ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅನಂತಮೂರ್ತಿಯವರು ಮಾತನಾಡಬಾರದೆ?

ನಿನ್ನೆ ದಿನಾಂಕ ೨೯ರ ಸಂಜೆ ಕನ್ನಡದ ಒಬ್ಬ ಖ್ಯಾತ ಸಾಹಿತಿ, ವಿಮರ್ಶಕರೊಬ್ಬರಿಗೆ ಒಂದು ಪತ್ರಿಕೆಯವರು ಫೋನ್ ಮಾಡಿ, ಆವರಣ ಕುರಿತು ಅನಂತಮೂರ್ತಿಯವರು ಆಡಿದ ಮಾತುಗಳ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಅಂತ ಕೇಳಿದರು. ಆ ವ್ಯಕ್ತಿ ತಕ್ಷಣವೇ "ನನಗೆ ನೀವು ಅವರ ಭಾಷಣದ ಪೂರ್ಣ ಪಠ್ಯ ಒದಗಿಸಿದರೆ ನಾನದನ್ನ ಓದಿ ನನ್ನ ಅಭಿಪ್ರಾಯ ತಿಳಿಸಬಹುದೇ ಹೊರತು ಪತ್ರಿಕಾ ವರದಿಯ ಆಧಾರದ ಮೇಲೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ" ಅಂತ ಹೇಳಿದರು.

ರಾತ್ರಿ ಸಂಪದದಲ್ಲಿ ಮುಖ್ಯವಾಗಿ ಎರಡು ಬ್ಲಾಗ್‌ಗಳಲ್ಲಿ "ಅನಂತಮೂರ್ತಿಯವರ ಉಪದ್ವ್ಯಾಪಿತನ ಅತಿಯಾಯಿತು" ಅಂತ ಒಬ್ಬರು, "ಆವರಣದ ಬಗ್ಗೆ ಅನಂತಮೂರ್ತಿಯ ಅಸಂಬದ್ಧ ಪ್ರಲಾಪಗಳು" ಅಂತ ಇನ್ನೊಬ್ಬರು ಚಿಕ್ಕದಾಗಿ ಬರೆದರು. ವಾಸ್ತವವಾಗಿ ಇವರ ಬ್ಲಾಗ್‌ನಲ್ಲಿ ಅನಂತಮೂರ್ತಿಯವರ ಭಾಷಣದ ಯಾವ ನಿರ್ದಿಷ್ಟ ಅಂಶಗಳ ಕುರಿತೂ ಉಲ್ಲೇಖವಿಲ್ಲ. ಅಲ್ಲದೆ ಬ್ಲಾಗ್ ಬರೆದವರಾದರೂ, ಇವರಿಗೆ ಪ್ರತಿಕ್ರಿಯೆ ಬರೆದವರಾದರೂ ಅನಂತಮೂರ್ತಿಯವರ ಭಾಷಣವನ್ನು ತಾವೇ ಖುದ್ದಾಗಿ ಮತ್ತು ಸರಿಯಾಗಿ ಕೇಳಿದ್ದರೆ, ಅಥವಾ ಅದರ ಪೂರ್ತಿ ಪಠ್ಯವನ್ನಾದರೂ ಓದಿದ್ದರೆ ಎಂಬುದು ಅನುಮಾನ.

"ಅನಂತನ ಅವಾಂತರ"

ನಮಸ್ತೆ ಗೆಳೆಯರೆ,ಕಳೆದ ೨ ದಿನಗಳಿಂದ ಸಾಹಿತ್ಯ ಜಗತ್ತಿನಲ್ಲಿ ಮತ್ತೊಂದು ವಿವಾದ!!! ಒನ್ಸ್ ಅಗೈನ್ ಅನಂತಮೂರ್ತಿಯವರ ‍ಕೃಪಾಪೋಷಿತ!! ಬಹುಶಃ ಬಹುದಿನಗಳಿಂದ ಯಾವುದೇ ಸುದ್ದಿಯನ್ನು ಮಾಡಲಾಗದೆ ಒದ್ದಾಡಿರಬಹುದಾದ ಮೂರ್ತಿಗಳು ಶೂನ್ಯದ ಮೂಲಕವೆ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಭೈರಪ್ಪನವರಿಗೆ ಕಾದಂಬರಿ ಬರೆಯಲು ಬರುವುದಿಲ್ಲವೇ?

