ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಿಮೋಟ್ ಲಾಗಿನ್; ಸಮುದಾಯಗಳಲ್ಲಿ ನಾವು

ನನ್ನ ಬಳಿ ಉಬುಂಟುವಿನ ಹೊಸ ಆವೃತ್ತಿಯಾದ 'ಡ್ಯಾಪರ್' ಇಲ್ಲವಾದ್ದರಿಂದ ಅದರಲ್ಲಿ ಕನ್ನಡ ಕುರಿತ ಕೆಲವು ಸಮಸ್ಯೆಗಳನ್ನು ಟೆಸ್ಟ್ ಮಾಡಿ ನೋಡಲಾಗಿರಲಿಲ್ಲ. ಇಂದು ಹಳೆಯ ಸ್ನೇಹಿತನೊಬ್ಬ ಮಾತಿಗೆ ಸಿಕ್ಕಾಗ "ಅಯ್ಯೋ, ನನ್ನ ಕಂಪ್ಯೂಟರಿನಲ್ಲಿ ಇವತ್ತಿನ ಫ್ರೆಶ್ ಕಾಪಿ install ಮಾಡಿರುವೆ, ಅದರಲ್ಲೇ ಟೆಸ್ಟ್ ಮಾಡಿ ನೋಡು" ಎಂದ. ಈಗ ಅಮೇರಿಕದಲ್ಲಿ ಅವನ ಮನೆ.

ಲವ್ @ first sight

ಪ್ರೇಮದಾ ಹೊಳೆ ಹರಿಯೆ ಮೊದಲನೇ ನೋಟದಲೆ ,

ಬಿಸಿಯುಸಿರ ಉನ್ಮಾದ ನತರದಲಿ |

ಕೊನೆಗೊಮ್ಮೆ ಕಳಚುವುದು ಹುಸಿ ಪ್ರೇಮದಾ ಕೊಂಡಿ,

ಗೀತ ಗೋವಿಂದ

ನಾನು ಆಗ ಮೊದಲ ಪದವಿ ಪೂರ್ವ (೧೧ನೇ) ತರಗತಿ ಎಂದು ನೆನಪು. "ಹಂಸಗೀತೆ" ಚಿತ್ರದಲ್ಲಿ ಬಾಲಮುರಳಿಯ ಗೀತಗೋವಿಂದದ ಹಾಡುಗಳನ್ನು ಕೇಳಿ ಪುಳಕಿತನಾಗಿದ್ದೆ. ಸರಿ ಗೀತ ಗೀತ-ಗೋವಿಂದದ ಪುಸ್ತಕಕ್ಕೆ ಹುಡುಕತೊಡಗಿದೆ. ನನ್ನ ಅಜ್ಜಿಯ ಬಳಿ ಗೀತಗೋವಿಂದ ಓದಬೇಕು ಎಂದಾಗ ಅಷ್ಟು ದೊಡ್ಡವನಾಗಿದ್ದೀಯಾ ಎಂದು ನಕ್ಕಿದ್ದರು. ಪುಸ್ತಕವೇನೋ ಸಿಕ್ಕಿತು ಆದರೆ ನನ್ನ ಸೋಮಾರಿತನ ಪುಸ್ತಕವನ್ನು ಮೂಲೆಗೆ ಸರಿಸಿತು. ಮೊನ್ನೆ ಸಂಜಯ್ ಸುಬ್ರಹ್ಮಣ್ಯಂ ಅವರ ಕಛೇರಿ ಕೇಳಿದ ನಂತರ ಆಸಕ್ತಿ ಕೆರಳಿತು. ಅದನ್ನು ಸಂಪದದಲ್ಲಿ ಯಾವ ವರ್ಗಕ್ಕೆ ಸೇರಿಸಬೇಕು ಎಂದು ತೋರದೆ ನನ್ನ ಬ್ಲಾಗಿಗೆ ಹಾಕಲು ನಿರ್ಧರಿಸಿದೆ. ಯಾವ ವರ್ಗಕ್ಕೆ ಸೂಕ್ತ ಎಂದು ತಿಳಿಸಿದರೆ ಅಲ್ಲಿಗೆ ಸೇರಿಸಲು ಸಿದ್ಧ. (ಅಥವಾ ಇದು ಸಂಪದಕ್ಕೆ ಹಾಕಲು ಸೂಕ್ತವೇ ಅಲ್ಲವೇ ಎಂದೂ ತಿಳಿಸಿದರೆ ಒಳ್ಳೆಯದು)

