ನನಗೂ ಲವ್ವಾಗಿದೆ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಗಣೇಶ್ ಕೋಡೂರು
ಪ್ರಕಾಶಕರು
ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು-ಅಂಚೆ, ಹೊಸನಗರ, ಶಿವಮೊಗ್ಗ-೫೭೭೪೧೮
ಪುಸ್ತಕದ ಬೆಲೆ
ರೂ.೫೦.೦೦

ವೃತ್ತಿಯಲ್ಲಿ 'ನಿಮ್ಮೆಲ್ಲರ ಮಾನಸ' ಎಂಬ ಒಂದು ಸದಭಿರುಚಿಯ ಪತ್ರಿಕೆಯ ಸಂಪಾದಕರಾಗಿದ್ದು ಕೊಂಡು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ ಕೆ.ಗಣೇಶ್ ಕೋಡೂರು ಇವರು. ನನಗೂ ಲವ್ವಾಗಿದೆ ಪುಸ್ತಕವು ೨೦೧೬ರಲ್ಲಿ ಮೊದಲ ಮುದ್ರಣ ಕಂಡಿದ್ದು ಯುವ ಜನಾಂಗಕ್ಕೆ ಪ್ರೀತಿಯ ಬಗ್ಗೆ ಆಪ್ತವಾಗಿ ಬರೆಯುತ್ತಾ ಹೋಗುತ್ತಾರೆ. ಸರಳವಾದ ಭಾಷೆ ಈ ಸಣ್ಣ ಪುಸ್ತಕವನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. 

ಕೆ.ಗಣೇಶ್ ಕೋಡೂರು
ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು-ಅಂಚೆ, ಹೊಸನಗರ, ಶಿವಮೊಗ್ಗ-೫೭೭೪೧೮
ರೂ.೫೦.೦೦
 

ಅಮೂಲ್ಯ ಔಷಧಿಗಳ ಆಗರ ನುಗ್ಗೇಕಾಯಿ

ಬಹಳ ಹಿಂದೆ ಉಡುಪಿ ಜಿಲ್ಲಾ ಕೃಷಿಕರ ಸಂಘದ ಕೃಷಿ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಹಿತ್ತಲಲ್ಲಿ ಗಿಡ ಮೂಲಿಕೆಗಳು ಕುರಿತಾಗಿ ಎಂ ದಿನೇಶ್ ನಾಯಕ್ ವಿಟ್ಲ, ಇವರು ನಮ್ಮ ಸುತ್ತಮುತ್ತ ಇರುವ, ಮಹತ್ವ ಗೊತ್ತಿಲ್ಲದ ಕೆಲವೊಂದು ಔಷಧೀಯ ಗಿಡಗಳು, ಮರಗಳು, ಮತ್ತು ಬಳ್ಳಿಗಳ ಬಗ್ಗೆ ಜನರಿಗೆ ಅರ್ಥವಾಗುವಂತೆ ಹೇಳಿದ್ದರು. ಅದರಲ್ಲಿ ಒಂದು ನುಗ್ಗೆ ಕಾಯಿ. ಇದು ನಮಗೆಲ್ಲಾ ಪರಿಚಿತ ಮರ. ಇದು ಕೇವಲ ತರಕಾರಿ ಉದ್ದೇಶಕ್ಕೆ ಮಾತ್ರ ಬಳಕೆಯಾಗುವ ಮರವಲ್ಲ. ಮನೆಯ ಹಿತ್ತಲಿನ ಒಂದು ಅಮೂಲ್ಯ ಔಷಧೀಯ ಗಿಡ.    

Image

ತೊಂದರೆ

ಬುದ್ಧಿವಂತಿಕೆಯೆ ನಮ್ಮೀ ಜಗಕೆ

ಎಂದಿಗು ದೊಡ್ಡ ತೊಂದರೆ

ದಡ್ಡರೆ ಉಳಿದರು ಲೋಕದಿ ನೆಮ್ಮದಿ

ಬುದ್ಧಿಯೆ ಮನುಜಗೆ ಬೆನ್ನ ಬರೆ

 

ಯಾಕೆ ಬೇಕಿತ್ತು ಐನ್ ಸ್ಟೈನನಿಗೆ 

ಕಾಣದ ಅಣುಗಳ ಸಹವಾಸ?

