ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಿ ಆರ್ ವಿಶ್ವನಾಥ್ ಅಧ್ಯಕ್ಷರಾದರೆ...

ಜಿ.ಆರ್.ವಿಶ್ವನಾಥ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿಲ್ಲುತ್ತಾರಂತೆ ಎಂಬ ಸುದ್ದಿ ತಿಳಿದು ಸ್ವಲ್ಪ ಗಲಿಬಿಲಿಯುಂಟಾಯಿತು.

ಅಲ್ಲಿರುವ ಕೊಳಕು ರಾಜಕೀಯ, ಕೆಟ್ಟಿರುವ ವ್ಯವಸ್ಥೆ ಇತ್ಯಾದಿ ವಿಶ್ವನಾಥ್ ಗೆ ಸಲ್ಲದ್ದು. ಹಾಗಿರುವಾಗ ’ನಾನು ಈಗಾಗಲೇ ಉಪಾಧ್ಯಕ್ಷನಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದರಲ್ಲಿ ಏನು ತಪ್ಪು?’ ಎಂಬುದು ವಿಶಿ ಪ್ರಶ್ನೆ. ಈಗಾಗಲೇ ಒಡೆಯರ್ ಈ ಸ್ಥಾನಕ್ಕೆ ತನ್ನ ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಹಾಲಿ ಅಧ್ಯಕ್ಷ ಬೃಜೇಶ್ ಪಟೇಲ್ ಮತ್ತು ಒಡೆಯರ್ ಒಬ್ಬರ ಮೇಲೊಬ್ಬರು ಕೆಸರು ಎರಚಾಟ ಮಾಡಿಕೊಳ್ಳುತ್ತಾ ಇರುವಾಗ ವಿಶಿಯ ಹೇಳಿಕೆ ಅಚ್ಚರಿ ಹುಟ್ಟಿಸಿದೆ.

ಎಲ್ಲಾ ರೀತಿಯಿಂದಲೂ ಇದೊಂದು ’ಪಟೇಲ್ ಪ್ಲ್ಯಾನ್’ ಎಂದೆನಿಸದೆ ಇರದು. ಜಗಮೋಹನ್ ದಾಲ್ಮಿಯಾ ಗುಂಪಿನೊಂದಿಗೆ ತನ್ನನ್ನು ಗುರುತಿಸಿಕೊಂಡಿ(ರುವ)ದ್ದ ಪಟೇಲ್, ಈಗ ಅಧಿಕಾರದಲ್ಲಿರುವ ಶರದ್ ಪವಾರ್ ಗುಂಪಿಗೆ ಆತ್ಮೀಯರಲ್ಲ. ಪವಾರ್ ಗುಂಪು ಕೂಡಾ ತನ್ನ ವಿರೋಧಿ ದಾಲ್ಮಿಯಾಗೆ ಆತ್ಮೀಯರಾಗಿದ್ದ ಪಟೇಲ್ ರನ್ನು ದೂರವಿರಿಸಿದ್ದು, ಅವರ ನೇತೃತ್ವದ ಕರ್ನಾಟಕ ಕ್ರಿಕೆಟ್ ಮಂಡಳಿಗೆ ಯಾವುದೇ ಅಂತರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ತಾನು ಅಧಿಕಾರಕ್ಕೆ ಬಂದ ನಂತರ ನೀಡಿಲ್ಲ. ಹಾಗಾಗಿ ಪವಾರ್ ಅಧ್ಯಕ್ಷರಾದ ನಂತರ ಬೆಂಗಳೂರಿಗೆ ಯಾವುದೇ (ಹೆಚ್ಚಿನ) ಅಥವಾ ಪ್ರಮುಖ ಪಂದ್ಯಗಳನ್ನು ನೀಡಿಲ್ಲ.

