ಬದುಕಿನ ದೊಡ್ಡ ಪಾಠ

ಗುಂಡನ ಮಗ ಪರೀಕ್ಷೆಯಲ್ಲಿ ಫೈಲಾದ. ಮಗನನ್ನು ಹಿಗ್ಗಾಮುಗ್ಗ ಬಡಿದು ಹಾಕಿದ ಗುಂಡ. ಮಗ ಸಿಕ್ಕಾಬಟ್ಟೆ ಅತ್ತ. ಆಗಲೇ ಮಗ ನಿರ್ಧರಿಸಿದ: ಇನ್ನು ಮುಂದೆ ಚೆನ್ನಾಗಿ ಕಲಿಯುತ್ತೇನೆಂದು.
ಮುಂದಿನ ವರುಷ ಗುಂಡನ ಮಗ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ. ಹೆಮ್ಮೆಯಿಂದ ಮನೆಗೆ ಬಂದ ಮಗ ಗುಂಡನಿಗೆ ತನ್ನ ಅಂಕಪಟ್ಟಿ ತೋರಿಸಿದ. ಅದನ್ನೊಮ್ಮೆ ನೋಡಿದ ಗುಂಡ, ತಕ್ಷಣವೇ ಮಗನನ್ನು ಹಿಡಿದುಕೊಂಡು ಕೋಲಿನಿಂದ ಚೆನ್ನಾಗಿ ಚಚ್ಚಿ ಹಾಕಿದ. ಅನಂತರ ಮಗನಿಗೆ ಅಬ್ಬರಿಸಿ ಹೇಳಿದ ಗುಂಡ: “ನಿನ್ನ ಕ್ಲಾಸಿನಲ್ಲಿ ಫಸ್ಟ್ ಬಂದು ಏನು ಪ್ರಯೋಜನ? ಆಟೋಟಗಳಲ್ಲಿ ನಿನಗೆ ಅಂಕಗಳೇ ಇಲ್ಲ. ನಿನಗೆ ಈ ಪಾಠ ಕಲಿಸಬೇಕಂತ ಕೋಲಿನಿಂದ ಚಚ್ಚಿದ್ದೇನೆ.”

Image

ತರಕಾರಿ ಬೆಳೆಗೆ ಶಾಕ್ ಕೊಡುವ ಕೀಟ

ಇದೇನು ಹೊಸ ಕೀಟವೆಂದುಕೊಂಡಿರಾ? ತೋಟದ ನಡುವೆ ಅಂಗಿ ಹಾಕದೆ ಹೋದಾಗ ಮೈಗೆ ಏನೋ ಶಾಕ್ ತಗುಲಿದಂತ ಅನುಭವ ಸಾಮಾನ್ಯವಾಗಿ ಎಲ್ಲಾ ಕೃಷಿಕರಿಗೂ ಆಗಿರುತ್ತದೆ. ಮಾವು, ಕೊಕ್ಕೋ ಬೆಳೆಗಳ ಎಲೆಯ ಅಡಿ ಭಾಗದಲ್ಲಿ ಈ ಕೀಟ ಇರುತ್ತದೆ. ಕೆಲವು ಹಸುರು, ಮತ್ತೆ ಕೆಲವು ಹಳದಿ ಬಣ್ಣದಲ್ಲಿರುತ್ತದೆ. 
ಇದು ತರಕಾರಿ ಬೆಳೆಗೆ ತೊಂದರೆ ಮಾಡುತ್ತದೆ. ಹೀರೆ, ಹಾಗಲ ಕಾಯಿ, ಪಡುವಲಕಾಯಿ, ಸೌತೆ ಮುಂತಾದ ತರಕಾರಿ ಬೆಳೆಗಳಿಗೆ ಇದರ ತೊಂದರೆ ಹೆಚ್ಚು. ಇದು ಎಲೆಯ ಹರಿತ್ತು ತಿನ್ನುವ ಕೀಟ. ಹರಿತ್ತು ತಿಂದ ಕಾರಣ  ಗಿಡದ ಬೆಳವಣಿಗೆ ಕುಂಠಿತವಾಗಿ ಎಲೆ ಒಣಗಲು ಪ್ರಾರಂಭವಾಗುತ್ತದೆ. ಕ್ರಮೇಣ ಬಳ್ಳಿಗಳು ಸಾಯುತ್ತವೆ. ಇಳುವರಿಯೂ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗುತ್ತದೆ.

