ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸೌಂದರ್ಯ ಸ್ಪರ್ಧೆ- ಹೀಗೂ ಉಂಟೆ?

ಇದೊಂದು ವಿಶಿಷ್ಟ ರೀತಿಯ ಸೌಂದರ್ಯ ಸ್ಪರ್ಧೆ.

ಆಫ್ರಿಕಾದ ಅಂಗೋಲಾದಲ್ಲಿ 1961ರ ಇಸವಿಯಲ್ಲಿ ಆರಂಭವಾಗಿ ನಲವತ್ತು ವರ್ಷಗಳ ಕಾಲ ನಡೆದ ಅಂತರ್ಯುಧ್ಧದ ಸಮಯದಲ್ಲಿ ಅನೇಕ ಲ್ಯಾಂಡ್‍ಮೈನ್‍ಗಳನ್ನು ದೇಶದ ಎಲ್ಲೆಡೆ ಅಳವಡಿಸಲಾಯಿತು. ಇದರ ಪರಿಣಾಮ ಈಗಲೂ ಜನರು ತಮ್ಮ ಅಂಗಾಂಗಗಳನ್ನೋ ಪ್ರಾಣಗಳನ್ನೋ ಕಳೆದುಕೊಳ್ಳುತ್ತಿದ್ದಾರೆ.

ಡಫೊಡಿಲ್ಸ್

DSC_0501.JPG

ಈ ಸಮಯದಲ್ಲಿ ಯುಕೆ ಯಲ್ಲಿ ಭೂಮಿಯೊಳಗಿಂದ ಗಡ್ಡೆಗಳು ಚಿಗುರಿ, ಗಿಡಗಳು ಹೊರಬಂದು ಹಳದಿ ಬಣ್ಣದ ಒಂದು ಜಾತಿಯ ಹೂಗಳು ಗುಂಪು ಗುಂಪಾಗಿ ಅರಳುತ್ತವೆ. ನನಗೆ ಇವುಗಳ ಹೆಸರೇನೆಂದು ಗೊತ್ತಿರಲಿಲ್ಲ.

ಬೆಳೆಯಬೇಕಿದೆ ಕನ್ನಡ ‘ಬರಹ-ನುಡಿ’ ಯಿಂದಾಚೆಗೆ!

(ನಾಗೇಶ್ ಹೆಗಡೆಯವರ ಸಂಪದ ಪಾಡ್‍ಕ್ಯಾಸ್ಟ್ ಸಂದರ್ಶನ ಕೇಳಿದ ನಂತರ, ಡಿಜಿಟಲ್ ಡಿವೈಡ್ ಮತ್ತು ಕಂಪ್ಯೂಟರಿನಲ್ಲಿ ಕನ್ನಡದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದೆ. ನಾಲ್ಕು ವರ್ಷಗಳ ಹಿಂದೆ ದಟ್ಸ್‌ಕನ್ನಡ.ಕಾಮಿನಲ್ಲಿ ಬರೆದ ಈಗಿನ ಈ ಸದರಿ ಲೇಖನ ಮತ್ತೆ ಆ ವಿಚಾರದ ಚರ್ಚೆಗೆ ಸೂಕ್ತ ಮತ್ತು ಆಗಿನ ಎಷ್ಟೋ ವಿಚಾರಗಳು ಈಗಲೂ ಪ್ರಸ್ತುತ ಎನ್ನಿಸಿದ್ದರಿಂದ ಇಲ್ಲಿಯೂ ಅಪ್‍ಲೋಡ್ ಮಾಡುತ್ತಿದ್ದೇನೆ. - ರವಿ - ಮಾರ್ಚ್ 4, 2008)

