ಬಿಡುಗಡೆಯ ಹಾಡುಗಳು (ಭಾಗ ೧೨) - ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ

ಬಿಡುಗಡೆಯ ಹಾಡುಗಳು (ಭಾಗ ೧೨) - ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ

ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ ಅವರ ಕುರಿತಾದ ಮಾಹಿತಿಗಳು ಸಿಗುತ್ತಿಲ್ಲ. ಆದರೆ ಅವರು ಬರೆದ ‘ಖಾದಿಯ ಹಾಡು’ ೧೯೩೧ರಲ್ಲಿ ರಾಷ್ಟ್ರಬಂಧು, ನವಯುಗ ಮತ್ತು ತಾಯಿ ನಾಡು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ೧೯೪೭ರಲ್ಲಿ ಸ್ವರಾಜ್ಯಗೀತಾಮೃತ ಎನ್ನುವ ಕವನ ಸಂಕಲನದಲ್ಲೂ ಈ ಹಾಡು ಪ್ರಕಟವಾಗಿದೆ. ಆ ಕವನ ಸಂಕಲನದಿಂದ ಈ ಹಾಡನ್ನು ಸಂಗ್ರಹಿಸಿ ‘ಬಿಡುಗಡೆಯ ಹಾಡುಗಳು’ ಕೃತಿಯಲ್ಲಿ ಪ್ರಕಟಿಸಲಾಗಿದೆ.

ಖಾದಿಯ ಹಾಡು

(‘ಕಡು ಧೀರನೆ ಶೂರನೆ’ಎನ್ನುವ ಧಾಟಿ)

ಪರದೇಶದ ಬಟ್ಟೆಯ ಬಿಡು ಬಿಡು ।

ಸುಡು ಸುಡು ॥ ದೇಶ ಬಂಧು

 

ಸ್ವರ್ಣ ಧರಣಿಯಾ ಸ್ವರ್ಣವನೆಲ್ಲವ ।

ಪೂರ್ಣ ವಿದೇಶಿ ವಸ್ತ್ರಕೆ ಕೊಡುವ ।

ಕರ್ಣಕಠೋರವಿಚಾರವ ಸುಡು ಸುಡು ॥೧॥

 

ಪರದೇಶಿಗಳಾವಾಸಕ್ಕೀಯುವ ।

ಭರತಖಂಡದ ಜೀವನಧನವ ।

ಪರಮಸ್ವದೇಶೀ ಖಾದಿಗೆ ಕೊಡು ಕೊಡು ॥೨॥

 

ಸಾವಿರಗಟ್ಟಲೆಯಲಿ ಭಾರತದಲಿ ।

ಸಾವರ ಕೂಳಿಲ್ಲದೆ ಹಸಿವಿಂದಲಿ ।

ಜೀವನ ಮಾರ್ಗದ ಬಟ್ಟೆಯ ಕೊಡು ಕೊಡು ॥೩॥

 

ಮಾನಿನಿಯರು ಹಲವರು ಬತ್ತಲೆಯಲಿ ।

ಕಾನನದೊಳಗಿರುವರು ಹಲವೆಡೆಯಲಿ ।

ಮಾನದ ಹಾದಿಯ ಖಾದಿಯ ಕೊಡು ಕೊಡು ॥೪॥

 

ಚರಕವ ತಿರುಗಿಸಿ, ಬಟ್ಟೆಯನೊದಗಿಸಿ ।

ಪರದೇಶೀ ವ್ಯಾಪಾರವ ನಿಲ್ಲಿಸಿ ।

ಧರೆಗೆ ಸ್ವರಾಜ್ಯದ ಬಟ್ಟೆಯ ಕೊಡು ಕೊಡು ॥೬॥

 

ಭಾರತ ಸ್ವಾತಂತ್ರ್ಯಾಂಬರ ಮಿತ್ರನು ।

ಧೀರ ಮಹಾತ್ಮನು ಸಾರುವ ನುಡಿಯನು ।

ದೂರದೆ ಮನ್ನಿಸಿ ಖಾದಿಯ ತೊಡು ತೊಡು ॥೬॥