ಸಂಪತ್ತು
ಕವನ
ಪ್ರತಿ ದಿನವು ತುಸು ವತ್ತು
ಹುಡುಕು ನೀ ಸಂಪತ್ತು
ಅಡಗಿಹುದು ಮನದಾಳದೊಳಗೆ
ಆ ಸಂಪತ್ತಿನಾ ಗಡುಗೆ
ಮನಸೊಂದು ತಿಳಿ ನೀರ ಕೊಳ
ತಲುಪ ಬೇಕಿದೆ ನೀನದರ ತಳ
ಕಲಕದಿರು ಕೊಳದ ನೀರ
ಸರಿಯಾಗಿ ಸಾಗಬೇಕಿದೆ ಬಲು ದೂರ
ನಿನ್ನೊಳಗಣ್ಣ ತೆರೆಯಬೇಕು ನೋಡಲು
ನಮ್ ಭಗವಂತನ ಬೆಳಕು ಬೇಕು.. ಅಲ್ಲೇನಾದರೂ ಕಾಣಲು
--ಟಿ ಕೆ ಸಿ
- Log in to post comments