Image

ವಿದ್ಯಾಸಂಸ್ಥೆಗಳಲ್ಲಿ ಮಳೆನೀರಿಂಗಿಸಿ ಜಲಜಾಗೃತಿ

ಕರ್ನಾಟಕದ ಕರಾವಳಿಯ ಜಿಲ್ಲೆ ದಕ್ಷಿಣ ಕನ್ನಡ. ಇಲ್ಲಿರುವ ಪದವಿಪೂರ್ವ ಕಾಲೇಜುಗಳು ೧೫೦. ಈ ಕಾಲೇಜುಗಳು ಮಳೆಕೊಯ್ಲಿನ ಹಾಗೂ ಮಳೆನೀರಿಂಗಿಸುವ ರಚನೆಗಳನ್ನು ನಿರ್ಮಿಸಿದರೆ ಅದುವೇ ಜಲಜಾಗೃತಿ ಹಬ್ಬಿಸಬಲ್ಲ ಅಭಿಯಾನ.
ಯಾಕೆಂದರೆ ಅಲ್ಲಿ ಪಿ.ಯು.ಸಿ. ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ೩೦,೦೦೦. ತಮ್ಮ ಕಾಲೇಜಿನಲ್ಲಿ ಮಳೆಕೊಯ್ಲು ಹಾಗೂ ಮಳೆನೀರು ಇಂಗಿಸುವುದನ್ನು ಅವರು ಕಣ್ಣಾರೆ ಕಾಣುವಂತಾದರೆ, ಆ ಸಂದೇಶ ಕನಿಷ್ಠ ೩೦,೦೦೦ ಮನೆಗಳನ್ನು ತಲಪುತ್ತದೆ.

Image

ಸಂಪತ್ತು

ಪ್ರತಿ ದಿನವು ತುಸು ವತ್ತು
ಹುಡುಕು ನೀ ಸಂಪತ್ತು

ಅಡಗಿಹುದು ಮನದಾಳದೊಳಗೆ
ಆ ಸಂಪತ್ತಿನಾ ಗಡುಗೆ

ಮನಸೊಂದು ತಿಳಿ ನೀರ ಕೊಳ
ತಲುಪ ಬೇಕಿದೆ ನೀನದರ ತಳ

ಕಲಕದಿರು ಕೊಳದ ನೀರ
ಸರಿಯಾಗಿ ಸಾಗಬೇಕಿದೆ ಬಲು ದೂರ

ನಿನ್ನೊಳಗಣ್ಣ ತೆರೆಯಬೇಕು ನೋಡಲು
ನಮ್ ಭಗವಂತನ ಬೆಳಕು ಬೇಕು.. ಅಲ್ಲೇನಾದರೂ ಕಾಣಲು

--ಟಿ ಕೆ ಸಿ

ಯಾರಿಗೂ ಇಲ್ಲ ಕೊರತೆ

----------------------------------------------------------------------
ಇರದುದೆಲ್ಲವ ಮರೆತೆ
ಇರುವುದೆಲ್ಲವ ಅರಿತೆ
ನನಗಿಲ್ಲ ಯಾವುದೇ ಕೊರತೆ

ಬಿಡು ಇರದುದರ ಚಿಂತೆ
ಸಿಗುವುದೆಲ್ಲವು ಸಿಗುವುದು ಅವನಿಷ್ಟದಂತೆ
ಬರೆದೆ ನನ್ ಭಗವಂತ ಬರೆಸಿದಂತೆ ..
----------------------------------------------------------------------
- ಟಿ ಕೆ ಸಿ

ಪುಸ್ತಕನಿಧಿ - ಕೈಲಾಸಂ ಅವರ 'ಪರ್ಪಸ್' , ಜಿ ಪಿ ರಾಜರತ್ನಂ ಅವರ 'ಏಕಲವ್ಯ' - ನಾವು ಮಾಡುವ ಕೆಲಸದ ಉದ್ದೇಶ

