ಇದು ಸುಮಾರು 650 ಪುಟಗಳ ಕಾದಂಬರಿ. archive.org ತಾಣದಲ್ಲಿ ಇದೆ. https://archive.org/details/unset0000unse_b4c3 ಈ ಕೊಂಡಿಯನ್ನು ಕ್ಲಿಕ್ಕಿಸಿ ಇಳಿಸಿಕೊಳ್ಳಬಹುದು ಮತ್ತು ಓದಬಹುದು. ಅವರು ಜ್ಞಾನಗಂಗೋತ್ರಿ ಸಂಪುಟಗಳ ತಯಾರಿಯಲ್ಲಿದ್ದಾಗ. ಒಂದು ವಾಕ್ಯ ಅವರ ಕುತೂಹಲವನ್ನು ಕೆರಳಿಸಿತ್ತು : “ A Greek tradition reports a great revolt in Egypt in which the slaves captured a province....” ಆಗ ಒಂದು ವರ್ಷ ಆಫ್ರಿಕಾದ ನೈಲ್ ಸಂಸ್ಕೃತಿಯ ಕುರಿತು ಅಧ್ಯಯನ ಮಾಡಿ ಈ ಕಾದಂಬರಿ ಬರೆದರಂತೆ.
ಈಜಿಪ್ಟ್ ನ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ರಾಜರ , ಅರ್ಚಕರ, ಭೂ ಮಾಲೀಕರ ಮತ್ತು ಪ್ರಾಂತಪಾಲರ ಶೋಷಣೆಯನ್ನು ಒಂದು ಪ್ರಾಂತದವರು ಕ್ರಿ. ಪೂ. ೨೫೦೦ರಲ್ಲಿ ವಿರೋಧಿಸುತ್ತಾರೆ. ಆ ವಿರೋಧ ಹೇಗೆ , ಅದರ ನಾಯಕರು ಯಾರು , ಅವರು ಹೇಗಿದ್ದರು, ಮುಂದೆ ಈ ದಲಿತರ ಕ್ರಾಂತಿ ಹೇಗೆ ಪರ್ಯಾವಸಾನ ಆಗುತ್ತದೆ ಎಂಬುದು ಈ ಕಾದಂಬರಿಯಲ್ಲಿ ಇದೆ. ಈಜಿಪ್ಟಿನ ಹೆಸರುಗಳಿಂದ ಓದುವಾಗ ಸ್ವಲ್ಪ ಗೊಂದಲ ಉಂಟಾಗಬಹುದು.
ಈ ಬಂಡಾಯದ ನಾಯಕನನ್ನು ರಾಜಧಾನಿ ಕರೆಸಿಮೊದಲು ಅತಿಥಿಗೃಹದಲ್ಲಿ, ನಂತರ ಕಾರಾಗೃಹದಲ್ಲಿಯೂ ಇಡುತ್ತಾರೆ. ಅವನ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿ ಅವನನ್ನು ಕೊಲ್ಲುತ್ತಾರೆ. ಆದರೆ ಅವನು ವಿಚಾರಗಳು ಜೀವಂತ ಉಳಿಯುತ್ತವೆ. ಅಲ್ಲಿ ನನ್ನ ಗಮನ ಸೆಳೆದ ಕೆಲವು ವಾಕ್ಯಗಳನ್ನು ನಿಮಗಾಗಿ ಈ ಮುಂದೆ ಕೊಟ್ಟಿದ್ದೇನೆ.
ಅವರು ಬೇರೆ, ನಾವು ಬೇರೆ ಎಂದು ನಾನು ಭಾವಿಸಿದವನೇ ಅಲ್ಲ -ಇದು ನಾಯಕ ಹೇಳುವ ಮಾತು.
ನಿನ್ನ ತಾಯಿ ನಿನಗಾಗಿ ಏನೇನು ಮಾಡಿರುವಳೆಂಬುದನ್ನು ನೀನೆಂದೂ ಮರೆಯಬಾರದು ... ನಿನ್ನನ್ನು ಆಕೆ ಹೆತ್ತಳು. ಸಾಧ್ಯವಾದ ರೀತಿಯಲ್ಲೆಲ್ಲ ನಿನಗೆ ಆಹಾರ ವಿತ್ತಳು. ಅವಳನ್ನು ಮರೆತೆಯೆಂದರೆ ಆಕೆ ನಿನ್ನನ್ನು ದೂರಬಹುದು. ತನ್ನ ತೋಳುಗಳನ್ನು ದೇವರೆಡೆ ಎತ್ತಬಹುದು; ಆಗ ಆಕೆಯ ದೂರು ಅವನ ಕಿವಿಗೆ ಬೀಳುವುದು .
ನಾಯಕ ಮೆನೆಪ್ ಟಾ ಶತ್ರುಗಳ ಕೈಯಲ್ಲಿ ಸಿಕ್ಕಾಗ ಮಗನಿಗೆ ಶಾಂತ ಸ್ವರದಲ್ಲಿ ಹೇಳಿದ: “ ಮನೆಗೆ ಹೋಗು; ಅಮ್ಮನ ಹತ್ರ ಇರು.”
ಶೋಷಕ ಅಧಿಕಾರಿಗಳು ಹೇಳುತ್ತಾರೆ: ನೀವು ಎಲ್ಲರೂ ಹೋಗಿ, 'ತಪ್ಪಾಯ್ತು ಕ್ಷಮಿಸಿ' ಅಂತ ಹೇಳಿ. ಕೇಳುವ ಜನರು ಅಂದುಕೊಳ್ಳುವುದು:- ಆಹಾ! 'ತಪ್ಪಾಯು , ಕ್ಷಮಿಸಿ!' ಅಂತ ಹೇಳಬೇಕಂತೆ. ತಪ್ಪು ಮಾಡೋರು ಯಾರು? ಕ್ಷಮಿಸಬೇಕಾದೋರು ಯಾರು? ”
ಶೋಷಕ ಅಧಿಕಾರಿಗೆ ಅನಿಸಿದ್ದು: ನನ್ನ ಅಲ್ಪಮತಿಗೆ ಹೀಗೆ ತೋರ್ತದೆ, ಜನ ಹುಲ್ಲಿನ ಬಣವೆ ಇದ್ದ ಹಾಗೆ, ಮೆತ್ತಗಿದ್ದರೆ ಎತ್ತು ದನ ಕರುಗಳಿಗೆ ಆಹಾರ. ಒಣಗಿದರೆ ಮತಿಗೆಟ್ಟ ಒಬ್ಬನ ಕೊಳ್ಳಿ ಸಾಕು. ಬೆಂಕಿ, ಬೂದಿ ಆಗೋಕೆ.
