ವಿಧ: ಪುಸ್ತಕ ವಿಮರ್ಶೆ
August 12, 2023
ಸ್ತ್ರೀ ಸಂವೇದನೆಗಳ ಮಾನಸಿಕ ತೊಳಲಾಟದ ಬಗ್ಗೆ ಲೇಖಕಿ ಸುಮಾ ಉಮೇಶ್ ಗೌಡ ಇವರು ತಮ್ಮ ನೂತನ ಕಾದಂಬರಿ “ಮನಸುಗಳ ಮಿಲನ" ವನ್ನು ರಚಿಸಿದ್ದಾರೆ. ಈ ೮೮ ಪುಟಗಳ ಪುಟ್ಟ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಂಥ ಕಾದಂಬರಿಯಾದರೂ ಓದಿದ ಬಳಿಕ ಅದರ ಕಥಾ ವಸ್ತು ಬಹಳ ಕಾಲ ನಮ್ಮ ಮನದಲ್ಲಿ ಉಳಿಯಲಿದೆ. ಈ ಬಗ್ಗೆ ಲೇಖಕರಾದ ಪದ್ಮನಾಭ ಡಿ. ಅವರು ತಮ್ಮ ಮುನ್ನುಡಿಯಲ್ಲಿ ಹೇಳುವುದು ಹೀಗೆ...
ಸಂಗೀತ ಸಾಹಿತ್ಯ ಕಲಾವಿಹೀನಃ
ಸಾಕ್ಷಾತ್ ಪಶೂನಾಂ ಪರಪುಚ್ಛಹೀನಃ
ತೃಣಂ ನ…
ವಿಧ: ಪುಸ್ತಕ ವಿಮರ್ಶೆ
August 11, 2023
“ನಿಮ್ಮ ಬುದ್ಧಿಯನ್ನು ಪ್ರಖರಗೊಳಿಸುವ, ನಿಮ್ಮ ಹೃದಯವನ್ನು ಶುದ್ಧಗೊಳಿಸುವ ಹಾಗೂ ನಿಮ್ಮ ಆತ್ಮವನ್ನು ಪುನಶ್ಚೇತನಗೊಳಿಸುವ ಕಥೆಗಳು” ಇದು ಈ ಪುಸ್ತಕದ ಶೀರ್ಷಿಕೆಯ ಕೆಳಗೆ ಮುಖಪುಟದಲ್ಲಿ ಮುದ್ರಿಸಲಾಗಿರುವ ಬರಹ.
ಹೌದು, ಈ ಸಂಕಲನದ ಕಥೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಇಂತಹ ಪುಟ್ಟಪುಟ್ಟ ಕಥೆಗಳು ಬಾಲಕಬಾಲಕಿಯರ, ವಯಸ್ಕರ ಹಾಗೂ ವಯೋವೃದ್ಧರ ಮನಸೂರೆಗೊಳ್ಳುತ್ತವೆ ಎಂಬುದಂತೂ ಖಂಡಿತ. ಎಲ್ಲ ದೇಶಗಳಲ್ಲಿಯೂ ಅಲ್ಲಿನ ಪರಂಪರೆಯನ್ನು ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಪ್ರಚಲಿತವಾಗಿವೆ…
ವಿಧ: ಪುಸ್ತಕ ವಿಮರ್ಶೆ
August 11, 2023
‘ಬಾವಲಿ ಗುಹೆ' ಮಕ್ಕಳಿಗೆ ಪರಿಸರದ ಮೇಲೆ ಗಣಿಗಾರಿಕೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅವರದೇ ಆದ ಸರಳ ಭಾಷೆಯಲ್ಲಿ ಹೇಳಿರುವುದು ಗಮನಿಸಬೇಕಾದ ವಿಷಯ. ಇದಲ್ಲದೆ ಚಳುವಳಿಯ ಬಗ್ಗೆ ಕೂಡ ಮಕ್ಕಳಿಗೆ ತಿಳಿಯುವಂತೆ ವಿಷಯಗಳನ್ನು ಪಾತ್ರಗಳ ಮೂಲಕ ಚರ್ಚಿಸಲಾಗಿದೆ,'' ಎನ್ನುವುದು ನನ್ನ ಅನಿಸಿಕೆ. ತಮ್ಮಣ್ಣ ಬೀಗಾರ ಅವರ ‘ಬಾವಲಿ ಗುಹೆ’ ಕೃತಿಗೆ ನಾನು ಬರೆದಿರುವ ಅನಿಸಿಕೆ ನಿಮ್ಮ ಓದಿಗಾಗಿ...
ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ (2022)…
ವಿಧ: ಪುಸ್ತಕ ವಿಮರ್ಶೆ
August 10, 2023
ವ್ಯಕ್ತಿತ್ವ ವಿಕಸನದ ಬಗ್ಗೆ ಡಾ. ಗಣಪತಿ ಹೆಗಡೆ ಇವರು ಬರೆದಿರುವ ಕಥೆಗಳು “ಮನವು ಅರಳಲಿ” ಎಂಬ ಹೆಸರಿನ ಪುಸ್ತಕವಾಗಿ ಇತ್ತೀಚೆಗೆ ಬಿಡುಗಡೆಯಾಗಿದೆ. ‘ವಿಜಯವಾಣಿ’ ದಿನ ಪತ್ರಿಕೆಯಲ್ಲಿ ‘ಮನೋಲ್ಲಾಸ' ಎಂಬ ಅಂಕಣದ ಮೂಲಕ ಹೊರಹೊಮ್ಮಿದ ಮನಸ್ಸಿಗೆ ಮುದ ನೀಡಿದ ಕಥೆಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕಕ್ಕಾಗಿ ಲೇಖಕರು ಬರೆದ ತಮ್ಮ ಮನದಾಳದ ಮಾತುಗಳ ಒಂದು ಝಲಕ್ ನಿಮಗಾಗಿ...
“ಮನವು ಅರಳಲಿ' ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೆಲವು ಕಥೆಗಳ ಸಂಗ್ರಹದ ಈ ಕಿರುಪುಸ್ತಕವನ್ನು ತಮ್ಮ ಕೈಗಿಡಲು ಬಹಳವೇ…
ವಿಧ: ಬ್ಲಾಗ್ ಬರಹ
August 09, 2023
ಈಗ ಈ ವೀಡಿಯೊದಲ್ಲಿ ಕಾಣಿಸಿಕೊಳ್ಳುವ ದಿಗ್ಗಜ ಸಂಗೀತಕಲಾವಿದರು ಭಾರಿ ಸುಸಜ್ಜಿತ ಆರ್ಕೆಸ್ಟ್ರಾ ಸೆಟ್ ನಲ್ಲಿ ಸೆಲೆಬ್ರಿಟಿಗಳಾದ
ಹರಿಹರನ್, ಶುಭಾ ಮುದ್ಗಲ್, ಉಷಾ ಊಧಪ್ ಮತ್ತು ಹಲವು ಯುವ ಸಂಗೀತ ಪ್ರತಿಭೆಗಳ ಜೊತೆಗೂಡಿ ಸಂಭ್ರಮದಿಂದ ಹಾಡಿರುವ ಸಾಮೂಹಿಕ ಗೀತೆಯಾಗಿರುವುದನ್ನು ಕಾಣುತ್ತೇವೆ.
೧೯೬೩ ರಲ್ಲಿ ಬಂಗಾಳಿ ನಿರ್ದೇಶಕ, ನಿರ್ಮಾಪಕ, ಅಸಿತ್ ಸೇನ್ ಮೊದಲು ಬಂಗಾಳಿ ಭಾಷೆಯಲ್ಲಿ "ಉತ್ತರ ಫಾಲ್ಗುಣಿ "ಎಂಬ ಚಿತ್ರ ನಿರ್ಮಿಸಿದ್ದರು. ಅದರಲ್ಲೂ ಮುಖ್ಯ ಭೂಮಿಕೆಯಲ್ಲಿ ಸುಚಿತ್ರ ಸೇನರೇ…
ವಿಧ: ಪುಸ್ತಕ ವಿಮರ್ಶೆ
August 08, 2023
ಕೃಷ್ಣ ಕೌಲಗಿ ಅವರ ಬರಹಗಳ ಸಂಗ್ರಹ ‘ತುಂತುರು ಇದು ನೀರ ಹಾಡು'. ಸುಮಾರು ೧೭೦ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಶ್ರೀ ದೇಶಪಾಂಡೆ ಇವರು. ತಮ್ಮ ಮುನ್ನುಡಿಯಲ್ಲಿ ಲೇಖಕಿಯ ಕನಸುಗಳನ್ನು ಬೆಂಬಲಿಸುತ್ತಾ ಜಯಶ್ರೀ ಅವರು ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ...