ಚಿತ್ರ

ಮಹಾಭಾರತದಲ್ಲಿ ಏಕಲವ್ಯನ ಕಥೆ ತುಂಬಾ ಸಂಕ್ಷಿಪ್ತವಾಗಿದೆ.   ಆತನ ಭವ್ಯ ಜೀವನದ ದರ್ಶನವನ್ನು ನಮಗೆ ಕೈಲಾಸಂ ತಮ್ಮ 'ಪರ್ಪಸ್' ಎಂಬ ಇಂಗ್ಲಿಷ್ ನಾಟಕದ ಮೂಲಕ ಮಾಡಿಸುತ್ತಾರೆ. 

ನಾನು ಪರಿಚಯಿಸುತ್ತಿರುವ ಈ ಪುಸ್ತಕವು ಕೈಲಾಸಂ ಅವರು ಇಂಗ್ಲಿಷ್ನಲ್ಲಿ ಬರೆದಿರುವ  ಪರ್ಪಸ್  ಎಂಬ ನಾಟಕದ    'ಸಾರವಿಸ್ತಾರ' - .ಜಿ ಪಿ ರಾಜರತ್ನಂ ಅವರು ಮಾಡಿರೋದು. ಈ ಪುಸ್ತಕ ಇಲ್ಲಿ ಇದೆ-  https://archive.org/details/unset0000unse_y9a4/mode/2up

ಪಾಲಿಹೌಸಿನಲ್ಲಿ ರಾಜಕುಮಾರರ ತಪಸ್ಸಿಗೊಲಿದ ತರಕಾರಿ ಕೃಷಿ

ಮಂಗಳೂರು – ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಣಂಬೂರು ಬಂದರು ದಾಟಿದ ನಂತರ ಸಿಗುವ ಊರು ಹೊಸಬೆಟ್ಟು. ಅಲ್ಲಿನ ಬಸ್‍ನಿಲ್ದಾಣದ ಪಕ್ಕದಲ್ಲಿ ಪೂರ್ವ ದಿಕ್ಕಿಗೆ ಕಾಂಕ್ರೀಟು ರಸ್ತೆಯಲ್ಲಿ ಸುಮಾರು ಅರ್ಧ ಕಿಮೀ ಸಾಗಿದರೆ ಸಿಗುತ್ತದೆ ಶ್ರೀನಗರ ಬಡಾವಣೆ.
ಅಲ್ಲಿ ವಿ. ರಾಜಕುಮಾರ್ ಅವರ ಮನೆಯಿರುವ ಕಂಪೌಂಡಿಗೆ ಇತ್ತೀಚೆಗೆ ಕಾಲಿಟ್ಟಾಗ ಕಾಣಿಸಿತು: ಒಂದು ಸೆಂಟ್ಸ್ ವಿಸ್ತೀರ್ಣದ ಪಾಲಿಹೌಸ್. ಅದರೊಳಗೆ ಹೊಕ್ಕರೆ ಕೃಷಿಲೋಕವೊಂದರ ದರ್ಶನ.

