ಎಲ್ಲ ಪುಟಗಳು

ಲೇಖಕರು: Kavitha Mahesh
ವಿಧ: ರುಚಿ
July 28, 2024
ಅಕ್ಕಿ ಹಿಟ್ಟು, ರವೆ ಹಾಗೂ ಮೈದಾಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಮೆಂತ್ಯೆ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಉಪ್ಪು, ಜೀರಿಗೆ ಮತ್ತು ಎಳ್ಳು ಹುಡಿಗಳನ್ನು ಸೇರಿಸಿ ನೀರಿನೊಂದಿಗೆ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿ. ಅರ್ಧ ಗಂಟೆ ನೆನೆಸಿಡಿ. ನಂತರ ಹಿಟ್ಟಿನ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಪೂರಿಯ ಹದಕ್ಕೆ ಲಟ್ಟಿಸಿ, ಕಾಯಿಸಿದ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಮೆಂತ್ಯೆ ಸೊಪ್ಪಿನ ಪೂರಿ ತಿನ್ನಲು ರೆಡಿ.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 26, 2024
ಇದನ್ನು "ಶ್ರೀವತ್ಸ " ಎಂಬವರು ಬರೆದಿದ್ದು archive.org ತಾಣದಲ್ಲಿದೆ. ಇದನ್ನು https://archive.org/details/in.ernet.dli.2015.364640/mode/1up  ಈ ಕೊಂಡಿಯಲ್ಲಿ ಓದಬಹುದು ಅಥವಾ ಇಳಿಸಿಕೊಳ್ಳಬಹುದು. ದಕ್ಷಿಣದ ಯದುಗಿರಿಯ ದೇವರಾದ ಶ್ರೀಕೃಷ್ಣನು - ಅವನ ಹೆಸರು ಸಂಪತ್ಕುಮಾರ - ವಿಗ್ರಹ ರೂಪದಲ್ಲಿ ದೆಹಲಿಯ ಸುಲ್ತಾನನ ಮಗಳ - ಅವಳ ಹೆಸರೇ ಬೀಬಿ ನಾಚ್ಚಿಯಾರ್ - ಶಯ್ಯಾಗೃಹದಲ್ಲಿದ್ದನು. ಅವನನ್ನು ದೆಹಲಿಯ ಸುಲ್ತಾನನ ಆ ಮಗಳು ಪ್ರೀತಿಸಿದ್ದಳು . ಈ ಮೂರ್ತಿ ರೂಪದ ದೇವರನ್ನು ಶ್ರೀ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 26, 2024
‘ಒಡಲ ಜೋಗುಳ' ಎಂಬುದು ವಿಶ್ವಪ್ರಿಯ ವಡ್ಡಮ್ಮ ತಾತನ ತತ್ವಪದಗಳ ಸಂಗ್ರಹದ ಮೊದಲ ಸಂಪುಟ. ಈ ಸಂಪುಟವನ್ನು ಸಂಪಾದನೆ ಮಾಡಿದ್ದಾರೆ ಡಾ. ಯಮನೂರಪ್ಪ ವಡಕಿ ಇವರು. ತಮ್ಮ ಸಂಪಾದಕೀಯದಲ್ಲಿ ಇವರು ಬರೆದ ಸಾಲುಗಳು ನಿಮ್ಮ ಓದಿಗಾಗಿ… “ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಾಟೂರಿನವರಾದ ಆದಯ್ಯಸ್ವಾಮಿ ಹಿರೇಮಠ ಅವರು ಬಾಲ್ಯದ ದಿನಗಳಿಂದಲೂ ಗಂಗಾವತಿ ನಗರದಲ್ಲಿ ವಾಸವಾಗಿದ್ದವರು. ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣದವರೆಗೂ ಗಂಗಾವತಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ.…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
July 25, 2024
“ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಕತೆಗಳು, ಒಗಟುಗಳು ಮತ್ತು ಗಾದೆಗಳು” ಎಂಬುದು ಈ ಪುಸ್ತಕದ ಉಪಶೀರ್ಷಿಕೆ. ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಸಹಪ್ರಕಾಶನ ಕಾರ್ಯಕ್ರಮ (ಎ.ಸಿ.ಪಿ.)ದಲ್ಲಿ ಯುನೆಸ್ಕೋ ಆಶ್ರಯದಲ್ಲಿ ಹೊರತರಲಾದ ಈ ಪುಸ್ತಕವನ್ನು ಎನ್.ಬಿ. ಟ್ರಸ್ಟ್ ಮೂಲಕ ಏಷ್ಯನ್ ಕಲ್ಚರಲ್ ಸೆಂಟರ್ ಫಾರ್ ಯುನೆಸ್ಕೋ ಪ್ರಕಟಿಸಿದೆ. ಇದರಲ್ಲಿ 54 ಹಾಸ್ಯಭರಿತ ಕತೆಗಳು, 54 ಒಗಟುಗಳು, 23 ಗಾದೆಗಳು ಮತ್ತು ರೇಖಾಚಿತ್ರಗಳಿವೆ. ಉಲ್ಲೇಖಿತ ಪ್ರದೇಶದ 18 ದೇಶಗಳು ಈ ಕೊಡುಗೆ ನೀಡಿವೆ. ಜಗತ್ತಿನ ನಾನಾ…
ವಿಧ: ರುಚಿ
July 25, 2024
