ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 26, 2025
ದೆವ್ವ ಮಾಡಿದ ಕೊಲೆ? ಎನ್ನುವ ವಾಮಾಚಾರ ವಿಷಯದ ಪತ್ತೇದಾರಿ ಕಾದಂಬರಿಯನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು…
ವಿಧ: ರುಚಿ
February 26, 2025
ಕಡಲೆ ಹಿಟ್ಟನ್ನು ಸ್ವಲ್ಪ ತುಪ್ಪದಲ್ಲಿ ಪರಿಮಳ ಬರುವಷ್ಟು ಹುರಿಯಿರಿ. ಅದಕ್ಕೆ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಕಿ ಕಲೆಸಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಎಳೆಪಾಕ ಮಾಡಿಕೊಳ್ಳಿ. ಹಿಟ್ಟು ಬಿಸಿಯಿರುವಾಗಲೇ ಸಕ್ಕರೆ ಪಾಕ ಹಾಕಿ ಚೆನ್ನಾಗಿ ಮಗುಚಿ. ಅದು ಮುದ್ದೆಯಾಗುತ್ತದೆ. ತಣಿದ ನಂತರ ಉಂಡೆ ಕಟ್ಟಿ. ಮಕ್ಕಳಿಗೆ ಬಲು ಇಷ್ಟ ಈ ತಿಂಡಿ. - ಸಹನಾ ಕಾಂತಬೈಲು, ಮಡಿಕೇರಿ
ವಿಧ: ರುಚಿ
February 25, 2025
ಸಣ್ಣಗೆ ಹೆಚ್ಚಿದ ಖರ್ಜೂರ, ಗೋಡಂಬಿ ತುಂಡು, ಬಾದಾಮಿ ತುಂಡುಗಳನ್ನು ಬೇರೆ ಬೇರೆಯಾಗಿ ಸ್ವಲ್ಪ ತುಪ್ಪದಲ್ಲಿ ಹುರಿದು ಒಣ ಕೊಬ್ಬರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ ಸಕ್ಕರೆ ಹಾಕಿ ಕದಡಿ ನಂತರ ಮಿಶ್ರಣ ಮಾಡಿರಿಸಿದ ಸಾಮಗ್ರಿ ಸೇರಿಸಿ ತಿರುವಿ ಒಲೆಯಿಂದ ಕೆಳಗಿರಿಸಿ ಉಂಡೆ ಕಟ್ಟಿ. ಇದು ಬಹಳ ಪೌಷ್ಟಿಕಾಂಶಗಳಿಂದ ಕೂಡಿದ ಉಂಡೆ. ಚಿಕ್ಕ ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 24, 2025
ಸ್ವಾತಂತ್ರ್ಯೋತ್ತರ ಅಮೃತ ವರ್ಷದ ಸಂದರ್ಭದಲ್ಲಿ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಪಿ.ಅನಂತಕೃಷ್ಣ ಭಟ್ ಇವರು ಬರೆದ ‘ಭಾರತ ಸಂವಿಧಾನ’ -ಒಂದು ಸುಂದರ ಪಕ್ಷಿ ನೋಟ ಸಂವಿಧಾನದ ಕುರಿತಾದ ಕುತೂಹಲಕರವಾದ ಮಾಹಿತಿ ನೀಡುತ್ತದೆ. ವಿಶ್ವದ ಸುದೀರ್ಘ ಸಂವಿಧಾನ ಎಂಬ ಹೆಗ್ಗಳಿಕೆಯ ರಾಜ್ಯಾಂಗ ಘಟನೆ ನಮ್ಮದು. ವಿಶ್ವ ಇತಿಹಾಸದ ಸಂದಿಗ್ಧತೆಯಿಂದ, ಸ್ವಾತಂತ್ರ್ಯ ಹೋರಾಟದ ಅಗ್ನಿ ಮುಖದಿಂದ, ರಾಷ್ಟ್ರಪ್ರೇಮದ ಜ್ವಲಂತ ಏರುಗತಿಯಿಂದ ಉದಿಸಿ ಬಂದ ಚಾರಿತ್ರಿಕ ದಾಖಲೆಯೇ ನಮ್ಮ ಸಂವಿಧಾನ. ವಿಶ್ವದ…
ವಿಧ: ರುಚಿ
February 24, 2025
೩ ಗಂಟೆ ಮೊದಲೇ ನೆನೆ ಹಾಕಿದ ಬೆಳ್ತಿಗೆ ಅಕ್ಕಿಯನ್ನು ದೀವಿ ಹಲಸಿನ ಹೋಳು, ಜೀರಿಗೆ, ಕುಂಟೆ ಮೆಣಸು, ಉಪ್ಪು ಹಾಕಿ ಗಟ್ಟಿಗೆ ನುಣ್ಣಗೆ ರುಬ್ಬಿ ವಡೆಯಂತೆ ತಟ್ಟಿ ಕರಿಯಿರಿ. ಬಿಸಿಬಿಸಿ ತಿನ್ನಲು ರುಚಿ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Kavitha Mahesh
ವಿಧ: ರುಚಿ
February 23, 2025
