ಸತ್ಯನಾರಾಯಣರ ಕಾಲಜಿಂಕೆ ಕಾದಂಬರಿ
ಗೆಳೆಯ ಸತ್ಯನಾರಾಯಣರ ಹೊಸ ಕಾದಬರಿ ಕಾಲಜಿಂಕೆ ಪ್ರಕಟವಾಗಿದೆ. ಡಾ. ಯು. ಆರ್. ಅನಂತಮೂರ್ತಿ ಮುನ್ನುಡಿ ಬರೆದಿದ್ದಾರೆ.
- Read more about ಸತ್ಯನಾರಾಯಣರ ಕಾಲಜಿಂಕೆ ಕಾದಂಬರಿ
- 5 comments
- Log in or register to post comments
ಗೆಳೆಯ ಸತ್ಯನಾರಾಯಣರ ಹೊಸ ಕಾದಬರಿ ಕಾಲಜಿಂಕೆ ಪ್ರಕಟವಾಗಿದೆ. ಡಾ. ಯು. ಆರ್. ಅನಂತಮೂರ್ತಿ ಮುನ್ನುಡಿ ಬರೆದಿದ್ದಾರೆ.
ಹಿಂಬಾಗಿಲಲ್ಲಿ ದೊಡ್ಡದೊಂದು ಗುಂಪು ನೆರೆದಿತ್ತು. "ಅಂಕಲ್, ಗಣಪತಿ. ಆಂಟಿ, ಗಣಪತಿ" ಎನ್ನುತ್ತ ಕಾಣಿಕೆ ಡಬ್ಬವೊಂದನ್ನು ಹಿಡಿದು ಜೋರು ಗಲಾಟೆ ಮಾಡಿಕೊಂಡು ಓಡಾಡುತ್ತಿದ್ದ ಸಣ್ಣ ಹುಡುಗರ ಸೈನ್ಯವೊಂದು ಬಾಗಿಲನ್ನಡ್ಡಗಟ್ಟಿತ್ತು. ಅತ್ತಿಗೆ ಒಳ ಹೋಗಿ ಒಂದಷ್ಟು ಹಣ ತಂದು ಹುಡುಗರಲ್ಲಿ ಡಬ್ಬ ಹಿಡಿದಿದ್ದವನಿಗೆ ಕೊಟ್ಟರು.
ಯಲ್ಲಪ್ಪರೆಡ್ಡಿ --- ನಿಸರ್ಗ ಪ್ರೀತಿಯ ಪುತ್ಥಳಿ - ಪ್ರೊ !! ಸಾ.ಕೃ. ರಾಮಚ೦ದ್ರ ರಾವ್ (ನೆಲದ ಮಾತು -- ಯಲ್ಲಪ್ಪರೆಡ್ಡಿ ಅಭಿನ೦ದನ ಗ್ರ೦ಥದಿ೦ದ ಆಯ್ದ ಕೆಲವು ಮುತ್ತುಗಳು, ಸ೦ಪಾದಕರು ಶೂದ್ರ ಶ್ರೀನಿವಾಸ)
ನಿಸರ್ಗ ಪ್ರೀತಿಯ ಪುತ್ಥಳಿ - ಪ್ರೊ !! ಸಾ.ಕೃ. ರಾಮಚ೦ದ್ರ ರಾವ್ ಭಾಗ ೧
ನನ್ನ ಮಾನ್ಯಮಿತ್ರರು , ಸಹೃದಯರೂ ಭಾವುಕರೂ ಪ್ರಾಮಾಣಿಕರೂ ಆದ ಯಲ್ಲಪ್ಪರೆಡ್ಡಿಯವರನ್ನುಕುರಿತು ಬರೆಯಲು ತೊಡಗಿದಾಗ, ಸವಿನೆನಪುಗಳ ಸರಮಾಲೆ ಹರವಾಗಿ ತೆರೆದು ಬಿಚ್ಚಿ ಮನಸ್ಸು ಅದನ್ನೇ ಮೆಲಕುಹಾಕುತ್ತ, ಸುಮ್ಮನೆ ಕೂಡುವ೦ತಾಗುತ್ತದೆ. ಭಾವನೆಗಳಿಗೆ ಅನುಗುಣವಾಗಿಮಾತು ದೊರೆಯುತ್ತದೆ. ಭಾವದ ಗು೦ಗಿನಲ್ಲಿ ಬರಿಯ ಮಾತುಗಳಿಗೆ ಎಡೆಯಿದೆಯೆ.