ಹುರಿದ ಉದ್ದಿನ ಹಿಟ್ಟು, ಅಕ್ಕಿ ಹಿಟ್ಟು, ಬೆಣ್ಣೆ ಅಥವಾ ಕಾದ ಎಣ್ಣೆ, ಉಪ್ಪು, ಜೀರಿಗೆ, ಎಳ್ಳು ಎಲ್ಲವನ್ನೂ ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬೆರೆಸಿ. ನೀರು ಹಾಕಿ ಹದವಾಗಿ ಕಲಸಿ ಚಕ್ಕುಲಿ ಒರಳಿನಲ್ಲಿ ಹಾಕಿ ಎಣ್ಣೆ ಸವರಿದ ಬಾಳೆಲೆ ಅಥವಾ ಪ್ಲಾಸ್ಟಿಕ್ ಕವರ್ ಮೇಲೆ ಬೇಕಾದ ಅಳತೆಗೆ ಚಕ್ಕುಲಿ ಒತ್ತಿ. ಕಾದ ಎಣ್ಣೆಯಲ್ಲಿ ಹಾಕಿ ಗರಿಗರಿಯಾಗಿ ಕರಿಯಿರಿ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 24, 2024
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೧ನೇ ಪುಸ್ತಕವೇ ಬಜೆ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.  ಬಜೆ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. “ಪುಟ್ಟ ಮಕ್ಕಳ ನಾಲಿಗೆಗೆ ತೇಯ್ದ ಬಜೆಯನ್ನು ಲೇಪಿಸುವ…
ವಿಧ: ರುಚಿ
July 23, 2024
ಪುದೀನ, ಕೊತ್ತಂಬರಿ ಸೊಪ್ಪನ್ನು ತೊಳೆದು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ರುಬ್ಬಿದ ಪುದೀನ ಮಿಶ್ರಣ ಹಾಗೂ ಬೇಕಾಗುವಷ್ಟು ನೀರು, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಕುದಿಸಿ ಇಳಿಸಿ. ಬಿಸಿಯಿರುವಾಗಲೇ ಸೇವಿಸಿ. ಈ ಸೂಪ್ ಆರೋಗ್ಯಕ್ಕೆ ಉತ್ತಮ.  - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 22, 2024
“ಮಾತೊಂದ ಹೇಳುವೆ..’ ಗುರುಪಾದ ಬೇಲೂರು ಅವರ ‘ವಾರದ ಮಾತುಕತೆ’ಗಳ ಸಂಗ್ರಹವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಾಮಾನ್ಯವಾಗಿ ಬರವಣಿಗೆಗಳು ಚಲನಚಿತ್ರಗಳಂತಹ ದೃಶ್ಯ ಮಾಧ್ಯಮ ಗಳಾಗುತ್ತವೆ. ಆದರೆ ಇಲ್ಲಿ ಯೂಟ್ಯೂಬ್‌ನಲ್ಲಿ ಬಂದ ಅಂಕಣಗಳು ಅಕ್ಷರ ರೂಪಕ್ಕೆ ಇಳಿದಿವೆ. ಪುಸ್ತಕ ರೂಪದಲ್ಲಿ ಇದೀಗ ಓದುಗರಿಗೆ ಲಭ್ಯ. ಇಲ್ಲಿ ಜ್ಞಾನವಿದೆ. ವಿಜ್ಞಾನವಿದೆ, ಹಿರಿಯರ ಮೌಲಿಕ ಮಾತುಗಳಿವೆ. ಚಿಂತನೆಗೆ ಹಚ್ಚುವ ಅಸಾಮಾನ್ಯ ಸಾಮರ್ಥ್ಯ ಈ ಬರಹಗಳಿಗಿದೆ. ಪ್ರಪಂಚದ ಅನೇಕಾನೇಕ ವೈವಿಧ್ಯಗಳನ್ನು…
ಲೇಖಕರು: Kavitha Mahesh
ವಿಧ: ರುಚಿ
July 21, 2024
ಬೇಯಿಸಿದ ಬಟಾಟೆಯನ್ನು ಗಂಟುಗಳಿರದ ಹಾಗೆ ಚೆನ್ನಾಗಿ ಹುಡಿ ಮಾಡಿ. ಅದಕ್ಕೆ ಹಸಿಮೆಣಸಿನ ಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಜೀರಿಗೆ, ಇಂಗು, ಶುಂಠಿ, ಉಪ್ಪನ್ನು ಹಾಕಿ ಕಲಸಿ ಮಿಶ್ರಣ ತಯಾರಿಸಿರಿ. ನಂತರ ಗೋಧಿ ಹಿಟ್ಟಿಗೆ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಡಿ. ಕಲಸಿಟ್ಟುಕೊಂಡಿದ್ದ ಹಿಟ್ಟಿನಿಂದ ಪೂರಿ ಲಟ್ಟಿಸಿ ಅದರ ಮೇಲೆ ಬಟಾಟೆ ಮಿಶ್ರಣ ಹಾಕಿ ಮಡಚಿ ನಿಧಾನವಾಗಿ ಲಟ್ಟಿಸಿ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿದರೆ ಬಿಸಿ ಬಿಸಿ ಬಟಾಟೆ ತಾಲಿಪಟ್ಟು ತಿನ್ನಲು ತಯಾರು. 
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 19, 2024
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೧೨ನೇ ಪುಸ್ತಕವೇ ನೆಲ್ಲಿ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.  ನೆಲ್ಲಿ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. “ಆಯುರ್ವೇದದಲ್ಲಿ ಮತ್ತು ಪಾರಂಪರಿಕ ವೈದ್ಯಕೀಯದಲ್ಲಿ…