ಹಳ್ಳಿಗೆ ನೀರು ತಂದ ಮಹಿಳೆಯರು

ಬೆಂಗಳೂರಿನವರು ಪುಣ್ಯವಂತರು! ಮಂಗಳೂರಿನವರೂ ಪುಣ್ಯವಂತರು! ಯಾಕೆಂದರೆ ಮನೆಯ ನಳ್ಳಿ ತಿರುಗಿಸಿದರೆ ನೀರು ಬರುತ್ತದೆ, ಅಲ್ಲವೇ? ಬೆಂಗಳೂರಿನ ಮನೆಮನೆಗಳಿಗೆ ನೀರು ತರಲಿಕ್ಕಾಗಿ ಕಾವೇರಿಯಿಂದ ಕುಡಿಯುವ ನೀರು ಸರಬರಾಜು ಮಹಾಯೋಜನೆಯ ವಿವಿಧ ಹಂತಗಳಿಗಾಗಿ ಸರಕಾರವು ರೂಪಾಯಿ ೧,೦೦೦ ಕೋಟಿಗಳಿಗಿಂತ ಜಾಸ್ತಿ ವೆಚ್ಚ ಮಾಡಿದೆ.

Image

ಸೇವೆ ಎಂದರೇನು? ಸ್ವಾಮಿ ವಿವೇಕಾನಂದರ ಚಿಂತನೆ

ಜನವರಿ ೧೨ ಸ್ವಾಮಿ ವಿವೇಕಾನಂದರ ಜಯಂತಿ ದಿನ. ಗೊಂದಲದ ಬೀಡಾಗಿರುವ ನಮ್ಮ ಬದುಕಿನಲ್ಲಿ ಆದರ್ಶಪ್ರಾಯ ವ್ಯಕ್ತಿ ಯಾರೆಂಬ ಪ್ರಶ್ನೆಗೆ ಸಮರ್ಥ ಉತ್ತರವಾಗಿ ನಿಲ್ಲುವವರು ಸ್ವಾಮಿ ವಿವೇಕಾನಂದ. ಅವರ ಬರಹಗಳನ್ನು ಓದುತ್ತ, ಅವರ ಚಿಂತನೆಗಳನ್ನು ಮಥಿಸುತ್ತ ಹೋದಂತೆ ಈ ಮಾತು ಮತ್ತೆಮತ್ತೆ ಮನದಟ್ಟಾಗುತ್ತದೆ.

ಸ್ವಾಮಿ ವಿವೇಕಾನಂದರು ಇಂದಿನ ಕಾಲಮಾನದಲ್ಲಿ ಯಾಕೆ ಮುಖ್ಯವಾಗುತ್ತಾರೆ ಎಂದರೆ ಅವರು ನುಡಿದಂತೆ ನಡೆದವರು. ನುಡಿ ಒಂದು, ನಡೆ ಇನ್ನೊಂದು ಎಂಬಂತೆ ಜೀವಿಸುವ ಬಹುಪಾಲು ಜನರಿಗೆ ಹೋಲಿಸಿದಾಗ, ನುಡಿದಂತೆ ನಡೆದ ಸ್ವಾಮಿ ವಿವೇಕಾನಂದರದ್ದು ಪ್ರತಿಯೊಬ್ಬರನ್ನೂ ಪ್ರಭಾವಿಸಬಲ್ಲ ಪ್ರಖರ ವ್ಯಕ್ತಿತ್ವ.

