ಕೊನೆಗೂ ಕುಮಾರಸ್ವಾಮಿ ರಾಮನಗರಕ್ಕೆ ಭೇಟಿ ನೀಡಿದರು!

ಕೊನೆಗೂ ಕುಮಾರಸ್ವಾಮಿ ರಾಮನಗರಕ್ಕೆ ಭೇಟಿ ನೀಡಿದರು!

ಇತ್ತೀಚೆಗೆ ತಾನೆ ಹೇಳಿದ್ದೆ, ಚುನಾವಣೆಲಿ ಗೆದ್ದು ಬಹಳ ದಿನ ಆದ್ರು ಕ್ಶೇತ್ರದ ಶಾಸಕರು, ಮಾಜಿ ಮುಖ್ಯ ಮಂತ್ರಿಗಳು ಆದ ಹೆಚ್.ಡಿ.ಕುಮಾರ ಸ್ವಾಮಿ ಕ್ಶೇತ್ರಕ್ಕೆ ಭೇಟಿ ನೀಡಿಲ್ಲ ಅಂತ. ಕೊನೆಗೂ ೨೮ರ ಅಗಸ್ಟ್ ೨೦೦೮ರಂದು ಶಾಸಕರು ಭೇಟಿ ನೀಡಿದ್ದಾರೆ. ಅದು ಯಾತಕ್ಕೆ ಅಂತ, ಚುನಾವಣೆಲಿ ಗೆದ್ದು ೧೦೦ ದಿನ ಆದ್ರು ನಂ ಶಾಸಕರು ಈ ಕಡೆ ತಲೇ ಹಾಕ್ಲೇಇಲ್ವಲ್ಲ ಅಂತ ಕ್ಶೇತ್ರದಲ್ಲಿ ಟೀಕೆ ಜಾಸ್ತಿ ಆಯ್ತು ಅಂತ. ಟೀಕೆಗಳ ಬಗ್ಗೆ ಅವ್ರಿಗೆ ಯಾರೋ ಹೇಳಿರ್ಬೇಕು ಅದಕ್ಕೆ ಬಿಳುಗುಂಬ ಗ್ರಾಂ ಪಂಚಾಯ್ತಿ ಕಚೇರಿಯ ಹೊಸ ಅಂತಸ್ತಿನ ಕಟ್ಟಡ ಉದ್ಗಾಟನೆಗೆ ಅವ್ರು ಬಂದಿದ್ದು. ಇಲ್ಲಿ ಯಾರೋ ಹೇಳ್ತಿದ್ರು, ರೈತ್ರು ಗೊಬ್ಬರ ಬೇಕು ಅಂತ ೩ ದಿನ ಹೋರಾಟ ಮಾಡ್ದಾಗ ಬರ್ದೆ ಇದ್ದ ಶಾಸಕರು ಈಗ ಕೇವಲ ಗ್ರಾಮ ಪಂಚಾಯ್ತಿ ಉದ್ಗಾಟನೆಗೆ ಬರ್ತಾರ ಅಂತ್? ಉತ್ತರ ಕುಮಾರಸ್ವಾಮ್ಯೊರೇ ಹೇಳ್ಬೇಕು.

Rating
No votes yet

Comments