ಈಗ ಎಲ್ಲಾ ರಾಜ್ಯದ ಕ್ರಿಕೆಟ್ ಮಂಡಳಿಗಳು ಪವಾರ್ ಗುಂಪನ್ನು ಓಲೈಸುವುದರ ಸಲುವಾಗಿ ತಮಗಿಷ್ಟವಿದ್ದು ಅಥವಾ ಇಷ್ಟವಿಲ್ಲದೆಯೂ ಸ್ವಾಭಾವಿಕವಾಗಿಯೇ ದಾಲ್ಮಿಯಾ ವಿರೋಧಿ ನಿಲುವನ್ನು ತಾಳಿಕೊಂಡಿವೆ. (ಕಟಕ್ ನಂತಹ ಸ್ಥಳಕ್ಕೆ ೨ ಪಂದ್ಯಗಳನ್ನು ಕೊಡಲಾಗಿದೆ ಎಂದರೆ, ಹೀಗೆ ಒಂದು ಗುಂಪನ್ನು ಓಲೈಸುವುದರಲ್ಲಿ ಅದೆಂತಹ ಲಾಭವಿದೆ ಎಂಬುದರ ಅರಿವಾಗುವುದು). ಮೊನ್ನೆ ಬೆಂಗಳೂರಿನಲ್ಲಿ ಕರ್ನಾಟಕ ಕ್ರಿಕೆಟ್ ಮಂಡಳಿ ಆಯೋಜಿಸಿದ ಭರ್ಜರಿ ಸಮಾರಂಭವೊಂದರಲ್ಲಿ ’ಕರ್ನಾಟಕಾಸ್ ಲೆಜೆಂಡ್ಸ್’ ಎಂದು ವಿಶಿ, ಬಿನ್ನಿ, ಪ್ರಸನ್ನ, ಚಂದ್ರಶೇಖರ್ ಮತ್ತು ಕಿರ್ಮಾನಿಯವರನ್ನು ಮೈಸೂರು ಪೇಟ ತೊಡಿಸಿ, ಅವರೊಂದಿಗೆ ಭಾರತಕ್ಕಾಗಿ ಆಡಿದ ಪ್ರಮುಖ ಆಟಗಾರರನ್ನು ಭಾರತದೆಲ್ಲೆಡೆಯಿಂದ ಆಮಂತ್ರಿಸಿ, ಸ್ವತಹ ಪವಾರ್ ರನ್ನೇ ಆಮಂತ್ರಿಸಿ ಅವರಿಂದಲೇ ಸನ್ಮಾನ ನಡೆಸಿದ್ದು ಪವಾರ್ ಗುಂಪಿಗೆ ಮತ್ತಷ್ಟು ಸನಿಹವಾಗಲು ವಿನಹಾ ಬೇರೆ ಯಾವುದೇ ಕಾರಣಕ್ಕಲ್ಲ. ಈ ಐವರು ಈಗಷ್ಟೇ ’ಲೆಜೆಂಡ್ಸ್’ ಆದವರಲ್ಲ. ಪಟೇಲ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿಯುವ ಎಷ್ಟೋ ವರ್ಷಗಳ ಮೊದಲೇ ’ಲೆಜೆಂಡ್ಸ್’ ಅನಿಸಿಕೊಂಡವರು. ಈ ಸನ್ಮಾನ ಬಹಳ ಮೊದಲೇ ನಡೆಯಬೇಕಿತ್ತು. ಎಲ್ಲಾ ಪಟೇಲ್ ನಾಟಕ.

ಕ್ರಿಕೆಟ್ ವಿಶ್ವಕಪ್ ೨೦೦೭ - ಮೊದಲ ಸುತ್ತಿನ ವೇಳಾಪಟ್ಟಿ - ಕನ್ನಡದಲ್ಲಿ

ಆತ್ಮೀಯ ಸಂಪದಿಗರೇ,

ಇಂದಿನಿಂದ ಕ್ರಿಕೆಟ್ ವಿಶ್ವಕಪ್ - ೨೦೦೭ ಪ್ರಾರಂಭವಾಗಲಿದೆ. ನಮ್ಮವರು ಗೆಲ್ಲುತ್ತಾರೋ ಇಲ್ಲವೋ ಅದು ಎರಡನೆಯ ಮಾತು. ಆದರೆ "ಗೆಲ್ರೋ ಅಣ್ಣಾ" ಅಂತ ಹಾರೈಸುವದನ್ನಂತೂ ನಾನು ಬಿಡುವುದಿಲ್ಲ. ನಿಮ್ಮೆಲ್ಲರ ಬಳಿಯೂ ಈಗಾಗಲೇ ಪಂದ್ಯಾವಳಿಯ ವೇಳಾಪಟ್ಟಿ ಇರಬಹುದು. ಆದರೂ, ಸಂಪದದಲ್ಲೂ ಒಂದು ಕ್ರಿಕೆಟ್ ವೇಳಾಪಟ್ಟಿ ಇರಲೆಂದು, ಮೊದಲ ಸುತ್ತಿನ ಪಂದ್ಯಗಳ ವೇಳಾಪಟ್ಟಿಯನ್ನು ಇಲ್ಲಿ ಹಾಕುತ್ತಿದ್ದೀನಿ.