ನಮ್ಮ ಪ್ರಾಂತಕ್ಕೆ ಹೊರಗಿನ ಪ್ರಾಂತಪಾಲರೂ ಬೇಡ, ಅಧಿಕಾರಿಗಳೂ ಬೇಡ, ಮನೆಪ್ಟಾ ಅಣ್ಣ ನಮ್ಮ ನಾಯಕ; ಅವರೇ ಪ್ರಾಂತಪಾಲ, ಅವರೇ ಅಧಿಕಾರಿ. ನಮ್ಮನ್ನು ನಾವೇ ಆಳೋಣ. - ಜನ ಹೇಳುತ್ತಾರೆ.
ಗದರಿಸುವ ಧ್ವನಿಯಲ್ಲಿ ಒಬ್ಬಾತ ನುಡಿದ: “ಸೈರಿಸಿಕೋ ಸೈರಿಸಿಕೋ , ಮೊಸಳೆ ಬಾಯಿಗೆ ಬಿದ್ದೋ ಕಾಡುಹಂದಿ ಗುಮ್ಮಿಯೋ ನಿನ್ನ ಗಂಡ ಸತ್ತಿದ್ದರೆ ಇಷ್ಟೊಂದು ಜನ ಸೇರಿದ್ರಾ ? ಈಗ ನೋಡು ಇದು ಅರಸುಮಗನ ಮರಣ. ನೀನು ಕಣ್ಣೀರು ಸುರಿಸಬಾರದು, ಹೆಮ್ಮೆಪಡಬೇಕು. ”
ಒಬ್ಬ ಈ ಗಲಾಟೆಯಲ್ಲಿ ಸಾಯ್ತಾನೆ. ಆಗ ಅವನ ಅಂತ್ಯ ಸಂಸ್ಕಾರದ ಸಮಯದಲ್ಲಿ'ಬೆಳಕಿಗೆ ಆಗಮನ' ಪವಿತ್ರ ಪುಸ್ತಕದ ಹಾಳೆ ತೆರೆದು ರಾಗವಾಗಿ ಇನ್ನೊಬ್ಬ ಓದತೊಡಗಿದ: - “ ಒಸೈರಿಸ್ ದೇವರ ರಾಜ್ಯವಾದ ಪರಲೋಕದ ಹೆಬ್ಬಾಗಿಲ ಬಳಿ ಮೃತನು ಈಗ ನಿಂತು ಹೀಗೆ ಪ್ರಾರ್ಥಿಸುತ್ತಾನೆ: ಉಘೇ ! ಮಹಾದೇವನೆ! ಸತ್ಯದ ಪ್ರಭುವೆ, ನ್ಯಾಯದ ಪ್ರಭುವೆ, ಉಘೇ ! ನನ್ನೊಡೆಯ, ನಿನ್ನೆದುರು ಬಂದು ನಿಂತಿದ್ದೇನೆ ನಾನು . ನಿನ್ನ ಸೌಂದರ್ಯಾತಿಶಯವನ್ನು ಕಾಣಲೆಂದು ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ. ನಾನು ದಿಟವಾಡುತ್ತಿದ್ದೇನೆ. ಮನುಜರಲ್ಲಿ ನಾನು ಭೇದ ಭಾವ ಎಣಿಸಿಲ್ಲ. ಬಡವರ ಸುಲಿಗೆ ಮಾಡಿಲ್ಲ ನಾನು. ಸ್ವತಂತ್ರವಾದ ಯಾವನನ್ನೂ ಅವನ ಇಚ್ಛೆಗಿಂತ ಹೆಚ್ಚಾಗಿ ನಾನು ದುಡಿಸಿಲ್ಲ. ಕರ್ತವ್ಯಲೋಪಎಸಗಿಲ್ಲ ನಾನು; ದೇವರಿಗೆ ಅಪ್ರಿಯವಾದುದೇನನ್ನೂ ಮಾಡಿಲ್ಲ. ಯಾವ ಯಜಮಾನನೂ ತನ್ನ ದಾಸನೊಡನೆ ಕೆಟ್ಟದಾಗಿ ನಡೆದುಕೊಳ್ಳಲು ನಾನು ಕಾರಣನಾಗಿಲ್ಲ. ನಾನು ಯಾವುದೇ ಮನುಷ್ಯನನ್ನು ಉಪವಾಸ ಕೆಡವಿಲ್ಲ . ಯಾರೂ ಅಳುವಂತೆ ಮಾಡಿಲ್ಲ. ಯಾರನ್ನೂ ನಾನು ಕೊಲೆಗೈದಿಲ್ಲ . ನಾನೆಂದೂ ರಾಜದ್ರೋಹಎಸಗಿಲ್ಲ . ದೇವಮಂದಿರಕ್ಕೆ ಯಾವ ಸರಬರಾಜನ್ನೂ ನಾನು ಕಡಮೆ ಮಾಡಿಲ್ಲ. ದೇವರ ನೈವೇದ್ಯವನ್ನೆಂದೂ ಕೆಡಿಸಿಲ್ಲ. ದೇವಮಂದಿರದ ಪವಿತ್ರ ಸ್ಥಳ ದಲ್ಲಿ ವಿಷಯಾಸಕ್ತನಾಗಿ ವರ್ತಿಸಿಲ್ಲ. ದೇವರನ್ನು ಧಿಕ್ಕರಿಸಿ ನಡೆದಿಲ್ಲ. ತಕ್ಕಡಿಯಲ್ಲಿ ಮೋಸ ಮಾಡಿಲ್ಲ . ಪಕ್ಕದ ಹೊಲಕ್ಕೆ ನೀರು ತಡೆಹಿಡಿದಿಲ್ಲ . ಎದೆಹಾಲಿನ ಮಕ್ಕಳ ಬಾಯಿಯಿಂದ ಹಾಲನ್ನು ಕಸಿದಿಲ್ಲ. ದೇವರ ಹಕ್ಕಿಗಳನ್ನು ಬಲೆಯಲ್ಲಿ ಸೆರೆಹಿಡಿದಿಲ್ಲ..ಬಾಯಿಯಿಂದ ಹಾಲನ್ನು ಕಸಿದಿಲ್ಲ. ನಾನು ಪರಿಶುದ್ದ..... ನಾನು ಪರಿಶುದ್ದ ... ನಾನು ಪರಿಶುದ್ದ.....”