ಅಯೋಧ್ಯೆ ಎಂದರೆ ಈಗ ರಾಮ ನೆನಪಾಗುವುದು ದೂರವಾಗಿ, ಹಿಂದು-ಮುಸ್ಲಿಮ್ ಗಲಭೆಗಳಷ್ಟೇ ಮನಸ್ಸಿಗೆ ಬರುವ ದಿನಗಳಿವು. ಕೆಲವರ ಅಂಬೋಣವೆಂದರೆ ಅಯೋಧ್ಯೆ ಭಾರತದ ಅಸ್ಮಿತೆಗೆ ಕೇಂದ್ರ ಬಿಂದುವಾಗಿದೆ. ಇವೆಲ್ಲ ಎಷ್ಟು ವಿಪರೀತ ಎಂದು ನೋಡಿರಿ. ಹಾಗೊಮ್ಮೆ ಅಂದರೆ ಅದರರ್ಥ, ರಾಮಾಯಣ ಭಾರತದ ಕೇಂದ್ರ ಗ್ರಂಥ ಎಂದಂತೇ. ಇದನ್ನು ಭಾರತದ ಎಷ್ಟು ಜನ ಒಪ್ಪಿಕೊಂಡಾರು. ಹೀಗೆಲ್ಲ ಅಯೋಧ್ಯೆ ಬರೀ ಹಿಂದುಗಳದ್ದು, ಅಥವಾ ಬರೀ ಮುಸ್ಲಿಮರದ್ದು ಎಂದೆಲ್ಲ ವಾದಿಸುವುದು ಒಣರಗಳೆಯೇ ಸರಿ. ಅಯೋಧ್ಯೆ ಎಂಬ ಊರು ಕೆಲವು ಹಿಂದು ನಂಬಿಕೆಗಳಲ್ಲಿ ಪೂಜ್ಯವಾಗಿರುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಅದೀಗ ಮುಸ್ಲಿಮ್ ಇತಿಹಾಸವನ್ನೂ ಹೊಂದಿರುವುದು. ಎಷ್ಟೇ ಬೊಬ್ಬೆ ಹೊಡೆದು ಕೊಂಡರೂ, ಎಷ್ಟೇ ಕೊಲೆಸುಲಿಗೆ ಮಾಡಿದರೂ ಇದೀಗ ಮರೆಯಲಾರದ ಐತಿಹಾಸಿಕ ಗುರುತು.
