ವಿಧ: ಪುಸ್ತಕ ವಿಮರ್ಶೆ
December 09, 2024
‘ಅಲೆದಾಟದ ಅಂತರಂಗ’ ಎನ್ನುವುದು ನವೀನಕೃಷ್ಣ ಎಸ್ ಉಪ್ಪಿನಂಗಡಿ ಇವರ ಪ್ರವಾಸ ಕಥನ. ನಮಗೆ ಗೊತ್ತಿಲ್ಲದ ಊರಿನ ವಿಶೇಷತೆಗಳನ್ನು ರೋಚಕವಾಗಿ ಹರಡುವ ನವೀನಕೃಷ್ಣ ಅವರ ಪ್ರವಾಸಕಥನಗಳು ಓದಲು ಬಹಳ ಸೊಗಸಾಗಿರುತ್ತವೆ. ಅವರೊಂದಿಗೆ ನಾವೂ ಪ್ರವಾಸ ಮಾಡುತ್ತಿದ್ದೇವೆ ಎನ್ನುವಷ್ಟು ಹಿತವಾಗಿರುತ್ತದೆ. ಈ ಪ್ರವಾಸ ಕಥನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ವಿವೇಕಾನಂದ ಕಾಲೇಜು ಪುತ್ತೂರು ಇದರ ಕುಲ ಸಚಿವರಾದ ಡಾ. ಶ್ರೀಧರ್ ಎಚ್ ಜಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕೆಲವು…
ವಿಧ: ರುಚಿ
December 08, 2024
ಅಕ್ಕಿಯನ್ನು ೨ ಗಂಟೆ ನೆನೆಸಿ. ನಂತರ ತೊಳೆದು ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿದ ಮುಳ್ಳುಸೌತೆ ಮತ್ತು ತೆಂಗಿನ ತುರಿಯನ್ನು ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಬೆಲ್ಲ, ಉಪ್ಪು ಸೇರಿಸಿ ರುಬ್ಬಿ. ನಂತರ ಬಾಣಲೆಗೆ ಹಾಕಿ ಸ್ವಲ್ಪ ಹೊತ್ತು ಸ್ವಲ್ಪ ಗಟ್ಟಿಯಾಗುವವರೆಗೆ ಮಗುಚಿ. ನಂತರ ಅಪ್ಪದ ಕಾವಲಿ ಗುಳಿಗೆ ತುಪ್ಪ ಹಾಕಿ, ಬಿಸಿಯಾದಾಗ ಹಿಟ್ಟು ಹಾಕಿ. ಬೆಂದು ತಳ ಬಿಟ್ಟಾಗ ಅಪ್ಪದ ಕಡ್ಡಿಯಿಂದ ಚುಚ್ಚಿ ಕವುಚಿ ಹಾಕಿ ಬೇಯಿಸಿ. ಕೆಂಪಗೆ ಆದಾಗ ತೆಗೆದು ಪಾತ್ರೆಗೆ ಹಾಕಿ.…
ವಿಧ: ಪುಸ್ತಕ ವಿಮರ್ಶೆ
December 06, 2024
ರೇವಣ ಸಿದ್ದಯ್ಯ ಹಿರೇಮಠ ಇವರು ‘ಶ್ರೀಗುರು ವಚನಾಮೃತ’ ಎನ್ನುವ ಸೊಗಸಾದ ವಚನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಕೃತಿಗೆ ಡಾ. ರಾಮಚಂದ್ರ ಗಣಾಪುರ ಅವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಸುದೀರ್ಘವಾದ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿವೆ…
ಗಾನಕೋಗಿಲೆ ರೇವಣಸಿದ್ದಯ್ಯ ಹಿರೇಮಠರವರ|
'ಶ್ರೀಗುರು ವಚನಾಮೃತ'ದ ಸುಧೆಯೊಳಗೆ
ಈ ಜೀವನ ದೇವರು ನಮಗೆ ನೀಡಿದ ವರದಾನ ಹಾಗೂ ಹಲವು ವಿಸ್ಮಯಗಳ ಆಗರ. ಈ ಭುವಿಗೆ ಬಂದ ಮನುಷ್ಯ ತನ್ನ ಸಾರ್ಥಕ ಕೊಡುಗೆಯನ್ನು ಸಮಾಜಕ್ಕೆ…
ವಿಧ: ಪುಸ್ತಕ ವಿಮರ್ಶೆ