ಎಲ್ಲಿ ಶವಪೆಟ್ಟಿಗೆ? ” ಅಪೆಟ್ ಕೇಳಿದ, ಸೆಕ್ನಾ ಆಗಲೇ ನುಸುಳಿಕೊಂಡು ಒಳಗೆ ಬಂದಿದ್ದ . ಯಾರಾದರೂ ಸಿರಿವಂತರ ಮನೆಗೆ ಬೇಕಾಗಬಹುದೆಂದು , ಮೊದಲೇ ಸಿದ್ಧಗೊಳಿಸಿದ್ದ ಹಲಗೆಗಳಿದ್ದುವು. ಸಂದಿ ಕೀಲಿಗಳನ್ನಿರಿಸಿ ಹಲಗೆಗಳನ್ನು ಜೋಡಿಸಿ , ಸ್ವಲ್ಪ ಸಮಯದಲ್ಲೇ ಪೆಟ್ಟಿಗೆಯನ್ನುಸತ್ತಾ ತಯಾರಿಸಿದ್ದ . ಈಗ ಅವನು ಸನ್ನೆ ಮಾಡಿದೊಡನೆಯೇ ಆತನ ಸಹಾಯಕ ಶವಪೆಟ್ಟಿಗೆಯನ್ನು ಗುಡಿಸಲಿನ ಒಳಕ್ಕೆ ತಂದ. ಅಪೆಟ್ನ ಪವಿತ್ರ ಗ್ರಂಥ ವಾಚನದಷ್ಟೇ ಮಹತ್ವದ್ದು ಈ ಪೆಟ್ಟಿಗೆಗೆ ಕೂಡಎನ್ನುವ ಹಾಗೆ, ಸತ್ಸಾ ಸಂತೃಪ್ತ ಭಾವದಿಂದ ನಿಂತ .
“ ಇವತ್ತಿಂದ ನಮ್ಮದೇ ಆಡಳಿತ! ರಾಜರೂ ನಾವೇ ಪ್ರಜೆಗಳೂ ನಾವೇ ! ”
"ಮೆನೆಪ್ಟಾ, ನೀನು ಪ್ರಾಂತಪಾಲನಾಗು.” “ಹೊಸ ವ್ಯವಸ್ಥೆಯಲ್ಲಿ ಪ್ರಾಂತಪಾಲನ ಸ್ಥಾನವೇ ಬೇಡ, ಸೈ ಫ್ರು .” “ ಸರಿ, ನಾಯಕ ಅನ್ನೋಣ. ”
ತಾವು ಅಧಿಕಾರಕ್ಕೆ ಬರುವುದಕ್ಕೋಸ್ಕರ ಅವರನ್ನು ಓಡಿಸಿದ್ದಲ್ಲ. ಜನರಿಗೆ ಹಿತ ವಾಗಬೇಕು. ತೆರಿಗೆ- ಕಂದಾಯ ಅರ್ಧಕ್ಕೆ ಇಳಿಯಬೇಕು. - ನಾಯಕ ಹೇಳೋದು
ಸೆಬೆಕ್ಕು "ಭೂಮಾಲಿಕರ ದಾಸರ ಬಿಡುಗಡೆಯೂ ಸಾಧ್ಯವಾಗಬೇಕು, ” ಎಂದ . “ ಅದೆಷ್ಟು ಹೊತ್ತು ? ಉದಿಸಿದ ರಾ ಮೇಲೆ ಬರದೆ ಇರಾನಾ? ” ಎಂದು ಸೈ ಫ್ರು ನುಡಿದ. (ರಾ ಅಂದರೆ ಸೂರ್ಯ ಇರಬೇಕು)
“ ಈ ಪ್ರಾಂತದ ನಾವೆಲ್ಲ ಒಂದೇ ಬುಡಕಟ್ಟಿನವರು. " ನಾಯಕನ ಮಾತು.
ಅರ್ಚಕರ ಪ್ರಕಾರ, ನಾವು ಅನ್ನುವಿಗೆ ಕೊಟ್ಟದ್ದು ರಾಜಯೋಗ್ಯವಾದ ವಿದಾಯ .
ನಾಯಕನು ಅರಮನೆಗೆ ಬಂದು ಇರಲು ನಿರಾಕರಿಸುತ್ತಾನೆ 'ನಾನು ಮನೆಯಲ್ಲಿದ್ದುಕೊಂಡೇ ಆಡಳಿತದ ಕೆಲಸ ನೋಡ್ತೇನೆ' ಎಂದ.
“ಹೊಸ ವ್ಯವಸ್ಥೆಯಲ್ಲಿ ದಾಸರಿಲ್ಲ, ದಾಸಿಯರಿಲ್ಲ . ಎಲ್ಲರೂ ಮುಕ್ತರು. ವಿಮುಕ್ತ ದುಡಿಮೆಗಾರರು . ರಾಜಗೃಹದ ಉದ್ಯೋಗಿಗಳಿಗೆ ಮುಂದೆಯೂ ಕೆಲಸವಿದೆ"
ಅರಮನೆಯಲ್ಲಿನ ದಾಸಿಯರಿಗೆ ಹೇಳುತ್ತಾರೆ ' ನೆಫರುರಾ , ಇನ್ನು ರಾಜಗೃಹದಲ್ಲಿ ಔತಣ - ನರ್ತನ - ಹಾಡುಗಾರಿಕೆ ಇಲ್ಲ . ದಾಸಿಯರಿಗೆ ಇಲ್ಲಿ ಕೆಲಸವಿಲ್ಲ . ನೀವೀಗ ಯಾರ ಸೊತ್ತೂ ಅಲ್ಲ . ಸ್ವತಂತ್ರರು. ಮದುವೆ ಯಾಗಬಹುದು. ದುಡಿದು ಸಂಪಾದಿಸಬಹುದು. ಇಲ್ಲಿರುವ ಸ್ತ್ರೀಯರ ಹಾಗೆ ತಲೆಯೆತ್ತಿ ನಡೆಯಬಹುದು. ಏನಾದರೂ ಏರ್ಪಾಟು ಆಗೋವರೆಗೆ ನಿಮಗೆ ರಾಜಗೃಹದ ಕಣಜದಿಂದ ಧಾನ್ಯ ಮತ್ತಿತರ ಸಾಮಗ್ರಿ ಸಿಗ್ತವೆ."
“ನಾಯಕರು! ಉ ! ಒಂದು ಪೀಠ ಪಲ್ಲಕಿಯಾದರೂ ಬೇಡವೆ ? ನೋಡು. ನಡೀತಿರೋದು- ಪಾದರಕ್ಷೇನೂ ಇಲ್ಲದೆ !” ಜನ ಅನ್ನುತ್ತಾರೆ.