ಕಲಾಶ್ನಿಕೋವ್ ರೈಫಲು ಮಾಡಿದ

ಕೊಡಬೇಕಿತ್ತವನಿಗೆ ಸೆರೆವಾಸ

 

ಕರೆಂಟು ಇಲ್ಲದ ಲೋಕದ ನೆಮ್ಮದಿ 

ಫೆರಡೇ ಬಂದು ಕೆಡಿಸಿದನು

ಹಗಲು ದುಡಿದು ಕತ್ತಲೆಗೊಂದಾಗುವ

ದಂಪತಿಗಳನು ಬಿಡಿಸಿದನು

 

ರೈಲುಗಾಡಿ ಅಂದು ಓಡದೆ ಇದ್ದರು

ಬದುಕಿನ ಬಂಡಿ ಓಡಿತ್ತು

ಅದಕೂ ಮಿಗಿಲಾದುದೆ ಬೇಕೆಂದರೆ

ಎತ್ತಿನ ಗಾಡಿಯೆ ಸಾಕಿತ್ತು

 

ಬಸ್ಸು ಕಾರು ಎರೋಪ್ಲೇನುಗಳ

ಹೇಳಿದನೇ ಹಿಂದಿದ್ದ ಮನು

ಹಟಮಾರಿ ಪುಟ್ಟ ಮೀನು

ಬಹಳ ಹಿಂದೆ ಒಂದು ಕೊಳದಲ್ಲಿ ಪುಟ್ಟ ಮೀನೊಂದಿತ್ತು. ಒಂದು ಚೋಂದಕಪ್ಪೆ ಅದರ ಗೆಳೆಯ. ಅವರಿಬ್ಬರೂ ಯಾವಾಗಲೂ ಜೊತೆಯಾಗಿ ಈಜುತ್ತಾ, ಆಹಾರ ಹುಡುಕುತ್ತಾ ಆಟವಾಡುತ್ತಿದ್ದರು.

ಅದೊಂದು ದಿನ ಬೆಳಗ್ಗೆ ಚೋಂದಕಪ್ಪೆಯ ಬಾಲದ ಹತ್ತಿರ ಒಂದು ಜೊತೆ ಕಾಲುಗಳನ್ನು ಕಂಡು ಮೀನಿಗೆ ಅಚ್ಚರಿ. ಚೋಂದಕಪ್ಪೆಗೆ ಕಾಲುಗಳು ಯಾಕೆ ಮೂಡಿವೆ ಎಂದು ಕೇಳಿತು ಪುಟ್ಟ ಮೀನು.

"ನಾನು ಮೀನಲ್ಲ. ನಾನು ಚೋಂದಕಪ್ಪೆ ಅಂದರೆ ಮರಿಕಪ್ಪೆ. ನಾನು ದೊಡ್ಡವನಾದಾಗ ಈ ಕೊಳದಲ್ಲಿ ವಾಸ ಮಾಡೋದಿಲ್ಲ" ಎಂದು ವಿವರಿಸಿತು ಚೋಂದಕಪ್ಪೆ.

“ನೀನು ಸುಳ್ಳು ಹೇಳುತ್ತಿದ್ದಿ” ಎಂದಿತು ಪುಟ್ಟ ಮೀನು. "ನೀನೀಗ ನನ್ನ ಮಾತು ನಂಬದಿದ್ದರೆ, ಕೆಲವು ದಿನಗಳ ನಂತರ ನೀನೇ ನೋಡುವಿಯಂತೆ" ಎಂದಿತು ಚೋಂದಕಪ್ಪೆ.

