ಕಥೆಯಾದಳಾ ಕಪ್ಪು ಹುಡುಗಿ !!

ಮೊದಲ ಬಾರಿ ಅವಳನ್ನು ನಾನು ನೋಡಿದ್ದು ನನ್ನ ತ೦ಗಿ ವನಿತಾಳ ಬಟ್ಟೆ ಹೊಲಿಯುವ ಅ೦ಗಡಿಯಲ್ಲಿ. ಕಪ್ಪಗೆ, ಕುಳ್ಳಗೆ ವ್ಯಕ್ತಿತ್ವ ಯಾರನ್ನೂ ಆಕರ್ಷಿಸುವ೦ತಿರಲಿಲ್ಲ. ವನಿತಾಳ ಹತ್ತಿರದ ಬ್ಯೂಟಿ ಪಾರ್ಲರ್‌ಗೆ ಕೆಲಸಕ್ಕೆ ಬ೦ದ ಹೊಸ ಬ್ಯೂಟಿಷನ್ ಎ೦ದು ಕೇಳಿದಾಗ ನನಗೆ ನ೦ಬಲಾಗಲಿಲ್ಲ. ಇಷ್ಟೊ೦ದು ಕಪ್ಪಾಗಿ ಇರುವವರೂ ಬ್ಯೂಟಿಷನ್‌ಗಳಾಗುತ್ತಾರಾ ಎ೦ದು ನಾನು ವನಿತಾ ಹತ್ತಿರ ಕೇಳಿದಾಗ ಅವಳು ಜೋರಾಗಿ ನಕ್ಕಿದ್ದಳು. ಚ೦ದಗೆ, ಬೆಳ್ಳಗೆ ಇರುವವರು ಮಾತ್ರ ಆ ಕೆಲಸ ಮಾಡ ಬೇಕಾ? ಚ೦ದವನ್ನು ಅವಳು ಮಾಡುವ ಕೆಲಸದಲಿ ಹುಡುಕು ಎ೦ದು ನನ್ನ ಬಾಯಿ ಮುಚ್ಚಿಸಿದ್ದಳು.

Image

ಮಹಾ ಸಮಾಜ ಸುಧಾರಕ ಬಸವಣ್ಣನವರು

ಮಹಾ ಸಮಾಜ ಸುಧಾರಕ ಬಸವಣ್ಣನವರು ಜನಿಸಿದ್ದು ೧೧೦೫ರಲ್ಲಿ - ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಎಪ್ರಿಲ್ ೨೬ ಬಸವಣ್ಣನವರ ಜಯಂತಿ.

ಜನಸಾಮಾನ್ಯರ ಆಡುಮಾತಿನಲ್ಲಿ ರಚಿಸಿದ ವಚನಗಳ ಮೂಲಕ ಸಾಮಾಜಿಕ ಬದಲಾವಣೆಯ ಕಹಳೆ ಮೊಳಗಿಸಿದವರು ಬಸವಣ್ಣ. ಬಾಲ್ಯದಿಂದಲೇ ಅವರ ಚಿಂತನಶೀಲತೆ, ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಸ್ವಭಾವ ಎದ್ದು ಕಾಣುತ್ತಿತ್ತು. ಉದಾಹರಣೆಗೆ ಎಂಟು ವರುಷ ವಯಸ್ಸಿನಲ್ಲಿ ಹೆತ್ತವರು ಉಪನಯನ ಮಾಡಲು ಮುಂದಾದಾಗ, ಬಸವಣ್ಣ ಅದನ್ನು ನಿರಾಕರಿಸಿದರು.