ಪೆರೋ ಮೆರಿಕಾ ತನ್ನ ಮಗನಿಗೆ ಮಾಡಿದ ಹಿತೋಪದೇಶ ಯಾವುದು ? ” ಹುಡುಗ ಪೇಚಿನಲ್ಲಿ ಬಿದ್ದ . ಅಪೆಟ್ ಗುಡುಗಿದ: “ ಮರೆತ್ನಿಟ್ಟೆಯಾ ಕತ್ತೆ ? “ಶ್ರೀಮಂತನ ಮಗ, ಬಡವನ ಮಗ ಅಂತ ವ್ಯತ್ಯಾಸ ಮಾಡಬೇಡ; ಕೈಗಳ ದುಡಿಮೆ ನೋಡಿನೇಮಿಸಿಕೊ '.... “
“ಶ್ರೀಮಂತನ ಮಗ, ಬಡವನ ಮಗ ಅಂತ ವ್ಯತ್ಯಾಸ ಮಾಡಬೇಡ.' ಯಾರ ಜೊತೆ ಬೇಕಾದರೂ ಗೋಲಿಆಡೋದು ಅಲ್ವಾ ? ”
“ಕತ್ತೆ ! ಪೆರೋ ಮೆರಿಕರಾನ ಮಗ ಗೋಲಿ ಆಡ್ಲಿಲ್ಲ . ರಾಜ್ಯ ಆಳ್ದ , ತಿಳೀತಾ? ” “ ಹೂಂ . ”
ರಾಜಗೃಹದ ಸುತ್ತಲೂ ಇದ್ದ ಪ್ರಾಕಾರವನ್ನು ಕೆಡವಿದರು . “ ಜನರಿಗೆ ಕಾಣಿಸದಂತೆ ಯಾವ ರಹಸ್ಯ ಕಾರ್ಯವೂ ಇಲ್ಲಿ ನಡೆಯೋದಿಲ್ಲ . ಅಂದ ಮೇಲೆಗೋಡೆ ಯಾಕೆ? ” ಎಂದ ಮೆನೆಪ್ಟಾ.
ನಾಯಕನನ್ನು ಕಾಡುತ್ತಿದ್ದ ಸಂಗತಿ: ನನ್ನ ಮಗನೊಬ್ಬನಿಗೇ ಓದುಬರಹ ಕಲಿಸುವುದು ಸರಿಯೇ ? ......
ನೆಫಿಸ್ ಗಂಡನನ್ನು ಕೇಳಿದಳು: “ ರಾಮೆರಿಗೆ ಬೇರೆಯೇ ಪಾಠ ಹೇಳಿಸೋದಕ್ಕಾಗೋಲ್ವ? ” ಮೆನೆಪೇಟಾ ತಿಳಿಯಹೇಳಿದ: “ ಭೇದ ಭಾವ ಸಲ್ಲ ನೆಫಿಸ್ , ಬೇರೆಯವರೂ ಒಟ್ಟಿಗಿದ್ದರೆ ರಾಮೇರಿ ಅವರಿಗಿಂತ ಚೆನ್ನಾಗಿ ಕಲೀಬೌದು. ”
ಆಕ್ರಮಣಕಾರರು ಬಂದ ಮೇಲೆ ಶಸ್ತ್ರಾಭ್ಯಾಸ ಸಲ್ಲದು . ನಮ್ಮ ದಂಡು ನಾವು ಸಿದ್ದಪಡಿಸಬೇಕು.
“ ನನಗೆ ನೀನು ಯಾವಾಗಲೂ ರಾಣಿಯೇ ಅಲ್ವಾ ? ” “ ಮಾತಿನಲ್ಲೇ ಆಯ್ತು ನನ್ನ ರಾಣೀತನ. ” “ ಹೊಲ ಇದೆ. ದುಡೀತೇವೆ, ಬೆಳೆಸುತ್ತೇವೆ. ಸಾಲದೆ ? ”
ವಿದ್ಯೆಗೆ ಸಂಬಂಧಿಸಿದ ಕಟ್ಟಡ ಎಂಬುದನ್ನು ತಿಳಿದ ಆಳುಗಳೆಂದರು : “ ಇವತ್ತಿನ ಕೆಲಸಕ್ಕೆ ವೇತನ ಬೇಡ. ನಾಳೆಯಿಂದ ಲೆಕ್ಕ ಇಟ್ಟರೆ ಸಾಕು. ”
ರಾಸುಗಳ ವಿತರಣೆಯೂ ಆಗುತ್ತಿದೆ ಎಂದು ಅರಿತಾಗ ನೆಫಿಸ್ ಗಂಡನೊಡನೆ ಅಂದಳು : “ಉಳೊದಕ್ಕೆ ಒಂದು ಜತೆ ಹೋರಿ ನಾವು ತೆಗೆದುಕೊಳ್ಳೋದುತಪ್ಪಾದೀತು ಅಲ್ವಾ ? ” “ತಪ್ಪಲ್ಲದೆ! ನಾನು ಹಂಚೋದು ನಾನೇ ಪಡೆಯೋದು! ಆ ವಿಷಯ ಮರೆತುಬಿಡು . ನಮಗೆಹೋರಿಗಳು ಬೇಕು ನಿಜ, ಮುಂದಿನ ವರ್ಷ ಕೊಂಡ್ಕೋಳೋಣ. ”
ದುಡಿಮೆಯಿಂದ ವಸ್ತುಗಳು ಸೃಷ್ಟಿಯಾಗ್ತವೆ; ಅವುಗಳ ವಿಕ್ರಯದಿಂದ ಸಂಪತ್ತು ಸಂಗ್ರಹವಾಗ್ತವೆ.
ಮಾಟ್ನ ಆಣೆಯಾಗಿ ನುಡೀತೇನೆ: ವ್ಯಾಪಾರದಲ್ಲಿ ನಷ್ಟವೂ ಉಂಟು, ಲಾಭವೂ ಉಂಟು. ನಷ್ಟವಾಯ್ತು ಅಂತ ಕುಗೊದಿಲ್ಲ; ಲಾಭವಾಯ್ತು ಅಂತ ಹಿಗ್ಗೋದಿಲ್ಲ . ಮಾಟ್ ನನ್ನನ್ನು ನಡೆಸ್ಕೊಂಡು ಹೋಗ್ತದೆ.” ಒಬ್ಬ ವರ್ತಕ ಹೇಳೋದು.
