ತಾಯ ಗರ್ಭದಿಂದುದಿಸಿದ ಕ್ಷಣದಿಂದ…
ಕರುಳು ಬಳ್ಳಿ ಕತ್ತರಿಸಿದ ಘಳಿಗೆಯಿಂದ, ಅಂತರಂಗದ ಅರಿವಿನೊಂದಿಗೆ ಬೆಳೆಯತೊಡಗಿದೆ.
- Read more about ತಾಯ ಗರ್ಭದಿಂದುದಿಸಿದ ಕ್ಷಣದಿಂದ…
- Log in or register to post comments
ಕರುಳು ಬಳ್ಳಿ ಕತ್ತರಿಸಿದ ಘಳಿಗೆಯಿಂದ, ಅಂತರಂಗದ ಅರಿವಿನೊಂದಿಗೆ ಬೆಳೆಯತೊಡಗಿದೆ.
ಮನೆ ಕಟ್ಟುವಾಗ ರಾಮರಾಯರು ತುಂಬಾ ಯೋಚನೆ ಮಾಡಿ ಆಯಪಾಯ ನೋಡಿ ವಾಸ್ತು ಪ್ರಕಾರವೇ ಗಟ್ಟಿಯಾಗಿ ಕಟ್ಟಿದ್ದರು. ಮನೆ ಮುಂದೆ ಒಂದಿಷ್ಟು ಜಾಗ ಮಕ್ಕಳಿಗೆ ಆಡುವುದಕ್ಕೆ ಅಂತಲೇ ವಿಶಾಲವಾದ ಅಂಗಳ, ಮನೆಯ ಪಕ್ಕದಲ್ಲಿ ಒಂದು ಕೊಟ್ಟಿಗೆ, ಅದರಲ್ಲಿ ಒಂದಷ್ಟು ದನಕರು. ಇಡೀ ಮನೆಯವರೆಲ್ಲರೂ ಒಟ್ಟಾಗಿ ಬದುಕುವುದಕ್ಕೆ ರೂಪಿತವಾದ ಮನೆಯದು.
ಇವತ್ತಿನ ಹಕ್ಕಿ ಕಥೆಯಲ್ಲಿ ಒಂದು ವಿಶಿಷ್ಟವಾದ ಹಕ್ಕಿಯ ಪರಿಚಯ ಮಾಡಿಕೊಳ್ಳೋಣ. ಕಳೆದವರ್ಷ ಸುಮಾರು ಇದೇ ಸಮಯಕ್ಕೆ ನಾನೊಂದು ಕಡೆ ಪ್ರವಾಸ ಹೋಗಿದ್ದೆ. ನಾನು ಹೋದ ಹಳ್ಳಿಯ ಹೆಸರು ಅಂಕಸಮುದ್ರ. ಅರಬ್ಬೀ ಸಮುದ್ರದ ಹತ್ತಿರ ವಾಸಿಸುವ ನನಗೆ ಅಂಕಸಮುದ್ರ ಎಂಬ ಹೆಸರು ಬಹಳ ಕುತೂಹಲ ಮೂಡಿಸಿತ್ತು.
ಮದಿರೆಯ ಜೊತೆಗೇ ನಾಟ್ಯವಾಡಲು ನನ್ನವಳಿಲ್ಲ
ಭಾರತದ ಬಹಳಷ್ಟು ಮಧ್ಯಮ ವರ್ಗದ ಜನರಲ್ಲಿ ಜೀವನೋತ್ಸಾಹ ಕಡಿಮೆಯಾಗುತ್ತಿದೇಯೇ ಎಂಬ ಅನುಮಾನ ಶುರುವಾಗಿದೆ.
ಅದ್ಭುತವಾದ ರಥ ನಮ್ಮನ್ನ ದಾಟಿಕೊಂಡು ಮುಂದೆ ಹೋಗಿಬಿಟ್ಟಿದೆ. ಆ ರಥ ನಮ್ಮ ಬಳಿಗೆ ಬರುವವರೆಗೆ ನಾವು ಕಾಯಬೇಕಿತ್ತು. ಅದ್ಬುತವಾಗಿ ಸಿಂಗಾರಗೊಂಡ ರಥದ ಹಿಂದೆ ಹಲವು ಜನರ ಪರಿಶ್ರಮವಿದೆ. ರಥ ಅಷ್ಟು ಸಾಮರ್ಥ್ಯವನ್ನು ತಾಳಿಕೊಂಡ ಕಾರಣ ಎಲ್ಲರ ಮುಂದೆ ವೈಭವದಿಂದ ದಾಟಿ ಮುಂದುವರೆಯುತ್ತಿದೆ. ಎಲ್ಲರೂ ಕೈಮುಗಿಯುತ್ತಾರೆ. ಗೌರವಿಸುತ್ತಾರೆ ಭಕ್ತಿಯಿಂದ ನಮಿಸುತ್ತಾರೆ.