Image

ಕೊರೋನಾ: ಮನೆಯಲ್ಲೇ ಇರೋಣಾ

ಬಹುಷಃ ಸುಮಾರು ಒಂದುವರೆ ತಿಂಗಳಿಂದ ಎಲ್ಲಾ ಕಡೆ ಕೊರೋನಾ ಮಹಾ ಮಾರಿಯದ್ದೇ ಸುದ್ದಿ. ಯಾವ ಪತ್ರಿಕೆಯೇ ಆಗಿರಲಿ, ಸುದ್ದಿ ಚಾನೆಲ್‌ಗಳೇ ಆಗಿರಲಿ ಇದರದ್ದೇ ಸುದ್ದಿ. ಉಳಿದ ಯವುದೇ ಕಾರ್ಯಕ್ರಮಗಳು ಇಲ್ಲವೇ ಇಲ್ಲ ಅವರಾದರೂ ಏನು ಮಾಡುವುದು? ಈ ಸುದ್ದಿಗಳನ್ನು ಕೇಳಿ ಕೇಳಿ ನಿಮಗೂ ಬೋರಾಗಿರಬಹುದಲ್ವಾ? ಅದಕ್ಕೇ ನಾನು ಕೊರೋನಾ ರೋಗ ಮತ್ತು ಅದರ ಪರಿಣಾಮ ಮತ್ತು ನಿಯಂತ್ರಣಗಳ ಬಗ್ಗೆ ಕೊರೆಯಲು ಹೋಗಲ್ಲ. ನೀವು ಈಗಾಗಲೇ ಅದರ ಬಗ್ಗೆ ತಿಳಿದುಕೊಂಡು ಮುಂಜಾಗ್ರತೆಯನ್ನು ವಹಿಸಿಕೊಂಡು ಮನೆಯಲ್ಲೇ ಆರೋಗ್ಯವಂತರಾಗಿರುವಿರಿ ಎಂದು ನನ್ನ ನಂಬಿಕೆ. 

Image

ಟೈಂ ಪಾಸ್‌ಗೆ ಒಂದು ಕಥೆ: ಅಂತರಾಳ

 ಫೋನ್ ಒಂದೇ ಸಮನೇ ರಿ೦ಗಾಗುತ್ತಿತ್ತು. ಗಂಟೆ ಒಂಬತ್ತಾದರೂ ನಾನು ಮಲಗಿದಲ್ಲಿಯೇ ಇದ್ದೆ. ಸಿಕ್ಕಿದ್ದ ಎಲ್ಲಾ ಕೆಲಸವನ್ನೂ ನನ್ನ ಬೇಜವಾಬ್ದಾರಿತನದಿ೦ದ ಬಿಟ್ಟು ಮನೆಯಲ್ಲಿಯೇ ಇದ್ದುದರಿ೦ದ ಬೇಗನೇ ಎದ್ದು ನಾನು ಮಾಡ ಬೇಕಾದುದು ಏನೂ ಇರಲಿಲ್ಲವಾದುದರಿ೦ದ ತಡವಾಗಿಯೇ ಏಳುವುದು ಅಭ್ಯಾಸವಾಗಿ ಹೋಗಿತ್ತು. ಅಪ್ಪ, ಅಮ್ಮ ಕೆಲಸಕ್ಕೆ ತಮ್ಮ ಕಾಲೇಜಿಗೆ ಹೋಗಿದ್ದುದರಿ೦ದ ಫೋನ್ ಎತ್ತುವುದಕ್ಕೆ ನಾನೇ ಹೋಗಬೇಕಾಯಿತು.      

ಕಲ್ಲಂಗಡಿ ಖರೀದಿಸಿದ ಸೋಮಾರಿ ಕರಡಿ ಮರಿಗಳು

ಒಂದು ಕರಡಿ ಕುಟುಂಬದಲ್ಲಿ ಇಬ್ಬರು ಸೋದರರಿದ್ದರು. ಇಬ್ಬರೂ ಶುದ್ಧ ಸೋಮಾರಿಗಳು. ಅಣ್ಣ ಕರಡಿಯನ್ನು "ಹಿರಿಯ ಸೋಮಾರಿ” ಮತ್ತು ತಮ್ಮ ಕರಡಿಯನ್ನು "ಕಿರಿಯ ಸೋಮಾರಿ" ಎಂದು ತಾಯಿಕರಡಿ ಕರೆಯುತ್ತಿದ್ದಳು.

ಬೇಸಗೆ ಶುರುವಾಯಿತು. ವಾತಾವರಣ ಬಿಸಿಯಾಗಿ ಶುಷ್ಕವಾಯಿತು. ಸಿಕಾಡ ಕೀಟಗಳು ಮರಗಳಲ್ಲಿ ಸದ್ದು ಮಾಡುತ್ತಿದ್ದವು. ತಾಯಿಕರಡಿಗೆ ಸಣ್ಣಮನೆಯಲ್ಲಿ ಬಹಳ ಸೆಕೆಯಾಯಿತು.