“ಎಷ್ಟು ಶಾಂತಿಪ್ರಿಯನಾದರೂ ಹೋರಾಟ ಮನುಷ್ಯನಿಗೆ ತಪ್ಪಿದ್ದಲ್ಲ"
ಈ ನಿಮ್ಮ ವಿಜಯ ಸ್ತಂಭವೂ ರಮ್ಯ ಕಲ್ಪನೆ, ಪ್ರಾಕಾರವಿಲ್ಲದ ರಾಜಗೃಹ; ಮುಖವಾಡವಿಲ್ಲದ ಮನುಷ್ಯರು. -ಹೊಸ ವ್ಯವಸ್ಥೆಯಲ್ಲಿ
ಒಂದು ಮೊಳ ಭುವಿಗಾಗಿ ಆಸಬುರುಕನಾಗದಿರು ವಿಧವೆಯ ಹೊಲಕೆ ಅತಿಕ್ರಮಿಸಿ ನುಗ್ಗದಿರು ಹೊಲಗಳನ್ನು ಉಳು |
ಒಕ್ಕುವ ಕುಟ್ಟುವ ನಿನ್ನ ಅಂಗಳದಿಂದಲೇ
ನಿನಗೆ ಬೇಕಾದ ತಿನಿಸು ಉಣಿಸೆಲ್ಲವನು ನೀ ಪಡೆವೆ
ಅತಿಕ್ರಮಣದಿಂದ ಗಳಿಸುವ ಐದುನೂರು ಬಳ್ಳಕಿಂತ
ದೇವರು ನಿನಗೀವ ಒಂದು ಬಳ್ಳವೆ ಮೇಲು
ಉಗ್ರಾಣದಲ್ಲಿನ ಐಸಿರಿಗಿಂತ
ದೇವರ ಕೈಯಲ್ಲಿ ಬಡತನ ಒಳಿತು
ಸಿರಿವಂತಿಕೆಯ ಸುಖಕಿಂತ ವಾಸಿ
ಬಿಸಿ ಬಿಸಿ ರೊಟ್ಟಿಯ ತುಣುಕು. ”
ಸಾಯುವುದಕ್ಕೆ ಮುಂಚೆ ರೈತ ತನ್ನ ಮಗನಿಗೆ ಹೇಳುವ ಕಿವಿಮಾತು ಯಾವುದು ? “ ನಿನ್ನ ಹೊಲದಿಂದ ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಫಸಲು ಪಡೆ; ಅತ್ಯಂತ ಶ್ರಮ ಪಡು . ಕೆಲಸದಲ್ಲಿ ಮೂಗು ನೆಟ್ಟು ನೆಲವನ್ನು ಉಳು. ”
ಲಿಪಿಕಾರನಾಗು... ಅಲಂಕೃತಗೋರಿಕಲ್ಲಿಗಿಂತ ಹೆಚ್ಚು ಪರಿಣಾಮಕಾರಿ, ಪುಸ್ತಕ.”
ಮನೆಪ್ಟಾಹೋರಿಗಳನ್ನು ಎರವಲು ಪಡೆದು ತನ್ನ ಹೊಲ ವನ್ನು ಉತ್ತ ; ಬಿತ್ತಿದ. “ ಬೇಡಿ ಮನೆಪ್ಟಾ ಅಣ್ಣ , ನಿಮ್ಮ ಹೊಲದ ಕೆಲಸ ನಮಗೆ ಬಿಟ್ಟಿಡಿ,” ಎಂದು ಹೇಳಿದವರು ಎಷ್ಟೋ ಜನ. ನಾಯಕ ಮನೆಪ್ಟಾನ ಉತ್ತರ ಒಂದೇ : “ ನನ್ನ ಕೈಲಿ ಆಗದೇ ಇದ್ದಾಗ ನಿಮ್ಮನ್ನು ಖಂಡಿತ ಕರೀತೇನೆ. ”
ಯಾರ ಮೇಲೂ ನಮಗೆ ಹಗೆತನವಿಲ್ಲ . ಆಕ್ರಮಣಕ್ಕೆ ನಾವು ಹೋಗೋದಿಲ್ಲ. ಈ ದಳ ಸ್ವರಕ್ಷಣೆಗೆ.
ನಮ್ಮ ಮಾಟ್ ನಮ್ಮನ್ನು ಕಾಯ್ತದೆ.
ಪೆರೋಗೆಕಾಣಿಕೆ ಒಯ್ಯಬೇಕೆ ಬೇಡವೆ ? ಮುಖಂಡರಲ್ಲಿ ಚರ್ಚೆ ನಡೆಯಿತು. ಅವರೊಂದು ತೀರ್ಮಾನಕ್ಕೆ ಬಂದರು: ಕಾಣಿಕೆ ಕಪ್ಪವಲ್ಲ ; ಶಿಷ್ಟಾಚಾರದಂತೆ ಏನ ನ್ಯಾ ದರೂ ಒಪ್ಪಿಸಿದರೆ ಅದರಿಂದ ನಾಡಿನ ಸ್ವಾತಂತ್ರಕ್ಕೆ ಚ್ಯುತಿ ಇಲ್ಲ.
ಸೈನಿಕರಿದ್ದರೆ ಸರದಾರ , ಸಹಚರರಿದ್ದರೆ ನಾಯಕ....”
ಇವರೇ ನಮ್ಮ ನಾಯಕರು,” ಎಂದ ಬಟಾ. ಅಧಿಕಾರಿಗೆ ನಿರಾಸೆ, ಆಡಂಬರದ , ದರ್ಪದ ವ್ಯಕ್ತಿಯನ್ನು ಅವನು ನಿರೀಕ್ಷಿಸಿದ್ದ.
ಐಗುಪ್ತದ ಎರಡು ಸಾವಿರ ದೇವರೆಲ್ಲ ಹಿಂದೆ ಮನುಷ್ಯರೋ ಪ್ರಾಣಿಗಳೂ ಆಗಿದ್ರು . ಹೀಗೆಹೇಳಿದ್ದಕ್ಕೆ ನನ್ನನ್ನು ಹುಚ್ಚ ಅಂದ್ರು.
ಹೇಪಾಟ್ ಕಿರಿಚಿದ :
“ ಧರ್ಮದ್ರೋಹಿ! ಹೇಳು, ಈ ಐಗುಪ್ತವನ್ನು ಜಗತ್ತನ್ನು ಸೃಷ್ಟಿಸಿದವನು ಯಾರು ? ” “ಗೊತ್ತಿಲ್ಲ. ನಾನಂತೂ ಅಲ್ಲ! ( ನಾನಾಗಿದ್ದಿದ್ರೆ ನೀವು ಯಾರೂ ಹುಟ್ತಾನೇ ಇರಲಿಲ್ಲ.) "ಈಗ ಉತ್ತರ ಕೊಡು, ಈ ಪ್ರಪಂಚದಲ್ಲಿ ದೇವರ ಪ್ರತಿನಿಧಿ ಯಾರು ? ” “ ನಾನಲ್ಲ , ನಾನಲ್ಲ ! ” -ಮೆನೆಪ್ಟಾನ ಮಾತು :
“ ಐಗುಪ್ತದ ಮಹಾಪ್ರಭುವಿಗೆ ನಮ್ಮ ಪ್ರಾಂತದ ಅಲ್ಪ ಕಾಣಿಕೆ, ಸ್ವೀಕರಿಸಬೇಕು. ” - (ವಿನಯದ್ಯೋತಕ ಪದ.)
ಅವನಿಗೆ ಇಷ್ಟವಿರಲಿಲ್ಲ , “ ಬರವಣಿಗೆ ನಾಗರಿಕತೆಯ ವೈರಿ' ಅಂದ. ' ಇಷ್ಟರವರೆಗೆ ಮಕ್ಕಳೂ ಯುವಕರೂ ಶ್ರದ್ದೆಯಿಟ್ಟು ಕಲೀತಿದ್ರು ; ಕಲಿಸಿದ್ದನ್ನು ಕಷ್ಟಪಟ್ಟು ನೆನಪಿಟ್ಕೋತಿದ್ರು.