ಒಂದು ಕಾಲಕ್ಕೆ ‘ಹೊಸ ಅಲೆ’ ಚಿತ್ರಗಳ ಮೂಲಕ ಒಂದಿಡೀ ಭಾರತೀಯ ಚಿತ್ರರಂಗವು ಕರ್ನಾಟಕದೆಡೆಗೆ ತಿರುಗುವಂತೆ ಮಾಡಿದ್ದು ಕನ್ನಡ ಚಿತ್ರರಂಗ. ‘ಸಂಸ್ಕಾರ, ಫಣಿಯಮ್ಮ, ಗ್ರಹಣ, ಘಟಶ್ರಾದ್ಧ, ಬರ’ ಇತ್ಯಾದಿ ಚಿತ್ರಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಇವನ್ನು ಹೊರತು ಪಡಿಸಿದರೆ ವಾಣಿಜ್ಯಿಕ ನೆಲೆಯ ಚಿತ್ರಗಳ ವಿಷಯದಲ್ಲೂ ಕನ್ನಡ ಚಿತ್ರರಂಗ ಹೆಸರು ಮಾಡಿದ್ದಿದೆ.
ಸುತ್ತಲೂ ದಟ್ಟ ಹಸಿರು ಹೊದಿಕೆಯ ಗುಡ್ಡಬೆಟ್ಟಗಳು, ನದಿ ತೊರೆಗಳ ಕಲರವ, ಕೊನೆಗೆ ಈ ಸ್ಥಳಕ್ಕೆ ಬರುವ ಪಯಣವೇ ಒಂದು ಚಾರಣ. ಇಂತಹ ಸಂಕೀರ್ಣ ಸೌಲಭ್ಯದ ಭೀಮಲಿಂಗೇಶ್ವರ ದೇವಸ್ಥಾನ ಸಾಗರ ತಾಲೂಕಿನ ಕೋಗಾರು ಎಂಬ ಪುಟ್ಟ ಹಳ್ಳಿಯ ಸಮೀಪದಲ್ಲಿದೆ.
ಅಮ್ಮನ ಗುಣದವರು
ಪ್ರೀತಿಯಲ್ಲಿ ಶ್ರೇಷ್ಠರು
ಮಕ್ಕಳ ಜೊತೆ ಮಕ್ಕಳಾಗಿ ಬೆರತವರು
ಅವರೇ ನನ್ನ ಶಿಕ್ಷಕರು!
ಈ ಜಗದಲ್ಲಿ ತಲೆಯೆತ್ತಿ ನಡೆಯಲು ಕಳಿಸಿ
ಅಜ್ಞಾನವ ಹೊಡೆದೋಡಿಸಿ
ಜ್ಞಾನದ ಬೀಜ ಬಿತ್ತಿದವರು
ಅವರೇ ನನ್ನ ಶಿಕ್ಷಕರು!
ನನ್ನ ಜೀವನದ ಬೆಳಕಾಗಿ
ಪ್ರತಿನಿತ್ಯ ಪೂಜಿಸುವ ದೇವರ ಸ್ವರೂಪವಾಗಿ
ಕಣ್ಣಿಗೆ ಕಾಣುವ ದೇವರಾದವರು
ಅವರೇ ನನ್ನ ಶಿಕ್ಷಕರು!
ತಾಯಿಯಂತೆ ಪ್ರೀತಿಸುತ್ತಾ
ತಂದೆಯಂತೆ ಘರ್ಜಿಸುತ್ತಾ
ನನ್ನಲ್ಲಿ ಕನಸು ಕಾಣುವ ಹುಮ್ಮಸ್ಸನ್ನು ಹೆಚ್ಚಿಸುತ್ತಾ ಇರುವವರೇ
ಅವರೇ ನನ್ನ ಶಿಕ್ಷಕರು!