ಅಂದಹಾಗೆ ಈ "ಕ್ರಿಕೆಟ್ ವಿಶ್ವಕಪ್ - ೨೦೦೭"ರ ವೇಳಾಪಟ್ಟಿ ಕನ್ನಡದಲ್ಲಿದೆ. ಇದನ್ನು ನೀವು ನಿಮ್ಮ ಕಚೇರಿಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಲಗತ್ತಿಸಿಕೊಳ್ಳಲೂಬಹುದು. ನಾನಂತೂ ನನ್ನ ಕ್ಯೂಬಿಕಲ್ಲಿನಲ್ಲಿ ಒಂದು ಘಂಟೆಯ ಹಿಂದೆ ಲಗತ್ತಿಸಿಕೊಂಡೆ. ಆಗಲೇ ನಾಲ್ಕು ಜನರು ಬಂದು, "ಇದ್ಯಾವ ಭಾಷೆ? ಯಾವ ಊರಿನದ್ದು, ಯಾವ ಲಿಪಿ?" ಅಂತೆಲ್ಲ ಕೇಳಿದರು. "ರೋಗಿ ಬಯಸಿದ್ದೂ ಹಾಲು ಅನ್ನ..." ಎಂಬಂತೆ ನನಗೆ ಬೇಕಾದದ್ದೂ ಅದೇ ಎನ್ನಿ! ಬೇಸರವಿಲ್ಲದೆ ಎಲ್ಲರಿಗೂ ಕನ್ನಡದ ಬಗ್ಗೆ ಸಣ್ಣದಾಗಿ ಕೊರೆದೆ. Wink "ಕೆನಡಾ" ಅಲ್ಲ ಸ್ವಾಮೀ, "ಕ-ನ್ನ-ಡ" ಅಂತ ಬಿಡಿಸಿ ಹೇಳಿಕೊಡುವಷ್ಟರಲ್ಲಿ ಸಾಕಾಯಿತು. ಅವರಲ್ಲಿ ಇಬ್ಬರು ಹೇಳಿದ್ದು: "ನಾವೆಲ್ಲ ಇಷ್ಟು ದಿನ ಭಾರತೀಯ ಭಾಷೆಗಳಲ್ಲಿ ಹಿಂದಿ, ಗುಜರಾತಿ ಮತ್ತು ತಮಿಳು ಭಾಷೆಗಳ ಬಗ್ಗೆ ಕೇಳಿದ್ದೆವು. ಇವತ್ತು ನಾಲ್ಕನೆಯ ಹೆಸರು ಕೇಳಿದಂತಾಯಿತು". ನನಗಂತೂ ತುಂಬಾ ಸಂತೋಷವಾಯಿತೆಂಬುದನ್ನು ಬಿಡಿಸಿ ಹೇಳಬೇಕೆ?