ಬೇಸಿಗೆ ಬಂದಿದೆ :

೦೬-೪-೨೦೦೬ - ಗುರುವಾರ - ಮಧ್ಯಾನ್ಹ ೧-೦೦ ಗಂಟೆ

ಆತ್ಮೀಯ ಸಂಪದದ ಸ್ನೇಹಿತರೇ,
ಬೇಸಿಗೆ ಬಂದಿದೆ. ಆಹಾರದಲ್ಲಿ ಎಚ್ಚರ ವಹಿಸಿ. ಹೊರಗಡೆ ಏನನ್ನೂ ತಿನ್ನಲು ಹೋಗಬೇಡಿ. ಅದರಲ್ಲೂ ಎಣ್ಣೆ ಹಾಕಿದ ತಿಂಡಿಗಳು, ಮಸಾಲೆ ದೋಸೆ ಇತ್ಯಾದಿ, ಪಾನೀ ಪೂರಿ ಇತ್ಯಾದಿ, ಐಸ್ ಕ್ರೀಂ ಇವನ್ನೆಲ್ಲಾ ತಿನ್ನಲು ಹೋಗಬೇಡಿ. ಧಾರಾಳವಾಗಿ ಸಿಹಿ ಹಣ್ಣಿನ ರಸ ಕುಡಿಯಿರಿ. ಶುದ್ಧವಾದ ನೀರು ಯಥೇಚ್ಚವಾಗಿ ಕುಡಿಯಿರಿ. ಇಲ್ಲದಿದ್ದರೆ ಚೆನ್ನಾಗಿ ಕಾಯಿಸಿ ಆರಿಸಿರುವ ನೀರನ್ನೂ ಬೇಕಾದರೂ ಕುಡಿಯಬಹುದು. ಹೊಟ್ಟು ಸಮೇತ ಇರುವ ಧಾನ್ಯಗಳನ್ನು, ಅಂದರೆ ಪಾಲೀಶ್ ಮಾಡದಿರುವ ಕೆಂಪಕ್ಕಿ, ಹೊಟ್ಟು ತೆಗೆಯದೆ ಇರುವ ಗೋಧಿ, ಹೆಸರು ಕಾಳು, ಕಡ್ಲೆ ಕಾಳು ಇತ್ಯಾದಿ, ಎಲ್ಲಾ ತರಹದ ಮೊಳಕೆ ಬರಿಸಿದ ಕಾಳುಗಳ ಸೇವನೆಯನ್ನು ಮಾಡಿರಿ. ಪಾಲೀಶ್ ಮಾಡದೇ ಇರುವ ಕೆಂಪಕ್ಕಿ ಯನ್ನು ಊಟ ಮಾಡಿದರೆ ಈ ಕಡು ಬಿಸಿಲ ಬೇಗೆಯನ್ನು ಖಂಡಿತವಾಗಿ ಎದುರಿಸಬಹುದು. ಸುಸ್ತಾಗುವುದಿಲ್ಲ ಮತ್ತು ಸಂಕಟವಾಗುವುದಿಲ್ಲ.

ಅಜೇಯನ ರಂಗ ಪ್ರವೇಶ

ಸಂಪದಕ್ಕೆ ನನ್ನ ರಂಗ ಪ್ರವೇಶ ಇಂದೇ.. ಅದಕ್ಕೆ ಈ ಸ್ವ-ಪರಿಚಯ...

ನನ್ನ ಹೆಸರು: ಅಜೇಯ ಕುಮಾರ ... ಚಿಕ್ಕಮಗಳೂರು ಜಿಲ್ಲೆ.. ಬಾಲ್ಯ ಕಳೆದಿದ್ದೆಲ್ಲ ಬಾಳೆಹೊನ್ನೂರಿನ ಹತ್ತಿರದ ಜೇನುಗದ್ದೆಯ ಕಾಫಿ ತೋಟದ ಕಾಡಿನ ಮಡ್ಯದ ಒಂದು ಹಳ್ಳಿಯಲ್ಲಿ...ನಮ್ಮ ಹಳ್ಳಿಯಿಂದ ಬಸ್ ಗಾಗಿ ಸಹ ೭-೮ ಮೈಲಿ ಕಾಡಲ್ಲಿ ನಡೆದು ಬರಬೇಕು.. ಹಾಗಂತ ಕಾಡು ಮನುಷ್ಯ ಎಂದುಕೊಳ್ಬೇಡಿ...