ಕೆಲವು ಕರ್ಡಿಶ್ ಕವಿತೆಗಳು
(ಓಮಿದ್ ವರಜಾನ್ದೆಯವರ ಇಂಗ್ಲೀಷ ಅನುವಾದದಿಂದ)
ಘನತೆ
(ಬರೋಜ್ ಅಕ್ರಾಯಿ)
"ಕತ್ತಲೆಗೂ, ದುಃಖಕ್ಕೂ ನಿಗೂಢ ಸಂಬಂಧವಿದೆ. ಸುತ್ತಲಿನ ವಾಸ್ತವದ ಉಪರೋಧದ ಚಿತ್ರಣ, ಪರಕೀಯತೆ, ಮಾನವ ಅಸ್ತಿತ್ವದ ಗೂಢ - ಇದೆಲ್ಲ ನಗರ ಸಂಸ್ಕೃತಿಯೊಂದಿಗೆ ತಳಕು ಹಾಕುವ ಪ್ರವೃತ್ತಿಗಳು. ನೇಮಾಡೆ ಇದೆಲ್ಲವನ್ನೂ ನೀಡುತ್ತಲೇ ಅದಕ್ಕೊಂದು ಪರ್ಯಾಯ ಸೂಚಿಸುತ್ತಾರೆ. ನೇಮಾಡೆಯ ಕವಿತೆಗಳು ಮಾನವ ಅಸ್ತಿತ್ವದ ಹಿಡಿರುವ ರಚನಾತ್ಮಕ ಮತ್ತು ಶ್ರೇಯಸ್ಕರ ಪ್ರವೃತ್ತಿಗೆ ವಿಶೇಷ ಮಹತ್ವ ನೀಡುತ್ತವೆ." ಹೀಗೆ ಮರಾಠಿಯ ಬಹುಮಾನ್ಯ ಕವಿ ಭಾಲಚಂದ್ರ ನೇಮಾಡೆಯವರನ್ನು ಪರಿಚಯಿಸುವ ಚಂದ್ರಕಾಂತ ಫೋಕಳೆಯವರು ಇತ್ತೀಚೆ ಅವರ ಕವಿತೆಗಳನ್ನು ಅನುವಾದಿಸಿದ್ದಾರೆ. ಮಂಡ್ಯದ ಬ್ಯಾಲದಕೆರೆ ಪ್ರಕಾಷನದಿಂದ ಪ್ರಕಟವಾಗಿರುವ 'ಭಾಲಚಂದ್ರ ನೇಮಾಡೆ ಕವಿತೆಗಳು' ಎಂಬ ಪುಸ್ತಕ ಓದಿ ನೋಡಿ.
ಫೋಕಳೆಯವರು ಬಹಳ ಅನುವಾದ ಮಾಡಿದ್ದಾರೆ. ಕೆಲವು ಪ್ರಕಟಿತವಾದರೆ, ಕೆಲವು ಇನ್ನೂ ಅಪ್ರಕಟಿತ.
ನೇಮಾಡೆ ಕವಿತೆಗಳ ನಿದರ್ಶನ ಈ ಸಾಲುಗಳು:
"ಕೂದಲಂಚಿನಲಿ ಜಾರುತ್ತವೆ ಬೆರಳ ಹೆಜ್ಜೆ
ಬೆರಳ ಸಮತೋಲ ಸಹಿಸಿ ಸಹಿಸಿ ಸೋತಿತು ಅಂಗೈ
ಅದು ಹೇಗೆ ಹೆಣೆಯ ಬಲ್ಲೆ ಅನಂತಾಗಸದ ಕಪ್ಪು ಹಾದಿ!
ಬಿಟ್ಟುಬಿಡು ಕೂದಲೆಲ್ಲ ಆಕಾಶಗಂಗೆಯಾಗಿ ಹರಿಯಲಿ-
ಅಗ್ನಿಬಾಣದ ಕಮಾನಿನಂತೆ
('ಲಾವಣ್ಯದೀಪದ ಬೆಳಕಿನಲಿ' ಕವನದಿಂದ)
[ ನನ್ನ ಬ್ಲಾಗಿನಿಂದ ಮರುಪ್ರಕಟನೆ - ವೆಂ. ]