ಕುಳಿತು, ಮಗ್ಗುಲಿಗೆ ದೃಷ್ಟಿ ಬೀರಿ, ಹೆಬ್ಬೆಟ್ ನುಡಿದ: “ ಹೇಳು ಮಗು, ನಿಮ್ಮ ಬಂಡಾಯ ಇತ್ಯಾದಿ ಹೇಗೆ ಮಾಡಿದಿರಿ, ಹೇಳು. ” ಅಹಂಭಾವದ ಪರಾಕಾಷ್ಠೆ ಎನಿಸಿತು ನಾಯಕ ನಿಗೆ, ವಯಸ್ಸಾದ ಆ ಕಣ್ಣುಗಳಲ್ಲಿ ಮಿಂಚಿದ ತುಂಟ ನಗೆ ಅವನಿಗೆ ಅಸಹನೀಯವಾಯಿತು. ಅವನೆಂದ: “ ಅದು ದೊಡ್ಡ ಕಥೆ, ತಾತ. ” ತಾತ! ಹೆಬ್ಬೆಟ್ ಬೆಚ್ಚಿ ಬಿದ್ದ . ( ತುಳಿದದ್ದು ಸರ್ಪದ ಹೆಡೆ!)
ಋಜುಮಾರ್ಗ ಅವಲಂಬಿಗಳಿಗೆ ಯಾತರ ಭಯ ? -
ವೈಯಕ್ತಿಕವಾಗಿ ನನಗೆ ಏನು ಆಗ್ತದೆ ಅನ್ನೋದು ಮಹತ್ವದ್ದಲ್ಲ, ಬಟಾ, ನಮ್ಮ ಪ್ರಾಂತದ ಜನ ನೆಮ್ಮದಿಯಿಂದ ಬದುಕೋದು ಸಾಧ್ಯವಾಗಬೇಕು. ರಾಜಧಾನಿ ಇದಕ್ಕೆ ಆಸ್ಪದ ಇತ್ತರೆ ಎಲ್ಲರಿಗೂ ಹಿತವಾದೀತು. ಅದಕ್ಕಾಗಿ ಇಲ್ಲಿದ್ದು ನಾನು ಪ್ರಯತ್ನಿಸೇನೆ. - ನಾಯಕ
ನಮ್ಮದು ಋಜುಮಾರ್ಗ . ನಮ್ಮ ಮಾಟ್ ನಮ್ಮನ್ನು ಕಾಯ್ತದೆ. ”
ನಮ್ಮದು ಆತ್ಮರಕ್ಷಣೆಯ ದಂಡು , ಆಕ್ರಮಣದ್ದಲ್ಲ... ”
ರಾಜಧಾನಿಯಲ್ಲಿನ ಸೇವಕರನ್ನು ನೋಡಿ ನಾಯಕ ಅಂದುಕೊಂಡ -ಇವರೆಲ್ಲ ಬಡವರು. ನನ್ನ ಮೇಲೆ ಇವರಿಗೆ ದ್ವೇಷವಿಲ್ಲ ಹೊಟ್ಟೆಪಾಡಿಗಾಗಿ ಈ ಕೆಲಸ ಹಿಡಿದಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ನಾಯಕನ ಮಾತು-ನಯ ನಾಜೂಕು ನನಗೆ ತಿಳೀದು. ಉತ್ತನೆ ಬಿತ್ತನೆ ಗೊತ್ತು . ಮಹಾಪೂರದ ಸಮಯದಲ್ಲಿ ಕಲ್ಲು ಸೀಳಿದ್ದೇನೆ; ಮಂದಿರದ ಗೋಡೆಕಟ್ಟಿದ್ದೇನೆ. ಎರಡರ್ಥದ ನವುರು ಮಾತು ಕಲೀಲಿಲ್ಲ. ಕಂಡದ್ದನ್ನು ಕಂಡ ಹಾಗೆ ಹೇಳೋದೇ ಅಭ್ಯಾಸ, ಅಮಾತ್ಯವರ್ಯರೆ, ನಿಮ್ಮನ್ನು ಒಂದು ಮಾತು ಕೇಳಲೆ ? ” “ ಏನದು ? ” “ಕೋಪಿಸ್ಕೋಬೇಡಿ, ಶಿಷ್ಟಾಚಾರಕ್ಕೆ ಸಂಬಂಧಿಸಿದ್ದು . ಎಪ್ಪತ್ತು ದಿನಗಳಿಗೆ ಹಿಂದೆ ನಿಮ್ಮನ್ನು ನಾನು ಭೇಟಿಯಾದಾಗ, ಅತಿಥಿಗೃಹದಲ್ಲಿ ಎಲ್ಲ ಅನುಕೂಲವಾಗಿದೆಯಾ? ಅಂತ ಕೇಳಿದ್ದಿರಿ, ಕಾರಾಗೃಹದಲ್ಲಿ ಎಲ್ಲ ಅನುಕೂಲವಾಗಿದೆಯೇ ಅಂತ ಇವತ್ತು ಕೇಳಲಿಲ್ಲ.
ನೆಪ್ಟಾ: “ಜೀವ ತೇದು ದುಡಿಯುವ ಜನರಿಗೆ ಅರೆಹೊಟ್ಟೆ , ಚಾಟಿ ಏಟು; ಕೊಬ್ಬಿದ ಭೂಮಾಲಿಕರಿಗೆ ಅರಮನೆ ಪಲ್ಲಕ್ಕಿ ! ದರಿದ್ರರ ಶವಗಳ ಮೇಲೆ ತುಣುಕು ಬಟ್ಟೆಯೂ ಇಲ್ಲ; ಆದರೆ ಮಂದಿರದ ಸೋಮಾರಿ ಬೆಕ್ಕು ಸತ್ತಾಗ ಅದಕ್ಕೆ ಶವಲೇಪನ!
