಬರೆನ್ನುವುದು(?) ನಂಬಲಾಗದ ವಿಷಯ. ಇಲ್ಲಿರುವ ಕತೆಗಳನ್ನು ಹೊಸ ಮನಸ್ಥಿತಿಯಿಂದ ಧ್ಯಾನಿಸಿ ಬರೆದಂತಿವೆ. ಇಂದಿನ ಪೀಳಿಗೆಯ ಮಾನಸಿಕ ತಲ್ಲಣಗಳು ಮತ್ತು ದಿನೇ ದಿನೇ ದ್ವೀಪವಾಗುತ್ತಾ ಜಟಿಲಗೊಳ್ಳುತ್ತಿರುವ ಅವರ ಭಾವನಾಜಗತ್ತಿನ ಇಣುಕು ನೋಟವಿದೆ.
ಈ ಸಂಕಲನದ ಬಗ್ಗೆ ಮೂರು ವಿಷಯಗಳನ್ನು ಹೇಳಬೇಕು. ಒಂದು ಕತೆಗಳ ಭಾಷೆ ಮತ್ತು ನಿರೂಪಣಾ ಶೈಲಿ. ಜೇಡಿ…
ವಿಧ: ಪುಸ್ತಕ ವಿಮರ್ಶೆ
June 24, 2023
“ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್" ಎಂಬ ವಿಭಿನ್ನ ಹೆಸರಿನ ಕಥಾ ಸಂಕಲನವನ್ನು ಹೊರ ತಂದಿದ್ದಾರೆ ಭರವಸೆಯ ಕಥೆಗಾರರಾದ ಮುನವ್ವರ್ ಜೋಗಿಬೆಟ್ಟು ಇವರು. ಸುಮಾರು ೧೧೦ ಪುಟಗಳ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಮತ್ತೊರ್ವ ಕತೆಗಾರ ಕೇಶವ ಮಳಗಿ ಇವರು. ಇವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮಗಾಗಿ...
“ತಮ್ಮ ‘ಇಶ್ಖಿನ ಒರತೆಗಳು’ ಕವನ ಸಂಕಲನದಿಂದ ಕೆಲವು ಓದುಗರಿಗಾದರೂ ಪರಿಚಿತರಾದ ಮುನವ್ವರ್ ಜೋಗಿಬೆಟ್ಟು ಇದೀಗ ಹೊಸ ಕಥಾ ಸಂಕಲನದ ಮೂಲಕ ಓದುಗರನ್ನು ಮತ್ತೊಮ್ಮೆ…