             
  ದಿನಾಂಕ ಸ್ಥಳ ತಂಡ ಎದುರಾಳಿ ತಂಡ  
  13 ಮಾರ್ಚ್ ಜಮೈಕ ವೆಸ್ಟ್ ಇಂಡೀಸ್ ವಿ ಪಾಕಿಸ್ತಾನ  
  14 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಆಸ್ಟ್ರೇಲಿಯ ವಿ ಸ್ಕಾಟ್‍ಲ್ಯಾಂಡ್  
  14 ಮಾರ್ಚ್ ಸೈಂಟ್ ಲೂಸಿಯ ಕೆನ್ಯಾ ವಿ ಕೆನಡ  
  15 ಮಾರ್ಚ್ ಟ್ರಿನಿದಾದ್ & ಟೊಬಾಗೊ ಶ್ರೀಲಂಕಾ ವಿ ಬರ್ಮುಡ  
  15 ಮಾರ್ಚ್ ಜಮೈಕ ಜಿಂಬಾಬ್ವೆ ವಿ ಐರ್‍ಲ್ಯಾಂಡ್  
  16 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ದ. ಆಫ್ರಿಕ ವಿ ನೆದರ್‍ಲ್ಯಾಂಡ್ಸ್  
  16 ಮಾರ್ಚ್ ಸೈಂಟ್ ಲೂಸಿಯ ಇಂಗ್ಲೆಂಡ್ ವಿ ನ್ಯೂಜಿಲೆಂಡ್  
  17 ಮಾರ್ಚ್ ಟ್ರಿನಿದಾದ್ & ಟೊಬಾಗೊ ಭಾರತ ವಿ ಬಾಂಗ್ಲಾದೇಶ  
  17 ಮಾರ್ಚ್ ಜಮೈಕ ಪಾಕಿಸ್ತಾನ ವಿ ಐರ್‍ಲ್ಯಾಂಡ್  
  18 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಆಸ್ಟ್ರೇಲಿಯ ವಿ ನೆದರ್‍ಲ್ಯಾಂಡ್ಸ್  
  18 ಮಾರ್ಚ್ ಸೈಂಟ್ ಲೂಸಿಯ ಇಂಗ್ಲೆಂಡ್ ವಿ ಕೆನಡ  
  19 ಮಾರ್ಚ್ ಟ್ರಿನಿದಾದ್ & ಟೊಬಾಗೊ ಭಾರತ ವಿ ಬರ್ಮುಡ  
  19 ಮಾರ್ಚ್ ಜಮೈಕ ವೆಸ್ಟ್ ಇಂಡೀಸ್ ವಿ ಜಿಂಬಾಬ್ವೆ  
  20 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ದ. ಆಫ್ರಿಕ ವಿ ಸ್ಕಾಟ್‍ಲ್ಯಾಂಡ್  
  20 ಮಾರ್ಚ್ ಸೈಂಟ್ ಲೂಸಿಯ ನ್ಯೂಜಿಲೆಂಡ್ ವಿ ಕೆನ್ಯಾ  
  21 ಮಾರ್ಚ್ ಟ್ರಿನಿದಾದ್ & ಟೊಬಾಗೊ ಶ್ರೀಲಂಕಾ ವಿ ಬಾಂಗ್ಲಾದೇಶ  
  21 ಮಾರ್ಚ್ ಜಮೈಕ ಜಿಂಬಾಬ್ವೆ ವಿ ಪಾಕಿಸ್ತಾನ  
  22 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಸ್ಕಾಟ್‍ಲ್ಯಾಂಡ್ ವಿ ನೆದರ್‍ಲ್ಯಾಂಡ್ಸ್  
  22 ಮಾರ್ಚ್ ಸೈಂಟ್ ಲೂಸಿಯ ನ್ಯೂಜಿಲೆಂಡ್ ವಿ ಕೆನಡ  
  23 ಮಾರ್ಚ್ ಟ್ರಿನಿದಾದ್ & ಟೊಬಾಗೊ ಭಾರತ ವಿ ಶ್ರೀಲಂಕಾ  
  23 ಮಾರ್ಚ್ ಜಮೈಕ ವೆಸ್ಟ್ ಇಂಡೀಸ್ ವಿ ಐರ್‍ಲ್ಯಾಂಡ್  
  24 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಆಸ್ಟ್ರೇಲಿಯ ವಿ ದ. ಆಫ್ರಿಕ  
  24 ಮಾರ್ಚ್ ಸೈಂಟ್ ಲೂಸಿಯ ಇಂಗ್ಲೆಂಡ್ ವಿ ಕೆನ್ಯಾ  
  25 ಮಾರ್ಚ್ ಟ್ರಿನಿದಾದ್ & ಟೊಬಾಗೊ ಬರ್ಮುಡ ವಿ ಬಾಂಗ್ಲಾದೇಶ  
             

