‘ಸಂಪದ' ನಗೆ ಬುಗ್ಗೆ - ಭಾಗ ೪೭

‘ಸಂಪದ' ನಗೆ ಬುಗ್ಗೆ - ಭಾಗ ೪೭

ಎಸ್. ಎಸ್.ಎಲ್.ಸಿ ರಿಸಲ್ಟ್

ಅಪ್ಪ ಗಾಂಪ ಮಗನೊಂದಿಗೆ: ಇವತ್ತು ನಿನ್ನ ಎಸ್. ಎಸ್.ಎಲ್.ಸಿ ರಿಸಲ್ಟ್ ಬರುವುದಲ್ಲಾ?

ಮರಿ ಗಾಂಪ: ಹೌದು.

ಗಾಂಪ: ಎಲ್ಲಿಯಾದರೂ ನೀನು ಫೇಲ್ ಆಗಿ ಬಿಟ್ರೆ ನಾನು ನಿನ್ನ ಅಪ್ಪ ಎಂಬುದನ್ನು ಮರೆತುಬಿಡು. ನನಗೂ ನಿನಗೂ ಮತ್ತೆ ಯಾವುದೇ ರೀತಿಯ ಸಂಬಂಧ ಇಲ್ಲ.

ಮರುದಿನ

ಗಾಂಪ : ನಿನ್ನ ರಿಸಲ್ಟ್ ಏನಾಯಿತೋ?

ಮರಿ ಗಾಂಪ: ಅದನ್ನು ಕೇಳಲಿಕ್ಕೆ ನೀನ್ಯಾರೋ?

***

ಲೂಸ್ ತಗೊಂಡರೆ

ಗಾಂಪ: ಒಂದು ಕೆ.ಜಿ ಚಿಪ್ಸ್ ಗೆ ಎಷ್ಟು ರೂಪಾಯಿ?

ವ್ಯಾಪಾರಿ: ೮೦ ರೂಪಾಯಿ

ಗಾಂಪ: ಲೂಸ್ ತಗೊಂಡರೆ.

ವ್ಯಾಪಾರಿ: ಯಾರ್ ತಗೊಂಡ್ರು ಅಷ್ಟೆ.

***

30 ವರ್ಷ ಅನುಭವ

ಸಂದರ್ಶಕ: ೨೦ ವರ್ಷ ವಯಸ್ಸಿನ ನೀನು ೩೦ ವರ್ಷ ಅನುಭವ ಎಂದು ಹಾಕಿದ್ದೀಯಲ್ಲ?

ಅಭ್ಯರ್ಥಿ ಗಾಂಪ: ಓವರ್ ಟೈಮ್ ಮಾಡುತ್ತಿದ್ದೆ.

 ***

ಮರ್ಯಾದೆ

ಗಾಂಪ:  ಅಪ್ಪ ಇಲ್ಲಿ ಬಾ

ಅಮ್ಮ: ಈ ತರ ಎಲ್ಲ ಅಪ್ಪನನ್ನು ಕರೆಯಬಾರದು ಮರ್ಯಾದೆ ಇಂದ ಕರಿಬೇಕು.

ಗಾಂಪ: ಅಪ್ಪ, ಮರ್ಯಾದೆಯಿಂದ ಇಲ್ಲಿ ಬಾ

*** 

ದೇವದಾಸ್ ಆಗ್ತಾರೆ ಯಾಕೆ?

ಹುಡುಗರು ದೇವದಾಸ್ ಆಗ್ತಾರೆ ಯಾಕೆ ?

ಹುಡುಗಿಗಾಗಿ.

ಅವಳ ಅಂದಕ್ಕಾಗಿ.

ಮನಸಿಗಾಗಿ.

ಪ್ರೀತಿಗಾಗಿ.

ಇವು ಯಾವುದಕ್ಕೂ ಅಲ್ಲ ಹುಡುಗಿಗೋಸ್ಕರ ಮಾಡಿದ ಸಾಲಕ್ಕಾಗಿ

***

ಡ್ರೈವಿಂಗ್ ಸಂಬಳ

ಬಾಸ್: ನನಗೆ ಒಬ್ಬ ಡ್ರೈವರ್ ಬೇಕು  ಸ್ಟಾರ್ಟಿಂಗ್ ೨೦೦೦ ಕೊಡ್ತೀನಿ.

