ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಐಟಂ ಹಾಡುಗಳು - ಮಡಿವಂತರು ಬೇಜಾರು ಮಾಡಿಕೊಳ್ಳಬೇಡಿ

ಈಗ ಐಟಂ ಯುಗ ... :)

ಚಲನಚಿತ್ರಗಳಲ್ಲಿ ಇದು ಸಾಮಾನ್ಯ/ಅನಿವಾರ್ಯ , ನೋಡದೆ ಇರೋರು ಇಲ್ಲ !!!

ಮಲ್ಲಿಕಾ ಶೆರಾವತ್ - ಪ್ರೀತಿ ಏಕೆ ಭೂಮಿ ಮೇಲಿದೆ ?

ರಾಖಿ ಸಾವಂತ್ - ಗೆಳೆಯ ?

ಈ ಐಟಂ ಹಾಡುಗಳು ಬರೆಯೋದು ಸುಲಭ ... ನಿಮಗೆ ಪ್ರಾಸ ಗೊತ್ತಿದ್ದರೆ ಸಾಕು ... ಉದಾಹರಣೆ :ಮಾವ, ಬಾವ, ಲಾಲು, ಡೀಲು .... ಯಾವ ಹಾಡು ಅಂತ ಹೇಳಬೇಕಾಗಿಲ್ಲ ತಾನೆ :)

 

ಮಾಸ್ತಿಯವರ "ಗೌಡರಮಲ್ಲಿ" ಸಕ್ಕತ್ತಾಗಿದೆ.

DLI ನಲ್ಲಿ ಹುಡುಕುತ್ತಿದ್ದಾಗ ಮಾಸ್ತಿಯವರ  'ಗೌಡರ ಮಲ್ಲಿ' ಕಬ್ಬ ಸಿಕ್ಕಿತು. ಹಾಗೆ ಮುನ್ನುಡಿಯಲ್ಲಿ ಕಣ್ಣಾಡಿಸಿದಾಗ 'ಹನುಮಗಿರಿಯ ಹೊಲಗಳಲ್ಲಿ' ಅಂತ ಬರೆದುದು ಕಣ್ಣಿಗೆ ಬಿತ್ತು. ಮತ್ತು ಹಾಗೆ ಈ ನೆಗೞ್ಚು ಅವರು ಕಣ್ಣಿಗೆ ಕಂಡದ್ದನ್ನು

ಕವಿಗಳ ಮನದಳಲು

ರಸ್ತೆಗಳಿಗೆ ಸಾಹಿತಿಗಳ ನಾಮ
ಅಲ್ಲವೆ ಸರ್ವೇ ಸಾಮಾನ್ಯ
ರಾಜಕಾರಿಣಿಗಿದು ಕೊಟ್ಟರೂ ಹಿತ
ಇದಕೇನು ಕವಿಗಳ ಅಭಿಮತ?

ಶಾಕುಂತಲೆ, ಉಪಮೆಗಳೆನಗೆ ಸಾಕೆಂದ ಕಾಳಿದಾಸ
ನನ್ನ ಸಾಹಿತ್ಯಕಾಗದೆ ಆಭಾಸ ಎಂದರೆ ಭಾಸ
ಸಂನ್ಯಾಸಿಗೇಕೆ ಚಿಂತೆಯೆಂದರು ವೇದವ್ಯಾಸ
ಹಾಡೊಳು ಅಪಸ್ವರ ಬೇಡವೆಂದ ಕುಮಾರವ್ಯಾಸ

ವಚನಕಾರರಿಗಿದು ಸಲ್ಲದೆಂದರೆ ಬಸವ

ಪುಸ್ತಕನಿಧಿ - ಆದಿಕವಿ ವಾಲ್ಮೀಕಿ - ಮಾಸ್ತಿಯವರ ಪುಸ್ತಕ

ನಿನ್ನೆ ತಮಸಾನದೀ ತೀರದಲ್ಲಿ ಎಂಬ ಪುಟ್ಟ ಬರಹವನ್ನು ಓದಿರಬಹುದು . ಇದನ್ನು
ಮಾಸ್ತಿ ವೆಂಕಟೇಶ ಅಯಂಗಾರರ ಈ ಪುಸ್ತಕದಲ್ಲಿ ಓದಿದ್ದು .
http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028970

"ನನ್ನ" ಜನ ಮಾತ್ರ ನನ್ನ ಮಾನ ಪ್ರಾಣ ಧನ ???