ಇಗೋ ಬಂತು ಕ್ರಿಕೆಟ್ ಸಮಯ

ಇಂದಿನಿಂದ ಕ್ರಿಕೆಟ್ [:http://content-ind.cricinfo.com/wc2007/content/current/gallery/284923.html|ವಿಶ್ವ ಕಪ್ ಶುರು]. ಇನ್ನೂ ವಿಶ್ವ ಕಪ್ ಶುರುವಾಗೋದೇ ತಡ, ಕ್ರಿಕೆಟ್ ಸಮಯದಲ್ಲಿ ಜನರ ಗಮನ ಸೆರೆಹಿಡಿಯಲು ಗೂಗಲ್ ನಂತಹ ಕಂಪೆನಿಗಳೂ ಕೂಡ ತಮ್ಮ ಕ್ರಿಯೇಟಿವಿಟಿ ಹೊರಹಾಕಿವೆ. ಕೆಳಗಿನ ಚಿತ್ರ ನೋಡಿ:

ನಡುಗಿಸಲಿರುವ "ಮಾಮು ಫೈನು"

ಟ್ರಾಫಿಕ್ ನಿಯಮಗಳನ್ನು ಮೀರಿದವರಿಗೆ ("ಟ್ರಾಫಿಕ್ ಪೋಲಿಸ್ ಹಿಡಿದರೆ ನಿಮಗೆ" ಎಂದು ಓದಿಕೊಳ್ಳಿ) ಹಾಕಲಾಗುತ್ತಿರುವ ಫೈನುಗಳನ್ನು ಆರು ಪಟ್ಟು ಹೆಚ್ಚಿಸುವ ಕಾಯ್ದೆಯೊಂದು ಈ ಸಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದಂತೆ.

ವೇಗ ಮಿತಿಯನ್ನು ಮೀರಿದವರಿಗೆ ಈ ಹಿಂದಿನಂತೆ ಇದ್ದ ೫೦೦ ರೂ ಜುಲ್ಮಾನೆ ೩,೦೦೦ ರೂ ಗಳಿಗೆ ಏರಿಸಲಾಗುವುದಂತೆ. ಅಂದರೆ ನೀವು ವೇಗಮಿತಿಯನ್ನು ಮೀರಿದಿರಿ ಎಂದು ಟ್ರಾಫಿಕ್ ಮಾಮು (ಪೋಲಿಸರು) ಹಿಡಿದು ನಿಲ್ಲಿಸಿದರೆ ನೀವು ಇನ್ನು ಮೇಲೆ ಮೂರು ಸಾವಿರ ರೂಪಾಯಿ ತೆತ್ತಬೇಕು!
ತದನಂತರ ೫,೦೦೦ ರೂ ನಂತೆ ಪ್ರತಿ ಬಾರಿ ಹೀಗೆ ಹಿಡಿಯಲ್ಪಟ್ಟಾಗ ಕಟ್ಟಬೇಕು.

ಬುದ್ಧಿಗೆ ಕಸರತ್ತು: ಸಂಪದಬಂಧ - ೨

ಆತ್ಮೀಯ ಸಂಪದಿಗರೇ,

ಸಂಪದಬಂಧ-೨ ಇದೀಗ ನಿಮ್ಮ ಮುಂದಿದೆ. ಈ ಬಾರಿ ಉತ್ತರಗಳನ್ನು ನನಗೆ "ವೈಯಕ್ತಿಕ ಸಂದೇಶ"ದ ರೂಪದಲ್ಲಿ ಕಳುಹಿಸುತ್ತೀರಾ? ಹಾಗೆ ಮಾಡಿದಲ್ಲಿ ಎಲ್ಲರಿಗೂ ಕೊನೆಯದಾಗಿ ಉತ್ತರ ಪ್ರಕಟಗೊಳ್ಳುವ ತನಕ ಕುತೂಹಲವಿರುತ್ತದೆ ಮತ್ತು ಭಾಗವಹಿಸಲು ಅವಕಾಶವಿರುತ್ತದೆ.

ಈ ಬಾರಿಯ ಸಂಪದಬಂಧದ ಉತ್ತರ ಮಾರ್ಚ್ ೨೦ (ಮುಂದಿನ ಮಂಗಳವಾರ) ಪ್ರಕಟವಾಗುತ್ತದೆ.