ನಮ್ಮ ಸಮಾಜ ವಿಸ್ತಾರ ಬುನಾದಿಯ ಮೇಲಿನ ಹತ್ತಾಳು ಎತ್ತರದ ಗೋರಿ, ಈ ಸೋಪಾನ ವ್ಯವಸ್ಥೆ ನಿಂತಿರೋದು ಸಹಸ್ರ ಸಹಸ್ರ ಶ್ರಮಜೀವಿಗಳ ಭುಜಗಳ ಮೇಲೆ, ಎತ್ತರಕ್ಕೆ ಹೋಗ್ತಾ ಅಗಲ ಕಿರಿದು, ದುಡಿಸುವ ಕಾಪೀರುಗಳು , ಭೂಮಾಲಿಕರು , ವರ್ತಕರು, ಸೈನ್ಯ , ಆಡಳಿತಗಾರರು - ಅರ್ಚಕರು, ಸುಲಿಗೆಯ ಸೂತ್ರ ಈ ವ್ಯವಸ್ಥೆಯನ್ನು ಬಿಗಿದು ಕಟ್ಟಿದೆ. ”
ಸುಲಿಗೆಯ ಸೂತ್ರ ಈ ವ್ಯವಸ್ಥೆಯನ್ನು ಬಿಗಿದು ಕಟ್ಟಿದೆ, ಅಂದೆ. ನಮ್ಮ ಪ್ರಾಚೀನರ ಮಾತಿನಂತೆ, ಮುಂಗೈ ಜೋರಿನಿಂದ ಏನನ್ನೂ ಸಾಧಿಸಲು ಆಗುವುದಿಲ್ಲ . ಆದರೆ ನಮ್ಮ ನಡವಳಿಕೆ ಆ ಮಾತನ್ನು ಸುಳ್ಳು ಮಾಡಿದೆ! ಕಂದಾಯ ವಸೂಲಿ, ಗೋರಿ ನಿರ್ಮಾಣ, ಗಣಿ ಕೆಲಸ ಇವೆಲ್ಲ ಬಲಪ್ರಯೋಗದಿಂದಲೇ ನಡೀತವೆ. ದಾಸದಾಸಿಯರ ಬಲಾತ್ಕಾರದ ದುಡಿಮೆಯಿಂದ ನಮ್ಮಲ್ಲಿ ಸಂಪತ್ತು ಉತ್ಪನ್ನವಾಗ್ತದೆ. ಇದು ಸ್ವರ್ಣ ಪಿಶಾಚಿಗಳ ಸಮಾಜ. ಮನುಷ್ಯ ಜೀವಕ್ಕೆ ಇಲ್ಲಿ ಬೆಲೆ ಇಲ್ಲ. ಹೋರಾಟದಲ್ಲಿ ಸೆರೆ ಸಿಕ್ಕಿದವರು ನಮ್ಮ ವ್ಯವಸ್ಥೆಯ ಗುಲಾಮರಾಗ್ತಾರೆ. ಅವರನ್ನು ಕೆಡವಿದಾಗ ಅವರ ಬಲಗೈಯನ್ನೊ ಯೋನಿಯನ್ನೂ ಕತ್ತರಿಸಿರತಾರೆ ನಮ್ಮ ವೀರಯೋಧರು ಅರಮನೆಯ ಲೆಕ್ಕಿಗನಿಗೆ ತೋರಿಸಿ ದಾಖಲೆ ಇಡಿಸೋದಕ್ಕೆ .
ಅಂಥ ನಾಗರಿಕತೆಗೆ ರೋಸಿ, ಸುಲಿಗೆಗೆ ಒಪ್ಪದೆ, ನಾವು- ದಲಿತರು - ಸೆಟೆದು ನಿಂತಿದ್ದೇವೆ.
ಬಟಾ ಕೇಳಿದ ಒಂದು ಪ್ರಶ್ನೆ ಇದು - ಅಣ್ಣ ನಿನಗೆ ಸಿಟ್ಟು ಬರೋದು ಯಾವತ್ತು ? ” ( ಬಹಳ ಮೆಲ್ಲನೆ) ಯಾವತ್ತು ? ಯಾವತ್ತು ? (ಕ್ರಮೇಣ ಧ್ವನಿ ಏರಿಸುತ್ತ ) ಮಹಾ ಪ್ರಭುಗಳೇ , ಮಹಾ ಅರ್ಚಕರೇ , ಅಮಾತ್ಯರೇ , ಪ್ರತಿಷ್ಠಿತರೇ ! ಕಿವಿಕೊಟ್ಟು ಕೇಳಿ! ನಮಗೆ- ಜನರಿಗೆ - ಸಿಟ್ಟು ಬಂದಾಗ ಅದು ಮಹಾಪೂರವಾಗ್ತದೆ. ಅದರಲ್ಲಿ ನೀವೆಲ್ಲ ಕೊಚ್ಚಿ ಹೋಗ್ತೀರಿ.
ವಿಚಾರಣೆಯಾದದ್ದು ನಾಯಕರದಲ್ಲ ; ಪೆರೋ - ಮಹಾ ಅರ್ಚಕ - ಅಮಾತ್ಯರದು. ತೀರ್ಪುಕೊಟ್ಟದ್ದು ಮೆನೆಪ್ಟಾ ಅಣ್ಣ , ಅವರಲ್ಲ... - ಒಬ್ಬ ಬೆಂಬಲಿಗ ಹೇಳಿದ್ದು
' ಬಟಾ ನೀನು ಕೇಳಿದೆ : ನಿಮಗೆ ಸಮೀಪವಾಗಿದ್ದೇನೆ ಅಂತ ನಾನು ದೊಡ್ಡವ ಅನಿಸಿಕೊಂಡಿಲ್ವಾ ? ... ಇಲ್ಲ ಬಟಾ, ನೀವೆಲ್ಲ ನನಗೆ ಸಮೀಪದವರಾದ್ದರಿಂದಲೇ ನಾನು ದೊಡ್ಡವ ಅನಿಸಿಕೊಂಡೆ.'
ನಮಗೆ ಜನರಿಗೆ ಸಿಟ್ಟು ಬಂದಾಗ, ಅದು ಮಹಾಪೂರವಾಗ್ತದೆ. ಅದರಲ್ಲಿ ನೀವೆಲ್ಲ ಕೊಚ್ಚಿಹೋಗೀರಿ! ಮಹಾ ಪೂರ ಇಳಿದಾಗ ಕಂಡುಬರೋ ಜಗತ್ತು ಹೊಸದು! ಆ ನೂತನ ಸೃಷ್ಟಿ ನಿರಾತಂಕವಾಗಿ ಆಗಲಿ ಅಂತ - ಇಗೋ - ರಾನನ್ನು , ಪ್ಟಾನನ್ನು , ಅಮನ್ನನ್ನು ಅನನ್ಯ ಭಾವದಿಂದ ನಾನು ಪ್ರಾರ್ಥಿಸುತ್ತೇನೆ... ಅರ್ಥವಾಯ್ತಾ ? ”
ಸತ್ತವನ ನಾಮೋಚ್ಛಾರ ಮಾಡಿದರೆ ಅವನು ಮತ್ತೆ ಜೀವಂತವಾಗ್ತಾನೆ. ಈ ದೇವವಾಕ್ಯ ಕೇಳಿದೀರಾ?
ನಾನು ರೈತ ಹೆಂಗಸು, ತಿನ್ನೋದಕ್ಕೆ ಕುಡಿಯೋದಕ್ಕೆ ಯಾರಿಗಾದರೂ ಕೊಟ್ರೆ, ಪಟ್ಟಣದವರ ಹಾಗೆ ವಿನಿಮಯಕ್ಕೆ ಯಾರಿಗಾದರೂ ಕೊಟ್ರೆ, ಏನ್ನೂ ತಗೊಳೋದಿಲ್ಲ.