Image

ಲೂಲು ಟ್ರಾವೆಲ್ಸ್

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಸಾದ್ ಶೆಣೈ ಕಾರ್ಕಳ
ಪ್ರಕಾಶಕರು
ಬಿಳಿಕಲ್ಲು ಪ್ರಕಾಶನ ಬೋರ್ಗಲ್‌ಗುಡ್ಡೆ, ನಿಟ್ಟೆ ಅಂಚೆ, ಕಾರ್ಕಳ ೫೭೪ ೧೧೦
ಪುಸ್ತಕದ ಬೆಲೆ
೧೦೦.೦೦

ಪ್ರಸಾದ್ ಶೆಣೈ ಕಾರ್ಕಳ ಇವರ ಚೊಚ್ಚಲ ಕಥಾ ಸಂಕಲನವು ಬಹಳಷ್ಟು ವಿಷಯಗಳಿಂದ ಗಮನ ಸೆಳೆಯುತ್ತದೆ. ೨೦೧೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕಥಾ ಸಂಕಲನದ ಮುಖಪುಟ ಮತ್ತು ಆಕಾರ ಗಮನಿಸುವಾಗ ಅತ್ಯಂತ ಆತ್ಮೀಯತೆ ಕಂಡು ಬರುತ್ತದೆ. ೧೭ ಎಕ್ಸ್‌ಪ್ರೆಸ್ ಕತೆಗಳನ್ನು ಹೊಂದಿರುವ ಈ ಪುಸ್ತಕಕ್ಕೆ ಕಥೆಗಾರ ಅಬ್ದುಲ್ ರಶೀದ್ ಇವರು ಮುನ್ನುಡಿ ಬರೆದಿದ್ದಾರೆ. ಪ್ರಸಾದ್ ಶೆಣೈ ಇವರು ತಾವು ಹುಟ್ಟಿ ಬೆಳೆದ ಪರಿಸರ, ಊರು ಇದರ ತುಂಬೆಲ್ಲಾ ಸುತ್ತಾಡಿದ್ದಾರೆ ಮತ್ತು ಕಥೆ ಓದುತ್ತಾ ಓದುತ್ತಾ ನಮ್ಮನ್ನೂ ಸುತ್ತಿಸುತ್ತಾರೆ. ಒಮ್ಮೆ ಓದಿ ನೋಡುವುದರಲ್ಲಿ ಯಾವ ಮೋಸವೂ ಇಲ್ಲ.
 

ಇನಿಯನ ಮೌನ

ನನ್ನ ಒಲವಿನ ಇನಿಯನೆ 
ನಿನ್ನ ಸಭ್ಯತೆ, ಸದ್ಗುಣಗಳ 
ಎಷ್ಟು ವರ್ಣಿಸಿದರೂ ಸಾಲದು 
ನನ್ನ ಪದಗಳ ಅಕ್ಷರ ಮಾಲೆ. 😊

ರಾತ್ರಿಯಲ್ಲಿ ಸಾವಿರ ಚುಕ್ಕಿಗಳ ನಡುವೆ 
ಚಂದ್ರನೇ ಅತೀಯಾಗಿ ಪ್ರಕಾಶಿಸಿದಂತೆ 
ನೂರಾರು ಸ್ನೇಹಿತರ ನಡುವೆ 
ನೀನೆ ಅತಿಯಾಗಿ ಆಕರ್ಷಿಸಿದೆ. 😍

ನಿನ್ನ  ಹೃದಯದ ಸರೋವರದ ಜೊತೆ 
ನನ್ನ ಭಾವನೆಗಳ ಚಿನುಮೆ  ಹರಿಸಲು  ಬಂದಾಗ 
ಶಾಂತಸಾಗರದಷ್ಟೇ ನಿಮ್ಮ ಮನ ಮೌನವಾಗಿರುದೇಕೆ !?  😌

    

ಮಜಾ ಇರೋದು ಕಾಲೆಳೆಯುವುದರಲ್ಲಲ್ಲ, ಕೈ ಹಿಡಿದು ನಡೆಸುವುದರಲ್ಲಿ...

