ವಿಧ: ರುಚಿ
February 18, 2025
ಬ್ರೆಡ್ ಹಾಳೆಗಳ ಬದಿಯನ್ನು ಕತ್ತರಿಸಿ ತೆಗೆದು ಬದಿಗಿಡಿ. ಬಿಳಿ ಭಾಗದ ಮೇಲೆ ಅರ್ಧ ಕಪ್ ನೀರು ಚಿಮುಕಿಸಿ ಬದಿಗಿಡಿ. ರವೆ, ಮೊಸರು, ಶುಂಠಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಅಕ್ಕಿಹಿಟ್ಟು ಸೇರಿಸಿ ರುಬ್ಬಿ. ಬಳಿಕ ಅದಕ್ಕೆ ನೆನೆದ ಬ್ರೆಡ್ ಹಾಳೆಗಳು ಮತ್ತು ಉಳಿದ ನೀರು ಸೇರಿಸಿ ರುಬ್ಬಿ. ಉಪ್ಪು ಹಾಕಿ. ಹದ ಬಿಸಿಯಾದ ದೋಸೆ ಕಾವಲಿಯ ಮೇಲೆ ದೋಸೆ ಮಾಡಿರಿ. ಬಿಸಿಬಿಸಿ ದೋಸೆಗಳನ್ನು ಕೊತ್ತಂಬರಿಸೊಪ್ಪಿನ ಚಟ್ನಿಯೊಂದಿಗೆ ಸವಿಯಿರಿ. ಕತ್ತರಿಸಿ ಬದಿಗಿಟ್ಟ ಬ್ರೆಡ್ ಹಾಳೆಯ ಬದಿಗಳನ್ನು…
ವಿಧ: ಪುಸ್ತಕ ವಿಮರ್ಶೆ
February 17, 2025
ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಸೂರ್ಯೋದಯ’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ಸುವಿಚಾರಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿದ್ದಾರೆ. ಕೆಲವೇ ಕೆಲವು ವಾಕ್ಯಗಳಲ್ಲಿ ನಮಗೆ ಜೀವನ ಮೌಲ್ಯಗಳನ್ನು ಕಲಿಸಬಲ್ಲ ಶಕ್ತಿ ಈ ಸುವಿಚಾರಗಳಿಗಿವೆ. ತಮ್ಮ ಮನದಾಳದ ನುಡಿಗಳನ್ನು ರತ್ನಾ ಭಟ್ ಅವರು ಹಂಚಿಕೊಂಡಿರುವುದು ಹೀಗೆ…
“ ಮೊದಲಿನಿಂದಲೂ ಬರೆಯುವ ಹವ್ಯಾಸವಿಟ್ಟುಕೊಂಡಿದ್ದ ನನಗೆ…
ವಿಧ: ಬ್ಲಾಗ್ ಬರಹ
February 17, 2025
ಇದು ಸುಮಾರು 650 ಪುಟಗಳ ಕಾದಂಬರಿ. archive.org ತಾಣದಲ್ಲಿ ಇದೆ. https://archive.org/details/unset0000unse_b4c3 ಈ ಕೊಂಡಿಯನ್ನು ಕ್ಲಿಕ್ಕಿಸಿ ಇಳಿಸಿಕೊಳ್ಳಬಹುದು ಮತ್ತು ಓದಬಹುದು. ಅವರು ಜ್ಞಾನಗಂಗೋತ್ರಿ ಸಂಪುಟಗಳ ತಯಾರಿಯಲ್ಲಿದ್ದಾಗ. ಒಂದು ವಾಕ್ಯ ಅವರ ಕುತೂಹಲವನ್ನು ಕೆರಳಿಸಿತ್ತು : “ A Greek tradition reports a great revolt in Egypt in which the slaves captured a province....” ಆಗ ಒಂದು ವರ್ಷ ಆಫ್ರಿಕಾದ ನೈಲ್ ಸಂಸ್ಕೃತಿಯ ಕುರಿತು ಅಧ್ಯಯನ ಮಾಡಿ ಈ…
ವಿಧ: ರುಚಿ
February 17, 2025
ಫ್ಯಾಶನ್ ಫ್ರುಟ್ನ ರಸ ತೆಗೆದು ನೀರು, ಸಕ್ಕರೆ ಸೇರಿಸಿ ಕದಡಿ. ಕಾಳುಮೆಣಸಿನ ಪುಡಿ, ಏಲಕ್ಕಿ ಪುಡಿ, ಶುಂಠಿ ರಸ ಸೇರಿಸಿ ಕುಡಿಯಿರಿ. ಪ್ಯಾಶನ್ ಫ್ರುಟ್ `ಎ' ಮತ್ತು `ಸಿ' ಜೀವಸತ್ವ ಹೊಂದಿದೆ.