“ನೀನು ಜನನಾಯಕನಾಗಲೆಂದೇ ಹುಟ್ಟಿದೆ; ಜನನಾಯಕನಂತೆಯೇ ಬಾಳಿದೆ;.... ಜನನಾಯಕನಂತೆಯೇ ... ಅವಸಾನವೂ ? ಯಾವಾಗಲೂ ಹೀಗೆಯೇ ಏನು ??
“ ಮಹಾನ್ ಜೀವಗಳಿಗೆ ಸಾವು ಅನ್ನೋದೇ ಇಲ್ಲ. ಇಲ್ಲಿ ಉಸಿರು ನಿಂತ ಮೇಲೂ ಅವರು ಮೂರು ಸಾವಿರ ವರ್ಷ ಬಾಳ್ತಾರೆ. ಗೋರಿಯೊಳಗಿಂದ ಚೇತನ ಹೊರಗೆ ಬಂದು ಹಾರಾಡ್ತಾ ತಿರುಗಾಡ್ತಾ ಇದೆ. ತಾನು ಕೈಕೊಂಡಿದ್ದ ಮಹತ್ಕಾರ್ಯವನ್ನು ಮುಂದುವರಿಸೋದಕ್ಕೊಸ್ಕರ ಅದು ಮತ್ತೂ ದುಡೀತದೆ. ಪ್ರಾಂತದ ನಾಯಕ ಮೆನೆಪ್ಟಾ ಅಂಥ ಮಹಾನ್ ಜೀವ.... ಇವರು ಮರುಹುಟ್ಟು ಪಡೀತಾರೆ ”
ವಿಚಾರಣೆಯಾದದ್ದು ನಾಯಕರದಲ್ಲ, ಪೆರೋ - ಮಹಾ ಅರ್ಚಕ- ಅಮಾತ್ಯರದು. ತೀರ್ಪುಕೊಟ್ಟದ್ದು ಮೆನೆಪ್ಟಾ
ನೀಳ ಉಸಿರುಗಳ ನಡುವೆ ನಿಧಾನವಾಗಿ ಅವನೆಂದ: “ ನೆಫಿಸ್ , ನಿನ್ನನ್ನು ತಂಗಿ ಅಂತ ಕರೆಯೋದಿಲ್ಲ . ನಮ್ಮ ಬುಡಕಟ್ಟಿನ ಮಹಾನ್ ನಾಯಕನ ಮಡದಿಯಾದ ನೀನು ಇನ್ನು ನಮ್ಮೆಲ್ಲರ ತಾಯಿ . ನಾವು ಅದೃಷ್ಟಹೀನರು . ನಿನ್ನ ವೈಯಕ್ತಿಕ ದುಃಖ ಇಡೀ ಸಮುದಾಯದಶೋಕ,
“ ಮನುಷ್ಯನಾಗಿ ಜನಿಸಿದವನು ಮಾಡಬೇಕಾದುದ್ದೇನು? ಭೂಮಿಯ ಮೇಲಿದ್ದಷ್ಟು ಕಾಲ ನ್ಯಾಯವಾಗಿ ವರ್ತಿಸೋದು.
ನಾಯಕನ ಮಗ ನಾಯಕನ ಮರಣದಂಡನೆ ನಂತರ ಅಂದುಕೊಂಡದ್ದು
- ಮೆಂಫಿಸಿನ ಅರಮನೆಯ ಆವರಣದಲ್ಲಿ ವಧ ಸ್ಥಾನದಲ್ಲಿ ಇದು “ ನನಗೊಬ್ಬನಿಗೆ ಸಂಬಂಧಿಸಿದ ದುರಂತ' ಎನಿಸಿತ್ತು . ಈಗ ಸ್ಪಷ್ಟವಾಗಿದೆ.ಇದೇ ಎಲ್ಲರ ದುರಂತ, ಬಡ ಜನತೆಯ ದುರಂತ. ತಾನಿನ್ನು ಬೇಗ ಬೇಗನೆ ಬೆಳೆಯಬೇಕು. ಎಲ್ಲ ವಿದ್ಯೆಗಳನ್ನೂ ಕಲಿಯಬೇಕು. ತಂದೆಯ ಹಾಗೆ ದ್ದು
ಯೋಚಿಸಿ ಮಾತನಾಡಬೇಕು. ನ್ಯಾಯದ ಪಕ್ಷ ವಹಿಸಬೇಕು. ಹೆದರಬಾರದು ಯಾರಿಗೂ .
: “ ಒಬ್ಬ ಮನುಷ್ಯ ಮಾಡಬಹುದಾದಂಥ ಉದಾತ್ತ ಕೆಲಸ ಯಾವುದು , ಹೇಳು ಮಗ...' ಮಗ ಉತ್ತರ ಕೊಡ್ತಿದ್ದ : ' ತಂದೆ ತಾಯಿ ಅನುಭವಿಸಿದ ದೌರ್ಜನ್ಯಕ್ಕೆ ಪ್ರತೀಕಾರ ಮಾಡೋದು. ... ”
“ ಒಂದು ತಿಂಗಳಾಯ್ತು ಊರು ಬಿಟ್ಟು , ಭಿಕ್ಷೆ ಬೇಡಲಿಲ್ಲ . ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡ್ಕೊಟ್ಟು ರೊಟ್ಟಿ ಸಂಪಾದಿಸ್ತಾ ಸೈನೆ ತಲಪಿದೆ.
“ ಕತ್ತಲಾದ ಮೇಲೆ ಬೆಳಕು ಹರೀತದೆ. ಇದು ಸಾಮಾನ್ಯ ಅಂತ ತೋರುವ ಅಸಾಮಾನ್ಯ ವಿಷಯ . ನೆನಪಿಡಿ . ”
ಕನ್ನಡದಲ್ಲಿ ನಾಲ್ಕು ಮುದ್ರಣ, ಮಲೆಯಾಳಂ , ತೆಲುಗುಗಳಲ್ಲಿ ಪ್ರಕಟಿತ , ಹಿಂದಿಗೆ ಅನುವಾದಿತ, ಅರಾಬಿಕ್ಗೆ ಆಕರ್ಷಿತ, ಇಂಗ್ಲಿಷ್ ಅವತರಣಿಕೆ ಅಚ್ಚಿನಮನೆಯ ದಾರಿಯಲ್ಲಿ. ಕನ್ನಡ ಸಾಹಿತ್ಯ ಅಭಿಮಾನ ಪಡುವಂತಹ ಶ್ರೇಷ್ಠ ಕೃತಿ. - ಇದು ಹಿಂದಿನ ಪುಟದಲ್ಲಿ ಇದ್ದದ್ದು.