ಕನ್ನಡಕಂದರ್ ತಪಂಗೆಯ್ದರ್

ಕನ್ನಡಕಂದರ್ ತಪಂಗೆಯ್ದರ್

ಬರಹ

ಕನ್ನಡದೇವಿಯ ದಯಮೇ-
ಮಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್‍ ತಪಗೆಯ್ದರ್||

ಇದು ಪೊನ್ನಂಪೇಟೆಯ ಅರಣ್ಯಮಹಾವಿದ್ಯಾಲಯದ ನಂಜಲ್ಮರದಡಿಯ ಕನ್ನಡಕಂದರ ಪೀಠದೆಡೆಯೊಳ್‍ ದೊರಕಿದ ಎಸೞೆೞ್ತು. ಕನ್ನಡಕಂದರ್ ತಮ್ಮೋರಂತಪ್ಪ ಮಹೇಶರ್, ಸುನೀಲ ಜಯಪ್ರಕಾಶರ್, ಹಂಸಾನಂದಿ ಮಹಾಮುನಿಗಳ್, ಸಿ ಮರಿಜೋಸೆಫ್ ಮಾಸಯರ್, ಭರತರ್ ಇನ್ನು ಮುಂತಾದ ಸತ್ವಶಾಲಿಗಳ ಪೇೞ್ಕೇಳ್ಪೆಗಳ್ಗೆ ಗಣಕದಿನುತ್ತರಿಸುತುಂ ಶಬ್ದಮಣಿದರ್ಪಣಮನುಂ ಕಿಟ್ಟೆಲ್ ಕೋಶಮನುಂ ತುದಿಮೊದಲೆನ್ನದೋದುತುಂ ಕನ್ನಡದೇವಿಯ ಸೊಬಗಂ ಮನದೊಳ್ ಧ್ಯಾನಿಸುತುಂ ಕನ್ನಡದೇವಿ ತಮಗಿನೊಲ್ದಿಲ್ಲಮೆನುತುಂ ಮೇಲ್ಕಂಡ ಮಾಸಯರಂ ಬೀೞ್ಕೊಂಡು ಕನ್ನಡದೇವಿಯೊಲ್ಮೆಗಾಗಿ ಪೊನ್ನಂಪೇಟೆಯ ಕಾಡೊಳ್ ತಪಂ ಗೆಯ್ವ ಮುನ್ನ ಬರೆದ ಶಾಸನಂ.