Image

ಪೋಲಿಯೋ ಪೀಡಿತ ದಂಪತಿಯ ಮಾದರಿ ಕೃಷಿ

ಎರಡೂ ಕೈಕಾಲು ಸರಿ ಇದ್ದವರೇ ಕೃಷಿ ಮಾಡಲು ಹಿಂದೇಟು ಹಾಕುವ ಕಾಲವಿದು. ಹಾಗಿರುವಾಗ ಪೋಲಿಯೋ ಪೀಡಿತ ಪತಿ-ಪತ್ನಿ ಶಿವಾಜಿ ಸೂರ್ಯವಂಶಿ ಮತ್ತು ಗೀತಾಂಜಲಿ ಇತರರಿಗೆ ಮಾದರಿಯಾಗುವಂತೆ ಕೃಷಿ ಮಾಡಿತ್ತಿರೋದು ಸಾಧನೆಯೇ ಸೈ.
“ನನ್ನ ಕೈಗಳೇ ನನ್ನ ಕಾಲುಗಳ ಹಾಗೆ ಆಗಿವೆ” ಎನ್ನುತ್ತಾರೆ ೩೬ ವರುಷದ ಶಿವಾಜಿ ಸೂರ್ಯವಂಶಿ. ಅವರ ಪತ್ನಿ ಗೀತಾಂಜಲಿ “ಬೇಸಾಯ ಮಾಡೋದಕ್ಕೆ ನಮಗೆ ಯಾರ ಸಹಾಯವೂ ಬೇಡ” ಎಂದು ದನಿಗೂಡಿಸುತ್ತಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹಟ್-ಕನಾನ್-ಗ್ಲೆ ತಾಲೂಕಿನ ಅಂಬಾಪ್ ಹಳ್ಳಿಯವರಿಗೆ ಈ ದಂಪತಿಗಳದ್ದು ಸ್ಫೂರ್ತಿದಾಯಕ ಸಾಧನೆ. ಆದರೆ ತಮ್ಮ ಹೊಲದತ್ತ ನಡೆಯುವಾಗೆಲ್ಲ ದಂಪತಿಗೆ ನೆನಪಾಗುವುದು ಹಳ್ಳಿಗರ ಲೇವಡಿ ಮತ್ತು ಅದರಿಂದಾಗಿ ಶಿಕ್ಷಣ ಪಡೆಯುವ ತಮ್ಮ ಕನಸು ಮಣ್ಣುಗೂಡಿದ ಸಂಗತಿ.

Image

ಶಾಲಾಮಕ್ಕಳಿಂದ ಜಲಜಾಗೃತಿ

"ಅದು ನನ್ನ ನೀರಿನ ಟ್ಯಾಂಕ್. ಅದರಿಂದ ಏನು ಬೇಕಾದರೂ ಮಾಡಿಕೊಳ್ತೇನೆ. ಅದನ್ನು ಕೇಳಲಿಕ್ಕೆ ನೀವ್ಯಾರು?"

"ನಾನು ಯಾರಂತ ಗೊತ್ತುಂಟಾ? ನನ್ನ ಟ್ಯಾಂಕ್ ಮೊದಲು ಭರ್ತಿ ಆಗಬೇಕು. ಇಲ್ಲಾಂದ್ರೆ ನಿಮ್ಮ ಟ್ಯಾಂಕಿಗೆ ಬೆಂಕಿ ಕೊಡ್ತೇನೆ."

ಇದನ್ನು ಹೇಳಿದವರು ಯಾರು? ದೇಶದ ರಾಜಧಾನಿ ನವದೆಹಲಿಯ ಪ್ರಧಾನ ಪ್ರದೇಶವಾದ ವಸಂತಕುಂಜದ ನಿವಾಸಿಗಳು.

ಅವರು ಈ ಮಾತುಗಳನ್ನು ಹೇಳಿದ್ದು ಯಾರಿಗೆ? "ನಿಮ್ಮ ಟ್ಯಾಂಕಿನಿಂದ ನೀರು ಉಕ್ಕಿ ಹರಿದು ಪೋಲಾಗುತ್ತಿದೆ. ನಿಮ್ಮ ನೀರಿನ ಪಂಪ್ ಬಂದ್ ಮಾಡಿ" ಎಂದು ವಿನಂತಿಸಿದ ಶಾಲಾಮಕ್ಕಳಿಗೆ.

Image

ಹೊಸ ವರುಷಕ್ಕಾಗಿ ಐದು ಸಂಕಲ್ಪ

ಹೊಸ ವರುಷ ಮತ್ತೆಮತ್ತೆ ಬರುತ್ತದೆ. ಅದು ಕಾಲ ನಿಯಮ. ಹೊಸ ವರುಷ ಬಂದಾಗ ಹೊಸತನದಿಂದ ಮುನ್ನಡೆಯುದಷ್ಟೇ ನಾವು ಮಾಡಬಹುದಾದ ಕೆಲಸ.
ಅದಕ್ಕಾಗಿ "ಹೊಸ ವರುಷದ ಸಂಕಲ್ಪ”ಗಳನ್ನು ಮಾಡುವ ಹುಮ್ಮಸ್ಸು ಹಲವರಿಗೆ. ಇದು ಒಳ್ಳೆಯ ಕೆಲಸ. ಆದರೆ, ಈ ಸಂಕಲ್ಪಗಳು ಮಳೆಗಾಲದ ಮಿಂಚಿನಂತಾಗಬಾರದು ಅಷ್ಟೇ. ಸಂಕಲ್ಪಗಳನ್ನು ಸಾಧಿಸುವ ಛಲ ಬೆಳೆಸಿಕೊಳ್ಳೋಣ.
ಎಲ್ಲರೂ ಸಾಧಿಸಬಹುದಾದ ಐದು ಸಂಕಲ್ಪಗಳನ್ನು ಪರಿಶೀಲಿಸೋಣ.