ಭೋಜರಾಜ ಚಾರಿತ್ರಿಕ ವ್ಯಕ್ತಿ, ಸುಮಾರು ೧೧ನೆಯ ಶತಮಾನದವನು. ಆದರೂ ೫-೬ನೆಯ ಶತಮಾನದ ಕಾಳಿದಾಸನ ಹೆಸರಿನೊಂದಿಗೆ ಭೋಜನ ಹೆಸರು ಜೋತುಬಿದ್ದಿದೆ. ಚಾರಿತ್ರಿಕ ಭೋಜನಂತೆಯೆ ಕಾಳಿದಾಸನ ಭೋಜನೂ ಕವಿತಾಪಕ್ಷಪಾತಿ. ಆಗಾಗ ಕವಿಗಳನ್ನು ತನ್ನಲ್ಲಿಗೆ ಕರೆಸಿಕೊಂಡು ಗೋಷ್ಟಿಗಳನ್ನು ನಡೆಸಿ ಬಹುಮಾನಮಾಡಿ ಕಳಿಸುತ್ತಿದ್ದನು. ಆಗಾಗ ಕವಿತೆ ಕಟ್ಟುವ ಯಾರಿಗೂ ತನ್ನ ಆಸ್ಥಾನದ ಬಾಗಿಲುಗಳನ್ನು ತೆರೆದು ಅಕ್ಷರಲಕ್ಷವನ್ನು ನಡೆಸುತ್ತಿದ್ದನು. ಅಕ್ಷರಲಕ್ಷವೆಂದರೆ ಕವಿತೆಯ ಅಕ್ಷರವೊಂದಕ್ಕೆ ಲಕ್ಷ ಹೊನ್ನುಗಳಷ್ಟು ಬಹುಮಾನಿಸುವುದು. ಯಾರು ಬೇಕಾದರು ಆಸ್ಥಾನಕ್ಕೆ ಬಂದು ತಾವೆ ಕಟ್ಟಿದೆ ಕವಿತೆಯನು ಹಾಡಿ ಬಹುಮಾನ ಪಡೆಯಬಹುದಾಗಿತ್ತು. ಇಂತಹ ರಾಜನಿದ್ದಾಗ ಕಾಳಿದಾಸಾದಿಗಳಿಗೆ ಯಾವ ಕೊರತೆಯೂ ಇದ್ದಿರಲಾರದು. "ತ್ವಯಿ ದಾತರಿ ರಾಜೇಂದ್ರ ಸುದ್ರುಮಾಂ ನಾಶ್ರಯಾಮಹೇ" (ನೀನಿದ್ದಾಗ ಕಲ್ಪತರು ಬೇರೆ ಬೇಕೆ?) ಎಂದು ಅಷ್ಟಲ್ಲದೆ ಹೊಗಳಿದರೆ?
ಚಂಚಲ ಮನಸ್ಸನ್ನು ಸ್ಥಿಮಿತಕ್ಕೆ ತರುವುದು ಯಾವುದು? ಆತ್ಮಶಕ್ತಿಯೆ. ಧ್ಯಾನದಲ್ಲಿ ನಿರತರಾಗಿರಿ, ಆಗ ದೇಹಾತೀತವಾಗಿ ಗೋಚರವಾಗುವುದು ಯಾವುದು? ಆ ಪರಿಯ ಅರಿವು, ಜ್ಞಾನ ಉಂಟಾಗುವುದಾದರೂ ಎಲ್ಲಿಂದ? ಕೇವಲ ದೈಹಿಕ ಮಿದುಳಿನ ಗ್ರಂಥಿಗಳಿಂದ ಎನ್ನಲಾಗದು. ಆದರೆ, ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡುತ್ತೇನೆಂದು ನಿರ್ಭಾವುಕ ಯಂತ್ರವಾಗುವುದು, ಯಂತ್ರದಂತೆ ವರ್ತಿಸುವುದು, ಕೇವಲ ಸುಖೋಪಭೋಗಗಳಲ್ಲಿ ಮಾತ್ರ ತಾನೊಂದು “ಬುದ್ಧಿವಂತ ಪ್ರಾಣಿ” ತನಗೆ ಯಾವುದು ಖುಷಿ ಕೊಡುವುದೋ ಅದನ್ನೇ ಅರಸುವುದು, ಮತ್ತೆ ಮತ್ತೆ ಸುಖಿಸುತ್ತ ಖುಷಿಪಡುತ್ತಲೆ ಇರುವುದು, ಯಾವ ಮನುಷ್ಯನ ಲಕ್ಷಣ? ಅಪರಿಮಿತ ಕಾಮನೆಯಲ್ಲೂ ದೈಹಿಕ ಸೌಖ್ಯ ಆರೋಗ್ಯ, ಕಾಪಾಡಿಕೊಳ್ಳಲಾದೀತೇ.. ಅಂತಹ ಅತಿ ಕಾಮನೆಯಲ್ಲಿ ಪರಸ್ಪರ ಸಂಬಂಧಗಳು ವಿಹಿತವಾಗಿರುತ್ತವೆಯೆ..? ಈ ನಮ್ಮ ಬದುಕಿಗೆ ಅರ್ಥ ಇದೆಯೆ? ಈ ಪ್ರಶ್ನೆಗೆ ಉತ್ತರ ಹುಡುಕಬೇಡ. ಬದುಕಿನ ಅರ್ಥದ ಬಗ್ಗೆ ತಲೆಕಡಿಸಿಕೊಳ್ಳದಿರುವವರೇ ಹೆಚ್ಚು ಸುಖಿಗಳಾಗಿರುತ್ತಾರೆ. ಇಲ್ಲಿ ಅರ್ಥ ಹುಡುಕುವವನು ಆಯುಷ್ಯವೆಲ್ಲ ಹುಡುಕುತ್ತಲೆ ಇರಬೇಕಾ ಗುತ್ತದೆ. ಸುಖ ಹುಡುಕಿಕೋ ಬೇಗನೆ ಸಿಗುತ್ತದೆ, ಎಲ್ಲವನ್ನೂ “ಕೂಲ್-ಲೈಟ್ ಆಗಿ ತೆಗೆದುಕೋ ಸಮಾಧಾನ ಲಭಿಸುತ್ತದೆ.”ಹೀಗೆ ಪ್ರೀತಿ ಗೆ ಹೊಸ ವ್ಯಾಖ್ಯೆಯೆ ಮೂಡಿಬರುತ್ತಿದೆಯಲ್ಲ....
"ಮುಂಬಯಿ ಯಿಲಾಖೆಯೊಳಗೆ ಇರುವ ಕನ್ನಡು ಮಾತಾಡುವ ಜನರೊಳಗೆ ಇಂಗ್ರಜ ಭಾಷೆಯನ್ನು ಕಲಿತವರು ಅನೇಕರು ಇಲ್ಲ . ಅದರೆ ಮಹಾರಾಷ್ಟ್ರ ಮತ್ತು ಗುಜರಾಥಿ ಮಾತಾಡುವವರೊಳಗೆ ನೋಡಲಿಕ್ಕೆ ಕೂತರೆ ಯಷ್ಟೋ ಜನರು ಇಂಗ್ರಜ ಭಾಷೆಯ ಅಭ್ಯಾಸ ಚೆನ್ನಾಗಿ ಮಾಡಿ ತಂಮ ಸ್ವಭಾಷೆಯೊಳಗೆ ಉಪಯುಕ್ತವಾದ ವಿಷಯಗಳ ಮೇಲೆ ಅನೇಕ ಗ್ರಂಥಗಳನ್ನು ಬರಿದವರು ಇದ್ದಾರೆ. ಆದರೆ ಇನ್ನುವರೆಗೂ ಕನ್ನಡು ಮಾತನಾಡುವ ಜನರೊಳಗೆ ಹೇಳಿಸಿಕೊಂಬುವಷ್ಟು ಶ್ಯಾಹಣಿರು ಯಾರು ಆಗಿಲ್ಲ . ಮತ್ತು ಇದೇ ಕಾರಣದಿಂದಲೆ ಇನ್ನೂ ತನಕ ಕನ್ನಡು ಭಾಷೆಯೊಳಗೆ ಬಹಳ ಗ್ರಂಥಗಳು