ನಿನ್ನಾ ಪೂಜೆಗೆ ಬಂದೆ ಮಾದೇಸ್ವರಾ...!!!

ನಿನ್ನಾ ಪೂಜೆಗೆ ಬಂದೆ ಮಾದೇಸ್ವರಾ...!!!

 ಕರ್ನಾಟಕದ ಕಾರ್ಗಿಲ್  ಪ್ರದೇಶ ಕೊಳ್ಳೇಗಾಲ ಪ್ರಾಂತ್ಯದಲ್ಲಿ ನೆಲೆಸಿ ಸುಮಾರು 18 ವರ್ಷಗಳಾಯ್ತು ಕರ್ನಾಟಕದ ಟೈಗರ್  ಹಿಲ್ಲ್ಸ್ ಒಡೆಯ ಹುಲಿ ಏರಿ ಕುಳಿತ  ಮಹದೇಶ್ವರ ನ ದರ್ಶನ  ಭಾಗ್ಯ ಪ್ರಾಪ್ತಿ ಆಗಿರಲಿಲ್ಲ ಮೊನ್ನೆ ಮೊನ್ನೆ ಈಚೆಗೆ ಆಯುಧ ಪೂಜೆಯ ದಿನ, ನಿನ್ನಾ ಪೂಜೆಗೆ ಬಂದೆ ಮಾದೇಸ್ವರಾ...!!! ಅಂತಾ  ಮಹದೇಶ್ವರ ನ ದರ್ಶನ ಪಡೆಯೋಣ ಅಂತ ತೀರ್ಮಾನ  ಮಾಡಿ ಹೊರಟ್ವಿ 

ನವರಾತ್ರಿ ವಿಶೇಷ ಹೇಗೋ ಕಷ್ಟ ಪಟ್ಟು ಸ್ಥಳ  ಮಾಡಿ ಬಸ್ಸಲ್ಲಿ ಕೂತ್ವಿ  ಉಘೆ ಉಘೆ ಅನ್ನೋ ಉಧ್ಘೋಶಗಳ ನಡುವೆ ಬಸ್ಸಿನ ಸದ್ದು ಕೇಳಿಸ್ತಲೇ ಇರ್ಲಿಲ್ಲ 
ಮಧ್ಯಾನ್ನ  ಭರ್ಜರಿ ಊಟ ಆಗಿತ್ತು  ಸರಿ ಸ್ವಲ್ಪ ದೂರ ಸಾಗಿದ್ಮೇಲೆ ನಿದ್ದೇನು ಬಂತು . 
ಎಚ್ಚ್ರಾಗೊ  ಹೊತ್ಗೆ   ಬಸ್ಸು ನಿಧನ ವಾಗಿ ಸಾಗ್ತಿತು ಯಾವ ಸದ್ದು  ಇರ್ಲಿಲ್ಲ ಎಲ್ರು ನಿದ್ದ್ರೆಗೆ ಜಾರಿದ್ರು,ಸಂಜೆ 5 ಘಂಟೆ ಆಗಿತ್ತು  ಅಲ್ಲಲ್ಲಿ ಕೆಂಪನೆ ಬಿಸಿಲು ಮಂದ ಬೆಳಕು ನಿದ್ರೆ ಮಂಪರು ಬಂದಿದ್ ಕಣ್ಗೆ ಎಲ್ಲಾ ಮಂಕಾಗಿ ಕಾಣತಿತ್ತು  ನೋಡ್ ನೋಡ್ ತಿದ್ದಂತೆ ಎಲ್ಲೆಲ್ಲು ಹಸ್ರು,  ಬಸ್ಸು ಗಭೀರವಾಗಿ ವನರಾಜನಂತೆ ಚಲಿಸುತ್ತಿರುವಾಗ ಕಣ್ಣರಳಿಸಿ ಕುತ್ತಿಗೆ ಹೊರಳಿಸಿದೆ
ಕರ್ನಾಟಕದ ಜಮ್ಮು  ಕಣಿವೆಗಳ ಮಧ್ಯದಲ್ಲಿ ಬಸ್ಸು ಜಮ್ಮಂತ  ಸಾಗಿತ್ತು ಒಂದುಕಡೆ ಆಕಾಶ ಇಷ್ಟ ಆಗಿದೆಯೋ ಅನ್ನೋ ಎತ್ತರದ ಗಿರಿ ಶಿಖರ ಇನ್ನೊಂದ್ಕಡೆ ಪಾತಾಳದ ಅಡ್ರೆಸ್ಸ್ ಕೊಡೊ ಪ್ರಪಾತ ಗಳು, "ವಾಲುತ್ತ ತೇಲುತ್ತ ಏಳುಮಲೆಗೆ ವಾಲಾಡಿ ಬಂದ್ವೋ..." ಅನ್ನೋ ಹಾಡಿನ ಸಾಲು ನೆನಪಾಗದೆ ಇರ್ಲಿಲ್ಲ ಹಾಗಿತು ಅಲ್ಲಿ ಬಸ್ಸುಗಳ  ಸವಾರಿ ಮಲೆಯ ಬೆನ್ನೇರಿ ವಾಹ್ ಅಧ್ಬುತ ದೃಶ್ಯ ಓಲಾಡಿ ತೇಲಾಡಿ ಸಾಗ್ತಿದ್ವು 

ಸುತ್ತುವರಿದ ಬೆಟ್ಟಗಳು ಗಂಧದ ಸೀಮೆಯ ಸೌಗಂಧ ತಂಪಾದ ಸೂರ್ಯ ಹಸಿರುಟ್ಟ ಬೆಟ್ಟ ಅಲ್ಲಲ್ಲಿ ಮುತ್ತಿ ಮಾಯವಾಗೋ ಮೋಡಗಳು 
ಎಂಥ ಸೊಗಸಾದ ನೋಟ ಅದ್ಭುತ  

ತಿರುವುಗಲ್ಲಿ ಮೈಮೇಲೆ ಎರಗಿದಂತೆ ಬರೋ ವಾಹನಗಳು ಕಿರಿದಾದ ರಸ್ತೆ ಅಲ್ಲಲಿ ಯಮನ ಸಂದರ್ಶನ ವಾದಂತೆ ಭಾಸ ಉಘೆ ಎನ್ನುವ ಭಕ್ತರ  ಕೂಗು.

ಒಂದರ ಹಿಂದೆ ಒಂದು ಬೆಟ್ಟಸಾಲು,ಪಯಣ  ಎಲ್ಲಿ ಶುರು ಆಯಿತು ಅನುವಾ ಜಾಡು ಹಿಡಿಯಲಾರದ ಹಾಗೆ 

ಒಂದನ್ನೊಂದು ಮರೆ ಮಾಡುವ ಬೆಟ್ಟಸಾಲು

ಎಪ್ಪತ್ತೇಳು ಬೆಟ್ಟಗಳ ಮದ್ಯದಲ್ಲಿ ನೆಲೆಸಿದ ಮಾದಪ್ಪ ನೀನು ತುಂಬ ಗ್ರೇಟ್ ಅಪ್ಪ, ಸಾಮಾನ್ಯ ವಾಗಿ ದೇವರು ಗಳು ಬೆಟ್ಟದ  ಮೇಲೆ ನೆಲೆಸಿರ್ತಾರೆ ಆದರೆ ಇಲ್ಲಿಯ ವಿಶೇಷ ಅಂದರೇ ಬೆಟ್ಟ ಸಾಲು ಗಳನ್ನ ಹತಿ ಇಳಿದು ನಂತರ ದೇವಸ್ತಾನ 
ಏರುತ ಇಳಿಯುತ ಬದುಕಿನ ತತ್ವ ಸಾರುತ ಸಾಗುತ್ತದೆ ಪಯಣ ಮಹದೇಶ್ವರನ ದರ್ಶನಕ್ಕೆ ....
ಮುಂದುವರೆಯುತ್ತದೆ ...