ಕಳೆದ ಬಾರಿಯಂತೆ ಈ ಸಾರ್ತಿ ಕೂಡಾ ಉತ್ಸಾಹದಿಂದ ಭಾಗವಹಿಸುತ್ತೀರಾ ಎಂದು ಭಾವಿಸಿದ್ದೇನೆ. ತಮ್ಮ ಸಲಹೆ-ಪ್ರತಿಕ್ರಿಯೆಗಳಿಗೆ ಸ್ವಾಗತವಿದೆ.

1 2          
    3 4 5    
      6      
  7 8 9 10  
  11  
   
  12 13 14  
      15 16      
    17 18 19    
          20

ಸೂರ್ಯ ಗ್ರಹಣ ಮತ್ತು ಯುಗಾದಿ ಹಬ್ಬ ತಾ|| ೧೯.೦೩.೨೦೦೭

ಸೂರ್ಯ ಗ್ರಹಣ ಮತ್ತು ಯುಗಾದಿ ಹಬ್ಬ ತಾ|| ೧೯.೦೩.೨೦೦೭

ಸೂರ್ಯ ಗ್ರಹಣ ಬೆ. ೬:೦೮  ರಿಂದ  ೯:೫೫ ತನಕ

ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳು - ಶತಾವಧಾನಿ ಗಣೇಶ್ ಅವರಿಂದ

"ಪ್ರವಚನ ವಾಹಿನಿ"ಯ 5ನೇ ವಾರ್ಷಿಕೋತ್ಸವದ ಅಂಗವಾಗಿ,

ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಕುರಿತು ಉಪನ್ಯಾಸ.

ಆವರಣ ಸಂವಾದ - ೧೮ ಮಾರ್ಚ್ ೨೦೦೭, ಭಾನುವಾರ

ಆವರಣ ಸಂವಾದ

ವಿಶೇಷ ಕಾರ್ಯಕ್ರಮ

ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪರವರೊಡನೆ

ದಿನಾಂಕ 18.03.2007, ಭಾನುವಾರ ಬೆಳಗ್ಗೆ ೧೦ ರಿಂದ

ಸ್ಥಳ : ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ ರಸ್ತೆ, ಬೆಂಗಳೂರು.

ph:22421414, 9448494949

ತ ರಾ ಸು ಮತ್ತು ಮಾಸ್ತಿ ಒಂದೇ ಸ್ಥಳಮಹಿಮೆ ಬಗ್ಗೆ ಬರೆದಿದ್ದರೇ?

ತರಾಸು ಅವರ "ಹಂಸಗೀತೆ" ಕಾದಂಬರಿಯನ್ನು ಓದುತ್ತಿದ್ದೇನೆ. ಅದರಲ್ಲಿ ವೀರಣ್ಣಜ್ಜ ಎಂಬ ಅರ್ಚಕರ ಕತೆ ಬರುತ್ತದೆ. ಅರ್ಚಕರು ಓರ್ವ ಮಹಿಳೆಯನ್ನು ಇಟ್ಟುಕೊಂಡಿದ್ದು, ಪೂಜೆ ಮುಗಿಸಿ ಅವಳನ್ನು ಭೇಟಿಯಾಗುವ ಕ್ರಮ ಇಟ್ಟುಕೊಂಡಿದ್ದರಂತೆ.ಪಾಳೆಯಗಾರರು ಆಗಮಿಸಿದ ಬಳಿಕವಷ್ಟೆ ಮಹಾಪೂಜೆ ಮಾಡುವ ಅವರು ಒಂದು ದಿನ ಎಷ್ಟು ಕಾದರೂ ಅವರು ಬರದಿದ್ದಾಗ, ಪೂಜೆ ಮುಗಿಸಿ ಮನೆಗೆ ತೆರಳುತ್ತಾರೆ. ಅಲ್ಲಿ ಅವರ ಹೆಂಗಸು ಹೂ ಮುಡಿದುಕೊಂಡು,ಊಟ ಮುಗಿಸಿ,ಮಲಗಬೇಕೆನ್ನುವಷ್ಟರಲ್ಲಿ ಪಾಳೆಯಗಾರರ ಆಗಮನದ ಸೂಚನೆ ಸಿಗುತ್ತದೆ. ಪಾಳೆಯಗಾರರಿಗೆ ಅಸಮಾಧಾನವಾದೀತೆಂಬ ಹೆದರಿಕೆಯಿಂದ, ಸ್ತ್ರೀಗೆ ಮುಡಿಸಿದ ಹೂವನ್ನು ಮತ್ತೆ ತೆಗೆದುಕೊಂಡು,ದೇವಾಲಯಕ್ಕೆ ಬಂದು,ಪೂಜೆ ಮತ್ತೆ ಮಾಡಿ,ಪಾಳೆಯಗಾರರಿಗೆ ಪ್ರಸಾದರೂಪವಾಗಿ,ಹೂವನ್ನಿತ್ತಾಗ,ಅದರಲ್ಲಿ ಕೂದಲನ್ನು ನೋಡಿ ಪಾಳೆಯಗಾರರು ಕಿಡಿಕಿಡಿಯಾದರೆ, ಅರ್ಚಕರು ಅದು ದೇವರ ಮುಡಿಯ ಕೂದಲು ಎಂದು ಸಾಧಿಸುತ್ತಾರೆ.ಮಾತಿಗೆ ಮಾತು ಬೆಳೆದು,ಮರುದಿನ ಹಗಲು ಪಾಳೆಯಗಾರರು ದೇವಸ್ಥಾನಕ್ಕೆ ಆಗಮಿಸಿ,ದೇವರ ಮುಡಿಯನ್ನು ಪರೀಕ್ಷಿಸುವುದು ಎಂದಾಗುತ್ತದೆ.