"ಉದಯವಾಣಿ"ಯಲ್ಲಿ ಇಂದು ಈ ವಿಷಯದ ಬಗ್ಗೆ ಮತ್ತೂರು ಕೃಷ್ಣಮೂರ್ತಿ ಬರೆದಿದ್ದಾರೆ.ನಿಮ್ಮ ಅನಿಸಿಕೆಯನ್ನೂ ಬರೆಯುವಿರಾ?
http://68.178.224.54/udayavani/showstory.asp?news=1&contentid=420458&lang=2

ಹಿತನುಡಿ

ಭೂಮಿಯ ಮೇಲಿನ ಪ್ರತಿಯೊಂದು ವಸ್ತುವೂ ಸಕ್ಕರೆ ಮರಳುಗಳ ಮಿಶ್ರಣವೇ. ಬುದ್ದಿಶಾಲಿಯಾದ ಇರುವೆಯಂತೆ ಸಕ್ಕರೆಯನ್ನು ಮಾತ್ರ ಗ್ರಹಿಸಿ ಮರಳು ಕಣಗಳನ್ನು ಬಿಟ್ಟುಬಿಡಬೇಕು.

ಕ್ರೈಸ್ತ ಕೋಲಾಟದ ಪದಗಳು

(ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯು ಇದೀಗ ಹೇಮಾವತಿ ಜಲಾಶಯದಲ್ಲಿ ಮುಳುಗಿಹೋದಿದೆ. ಕನ್ನಡ ಕ್ರೈಸ್ತರ ಪ್ರಾಚೀನ ಊರಾಗಿತ್ತು. ಅದರ ಪುನರ್ವಸತಿಯ ಊರಾದ ಜ್ಯೋತಿನಗರದಲ್ಲಿ ಈ ಕೋಲಾಟದ ಪದಗಳನ್ನು ದಾಖಲಿಸಲು ನೆರವಾದ ಕೋಲಾಟದ ತಂಡದವರಿಗೆ ಧನ್ಯವಾದಗಳನ್ನು ಸೂಚಿಸುತ್ತಾ ಇಲ್ಲಿ ಪ್ರಕಟಿಸುತ್ತಿದ್ದೇನೆ.

ಗಿಬ್ರಾನನ ಜೀಸಸ್

"ನನ್ನಯ ಬಾಳಿನಲ್ಲಿ ಜೀವಿಸುವುದು ನಾನಲ್ಲ, ಯೇಸುವೆ ನನ್ನಲಿ ಜೀವಿಸುತ್ತಾರಲ್ಲ" ಎಂದೊಬ್ಬ ಕವಿಹೃದಯಿ ಹಾಡಿದ್ದಾನೆ. ಇಂಥದೇ ಧ್ವನಿಯ ಒಂದು ಕವಿಹೃದಯ ಇಪ್ಪತ್ತನೇ ಶತಮಾನದ ಪ್ರಾರಂಭಕಾಲದಲ್ಲಿ ಯೇಸುಕ್ರಿಸ್ತನು ನೆಲೆಸಿದ ದೇಶಕ್ಕೆ ಸಮೀಪದ ಲೆಬನಾನ್ ಎಂಬ ನಾಡಲ್ಲಿ ನೆಲೆಸಿತ್ತು. ಕಹ್ಲಿಲ್ ಗಿಬ್ರಾನ್ ಎಂಬ ಆ ಕವಿಚೇತನ ಯೇಸುವಿನ ನಡೆನುಡಿಯನ್ನು ಆತನ ಸಮಕಾಲೀನರಿಂದ ಸುಶ್ರಾವ್ಯವಾದ ಮಂಜುಳ ನಿನಾದದಂತೆ ಹೇಳಿಸಿದ್ದಾನೆ. ಒಂದು ರೀತಿಯಲ್ಲಿ ಯೇಸುವನ್ನು ನೋಡದೆ, ಯೇಸುವನ್ನು ಸ್ಪರ್ಶಿಸದೆ ಕೇವಲ ಅವನ ಬಟ್ಟೆಯಂಚನ್ನು ಮುಟ್ಟಿ ಪರಮಪಾವನನಾದಂತೆ ಆ ಎಪ್ಪತ್ತು ವ್ಯಕ್ತಿಗಳ ಮುಖಾಂತರ ಯೇಸುವಿನ ವ್ಯಕ್ತಿತ್ವವನ್ನು ಸ್ವತಃ ಅನುಭವಿಸುತ್ತಾನೆ, ಯೇಸುವನ್ನೇ ತನ್ನಲ್ಲಿ ಧರಿಸುತ್ತಾನೆ.