ನನ್ನ ಲೇಖನವನ್ನು ಒಂದು ಸಣ್ಣ ಕಥೆಯ ಮೂಲಕವೇ ಆರಂಭಿಸಬೇಕೆಂದಿರುವೆ. ಏನಂತೀರಾ ಫ್ರೆಂಡ್ಸ್? ಸರಿ ಈಗ ಕಥೆ ಕೇಳಿ. ಹಲವಾರು ವರ್ಷಗಳ ಹಿಂದೆ ವಿದೇಶವೊಂದರಲ್ಲಿ ಪ್ರಪಂಚದಲ್ಲಿರುವ ಎಲ್ಲ ಅಪರೂಪದ ಜೀವಿಗಳ ಪ್ರದರ್ಶನ ನಡೆಯಿತಂತೆ. ಭೂಮಿಯ ಮೇಲೆ ಜೀವಿಸುವ, ಸಾಗರದ ತಳದಲ್ಲಿ ಬದುಕುವ ಹೀಗೆ ಸಾವಿರಾರು ಜೀವ ಜಂತುಗಳ ಪ್ರದರ್ಶನ ನಡೆಯಿತು. ಪ್ರತೀ ದಿನ ಹಲವಾರು ಮಂದಿ ಈ ಅಪರೂಪದ ಪ್ರದರ್ಶನಕ್ಕೆ ಭೇಟಿ ನೀಡಿ ತಾವು ಜೀವಮಾನದಲ್ಲಿ ನೋಡದ ಜೀವ ಜಂತುಗಳನ್ನು ವೀಕ್ಷಿಸಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಲ್ಲೇ ಇರುತ್ತಿದ್ದ ಗೈಡ್ ಅಥವಾ ಮಾಹಿತಿದಾರನ ಬಳಿ ಕೇಳುತ್ತಿದ್ದರು. ಎಲ್ಲಾ ಪ್ರಾಣಿ-ಜೀವಿಗಳನ್ನು ಪಂಜರದಲ್ಲೋ, ಮುಚ್ಚಿದ ಗಾಜಿನ ಜಾಡಿಯಲ್ಲೋ ಅಥವಾ ರಟ್ಟಿನ ಪೆಟ್ಟಿಗೆಯಲ್ಲೋ ಇರಿಸಿದ್ದರು.

Image

ಮರುಕಥನ - ರಾವಣನ ಪಾತ್ರ ಮತ್ತು ಲಕ್ಷ್ಮಣರೇಖೆ

 

ಒಂದು ಚಾಳಿನಲ್ಲಿ ಅನೇಕ ಸಂಸಾರಗಳಿವೆ. ಅವುಗಳಲ್ಲಿ ಒಂದರಲ್ಲಿ ವಾಸವಾಗಿರುವ ದಂಪತಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಒಂದು ಸಾಮಾಜಿಕ ಕಾರ್ಯಕ್ಕೆಂದು ವಂತಿಗೆ ಸಂಗ್ರಹಿಸಲು ಹೊರಟಾಗ ಇತರರು ನೆರವಾಗುವುದಿಲ್ಲ. ಒಳ್ಳೆಯ ಆರ್ಥಿಕ ಸ್ಥಿತಿಯಲ್ಲಿ ಇದ್ದರೂ ಕೂಡ   ಬಗೆಬಗೆಯ ಆಕ್ಷೇಪಗಳನ್ನು ಒಡ್ಡುತ್ತಾರೆ, ವಾದಗಳನ್ನು ಹೂಡುತ್ತಾರೆ.  ಆಗ ಈ ದಂಪತಿ ಒಂದು ಉಪಾಯ ಮಾಡುತ್ತಾರೆ; ಪರಿಚಯದ ಒಬ್ಬ ವ್ಯಕ್ತಿ ಇದ್ದಾನೆ - ನೋಡಲು ಒರಟಾಗಿ ಕ್ರೂರವಾಗಿ ಕಾಣುತ್ತಾನೆ. ಆತ ಒಳ್ಳೆಯವನೇ, ಸಭ್ಯಸ್ಥನೇ.  ಆತನಿಗೆ ಇವರೆಲ್ಲರ ದೂರವಾಣಿ ಸಂಖ್ಯೆಗಳನ್ನು ಒದಗಿಸಿ, ಗೂಂಡಾ ತರಹ ಮಾತನಾಡಿ ಬೆದರಿಸಲು ಮತ್ತು ಹಣಕ್ಕೆ ಒತ್ತಾಯಿಸಲು ಒಪ್ಪಿಸುತ್ತಾರೆ, ಅದರಂತೆ ಅವನು ಮಾಡುತ್ತಾನೆ. ಈಗ ಅದೇ ಜನ ತೆಪ್ಪಗೆ ಹಣ ಕೊಡುತ್ತಾರೆ!