Image

ನಮ್ಮ ನುಡಿಯು

ದೇವನು ಕರುಣಿಸಿದನೆಮಗೆ ಮಾತಿನ ಭಾಗ್ಯವನ್ನು
ನುಡಿಯಲು ಮನುಜನು ಸೃಷ್ಠಿಸಿದ ಹಲವು ಭಾಷೆಯನ್ನು.
ಭಾಷೆಯು ಒಗ್ಗೂಡಿಸಿದೆ ವಿವಿಧ ಪ್ರಾಂತ್ಯಗಳನ್ನು
ಜನಮನಗಳ ಬಂಧಿಸಿತು ಈ ನುಡಿ - ಹೊನ್ನು.
ನುಡಿ ಕನ್ನಡವಾಗಿರಲು ಎಷ್ಟು ಚೆನ್ನು
ನುಡಿದು ಎಲ್ಲೆಡೆ ಫಸರಿಸು ಕಸ್ತೂರಿ ಸುಗಂಧವನ್ನು.

ತಾಯಿ ಲಾಲಿಹಾಡಿಗೆ ಧನಿಗೂಡಿಸುವ ಈ ನುಡಿಯು.
ತಂದೆಯ ಪ್ರೀತಿಯನು ತಿಳಿಹೇಳಿದ ಈ ನುಡಿಯು.
ಒಡಹುಟ್ಟಿದವರ ಬಾಂದವ್ಯವನು ಬೆಸೆದ ಈ ನುಡಿಯು.
ಅಜ್ಜನ ನೀತಿಕತೆಗಳಲಿ ಕಾಣುವ ಈ ನುಡಿಯು.
ಮಕ್ಕಳಲಿ ತೊದಲನು ನುಡಿಸಿದ ಈ ನುಡಿಯು.
ಗೆಳೆಯರೊಡನೆ ಆಟದಿ ಕಲೆತ ಈ ನುಡಿಯು.

ಯಾದ್ ವಶೇಮ್ (ನೂರು ಸಾವಿರ ಸಾವಿನ ನೆನಪು)

ಪುಸ್ತಕದ ಲೇಖಕ/ಕವಿಯ ಹೆಸರು
ನೇಮಿಚಂದ್ರ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೯೦

ನೇಮಿಚಂದ್ರ ಅವರ “ಯಾದ್ ವಶೇಮ್” ಕಾದಂಬರಿ ಓದಿದ ನಂತರ, ಓದುಗರ ನೆನಪಿನ ಸಾಗರದಲ್ಲಿ ಮತ್ತೆಮತ್ತೆ ಸುನಾಮಿಯಂತೆ ಎದ್ದೇಳುವ ಮಾತು: “ಜಗತ್ತು ನಿಂತು ನೋಡಿತ್ತು ಅರುವತ್ತು ಲಕ್ಷ ಯಹೂದಿಗಳ ಮಾರಣ ಹೋಮವನ್ನು, ನಿಂತು ನೋಡಿತ್ತು ….. ಪ್ರತಿಭಟಿಸದೆ.”
ಅದು, ಈ ಕಾದಂಬರಿಯ ಪ್ರಧಾನ ಪಾತ್ರ ಹ್ಯಾನಾ ಮೋಸೆಸ್ ಕಾದಂಬರಿಯ ಉದ್ದಕ್ಕೂ ಮತ್ತೆಮತ್ತೆ ನೆನೆಯುವ ಮಾತು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಅವನ ಸೈನ್ಯದ ಹಿಡಿತದಿಂದ ಕೊನೆಯ ಕ್ಷಣದಲ್ಲಿ ಪಾರಾಗಿ, ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ ಡಾ. ಆರನ್ ಮೊಸೆಸ್ ಅವರ ಮಗಳು ಹ್ಯಾನಾ.