ಚಿಂತಕ ಡಿ. ಆರ್. ನಾಗರಾಜ್ ಕನ್ನಡಪ್ರಭದ ತಮ್ಮ "ವಾಗ್ವಾದ" ಅಂಕಣದಲ್ಲಿ ಬಹುಶಃ ಒಂದೆರಡು ದಶಕದ ಹಿಂದೆ ಬರೆದದ್ದಿದು: "(ಕನ್ನಡ ಸಂಶೋಧನೆಯ) ಈಗಿನ ನಿಜವಾದ ಸಮಸ್ಯೆ ಎಂದರೆ, ಸಂಶೋಧನಾಕಾಂಕ್ಷಿಗಳನ್ನು ತರಬೇತುಗೊಳಿಸುವ ಜತೆಗೆ ಅವರ ಮಾರ್ಗದರ್ಶಕರಿಗೂ ತರಬೇತು ನೀಡಬೇಕಾದ ಅಗತ್ಯ. ... ಮಾರ್ಗದರ್ಶಕರ ಅರ್ಹತೆಗಳನ್ನು ನಿಷ್ಠುರವಾಗಿ ಮೌಲ್ಯಮಾಪನ ಮಾಡುವ ಸ್ಥಿತಿಯೇ ಇಲ್ಲ. ... ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಇರುವ ಅನೇಕಾನೇಕ ಅಂಗೀಕೃತ ಪಿ‌ಎಚ್.ಡಿ., ಗೈಡ್‌ಗಳು ತಮ್ಮ ಇಡೀ ಜೀವಮಾನದಲ್ಲಿ ಒಂದು ಲೇಖನವನ್ನು ಬರೆದಿಲ್ಲ. ಇನ್ನು ಪುಸ್ತಕಗಳ ಮಾತು ದೂರವೇ ಆಯಿತು. ಈ ಮಂದಿಯನ್ನು ಕೂಡಾ ನಾವು ಹಂಗಿಸಿ ಫಲವಿಲ್ಲ. ಆಕಾಂಕ್ಷಿಗಳ ಒತ್ತಡಕ್ಕೆ ಶರಣಾಗಿ ಅರ್ಜಿಗಳ ಮೇಲೆ ಅವರು ರುಜು ಹಾಕ ಬೇಕಾಗುತ್ತದೆ. ಪರಸ್ಪರ ಅಸಹಾಯಕತೆಯ ವಿಷವರ್ತುಲದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ವಿಶ್ವವಿದ್ಯಾಲಯ ಎಲ್ಲವು ಬಿದ್ದು ನರಳುತ್ತಿವೆ." ('ಸಂಸ್ಕೃತಿ ಕಥನ' ಪುಟ-೬೮.)

ಈಗಲೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಮಟ್ಟ ಹೇಗಿದೆ ಎನ್ನುವುದರ ಬಗ್ಗೆ "ಜ್ಞಾನದ ವಿಜ್ಞಾನದ ಕಲೆಯೈಸಿರಿ ಸಾರೋದಯ ಧಾರಾನಗರಿ"ಯಲ್ಲಿನ ಕರ್ನಾಟಕ ವಿಶ್ವವಿದ್ಯಾಲಯಕ್ಕೆ "ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯ ಸಂಸ್ಕಾರಿ" ಎಂಬ ಘಟಿಕೋತ್ಸವ ಗೀತೆ ಬರೆದ ಕವಿ ಚೆನ್ನವೀರ ಕಣವಿಯವರಿಗೆ ಯಾರೇನೂ ಹೇಳಬೇಕಿಲ್ಲ. ಅರ್ಥಶಾಸ್ತ್ರ-ತಂತ್ರಜ್ಞಾನ-ವಿಜ್ಞಾನ-ಗಣಿತ