ಒಂದು ದೊಡ್ಡ ಪಾತ್ರೆಯಲ್ಲಿ ಬೆಲ್ಲ, ಹುಣಸೆ, ಖರ್ಜೂರ, ಏಲಕ್ಕಿ, ಶುಂಠಿ ಹುಡಿ, ಮೆಣಸಿನ ಹುಡಿ, ಓಂ ಕಾಳು, ಮಸಾಲಾ ಎಲೆ, ಉಪ್ಪು ಮತ್ತು ನೀರು ಸೇರಿಸಿ ದೊಡ್ದ ಉರಿಯಲ್ಲಿ ೨೦-೨೫ ನಿಮಿಷ ಕುದಿಸಿರಿ. ಒಂದು ಸಣ್ಣ ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿ ಬಡೆಸೋಂಪು ಸೇರಿಸಿ ಸಿಡಿಸಿ ಕುದಿಯುತ್ತಿರುವ ಚಟ್ನಿಗೆ ಸೇರಿಸಿ. ಮಿಶ್ರಣವನ್ನು ಜರಡಿಯಲ್ಲಿ ಸೋಸಿ. ತಣಿದ ಬಳಿಕ ಡಬ್ಬಿಯಲ್ಲಿ ತುಂಬಿಸಿ ಫ್ರಿಡ್ಜ್ ನಲ್ಲಿಟ್ಟರೆ ತಿಂಗಳುಗಟ್ಟಲೆ ಹಾಳಾಗುವುದಿಲ್ಲ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 21, 2025
“ಗುಣ ಲಕ್ಷಣ + ಅವಕಾಶ = ಯಶಸ್ಸು ಎನ್ನುವ ಇನ್ ಫೋಸಿಸ್ ನ ಸ್ಥಾಪಕರಲ್ಲೊಬ್ಬರಾದ ಎನ್ ಆರ್ ನಾರಾಯಣ ಮೂರ್ತಿಯವರ ಮಾತನ್ನು ಮುಖಪುಟದಲ್ಲೇ ಪ್ರಕಟಿಸಿದ್ದಾರೆ ‘ಸಾಧಕರ ೮ ವಿಶೇಷ ಗುಣಗಳು’ ಕೃತಿಯ ಲೇಖಕರಾದ ಸುಂಬರ್ ಬಾಬು ಇವರು. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ‘ಉಪ್ಪಿಗಿಂತ ರುಚಿ ಬೇರೆ ಇಲ್ಲ’ ಎಂಬ ಕೃತಿಯ ಲೇಖಕರಾದ ರಾಮಸ್ವಾಮಿ ಹುಲಕೋಡು. ಅವರು ತಮ್ಮ ‘ಎಂಟರ ನಂಟು ಬೆಳೆಯಲಿ’ ಎನ್ನುವ ಬರಹದಲ್ಲಿ “ ಎಂಟು ಎಂದರೆ ಸಂಸ್ಕೃತದಲ್ಲಿ ‘ಅಷ್ಟ’. ಅಷ್ಟ ಸಿದ್ದಿ ಸಾಧಿಸಿದರೇನೆ ಯೋಗಿಯಾಗಲು ಸಾಧ್ಯ…
ವಿಧ: ರುಚಿ
February 21, 2025
ಪಾತ್ರೆಗೆ ಹೆಚ್ಚಿದ ಮಾವಿನಹಣ್ಣು, ಬೆಲ್ಲದ ಪುಡಿ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ದಪ್ಪ ತೆಂಗಿನಹಾಲು ಹಾಗೂ ಚಿಟಿಕೆ ಉಪ್ಪು ಸೇರಿಸಿ. ಕೊನೆಗೆ ಎಳ್ಳು ಹುರಿದು ಹಾಕಿ. ಈಗ ರುಚಿಯಾದ ಮಾವಿನಹಣ್ಣಿನ ರಸಾಯನ ರೆಡಿ. ಇದನ್ನು ಹಾಗೆಯೇ ಕುಡಿಯಬಹುದು. ಇಲ್ಲವೇ ಇಡ್ಲಿ, ಉದ್ದಿನ ದೋಸೆ, ಒತ್ತು ಶ್ಯಾವಿಗೆ ಜೊತೆ ಸೇರಿಸಿ ತಿನ್ನಲೂ ಬಹಳ ಚೆನ್ನಾಗಿರುತ್ತದೆ. -ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 19, 2025
ಸಂತೆಕಸಲಗೆರೆ ಪ್ರಕಾಶ್ ಎಬವರು ‘ಬೂಸ್ಟರ್ ಡೋಸ್ ಮುನಿಯಪ್ಪ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಕೇಶವ ಮಳಗಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ… “ಎರಡು-ಮೂರು ವರ್ಷಗಳ ಕಾಲ ಕಾಡಿದ ಸೋಂಕಿನ ಕರಾಳಛಾಯೆ ನಮ್ಮ ಸಮಾಜವನ್ನು ಇನ್ನೂ ಸಂಪೂರ್ಣವಾಗಿ ತೊರೆದುಹೋಗಿಲ್ಲ. ಸಮಾಜವೊಂದರಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವ ಸಾಂಕ್ರಾಮಿಕ ಜಾಡ್ಯವೊಂದು ಏನನ್ನು ಸೂಚಿಸುತ್ತದೆ ಎಂಬ ಪ್ರಶ್ನೆ ಕೇಳಿಕೊಂಡು…
ವಿಧ: ರುಚಿ
February 19, 2025
ಅನಾನಸು ಹೋಳುಗಳನ್ನು ಸ್ವಲ್ಪ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ರುಬ್ಬಿದ ಅನಾನಸು, ಸಕ್ಕರೆ ಹಾಕಿ ಕುದಿಸಿ ಮಗುಚಿ. ತುಪ್ಪ, ಗೋಡಂಬಿ, ದ್ರಾಕ್ಷಿ, ಕೇಸರಿ ಹಾಕಿ ಚೆನ್ನಾಗಿ ಮಗುಚಿ. ಬಿಸಿಬಿಸಿ ತಿನ್ನಲು ರುಚಿ. ತಣ್ಣಗೆ ತಿನ್ನಲೂ ರುಚಿಯಾಗಿರುತ್ತದೆ. - ಸಹನಾ ಕಾಂತಬೈಲು, ಮಡಿಕೇರಿ