ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಇವುಗಳದೇ ಪ್ರಾಬಲ್ಯ
1 day 14 hours ago - Shreerama Diwana
ರಾಜಕೀಯ ಮತ್ತು ಆಡಳಿತದಲ್ಲಿ ವಕೀಲಿಕೆ ಎಂಬ ವಾದ ಪ್ರತಿವಾದಗಳ ಮಂಕುಬೂದಿ. ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಇವುಗಳದೇ ಪ್ರಾಬಲ್ಯ ವಕೀಲಿಕೆಯ ನೆರಳಲ್ಲಿ ಆರೋಪ ಪ್ರತ್ಯಾರೋಪಗಳಿಂದ ಪಲಾಯನ ಮಾಡುವ ಕುತಂತ್ರ ರಾಜಕಾರಣಕ್ಕೆ ನಾವುಗಳು ಮೂಕ ಪ್ರೇಕ್ಷಕರಾಗಿ ಸಾಕ್ಷಿಯಾಗುವ ದುರಂತ ವ್ಯವಸ್ಥೆಯಲ್ಲಿ ನಾವಿದ್ದೇವೆ. ವಕೀಲಿಕೆ ಎಂದರೆ, ತಾವು ಮಾಡುವ ಕೆಲಸಗಳನ್ನು ದಾಖಲೆಗಳ ಸಮೇತ ನಿರೂಪಿಸುವ ಅಥವಾ ಸಮರ್ಥಿಸಿಕೊಳ್ಳುವ ಒಂದು ವಿಧಾನ. ಸಾಮಾನ್ಯವಾಗಿ ಒಳ್ಳೆಯ ಕೆಲಸಗಳಲ್ಲಿ ವಕೀಲಿಕೆಯ ಅವಶ್ಯಕತೆ ಅಷ್ಟಾಗಿ ಬರುವುದಿಲ್ಲ. ಅದನ್ನು ನಿರೂಪಿಸುವುದು ಹೆಚ್ಚು ಕಷ್ಟವಲ್ಲ. ಅದು ಸರಳವಾದ ಅರಿವಿಗೆ ನಿಲುಕುತ್ತದೆ.
ಆದರೆ ನಿಜವಾದ ವಕೀಲಿಕೆಯ ಉಪಯೋಗ ಇರುವುದು ತಪ್ಪುಗಳನ್ನು ಕಾನೂನಿನ ರೀತಿಯಲ್ಲಿ ಸರಿ ಎಂದು ನಿರೂಪಿಸಬೇಕಾದ ಅನಿವಾರ್ಯತೆ ಉಂಟಾದಾಗ ಅಥವಾ ಆರೋಪಗಳು ಕೇಳಿಬಂದಾಗ. ಆಗ ವಕೀಲಿಕೆಯ ಅಂಶಗಳು ನೆರವಿಗೆ ಬರುತ್ತದೆ. ದಾಖಲೆಗಳು, ಸಾಕ್ಷಿಗಳು, ಅಂಕಿಅಂಶಗಳು, ಮಾತುಗಳ ಚಾಣಾಕ್ಯತೆ, ಸಾಂದರ್ಭಿಕ ಘಟನೆಗಳ ತಿರುಚುವಿಕೆ ಮುಂತಾದ ವಿಧಾನಗಳು ಸಾಮಾನ್ಯವಾಗಿ ಅಪರಾಧಿಗಳಿಗೆ ಅನುಕೂಲಕರವಾಗಿಯೇ ಇರುತ್ತದೆ. ಇದರ ಲಾಭವನ್ನು ನಮ್ಮನ್ನು ಆಳುತ್ತಿರುವ ಎಲ್ಲರೂ ಎಗ್ಗಿಲ್ಲದೆ ಪಡೆಯುತ್ತಿದ್ದಾರೆ.
ದೆಹಲಿಯಲ್ಲಿ ನಡೆದ ಅತ್ಯಂತ ಭೀಕರ ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲೂ ಅಪರಾಧಿಗಳ ಪರ ವಕೀಲರು ಅವರನ್ನು ನಿರಪರಾಧಿಗಳು ಎಂದೇ ಅನೇಕ ಕಾರಣಗಳನ್ನು ನೀಡಿ ಸಮರ್ಥಿಸಿದರು. ಮುಂಬಯಿ ಸ್ಪೋಟದ ಅಪರಾಧಿ ಕಸಬ್ ಪರವಾಗಿ ಸಹ ವಕೀಲಿಕೆಯಲ್ಲಿ ಆತನನ್ನು ಆರೋಪ ಮುಕ್ತಗೊಳಿಸುವ ವಾದಗಳನ್ನು ಮಂಡಿಸಲಾಯಿತು. ಎಲ್ಲೋ ಕೆಲವು ಅಪರೂಪದ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗುತ್ತದೆ.
ಆದರೆ ದೇಶದ ಬಹುತೇಕ ಎಲ್ಲಾ ಪ್ರಕಾರದ ಅಪರಾಧಗಳು ಸಾಬ… ಮುಂದೆ ಓದಿ...