ಗಿಬ್ರಾನನ ಜೀಸಸ್

ಪುಸ್ತಕದ ಲೇಖಕ/ಕವಿಯ ಹೆಸರು
ಕಹ್ಲಿಲ್ ಗಿಬ್ರಾನ್

"ನನ್ನಯ ಬಾಳಿನಲ್ಲಿ ಜೀವಿಸುವುದು ನಾನಲ್ಲ, ಯೇಸುವೆ ನನ್ನಲಿ ಜೀವಿಸುತ್ತಾರಲ್ಲ" ಎಂದೊಬ್ಬ ಕವಿಹೃದಯಿ ಹಾಡಿದ್ದಾನೆ. ಇಂಥದೇ ಧ್ವನಿಯ ಒಂದು ಕವಿಹೃದಯ ಇಪ್ಪತ್ತನೇ ಶತಮಾನದ ಪ್ರಾರಂಭಕಾಲದಲ್ಲಿ ಯೇಸುಕ್ರಿಸ್ತನು ನೆಲೆಸಿದ ದೇಶಕ್ಕೆ ಸಮೀಪದ ಲೆಬನಾನ್ ಎಂಬ ನಾಡಲ್ಲಿ ನೆಲೆಸಿತ್ತು. ಕಹ್ಲಿಲ್ ಗಿಬ್ರಾನ್ ಎಂಬ ಆ ಕವಿಚೇತನ ಯೇಸುವಿನ ನಡೆನುಡಿಯನ್ನು ಆತನ ಸಮಕಾಲೀನರಿಂದ ಸುಶ್ರಾವ್ಯವಾದ ಮಂಜುಳ ನಿನಾದದಂತೆ ಹೇಳಿಸಿದ್ದಾನೆ. ಒಂದು ರೀತಿಯಲ್ಲಿ ಯೇಸುವನ್ನು ನೋಡದೆ, ಯೇಸುವನ್ನು ಸ್ಪರ್ಶಿಸದೆ ಕೇವಲ ಅವನ ಬಟ್ಟೆಯಂಚನ್ನು ಮುಟ್ಟಿ ಪರಮಪಾವನನಾದಂತೆ ಆ ಎಪ್ಪತ್ತು ವ್ಯಕ್ತಿಗಳ ಮುಖಾಂತರ ಯೇಸುವಿನ ವ್ಯಕ್ತಿತ್ವವನ್ನು ಸ್ವತಃ ಅನುಭವಿಸುತ್ತಾನೆ, ಯೇಸುವನ್ನೇ ತನ್ನಲ್ಲಿ ಧರಿಸುತ್ತಾನೆ.

ಮಾತು

ಸಂಸ್ಕೃತದಲ್ಲಿ ಒಂದು ಹೇಳಿಕೆ ಇದೆ: ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಬಹಿರ್ಮುಖಂ... ಅಂದರೆ ಚಿನ್ನದ ಒಂದು ಪಾತ್ರೆಗೆ ಚಿನ್ನದ ಮುಸುಕು ಹಾಕಿಡಲಾಗಿದೆ. ಅದಕ್ಕೆ ಸತ್ಯ ಎಂದು ಹೆಸರಿಡಲಾಗಿದೆ. ಸತ್ಯವನ್ನು ಕಾಣಬಯಸುವವರು ಹತ್ತಿರ ಬಂದು ಮುಸುಕು ತೆಗೆದು ನೋಡಿ ಏನೂ ಇಲ್ಲ ಎನ್ನುತ್ತಾರೆ. ಮಾನವರ ಸ್ವಭಾವವೇ ಹಾಗೆ.