ಆಗ ಕಿರಿಯ ಸೋಮಾರಿ ಕರಡಿ ಹೇಳಿತು, “ಇಂತಹ ಸುಡುಬಿಸಿಲಿನ ದಿನ ತಿನ್ನಲು ಕಲ್ಲಂಗಡಿ ಹಣ್ಣಿದ್ದರೆ ಚೆನ್ನ.” ಹಿರಿಯ ಸೋಮಾರಿ ಕರಡಿ ದನಿಗೂಡಿಸಿತು. “ಹೌದು ಹೌದು. ಕಲ್ಲಂಗಡಿ ಸಿಹಿಸಿಹಿ. ಅದನ್ನು ತಿಂದರೆ ನಮ್ಮ ಬಾಯಾರಿಕೆ ತಣಿಯುತ್ತದೆ. ಆದರೆ ಅದನ್ನು ಖರೀದಿಸಿ ತರುವವರು ಯಾರು?"

Image

ಕೊಡಗಿನ ಕಾವೇರಿ: ಜೀವನದಿಯಾಗಿ ಉಳಿದೀತೇ?

ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿ. ಮಹಾನಗರ ಬೆಂಗಳೂರು ಮತ್ತು ನೂರಾರು ಹಳ್ಳಿಪಟ್ಟಣಗಳ ಜನರ ಕುಡಿಯುವ ನೀರಿನ ಮೂಲ ಈ ನದಿ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ರೈತರಿಗೂ ಕೈಗಾರಿಕೋದ್ಯಮಿಗಳಿಗೂ ಕಾವೇರಿ ನೀರಿನಲ್ಲಿ ಪಾಲು ಬೇಕೇ ಬೇಕು – ತಮ್ಮ ಉಳಿವಿಗಾಗಿ ಹಾಗೂ ಪ್ರಗತಿಗಾಗಿ.
ಅದೆಲ್ಲ ಸರಿ. ಈ ಕಾವೇರಿ ನದಿಗೆ ನೀರು ಬರುವುದು ಎಲ್ಲಿಂದ? ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯಿಂದ. ಅಲ್ಲಿನ ತಲಕಾವೇರಿ ಎಂಬ ಪುಟ್ಟ ಊರಿನಲ್ಲಿ ಕಾವೇರಿ ನದಿಯ ಹುಟ್ಟು. ಕಾಫಿ, ಕರಿಮೆಣಸು, ಏಲಕ್ಕಿ ಮತ್ತು ಭತ್ತದ ಕೃಷಿಗೆ ಹೆಸರಾದ ಕೊಡಗು ಜಿಲ್ಲೆ, ಕಾವೇರಿ ನದಿಯಲ್ಲಿ ಹರಿಯುವ ನೀರಿನ ಅರ್ಧ ಭಾಗವನ್ನು ತುಂಬಿ ಕೊಡುತ್ತದೆ ಎಂಬುದು ವಾಸ್ತವ.

Image

ಸಖಿ-2050

ಹೊಸತಾಗಿ ಒಂದು Fitness Band ತಗೊಂಡೆ. ಏನು ಟೆಕ್ನಾಲಜಿ ಸ್ವಾಮಿ ಅದು. ನಾನೆಷ್ಟು ನಡೆದಿದ್ದೇನೆ, ಎಷ್ಟು ವ್ಯಾಯಾಮ ಮಾಡಿದ್ದೇನೆ, ಎಷ್ಟು ಹೊತ್ತು ಮಲಗಿದೆ, ಯಾವಾಗ ಮಲಗಿದೆ,  ಯಾವಾಗ ಎದ್ದೆ, ನನ್ನ ಹೃದಯ ಬಡಿತ ಎಷ್ಟು ಎಲ್ಲವನ್ನು ನನ್ನ ಹೆಂಡತಿಗಿಂತ ಜಾಸ್ತಿ ನೆನಪಿಟ್ಟುಕೊಳ್ಳತ್ತೆ. ಸ್ವಲ್ಪ ದಿನ ಉಪಯೋಗಿಸಿದ ನಂತರ ಹೊಳೆದಿದ್ದು ಈ ಲೇಖನ. ಇಲ್ಲಿರುವ ಪಾತ್ರಗಳು ಮತ್ತು ನಿರ್ಜೀವ ಪಾತ್ರಗಳು (!!!) ಕೇವಲ ಕಾಲ್ಪನಿಕ. ಅವುಗಳ ವರ್ತನೆಗಳು ಕೂಡ ಕಾಲ್ಪನಿಕಾನೇ, ಹಾಗೇನೇ ಸ್ವಲ್ಪ ಮಸಾಲೆ ಬೆರೆಸಿ ಅರೆದಿದ್ದೇನೆ.   ಇನ್ನು ಸ್ಮಾರ್ಟ್ ಅಸಿಸ್ಟೆಂಟ್ ಗೆ SIRI/ALEXA  ಅಂತೆಲ್ಲ ದಿಗ್ಗಜರುಗಳು  ಹೆಸರಿಟ್ಟರೆ ನಾನು ನನ್ನ ಸ್ಮಾರ್ಟ್ ಅಸಿಸ್ಟೆಂಟ್ ರೋಬೋಗೆ "ಸಖಿ" (ಅಚ್ಚ ಕನ್ನಡದ   ಹೆಸರು) ಅಂತ ನಾಮಕರಣ ಮಾಡಿದ್ದೇನೆ .

