ಕ್ಷಾರಾತ್ ಕ್ಷಾರತರಂ ವಿದ್ಯಾ
ಕವನ
||ಕ್ಷಾರಾತ್ ಕ್ಷಾರತರಂ ವಿದ್ಯಾ ||
(ವಿದ್ಯೆ ಎಂಬುದು ಉಪ್ಪಿನ ನೀರಿನಂತೆ)
ತಿಳಿದಷ್ಟೂ ತಿಳಿಯಬೇಕೆಂಬ ಹಂಬಲ....!!
ಅರಿತಷ್ಟೂ ಅರಿವಿನ ಬಯಕೆ....!!
ಹೂಡಿ ಕಲಿತರು ಜಗದಿ......ಕಲೆತು ಕಲಿತರು ಮುದದಿ.......
ಗುರುವಿನಡಿ ಕೈಮುಗಿಡದು....ಭಕ್ತಿಯಿಂದಲಿ ಮಣಿದು....
ಸಾಧ್ಯವೆನೆ ನಿಗವಿಟ್ಟು ತಾ ಕಲಿತರೂ!!
ತೀರದಾ ದಾಹವದು..... ಕ್ಷಾರವಾರಿಯ ತೆರದಿ...
ನೀಗಿಸೆನೆ ಪ್ರಾರ್ಥಿಸುವೆ ಓ ಶಾರದೆ!!
- Log in to post comments