Image

ಪುಸ್ತಕನಿಧಿ - ಕನ್ನಡ ಕೀಚಕ - ಜಿ ಪಿ ರಾಜರತ್ನಂ / ಕೈಲಾಸಂ ಅವರ ಪುಸ್ತಕ

ಚಿತ್ರ

 ಕನ್ನಡದ ಶ್ರೇಷ್ಠ ನಾಟಕಕಾರ ಕೈಲಾಸಂ ಅವರು ಕೆಲವು ನಾಟಕಗಳನ್ನು ಇಂಗ್ಲೀಷ್ನಲ್ಲಿ ಬರೆದಿದ್ದಾರೆ.  ಒಂದು ನಾಟಕವನ್ನು ಕೀಚಕನ ಕುರಿತಾಗಿ ಇಂಗ್ಲೀಷಿನಲ್ಲಿ ಬರೆಯುವ ವಿಚಾರ ಇತ್ತು. ಅದರ ಕುರಿತು ಕೆಲವು ಸಂಗತಿಗಳನ್ನು ತಮ್ಮ ಆಪ್ತರೊಬ್ಬರಲ್ಲಿ ಹೇಳಿದ್ದರು. ಆ ನಾಟಕವನ್ನು ಬರೆಯುವ ಮುನ್ನವೇ ಅವರು ತೀರಿಕೊಂಡರು. ಮುಂದೆ ಆ ನಾಟಕವನ್ನು ತಮಗೆ ನೆನಪಿದ್ದ ಹಾಗೆ ಆಪ್ತರು ಇಂಗ್ಲಿಷ್ ನಲ್ಲಿ ಬರೆದರು. ಅದನ್ನು ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ ಜಿ ಪಿ ರಾಜರತ್ನಂ ಅವರು ಅನುವಾದಿಸಿದರು.  ಈ ಪುಸ್ತಕದ ಮುಖಪುಟವನ್ನು ಜೊತೆಯಲ್ಲಿನ ಚಿತ್ರದಲ್ಲಿ ನೋಡಬಹುದು. ಈ ಪುಸ್ತಕವು archive.org ನಲ್ಲಿ ನೀವು ಕೀಚಕ ಎಂದು ಹುಡುಕಿದರೆ ಸಿಗುತ್ತದೆ. 

ರೈತರ ಬೀಜದ ಹಕ್ಕು: ಪೆಪ್ಸಿ ಕಂಪೆನಿಯ “ಕೊಕ್”

ಗುಜರಾತಿನ ಕೆಲವು ರೈತರು, ಹಲವಾರು ವರುಷಗಳಿಂದ ಆಲೂಗಡ್ಡೆ ಬೆಳೆಯುತ್ತಿದ್ದಾರೆ. ಈ ಬಾರಿ ಮಾತ್ರ ಅವರಿಗೆ ಸಿಡಿಲು ಬಡಿದಂತಾಯಿತು. ಯಾಕೆಂದರೆ, ಅಮೇರಿಕಾದ ದೈತ್ಯ ಕಂಪೆನಿ ಪೆಪ್ಸಿಕೋ ೧೧ ರೈತರ ಮೇಲೆ ೮ ಮೊಕದ್ದಮೆ ಹೂಡಿತು – ತಮ್ಮ ಕಂಪೆನಿಯ ಬೈದ್ಧಿಕ ಸೊತ್ತಾದ ಆಲೂಗಡ್ದೆ ತಳಿಯನ್ನು “ಕಾನೂನುಬಾಹಿರವಾಗಿ” ಬೆಳೆಯುತ್ತಿದ್ದಾರೆ ಎಂಬ ಕಾರಣಕ್ಕಾಗಿ! ಪ್ರತಿಯೊಬ್ಬ ರೈತನೂ ರೂಪಾಯಿ ೧.೦೫ ಕೋಟಿ ಪರಿಹಾರ ಪಾವತಿಸಬೇಕೆಂಬುದು ಪೆಪ್ಸಿಕೋ ಕಂಪೆನಿಯ ಆಗ್ರಹ!

Image

ಶಾಲಾಕಾಲೇಜುಗಳಲ್ಲಿ ನೀರಪಾಠ, ಪ್ರಾತ್ಯಕ್ಷಿಕೆ

ಫಸಲು ಬೇಕಿದ್ದರೆ ಹೊಲಗಳಲ್ಲಿ ಬೀಜ ಬಿತ್ತಬೇಕು. ಜಲಜಾಗೃತಿಯ ಫಸಲು ಬೇಕಿದ್ದರೆ ಜಲಸಾಕ್ಷರತೆಯ ಬೀಜ ಬಿತ್ತಬೇಕು. ಎಲ್ಲಿ? ಶಾಲೆಗಳಲ್ಲಿ. ಅದೆಲ್ಲ ಹೇಗೆ ಸಾಧ್ಯ ಅಂತೀರಾ? ಅದು ಸಾಧ್ಯವೆಂದು ತೋರಿಸಿಕೊಟ್ಟ ಮಂಗಳೂರಿನ ಎರಡು ಕಾಲೇಜುಗಳ ನಿದರ್ಶನಗಳಿಲ್ಲಿವೆ.

Image