ಗಾಂಪ: ಏನ್ ಗ್ರೇಟ್ ಸರ್ ನೀವು, ಸ್ಟಾರ್ಟ್ ಮಾಡೋಕೇ ೨೦೦೦ ಕೊಟ್ರೆ ಡ್ರೈವಿಂಗ್ ಮಾಡೋಕೆ ಸಂಬಳ ಎಷ್ಟು?

***

ಗೌಂಡ್ ಫ್ಲೋರ್ ನಲ್ಲೆ ಇರೋದು

ಗಾಂಪ ಬಸ್ ಸ್ಪಾಪ್ ನಲ್ಲಿ ಕಾಯ್ತಾ ಇದ್ದ

ಒಬ್ಬ ಬೈಕ್ ನಲ್ಲಿ ಬಂದು ಕೇಳಿದ ‘ಲಿಫ್ಟ್ ಬೇಕೇ?’

ಗಾಂಪ : ಬೇಡ, ನಮ್ಮ ಮನೆ ಗೌಂಡ್ ಫ್ಲೋರ್ ನಲ್ಲಿ ಇರೋದು.

***

ಮೈಸೂರ್ ಪಾಕ್ ಮಹಿಮೆ

ಗಾಂಪ : ಮೂರು ಹಲ್ಲು ಒಮ್ಮೆಲೆ ಹೇಗೆ ಹೋದವು? 

ಸೂರಿ: ಹೆಂಡತಿ ಮಾಡಿದ ಮೈಸೂರು ಪಾಕು ತಿಂದು

ಗಾಂಪ : ಒತ್ತಾಯ ಏನಿತ್ತು? ಬೇಡ ಅಂತ ಹೇಳಬೇಕಿತ್ತು.

ಸೂರಿ: ಹಾಗೆ ಹೇಳಿದ್ದರೆ ಈಗ ಉಳಿದಿರೋ ಹಲ್ಲುಗಳೂ ಉದುರುತಿತ್ತು…

***

ಗಂಡಂದಿರೆಲ್ಲಾ ಚೆನ್ನಾಗಿದ್ದಾರಾ?

ಗಾಂಪ: ಏನಮ್ಮಾ, ನಿನ್ನ ಗಂಡ ಚೆನ್ನಾಗಿದ್ದಾನಾ ?

ಹೆಂಗಸು : ಏನ್ ಸ್ವಾಮಿ, ನನ್ನ ಗಂಡನನ್ನು ಏಕವಚನದಲ್ಲಿ ಮಾತಾಡಿಸ್ತೀರಾ ?

ಗಾಂಪ : (ಯೋಚಿಸಿ) ಕ್ಷಮಿಸು ತಾಯಿ ಗೊತ್ತಾಗಲಿಲ್ಲ, ನಿನ್ನ ಗಂಡಂದಿರೆಲ್ಲಾ ಚೆನ್ನಾಗಿದ್ದಾರಾ?

***

ಬಿಟ್ಟು ದೂರ ಹೋದ್ರೆ

ಶ್ರೀಮತಿ : ರೀ.. ನಾನೆಲ್ಲಾದ್ರೂ ನಿಮ್ಮನ್ನ ಬಿಟ್ಟು ದೂರ ಹೋದ್ರೆ ಏನ್ ಮಾಡ್ತೀರ?

ಗಾಂಪ: ಹಾಗೆನಾದ್ರು ಆದ್ರೆ ಪೇಪರ್ ನಲ್ಲಿ ಟಿ.ವಿ.ನಲ್ಲಿ ಹಾಕುತ್ತೇನೆ..

ಶ್ರೀಮತಿ: ಏನಂತ ಹಾಕುತ್ತೀರಾ?

ಗಾಂಪ : ನೀನು ಎಲ್ಲೇಯಿರು, ಹೇಗೇಯಿರು, ಅಲ್ಲೇಯಿರು!

***

ನಂಬಿಕೆ

ಬ್ಯಾಂಕಿನವರನ್ನು ನಂಬಿ ನಾವು ಕೋಟಿಗಟ್ಟಲೆ ಹಣ ಠೇವಣಿ ಇಡುತ್ತೇವೆ.