- ಸಹನಾ ಕಾಂತಬೈಲು, ಮಡಿಕೇರಿ
ವಿಧ: ರುಚಿ
February 14, 2025
ಬಾಳೆಹಣ್ಣನ್ನು ಹೆಚ್ಚಿ ಅದಕ್ಕೆ ಸ್ವಲ್ಪ ನೀರು, ಚೂರು ಉಪ್ಪು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಸಾಸಿವೆ, ಒಣ ಮೆಣಸು ರುಬ್ಬಿ ಹಾಕಿ. ಮೊಸರು ಸೇರಿಸಿ. ಉಪ್ಪು ಬೇಕಿದ್ದರೆ ಹಾಕಿ. ಕರಿಬೇವಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ.
- ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
February 14, 2025
‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ವಾರೆನೋಟ ಎನ್ನುವ ಅಂಕಣ ಬರೆಯುತ್ತಿದ್ದ ದೀಕ್ಷಿತ್ ನಾಯರ್ ಎನ್ನುವ ಚಿಗುರು ಮೀಸೆಯ ಹುಡುಗನ ಸಾಧನೆ ದೊಡ್ದದು. ಬರೆದ ಬರಹಗಳನ್ನು ಒಟ್ಟುಗೂಡಿಸಿ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದು ಹುದಿದುಂಬಿಸಿದ್ದಾರೆ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕಿ ಭಾವನಾ ಬೆಳಗೆರೆ. ಅಗಲಿದ ತನ್ನ ಅಪ್ಪ ರವಿ ಬೆಳಗೆರೆಯವರ ಅಪ್ಪಟ ಅಭಿಮಾನಿಯಾಗಿರುವ ದೀಕ್ಷಿತ್ ನಾಯರ್ ಎಂಬ ಹುಡುಗನ ಬಗ್ಗೆ ಅವರು…
ವಿಧ: ಪುಸ್ತಕ ವಿಮರ್ಶೆ
February 12, 2025
ಲೇಖಕ ಮಂಜುನಾಥ್ ಚಾಂದ್ ಅವರ ‘ಕಾಡ ಸೆರಗಿನ ಸೂಡಿ’ ಕಾದಂಬರಿಯು 1930ರ ದಶಕದ ಭಾರತ ಸ್ವಾತಂತ್ರ್ಯ ಹೋರಾಟವನ್ನು ಹಿನ್ನೆಲೆಯಾಗಿರಿಸಿಕೊಂಡು ರಚಿಸಿದ ತ್ಯಾಗ ಮತ್ತು ಬಲಿದಾನದ ಕಥನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕ ಜಗದೀಶ್ ಕೊಪ್ಪ ಅವರು “ ಅನೇಕ ರೋಚಕ ತಿರುವುಗಳ ನಡುವೆಯೂ ಈ ಕಾದಂಬರಿಯು ಹಲವು ಬಗೆಯ ಕುತೂಹಲ, ವಿಷಾದಗಳ ಜೊತೆ ರೋಮಾಂಚನವನ್ನುಂಟು ಮಾಡುತ್ತಾ, ಓದಿದ ನಂತರವೂ ಓದುಗರನ್ನು ನಿರಂತರವಾಗಿ ಕಾಡುವ ಗುಣವನ್ನು ಒಳಗೊಂಡಿರುವುದು ವಿಶೇಷವಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಈ…