ಚಾಣಕ್ಯ ನೀತಿ - ಮತ್ತೊಮ್ಮೆ

ಕೆಲವು ದಿನಗಳ ಹಿಂದೆ ಚಾಣಕ್ಯ ಪಂಡಿತನ ಕೆಲವು ಸುಭಾಷಿತಗಳನ್ನು ರೂಪಾಂತರಿಸಿ ಬರೆದಿದ್ದೆ.

ಇವತ್ತು ಅದೇ ನೀತಿದರ್ಪಣದ ಇನ್ನು ಕೆಲವು ಸುಭಾಷಿತಗಳು ಇಲ್ಲಿವೆ ನೋಡಿ. ಮೂಲವನ್ನೂ (ಕನ್ನಡ ಲಿಪಿಯಲ್ಲೇ) ಬರೆದಿದ್ದೇನೆ:

ತಿಂಮ ಶಾಲೆಗೆ ಚಕ್ಕರ್ !!!

ತಿಂಮ ಶಾಲೆಗೆ ಚಕ್ಕರ್ !!!

ಕೃಪೆ:  ಬೆಳ್ಳಿ ತಿಂಮ ನೊರೆಂಟು ಹೇಳಿದ,ಬೀಚಿ

ತಿಂಮನಿಗೆ ಶಾಲೆಗೆ ಹೋಗೊಕೆ ಬೇಜಾರು, ಶಾಲೆ ಹೆಡ್ ಮಾಸ್ಟರ್ ಪೋನ್ ಮಾಡಿದ

ತಿಂಮ : ಸರ್, ಇವತ್ತು ತಿಂಮನಿಗೆ ಹುಷಾರು ಇಲ್ಲ, ಶಾಲೆಗೆ ಅವನು ಬರೊಲ್ಲ.

ಹೆಡ್ ಮಾಸ್ಟರ್ : ತಾವು ಯಾರು ಮಾತಾಡ್ತ ಇರ್‍ಓದು ?

ಗ್ವಂಟಾನಮೋ ಪದ್ಯ

ಪೋಯಮ್ಸ್ ಫ್ರಂ ಗ್ವಂಟಾನಮೋ: ದ ಡಿಟೈನೀಸ್ ಸ್ಪೀಕ್
ಸಂಪಾದಕ : ಮಾರ್ಕ್ ಫಾಲ್ಕಾಫ್

ಇದು ಗ್ವಂಟಾನಮೋದಲ್ಲಿನ ಹದಿನೇಳು ಸೆರೆಯಾಳುಗಳ ಇಪ್ಪತ್ತೆರಡು ಪದ್ಯಗಳ ಪುಟ್ಟ ಪುಸ್ತಕ. ಈಗಷ್ಟೇ ಪ್ರಕಟಗೊಂಡಿದೆ. ಇದರ ಸಂಪಾದಕ ಬಂಧಿತರ ಲಾಯರ್‍ನಾಗಿ ಕೆಲಸ ಮಾಡಿದಾತ. ಅವರು ಬರೆದ ಪದ್ಯಗಳನ್ನು ಕದ್ದು ಹೊರಗೆ ಜಗತ್ತಿಗೆ ತಂದಾತ. ಈಗ ಪೆಂಟಗಾನ್‌ ಒಪ್ಪಿಗೆ ಕೊಟ್ಟ ಪದ್ಯಗಳನ್ನು ಮಾತ್ರ
ಈ ಪುಸ್ತಕದಲ್ಲಿ ಪ್ರಕಟಿಸಿದ್ದಾನೆ.

ಇಷ್ಟು ವರ್ಷಗಳಲ್ಲಿ ಗ್ವಂಟಾನಮೋದ ನೀರವ ಮೌನದಿಂದ ಹೊರಬಂದಿರುವ ಒಂದೇ ದನಿ ಇದು.