ನಮ್ಮನ್ನು ನಂಬದ ಅವರು 5 ರೂಪಾಯಿ ಪೆನ್ನನ್ನು ಕೂಡ ದಾರದಲ್ಲಿ ಕಟ್ಟಿ ಇಡುತ್ತಾರೆ.

***

ಯಾವಾಗ ಬುದ್ದಿ ಬರುತ್ತೋ ?                                           

ಟೊಮ್ಯಾಟೊ ಬೆಳೆಗಾರರು ಪ್ರತಿಭಟನೆ ಮಾಡ್ತಾರೆ, ಟೊಮ್ಯಾಟೊ ರಸ್ತೆಗೆ ಸುರಿತಾರೆ

ಹಾಲಿನವರು ಪ್ರತಿಭಟನೆ ಮಾಡ್ತಾರೆ, ಹಾಲನ್ನ ರಸ್ತೆಗೆ ಸುರಿತಾರೆ

ಈ ಬ್ಯಾಂಕ್ ನವರಿಗೆ ಯಾವಾಗ ಬುದ್ದಿ ಬರುತ್ತೋ ಎನೋ

***

ನನ್ ಮಗಂದ್ ... ಖುಷಿ

ಗಾಂಪ ಒಂದೇ ಉಸಿರಿನಲ್ಲಿ ಓಡಿ ಬಂದು

ಗಾಂಪ :- ಸಾರ್ ನನ್ನ ಹೆಂಡತಿ ನೆನ್ನೆ ರಾತ್ರಿಯಿಂದ ಕಾಣ್ತಾ ಇಲ್ಲ !

ಆಫೀಸರ್ :- ನಿನ್ನ ಹೆಂಡತಿ ಕಳೆದ್ ಹೊದ್ರೆ ಪೋಲಿಸ್ ಸ್ಟೇಷನ್ ಗೆ ಹೋಗಿ ಅಲ್ಲಿ ಕಂಪ್ಲೆಂಟ್ ಕೊಡು, ಪೋಸ್ಟ್ ಆಫೀಸಿಗೆ ಯಾಕ್ ಬಂದಿದ್ದೀಯಾ?

ಗಾಂಪ :- ಓ ಓ ಸಾರಿ ಸಾರ್ ನನ್ ಮಗಂದ್ ... ಖುಷಿಲಿ ಎಲ್ಲಿಗ್ ಹೋಗ್ಬೇಕು ಎನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ ಸರ್

***

ಒಂದು ರೂಪಾಯಿ

ಭಿಕ್ಷುಕಿ : ಅಣ್ಣಾ.. ಮೂರು ದಿನದಿಂದ ಊಟ ಮಾಡಿಲ್ಲ.. ಒಂದು ರೂಪಾಯಿ ಕೊಡಿ.. 

ಗಾಂಪ : ಮೂರು ದಿನದಿಂದ ಊಟ ಮಾಡಿಲ್ಲಾಂತಿಯಾ .. ಒಂದು ರೂಪಾಯಿನಲ್ಲಿ ಏನು ಮಾಡ್ತೀಯ?

ಭಿಕ್ಷುಕಿ : ಎಷ್ಟು ಕೆಜಿ ಕಮ್ಮಿ ಆಗಿದ್ದೀನಿಂತಾ ನೋಡ್ತೀನಿ..

***

ಸ್ಟೈಲ್

ಯಮ : ನೀನು ಸಿಡಿಲು ಬಡಿದು ಸತ್ತೆ ಆದರೂ...

ಗಾಂಪ : ಆದರೂ... ಏನು ಪ್ರಭು? 

ಯಮ : ಸಾಯೋವಾಗ ಯಾಕೆ ನಗ್ತಾ ಇದ್ದೆ? 

ಗಾಂಪ : ಸಿಡಿಲು ಬರುವ ಮುನ್ನ ಮಿಂಚು ಬಂತು ಯಾರೋ ಬಡ್ಡಿಮಕ್ಳು ಫೋಟೋ ತೆಗೆತಾ ಇರ್ಬೇಕು ಅಂತಾ ಸ್ಮೈಲ್ ಕೊಟ್ಟೆ ಪ್ರಭು

(ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