December 04, 2024
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಬಗ್ಗೆ ಸಾವಿರಾರು ಕೃತಿಗಳು ಹೊರಬಂದಿವೆ. ನಿತಿನ್ ಅಗರ್ ವಾಲ್ ಅವರು ಆಂಗ್ಲಭಾಷೆಯಲ್ಲಿ ಬರೆದ ಪುಸ್ತಕವೊಂದು ‘ಸ್ವಾಮಿ ವಿವೇಕಾನಂದರು ನಿಮಗೆ ಗೊತ್ತೇ?’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ. ಅನುವಾದ ಮಾಡಿದವರು ಖ್ಯಾತ ಲೇಖಕರಾದ ಬೆ. ಗೋ. ರಮೇಶ್ ಅವರು. ಈ ಕೃತಿಯು ಮಕ್ಕಳಿಗೆ ಬಹಳ ಉಪಯುಕ್ತವಾಗಿದೆ. ಇದಕ್ಕೆ ಬಳಸಿದ ಅಕ್ಷರಗಳ ಆಕಾರ ದೊಡ್ಡದಾಗಿದ್ದು, ಪುಟ ಪುಟಗಳಲ್ಲೂ ರೇಖಾ ಚಿತ್ರಗಳಿವೆ. ಮಕ್ಕಳಿಗೆ ಓದಿ ಮನನ ಮಾಡಲು ಸುಲಭವಾಗಿದೆ.
‘ಸ್ವಾಮಿ…
ವಿಧ: ರುಚಿ
December 04, 2024
ಮಸೆದ ಸಿಹಿ ಗೆಣಸಿಗೆ ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಹಾಲು ಸೇರಿಸಿ ಕಲಕಿದರೆ ಸಿಹಿ ಗೆಣಸಿನ ಸವಿಯಾದ ಮಿಲ್ಕ್ ಶೇಕ್ ತಯಾರು.
- ಸಹನಾ ಕಾಂತಬೈಲು, ಬಾಲಂಬಿ
ವಿಧ: ಪುಸ್ತಕ ವಿಮರ್ಶೆ
December 03, 2024
ಶ್ರೀನಿವಾಸ ವೈದ್ಯರು ಧಾರವಾಡದಲ್ಲಿ ಎಂ.ಎ. ಪದವಿ ಗಳಿಸಿದ ನಂತರ, 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದರು. ಮುಂಬಯಿ, ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ 37 ವರುಷ ಸೇವೆ ಸಲ್ಲಿಸಿ, ಉನ್ನತ ಹುದ್ದೆಗೇರಿ 1996ರಲ್ಲಿ ಬೆಂಗಳೂರಿನಲ್ಲಿ ನಿವೃತ್ತರಾದರು. ಈ ಸೇವಾವಧಿಯ ಹಲವಾರು ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಎಂಟು ಪುಸ್ತಕಗಳನ್ನು ಬರೆದಿರುವ ಶ್ರೀನಿವಾಸ ವೈದ್ಯರು “ಹಳ್ಳ ಬಂತು ಹಳ್ಳ” ಕಾದಂಬರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ…
ವಿಧ: ಪುಸ್ತಕ ವಿಮರ್ಶೆ
December 02, 2024
ಅನಿಲ್ ಗುನ್ನಾಪೂರ ಅವರ ನೂತನ ಕಥಾ ಸಂಕಲನ ಸರ್ವೆ ನಂಬರ್ ೯೭. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ.ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ…