ಚಾಕಲೇಟ್ ಮೂಲಕ ಶುಭ ಕೋರೋಣ ಬನ್ನಿ!!

ನೀವು ನಿಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಲು ಬಯಸುತ್ತೀರಾ ಮತ್ತು ಅದು ವಿಭಿನ್ನ ರೀತಿಯಾಗಿದ್ದರೆ ಚೆನ್ನಎಂದು ಭಾವಿಸುತ್ತಿರಾ? ನೀವು ನಿಮ್ಮ ಹೊಸ ಸಂಸ್ಥೆಯ ಉದ್ಘಾಟನೆ ಮಾಡಲು ಯೋಜನೆ ಹಾಕಿ ಕೊಂಡಿರುತ್ತೀರಿ ಮತ್ತು ನಿಮ್ಮ ಅತಿಥಿಗಳನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸ ಬಯಸುತ್ತೀರಾ? ನೀವೊಂದು ಮಗುವಿನ ಹುಟ್ಟು ಹಬ್ಬಕ್ಕೆ ಹೋಗ ಬಯಸಿದ್ದೀರಿ ಆದರೆ ಅವರಿಗೆ ಕೊಡಲು ಅಪರೂಪದ ಉಡುಗೊರೆಯ ಬಗ್ಗೆ ಯೋಚನೆ ಮಾಡುತ್ತೀರಾ? ಮಹಿಳಾ ದಿನ, ಹೊಸ ವರ್ಷ, ಕ್ರಿಸ್‌ಮಸ್, ಪ್ರೇಮಿಗಳ ದಿನ, ರಕ್ಷಾ ಬಂಧನ ಹೀಗೆ ಹತ್ತು ಹಲವಾರು ಶುಭ ದಿನಗಳಂದು ನಿಮ್ಮ ಆತ್ಮೀಯರಿಗೆ ನಿಮ್ಮದೇ ಆದ ಮಾತುಗಳಲ್ಲಿ ಶುಭ ಕೋರಲು ಬಯಸಿದ್ದೀರಾ? ನೀವು ಬಯಸಿದ ಯೋಜನೆಯಂತೆಯೇ ನಿಮ್ಮ ಉಡುಗೊರೆ ಆಗಿರುತ್ತದೆ. 

Image

ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬುದ್ಧ

"ಬುದ್ಧ, ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ" ಎಂದು ಆರಂಭವಾಗುವ ಕವನ ಕನ್ನಡದ ಪ್ರಸಿದ್ಧ ಕವನ. ಬುದ್ಧನ ಜನ್ಮ ದಿನವೇ ಬುದ್ಧ ಪೂರ್ಣಿಮೆ ಅಥವಾ ಬೈಸಾಕಿ (ಮೇ ೭). ಬೈಸಾಕಿಯಂದೇ ಬುದ್ಧನಿಗೆ ಜ್ನಾನೋದಯವಾಯಿತು ಮತ್ತು ಬೈಸಾಕಿಯಂದೇ ಆತ ನಿರ್ವಾಣ ಹೊಂದಿದ ಎಂದು ಪ್ರತೀತಿ.

ಕ್ರಿಪೂ ೬೨೩ರಲ್ಲಿ ಕಪಿಲವಸ್ತುವಿನ ರಾಜ ಶುದ್ಧೋದನನ ರಾಣಿ ಮಾಯಾದೇವಿ ಜನ್ಮವಿತ್ತ ಗಂಡುಮಗು ಸಿದ್ಧಾರ್ಥ. ಅದಾಗಿ ಏಳನೇ ದಿನಕ್ಕೆ ಮಾಯಾದೇವಿ ತೀರಿಕೊಂಡಳು. ಅನಂತರ ಸಿದ್ಧಾರ್ಥನನ್ನು ಸಲಹಿದಾಕೆ ಮಲತಾಯಿ ಗೌತಮಿ ದೇವಿ. ಆದ್ದರಿಂದ ಗೌತಮನೆಂಬ ಹೆಸರು ಬಂತು.

Image