ಜಡ್ಜರೇ ಜುಲ್ಮಾನೆಯ ದಂಡ ಕಟ್ಟಿದರು

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಕೋಳಿಮರಿಗಳು ಮತ್ತು ಕುತಂತ್ರಿ ನರಿ

ತೋಟದ ಕೋಳಿಗೂಡಿನಲ್ಲಿ ತಾಯಿಕೋಳಿ ಮತ್ತು ಕೋಳಿಮರಿಗಳು ವಾಸ ಮಾಡುತ್ತಿದ್ದವು. ತಾಯಿಕೋಳಿ ಅಥವಾ ತಾವೇ ಹುಡುಕಿದ ಆಹಾರವನ್ನು ಪಾಲು ಮಾಡಿಕೊಂಡು ತಿನ್ನುತ್ತಿದ್ದವು. ಅವು ಒಂದರೊಡನೆ ಇನ್ನೊಂದು ಅನ್ಯೋನ್ಯವಾಗಿದ್ದವು.

ಅಲ್ಲೇ ಹತ್ತಿರದ ಮರದ ಕೆಳಗಿದ್ದ ಗುಹೆಯಲ್ಲೊಂದು ಮೋಸಗಾರ ನರಿ ವಾಸ ಮಾಡುತ್ತಿತ್ತು. ಈ ಕೋಳಿಮರಿಗಳನ್ನು ಕಂಡಾಗಲೆಲ್ಲ ನರಿಗೆ ಇದೊಂದೇ ಯೋಚನೆ: ‘ಓ, ಇವು ನನ್ನ ಊಟಕ್ಕೆ ಸಿಗುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಎಳೆ ತಾಯಿಕೋಳಿಯ ಮಾಂಸ ಒಳ್ಳೆಯ ಭೋಜನವಂತೆ.”

Image

ಗೋಕುಲದ ಒಲವು

ಮಥುರೆಯ ರಾಜಕಾರಾಗೃಹದಲಿ ಬಂದಿಯಾಗಿಹರು ದೇವಕಿ ವಸುದೇವರು
ಸುತ್ತಮುತ್ತಲು ಹರಡಿದೆ ಕಾಡು ಕತ್ತಲು ಕಾಯುತಿದೆ ಜನತೆ ದೇವಕುಂಜರಗೆ
ಕಂಸನ ಅಟ್ಟಹಾಸ ಮುಗಿದಿಲ್ಲ ಏಳು ಕಂದಮ್ಮಗಳ ಹನನದ ನಂತರವೂ
ಕಾಯುತಿಹನು ಕೊನೆಗಾಣಿಸಲು ಎಂಟನೆಯ ಕಂದನಿಗೆ ಅಮರನಾಗುವ ಹಂಬಲದಿ||

ಮೈಮರೆಯಿತು ಮಥುರೆ ಕತ್ತಲ ಇರುಳಿನಲಿ ಬಂದಿಳಿಯಿತು ದೇವ ಕುಂಜರ
ಸದ್ದಿಲ್ಲದೇ ಮಾಯೆ ಹೊರಡಿಸಿತು ಗೋಕುಲಕೆ ವಸುದೇವನ ನಂದನನ
ಭೋರ್ಗರೆಯುವ ಯಮುನೆಯ ಹೊರಳಿನಲಿ ಹೊರಟಿತು ಗೋಕುಲಕೆ
ಮಮತಾಮಯಿ ಯಶೋಧೆಯ ತಾಯ ಮಡಿಲು ತುಂಬಿತು ವಸುದೇವನ ಕಂದನು||