[ಕಂಪ್ಯೂಟರ್‌ನಲ್ಲಿ ಕನ್ನಡದ ಸಾಧ್ಯತೆಗಳ ವಿಸ್ತರಿಸಬೇಕಾಗಿದ್ದ ‘ಕಗಪದ’ ತೌಡು ಕುಟ್ಟುವ ಕೆಲಸ ಮಾಡುತ್ತಿದ್ದರೆ, ತನ್ನ ಯಾವತ್ತಿನ ದಿವ್ಯ ಉದಾಸೀನದಲ್ಲಿ ಕನ್ನಡಿಗ ಮುಳುಗಿಹೋಗಿದ್ದಾನೆ. ಇಂಥದೊಂದು ಸಂಧಿಕಾಲದಲ್ಲಿ , ಕನ್ನಡ ತಂತ್ರಾಂಶದ ಕುರಿತು ಸದ್ಯದ ವಿರೋಧಾಭಾಸಗಳು ಹಾಗೂ ಆಗಬೇಕಾದ ಕೆಲಸಗಳ ಕುರಿತು ಒಂದು ಅವಲೋಕನ. - ಜನವರಿ 9, 2004 - ದಟ್ಸ್‌ಕನ್ನಡ.ಕಾಮ್]

ಸಾವಿರಾರು ಜನ ಅಂತರ್ಜಾಲದ ಕನ್ನಡ ಪ್ರೇಮಿಗಳು ಸಕ್ರಿಯವಾಗಿರುವ ಯಾಹೂ ಗ್ರೂಪ್‌ಗಳಲ್ಲಿ ಕಳೆದ ಹದಿನೈದಿಪ್ಪತ್ತು ದಿನಗಳಿಂದ ಒಂದು ವಿಷಯದ ಮೇಲೆ ಕೆಂಡಾಮಂಡಲ ಚರ್ಚೆ ನಡೆಯುತ್ತಿದೆ; ವೈಯುಕ್ತಿಕ ಆರೋಪಗಳಿಂದ ಹಿಡಿದು ಕನ್ನಡದ ಸಾರ್ವಜನಿಕ ಹಿತಾಸಕ್ತಿಯವರೆಗೂ ಸಾಗಿದೆ ಈ ಚರ್ಚೆ. ಚರ್ಚೆಯ ವಸ್ತು : ‘ಕನ್ನಡ ಗಣಕ ಪರಿಷತ್ತು’ ; ಕನ್ನಡದ ‘ನುಡಿ’ ತಂತ್ರಾಂಶದ ತಯಾರಕರು.

‘ನುಡಿ’ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಉಚಿತ ತಂತ್ರಾಂಶ. ಇಲ್ಲಿಯವರೆಗೆ ತಮ್ಮ ಸೇವೆಗೆ ಸರ್ಕಾರದಿಂದ ಸುಮಾರು 30 ಲಕ್ಷ ರೂಪಾಯಿಗಳಷ್ಟು ಅನುದಾನ ಪಡೆದಿರುವ ಈ ಸಂಸ್ಥೆ ಈ ಮಧ್ಯೆ ಕನ್ನಡ ತಂತ್ರಾಂಶ ಅಭಿವೃದ್ಧಿಯ ಕೆಲಸ ಬಿಟ್ಟು ಬೇರೆ ಯಾರೂ ಮಾಡಬಹುದಾದ ಕೇವಲ Data Entry ಕೆಲಸ ಮಾಡುತ್ತಿದೆ ಎನ್ನುವುದು ಕೆಲವರ ಆರೋಪ. ಇದೇ ವಿಷಯದ ಮೇಲೆ ಮೇ 25ರಂದು ಮೈಸೂರಿನಲ್ಲಿ ಗಣಕಯಂತ್ರವನ್ನು ಉಪಯೋಗಿಸುವ ಪರಿಣತಿ ವರ್ಷಗಳ ಹಿಂದಿನಿಂದಲೇ ಇರುವ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಆಗ್ರಹದ ಮೇರೆಗೆ ಒಂದು ಸಭೆ ಏರ್ಪಾಟಾಗಿತ್ತು. ತೇಜಸ್ವಿ, ಪ್ರೊ.ಲಿಂಗದೇವರು ಹಳೆಮನೆ, ಕಗಪದ ಮಾಜಿ-ಹಾಲಿಗಳಾದ ಪವನಜ, ಶ್ರೀನಾಥಶಾಸ್ತ್ರಿ ಮುಂತಾದವರ ನಡುವೆ ಒಂದು ದಿನಪೂರ್ತಿಯ ಚರ್ಚೆ ನಡೆಯಿತು. ಈ ಸಭೆಯಲ್ಲಿ ಕೇವಲ ತೌಡು ಕುಟ್ಟುವ ಕೆಲಸವಷ್ಟೇ ನಡೆಯಿತು, ಮತ್ತೇನೇನೂ ಪ್ರಯೋಜನವಾಗಲಿಲ್ಲ ಎನ್ನುವ ಸಂಗತಿ ಸಾರ್ವತ್ರಿಕವಾಯಿತು...