ವಿಧ: ಪುಸ್ತಕ ವಿಮರ್ಶೆ
February 11, 2025
ಸುಮಾರು ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತದ ಆಯುರ್ವೇದದ ಬಗ್ಗೆ ನಮ್ಮೆಲ್ಲರ ಕಣ್ಣು ತೆರೆಸಬಲ್ಲ ಪುಸ್ತಕ ಇದು. ಮುಂಬೈ ವೈದ್ಯರಾದ ಶರದಿನಿ ದಹನೂಕರ್ ಮತ್ತು ಊರ್ಮಿಳಾ ತಟ್ಟೆ ಬರೆದಿರುವ ಈ ಪುಸ್ತಕವನ್ನು ಡಾ. ಎಚ್.ಡಿ. ಚಂದ್ರಪ್ಪ ಗೌಡ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇದರಲ್ಲಿರುವ 14 ಅಧ್ಯಾಯಗಳು:
1)ಪ್ರಸ್ತಾವನೆ 8)ನಾಲ್ಕನೆಯ ಆಯಾಮ: ಕಾಲ
2)ಒಂದು ಪಕ್ಷಿನೋಟ 9)ಪಥ್ಯಾಹಾರ
3)ಆಳುವವರು: ದೋಷಗಳು 10)ಮೊದಲನೆ ಮತ್ತು ಎರಡನೆ ಬಾಲ್ಯಾವಸ್ಥೆ
4)ಜನತೆ:…
ವಿಧ: ರುಚಿ
February 11, 2025
ಒಂದು ಬ್ರೆಡ್ ಸ್ಲೈಸ್ ಮೇಲೆ ಬೀಟೂರೂಟ್ ತುಂಡು, ಅದರ ಮೇಲೆ ಬಟಾಟೆ ತುಂಡು, ಅದರ ಮೇಲೆ ಟೊಮೆಟೊ ಮತ್ತು ಮುಳ್ಳು ಸೌತೆ ಇಡಿ. ಮೇಲಿನಿಂದ ಕ್ಯಾರೆಟ್ ತುರಿ ಹರಡಿ. ಇನ್ನೊಂದು ಬ್ರೆಡ್ ಸ್ಲೈಸ್ ಮೇಲೆ ಖಾರವಾದ ಹಸಿರು ಚಟ್ನಿ ಹರಡಿ. ತರಕಾರಿ ಹರಡಿದ ಬ್ರೆಡ್ ಸ್ಲೈಸ್ ಮೇಲೆ ಚಟ್ನಿ ಹರಡಿದ ಬ್ರೆಡ್ ಸ್ಲೈಸ್ ಇಟ್ಟು ತಿನ್ನಿರಿ. ಇದು ಬಹಳ ಆರೋಗ್ಯಕರ.
ವಿಧ: ಪುಸ್ತಕ ವಿಮರ್ಶೆ
February 10, 2025
‘ಪಿಟ್ಕಾಯಣ’ ಈ ಕೃತಿಯು ಬಹು ಆಯಾಮಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಹಾಗೆಂದು ಅದು ಓದುಗರನ್ನು ಪರೀಕ್ಷಿಸುತ್ತದೆ ಎಂದೇನೂ ಅಲ್ಲ. ಬದಲಾಗಿ ಆಯಾ ವಯಸ್ಕರಿಗೆ ತಕ್ಕಂತೆ ಆಸಕ್ತಿಯಿಂದ ಸಲೀಸಾಗಿ ಓದಿಸಿಕೊಳ್ಳುತ್ತದೆ. ಈ ಕೃತಿಯ ಲೇಖನಗಳ ತಲೆಬರಹ ಓದುಗರನ್ನು ಕುತೂಹಲಿಗರನ್ನಾಗಿಸುವುದಲ್ಲದೆ, ಅವರಲ್ಲಿ ಬೆರಗನ್ನೂ ಉಂಟುಮಾಡುತ್ತವೆ. ಅಂತಹ ಕೆಲವನ್ನು ಇಲ್ಲಿ ಹೆಸರಿಸುವುದು ಸೂಕ್ತ-ಬಿಸಿಲುಗುದುರೆ ಆಗಿಬಿಟ್ಟಿರುವ ‘ಹಠಾತ್ ಸಾವು’ ಅಧ್ಯಯನ ಫಲಿತಾಂಶ; ವಿದ್ಯುತ್ ಖಾಸಗೀಕರಣಕ್ಕೆ ಗಂಟಲಲ್ಲಿ ಸಿಕ್ಕ…