“ಏನನ್ನೋ ಹಂಬಲಿಸುತ್ತ ಯಾವುದರ ಹುಡುಕಾಟದಲ್ಲೋ ನಿರತನಾಗಿರುವುದು ಎಲ್ಲ ಕಾಲದ ಮನುಷ್ಯ ಜೀವನದ ಪ್ರಮುಖ ಲಕ್ಷಣವಾಗಿದೆ. ಆ ಹುಡುಕಾಟವೇ ಬದುಕಿನ ಗುರಿಯೂ ಆಗಿರುತ್ತದೆ. ಹಾಗೆ ಹುಡುಕುವುದು ಸಿಗಬಹುದು ಇಲ್ಲವೇ ಸಿಗದಿರಬಹುದು. ಹುಡುಕುತ್ತಿದ್ದುದು ದೊರೆತಾಗ, ಕೆಲವರಿಗೆ ಸಂತೋಷವಾಗಬಹುದು;…
ವಿಧ: ರುಚಿ
December 02, 2024
ಗೋಧಿ ಹಿಟ್ಟಿಗೆ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿದ ಸಬ್ಬಸಿಗೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪನ್ನು ಹಾಕಿ, ಚೆನ್ನಾಗಿ ನಾದಿ. ಕಲಸಿದ ಹಿಟ್ಟು ಒಂದು ಗಂಟೆ ನೆನೆದ ನಂತರ ರೊಟ್ಟಿ ಲಟ್ಟಿಸಿ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿದ್ರೆ ರುಚಿಯಾದ ಸಬ್ಬಸಿಗೆ ಸೊಪ್ಪು ತಾಲಿಪಟ್ಟು ತಯಾರು. ಇದನ್ನು ಕಾಯಿಚಟ್ನಿ ಜೊತೆ ಸೇವಿಸಿದರೆ ಬಹಳ ಚೆನ್ನಾಗಿರುತ್ತದೆ.
ವಿಧ: ಪುಸ್ತಕ ವಿಮರ್ಶೆ
November 29, 2024
ಭಾರತದ ರಾಷ್ಟಪತಿಗಳಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಬಗ್ಗೆ ಹಲವಾರು ಪುಸ್ತಕಗಳು ಬಂದಿವೆ. ‘ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೇ?’ ಎಂಬ ಕೃತಿಯು ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ. ದೊಡ್ಡ ದೊಡ್ಡ ಆಕಾರದ ಅಕ್ಷರಗಳನ್ನು ಬಳಸಿಕೊಂಡು, ಸರಳವಾದ ಭಾಷೆಯಲ್ಲಿ ಮಾಹಿತಿಯನ್ನು ನೀಡಿರುವುದರಿಂದ ಮಕ್ಕಳಿಗೆ ಓದಿ ಮನನ ಮಾಡಲು ಅನುಕೂಲ. ಈ ಕೃತಿಯು ‘ಅಬ್ದುಲ್ ಕಲಾಂ ಯಾರು?’ ಎನ್ನುವ ಅಧ್ಯಾಯದಿಂದ ಪ್ರಾರಂಭವಾಗುತ್ತದೆ. ಈ ಅಧ್ಯಾಯದಲ್ಲಿ ಕಲಾಂ ಅವರ ಹುಟ್ಟು, ಬಾಲ್ಯ, ಊರು, ಅವರ ವೃತ್ತಿ ಅವರಿಗೆ…
ವಿಧ: ರುಚಿ
November 29, 2024
ಬಾಳೆಹಣ್ಣನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಕಾಯಿತುರಿ, ಕೆಂಪುಮೆಣಸು, ಹಸಿಮೆಣಸು, ಸಾಸಿವೆ, ಎಳ್ಳು, ಕೊತ್ತಂಬರಿ ಅರಿಸಿನ ಹಾಕಿ ರುಬ್ಬಿ ಇದಕ್ಕೆ ಮೊಸರು, ಉಪ್ಪು ಬೇಕಾದರೆ ಬೆಲ್ಲ ಹೆಚ್ಚಿದ ಬಾಳೆಹಣ್ಣು, ಹಾಕಿ ಚೆನ್ನಾಗಿ ಕಯ್ಯಾಡಿಸಿ ಇದಕ್ಕೆ ಕೆಂಪು ಮೆಣಸು, ಸಾಸಿವೆ, ಎಣ್ಣೆ, ಇಂಗು ಹಾಕಿ ಚಟಪಟ ಎಂದ ಮೇಲೆ ಸಾಸಿವೆಗೆ ಹಾಕಿ ಕೈಯ್ಯಾಡಿಸಿ,
-ಕಲ್ಪನಾ ಪ್ರಭಾಕರ ಸೋಮನಳ್ಳಿ