ಆಗಿಲ್ಲ . ಅದರ ದೆಸೆಯಿಂದ ಇತ್ತ ಕಡಿಯಿಂದ ೧೦ ಮಂದಿಯನ್ನು ಪುಣೆ ಪಾಠಶಾಲೆಯೊಳಗೆ ಕಳುಹಿಸಿ ತಿಂಗಳು ತಿಂಗಳು ಪಗಾರು ಕೊಟ್ಟು ಇಂಗ್ರಜ ವಿದ್ಯವನ್ನು ಚನ್ನಾಗಿ ಕಲಿಸಿ ಅವರಿಗೆ ದೊಡ್ಡ ದೊಡ್ಡ ಕೆಲಸಗಳನ್ನು ಕೊಡಬೇಕೆಂದು ಸರಕಾರದ ಮನಸ್ಸಿನಲ್ಲಿ ಅದೆ. ಅದರ ದೆಸೆಯಿಂದ ಕನ್ನಡು ಮಾತಾಡುವ ಜನರೊಳಗೆ ೧೬ ರಿಂದ ೧೯ ವರ್ಷದ ತನಕ ವಯಸಿನವರು ವೊಳ್ಳೆ ಪ್ರಕೃತಿಯವರಿದ್ದು ಪುಣೆಕ್ಕೆ ಹೋಗಿ ಅಭ್ಯಾಸ ಮಾಡಬೇಕೆಂಬ ಮನಸ್ಸುಳ್ಳವರು ತಂಮ ತಂಮ ಹೆಸರು , ವಯ , ಜಾತಿ ಇವೆಲ್ಲ ಬರಿದು ಬೆಳಗಾವಿಯ ಡೆಪ್ಯುಟಿ ಯೆಜುಕೇಶನಲ ಇನಸ್ಪೆಕ್ಟರರಾದ ಮಹದೇವ ವಾಸುದೇವರ ಕಡಿಗೆ ಇಲ್ಲವೆ ದಕ್ಷಿಣ ಭಾಗದ ಇನಸ್ಪೆಕ್ಟರರಾದ ಕ್ಯಾಪಟನ ಲೆಸ್ಟರ್ ಸಾಹೇಬರ ಕಡಿಗೆ ಕಳುಹಿಸಿಕೊಡಬೇಕು. ಮತ್ತು ತಂಮ ಅರ್ಜಿಯ ಸಂಗಡ ತಾವು ಕಲಿತ ಸಾಲಿ ಪಂತೋಜಿಯವರ ಕಡಿಯಿಂದ ಚಲುನಡತಿಯ ವಿಷಯಕ್ಕೆ ಸರಟಿಫಿಕೇಟ ಸಹ ಕಳುಹಿಸಬೇಕು. ಅಂದರೆ ಅದರೊಳಗೆ ಬುದ್ಧಿವಂತರಾಗಿರು ೧೦ ಮಂದಿಯನ್ನು ನೇಮಿಸಿ ಪಗಾರು ಠರಾವು ಮಾಡಿ ಪುಣೆಕ್ಕೆ ಕಳುಹಿಸಿಕೊಡುವರು. ಅಲ್ಲಿ ಅವರು ಹೋಗಿ ಪಾಠಶಾಲೆಯೊಳಗೆ ಅಭ್ಯಾಸ ಚಲು ಮಾಡಲಿಕ್ಕೆ ಹತ್ತಿದರೆ ಮುಂದೆ ಅವನಿಗೆ ಇಡಲ್ಪಡುವದು. ಇದರ ವಿಷಯಕ್ಕೆ ಹೆಚ್ಚಿಗೆ ಮಜಕೂರು ತಿಳಿದುಕೊಳ್ಳುವದಕ್ಕೆ ಮನಸ್ಸುಳ್ಳವರು ಸದರ ಗೃಹಸ್ಥರಿಗೆ ಅರ್ಜಿ ಮಾಡಬೆಕು.
ಇದು ಸಖೀಗೀತದ ಎರಡನೆಯ ಭಾಗವನ್ನು ಕುರಿತು.
೧
ಮಾಂದಳಿರ ತೋರಣ ಹೂಮಿಡಿ ಗುಡಿಗಟ್ಟಿ
ಮಧುಮಾಸ ಹೊರಟಿತ್ತು ನಿಬ್ಬಣಕೆ