ಆಶ್ಚರ್ಯವೆಂದರೆ,ಮಾಸ್ತಿಯವರ ಸಣ್ಣಕತೆಯೊಂದರಲ್ಲಿ,ಇಂತಹದ್ದೇ ಐತಿಹ್ಯದ ಬಗ್ಗೆ ಕತೆಯಿದೆ. ಆದರೆ ಅಂತ್ಯವನ್ನು ತರಾಸು ಅವರಿಗಿಂತ ಭಿನ್ನವಾಗಿ ಮಾಸ್ತಿಯವರು ನಿರೂಪಿಸಿದ್ದಾರೆ.ಮಾಸ್ತಿಯವರು ತಮ್ಮ ಕತೆಯಲ್ಲಿ ಅರ್ಚಕ ದಿಕ್ಕು ಕಾಣದೆ, ದೇವರ ಮುಂದೆ ಪ್ರಾರ್ಥಿಸುತ್ತಾ,ಅಲ್ಲೇ ನಿದ್ದೆ ಹೋದ ಸಂದರ್ಭದಲ್ಲಿ (ಬಹುಶ:) ಅರ್ಚಕರ ಮಗಳು ತನ್ನ ಮುಡಿಯನ್ನು ಕತ್ತರಿಸಿ,ಶಿವಲಿಂಗದ ಮೇಲಿಟ್ಟು,ಅವರನ್ನು ಸಂಕಟದಿಂದ ಪಾರು ಮಾಡಿದಂತೆ ನೈಜವಾಗಿ ಚಿತ್ರಿಸಿದ್ದಾರೆ. ತರಾಸು ಕಾದಂಬರಿಯಲ್ಲಿ ಅರ್ಚಕರು ಮತ್ತು ವೆಂಕಟಸುಬ್ಬಯ್ಯ ಎಂಬ ಸಂಗೀತ ಕಲಾವಿದರು ತನ್ಮಯದಿಂದ ಧ್ಯಾನಿಸಿ, ಪಾಳೆಯಗಾರರು ಬರುವಾಗ,ಶಿವಲಿಂಗದ ಮೇಲೆ ಮುಡಿ ಬಂದಿರುತ್ತದೆ.ಅದು ನೈಜವೇ ಎಂದು ನೋಡಲು ಪಾಳೆಯಗಾರರು ಅದನ್ನು ಕಿತ್ತಾಗ, ಅದರಿಂದ ರಕ್ತ ಬರುತ್ತದೆ ಎಂಬ ಐತಿಹ್ಯದ ಬಗ್ಗೆ ಬರೆದಿದ್ದಾರೆ.