ಇವೆಲ್ಲವುಗಳ ಹಿನ್ನೆಲೆಯಲ್ಲಿ ಕಗಪದ ( ಕನ್ನಡ ಗಣಕ ಪರಿಷತ್‌) ಇತ್ತೀಚಿನ ಯೋಜನೆಗಳು ಸಹ ಅವರಿಗೆ ಅಂತಹ ಕ್ರೆಡಿಬಿಲಿಟಿ ಕೊಡುವಂತಹವುದಲ್ಲ. ಈ ಮಧ್ಯೆ ಅವರು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಇನ್ನೊಂದು ಖಾಸಗಿ ಸಂಸ್ಥೆಯಾಂದಿಗೆ ಸಹಭಾಗಿತ್ವದಲ್ಲಿ ಕನ್ನಡ ವಿಶ್ವಕೋಶವನ್ನು CDಯಲ್ಲಿ ಹೊರತರುವ ಕೆಲಸ ಹಮ್ಮಿಕೊಂಡಿದ್ದಾರೆ. ಇಲ್ಲಿ ಕಗಪದ ಪಾತ್ರ ಅಂತಹ ದೊಡ್ಡದೇನೂ ಇದ್ದ ಹಾಗೆ ನನಗಂತೂ ಕಾಣುತ್ತಿಲ್ಲ. ವಿಶ್ವವಿದ್ಯಾನಿಲಯ ಮತ್ತು ಖಾಸಗಿ ಸಂಸ್ಥೆಯವರೇ ಇದನ್ನು ನಿಭಾಯಿಸಬಹುದು. ಆದ್ದರಿಂದಾಗಿಯೇ, "ಇಂಥ DTP ಕೆಲಸವನ್ನು" ಕಗಪ ಮೊದಲ ಆದ್ಯತೆಯೆಂದು ಸ್ವೀಕರಿಸಿ ಮಾಡಬೇಕಿತ್ತೇ?’. ಈ ಪ್ರಶ್ನೆ ಹಲವರ ಬಾಯಿಂದ ಹೊರಬೀಳುತ್ತಿದೆ.

ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

ನಯಸೇನ, ದಿನಬದುಕಿನಲ್ಲಿ ತುಂಬ ಪಳಗಿದ ಹಯ್ದ ಅಂತ ತಿಳಿಸೋಕೆ ಈ ಕೆಳಗಿನ ಸಾಲುಗಳು ಮಾದರಿ

ಆಧುನಿಕ ಔದ್ಯೋಗಿಕ ಭಾರತದ ಶಿಲ್ಪಿ , ಅಪ್ರತಿಮ ದೇಶಪ್ರೇಮಿ - ಶ್ರೀ ಜಮ್‍ಷೆಡ್ಜಿ ಟಾಟಾ.