ಪೆರ್ಡೂರು ಕುಂಬಾರರ ಗುಡಿ ಕೈಗಾರಿಕೆ ಸಂಘದ ಪರಿಸರಸ್ನೇಹಿ ಯೋಜನೆ

ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕಿನ ನಿಷೇಧದಿಂದಾಗಿ, ಕುಂಬಾರಿಕೆಗೆ ದೊಡ್ಡ ಅವಕಾಶವೊಂದು ಒದಗಿ ಬಂದಿದೆ. ಆ ಪ್ಲಾಸ್ಟಿಕಿನಿಂದ ತಯಾರಿಸುವ ನಿತ್ಯ ಬಳಕೆಯ ವಸ್ತುಗಳನ್ನು ಮಣ್ಣಿನಿಂದ ತಯಾರಿಸಿದರೆ, ಪರಿಸರಸ್ನೇಹಿಯಾದ ಈ ವಸ್ತುಗಳಿಗೆ ಬೇಡಿಕೆ ಇದ್ದೇ ಇರುತ್ತದೆ.
ಈ ಅವಕಾಶ ಬಳಸಿಕೊಳ್ಳಲು ಮುಂದಾಗಿದೆ ಉಡುಪಿ ಹತ್ತಿರದ ಪೆರ್ಡೂರಿನ ಕುಂಬಾರರ ಗುಡಿ ಕೈಗಾರಿಕೆ ಸಂಘ. ಪ್ಲಾಸ್ಟಿಕ್ ಕಪ್‍ಗಳಿಗೆ ಬದಲಿಯಾಗಿ ಮಣ್ಣಿನ ಕಪ್ ತಯಾರಿಸುವುದು ಈ ಸಂಘದ ಸದ್ಯದ ಯೋಜನೆ. ಆದರೆ, ಪ್ಲಾಸ್ಟಿಕ್ ಅಥವಾ ಪೇಪರ್ ಕಪ್‍ನ ಬೆಲೆಯಲ್ಲಿ ಮಣ್ಣಿನ ಕಪ್ ತಯಾರಿಸುವುದು ಸವಾಲಿನ ಕೆಲಸ.

Image

ಮಂಗಳೂರಿನ ನೀರಿನ ಬಿಲ್‍ಗಳ "ಸುದ್ದಿ"

ಮಂಗಳೂರು ಮಹಾನಗರಪಾಲಿಕೆಯ ೨೦೦೯-೧೦ರ ಬಜೆಟನ್ನು ೨೮ ಜೂನ್ ೨೦೦೯ರಂದು ಮಂಡಿಸಲಾಯಿತು. ಇದರಲ್ಲಿ ಮಂಗಳೂರಿನ ನೀರು ಬಳಕೆದಾರರಿಗೆ ವಿಧಿಸುವ ನೀರಿನ ಶುಲ್ಕದಿಂದ ಸಂಗ್ರಹವಾಗುವ ಆದಾಯ ರೂಪಾಯಿ ೨೮.೫ ಕೋಟಿ ಎಂದು ಅಂದಾಜಿಸಲಾಗಿದೆ. (ಈ ಸಾಲಿನ ಪಾಲಿಕೆಯ ಒಟ್ಟು ಆದಾಯ ರೂ.೧೭೫.೩೮ ಕೋಟಿ ಮತ್ತು ಒಟ್ಟು ವೆಚ್ಚ ರೂ. ೧೭೩.೯೦ ಕೋಟಿ)

ನೀರಿನ ಶುಲ್ಕದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಹೋದಂತೆ ಅದರ ವಿವಿಧ ಮುಖಗಳು ತೆರೆದುಕೊಳ್ಳುತ್ತವೆ. ಮಂಗಳೂರು ಮಹಾನಗರಪಾಲಿಕೆ ಪ್ರದೇಶದಲ್ಲಿ ಸುಮಾರು ೫೪,೦೦೦ ನೀರಿನ ಮೀಟರ್‍ಗಳನ್ನು ಅಳವಡಿಸಲಾಗಿದೆ. ಈ ಎಲ್ಲ ನೀರಿನ ಬಳಕೆದಾರರಿಗೆ ಜೂನ್ ೨೦೦೮ರ ವರೆಗೆ ಅರ್ಧ ವಾರ್ಷಿಕ (ಆರು ತಿಂಗಳಿಗೊಮ್ಮೆ) ನೀರಿನ ಬಿಲ್ ನೀಡಲಾಗುತ್ತಿತ್ತು.

Image