- ನವರತ್ನ ಸುಧೀರ್

3rd March 2008 - ಶ್ರೀ  ಜಮ್‍ಷೆಡ್ಜಿ ಟಾಟಾ ಅವರ 169ನೇ ಜನ್ಮದಿನ. ಭಾರತೀಯ ವಿಜ್ನಾನ ಸಂಸ್ಥೆ ಮತ್ತು ಟಾಟಾ ಸಂಸ್ಥೆಗಳ Founders Day. 2008-2009 ಭಾರತೀಯ ವಿಜ್ನಾನ ಸಂಸ್ಥೆಯ ಶತಮಾನೋತ್ಸವ ವರ್ಷ ಕೂಡ.

ಯಾರೋ

ಇಂದು ಅಳುವವರು ಯಾರೋ
ಅಂದು ಜೋತೆಗಿದ್ದವರು ಯಾರೋ
ಸಣ್ಣ ಗಾಯದ ನೋವಿಗೆ ವಿಷವಿಟ್ಟವರು ಯಾರೋ
ಬೆಂದ ದೇಹದ ಮೇಲೆ ಕಂಬಳಿ ಹೊದಿಸಿದವರು ಯಾರೋ
ಇಂದು ಕೊರಗುವವರು ಯಾರೋ
ಅಂದು ಮೆಚ್ಚಿದವರು ಯಾರೋ
ಕಣ್ಣಮುಂದೆ ಕನಸು ತಂದುಕೊಟ್ಟವರು ಯಾರೋ
ಪ್ರೀತಿಗೆ ಅನುಮಾನ ತಂದು ಇಟ್ಟವರು ಯಾರೋ
ಇಂದು ಪ್ರೀತಿ ಮರೆತಿರುವವರು ಯಾರೋ
ಮುಂದೆ ನೆನಪಲ್ಲಿ ಉಳಿಯುವವರು ಯಾರೋ

ಕೆಪಸಿಟರ್

MOSFET ಹೇಗೆ ಕೆಲ್ಸ ಮಾಡುತ್ತೆ ( ಸ್ವಿಚಿಂಗ್ ಹೇಗೆ ನಡೆಯುತ್ತೆ) ಅಂತ ಅರ್ಥ ಆಗ್ಬೇಕು ಅಂದ್ರೆ ನಾವು ಮೊದ್ಲು ಕೆಪಸಿಟರ್ ಅಂದ್ರೆ ಏನು , ಹೇಗೆ ಕೆಲ್ಸ ಮಾಡುತ್ತೆ ಅಂತ ತಿಳ್ಕೊಬೇಕು!

ಕೆಪಸಿಟರ್ ಸ್ವಲ್ಪ ಬ್ಯಾಟರಿ ತರ. ಕೆಲಸ ಮಾಡೋ ರೀತಿ ಬೇರೆ ಬೇರೆ ಆದರೂ , ಇವೆರಡೂ ಸಹ ಎಲೆಕ್ಟ್ರಿಕಲ್ ಚಾರ್ಜ್ ಅನ್ನು ಬಂಧಿಸಿಡುವ ಸಾಧನಗಳು.

ಬಳ್ಳಿಗಾವಿಯ ದೇವಾಲಯಗಳು

ಸ್ಥಳ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳಿಗಾವಿ.

ಕಲ್ಯಾಣಿ ಚಾಲುಕ್ಯರ ದಕ್ಷಿಣ ಭಾಗದ ನಾಡಿನ ರಾಜಧಾನಿಯಾಗಿತ್ತು ಬಳ್ಳಿಗಾವಿ. ಶಿರಾಳಕೊಪ್ಪದಿಂದ ೩ ಕಿಮಿ ದೂರ ಇರುವ ಈ ಪುಟ್ಟ ಊರು ಚಾಲುಕ್ಯ ಮತ್ತು ಹೊಯ್ಸಳ ಕಾಲದ ಹಲವು ದೇವಾಲಯಗಳನ್ನು ಹೊಂದಿದೆ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿತ್ತು ಬಳ್ಳಿಗಾವಿ.