“ಇವುಗಳಲ್ಲಿ ವಿನೋದವಿದೆ, ವಿಷಾದವಿದೆ, ಖುಶಿಯಿದೆ, ಖಯಾಲಿಗಳಿವೆ, ಕಥೆಗಳಿವೆ, ಕನಸು, ನೀತಿ, ಬದುಕಿನ ಪಾಠಗಳೂ ಇಲ್ಲಿವೆ" ಎನ್ನುತ್ತಾರೆ 'ತುಂತುರು ಇದು ನೀರ ಹಾಡು' ಪುಸ್ತಕದ ಸೃಷ್ಟಿಕರ್ತೆ ಶ್ರೀಮತಿ ಕೃಷ್ಣಾ…
ವಿಧ: ರುಚಿ
August 08, 2023
ಒಂದು ಬೌಲ್ ಗೆ ಕಡಲೇ ಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು, ಎಳ್ಳು, ಎಣ್ಣೆ ಮತ್ತು ನೀರು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ತೀರಾ ತೆಳುವಾಗದಿರುವಂತೆ ನೋಡಿ. ಸ್ವಲ್ಪ ಗಟ್ಟಿಯಾಗಿ ಪೇಸ್ಟ್ ನಂತೆ ಇರಲಿ. ನಂತರ ಬ್ರೆಡ್ ಸ್ಲೈಸ್ ನ ೨ ಭಾಗಕ್ಕೆ ಕಲಸಿದ ಹಿಟ್ಟನ್ನು ಸ್ವಲ್ಪ ಹಚ್ಚಿ. ನಂತರ ಅದನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಸಾಸ್ ಅಥವಾ ಕೆಚಪ್ ಜೊತೆ ಸವಿಯಲು ಚೆನ್ನಾಗಿರುತ್ತದೆ.
ಬೇಕಿದ್ದರೆ ಕಲಸಿದ ಹಿಟ್ಟಿಗೆ…
ವಿಧ: ಪುಸ್ತಕ ವಿಮರ್ಶೆ
August 05, 2023
ಕರ್ನಾಟಕದಲ್ಲಿ ಸಾವಿರಾರು ಬಗೆಯ ಜನಪದ ಆಟಗಳು ಇರಬಹುದು. ಕಾಲಕ್ರಮೇಣ ಹಲವು ಆಟಗಳು ಆಡುವವರಿಲ್ಲದೇ, ಅದನ್ನು ಮುಂದುವರೆಸಲು ಗೊತ್ತಿಲ್ಲದೆಯೇ ಇತಿಹಾಸದ ಪುಟಗಳನ್ನು ಸೇರಿಕೊಂಡಿರಬಹುದು. ಇಂತಹ ಹಲವಾರು ಆಟ ವೈವಿಧ್ಯವನ್ನು ಹುಡುಕಾಡಿ ಸಂಪಾದಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ರೇಣುಕಾ ಕೋಡಗುಂಟಿ ಇವರು. ಕರ್ನಾಟಕದ ಜನಪದ ಆಟಗಳು ಪುಸ್ತಕಕ್ಕೆ ಅವರು ಬರೆದ ಸಂಪಾದಕರ ನುಡಿಯಲ್ಲಿ ವ್ಯಕ್ತವಾದ ಭಾವಗಳು ಅಕ್ಷರರೂಪದಲ್ಲಿ ಇಲ್ಲಿ ನೀಡಲಾಗಿದೆ...
“ಕರ್ನಾಟಕದ ವೈವಿಧ್ಯತೆಯನ್ನು ಸಮಾಜದ ಎಲ್ಲ…
ವಿಧ: ಪುಸ್ತಕ ವಿಮರ್ಶೆ
August 03, 2023
ಡಾ. ಎಂ ಎಸ್ ಮಣಿ ಇವರು ಬರೆದ ‘ಗವಿ ಮಾರ್ಗ' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ‘ಕತ್ತಲ ಹಾದಿಯ ಪಯಣ' ಎಂದು ಮುಖಪುಟದಲ್ಲೇ ಮುದ್ರಿಸಿ ಕೃತಿಯನ್ನು ಓದುವಂತೆ ಕುತೂಹಲ ಮೂಡಿಸಿದ್ದಾರೆ. ಈ ಕೃತಿಗೆ ಭಾರತದ ಸುಪ್ರೀಂ ಪೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ನ್ಯಾ. ವಿ.ಗೋಪಾಲ ಗೌಡ ಇವರು ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಕೃತಿಗೆ ಪತ್ರಕರ್ತರಾದ ಬನ್ಸಿ ಕಾಳಪ್ಪ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿವೆ...
“…
ವಿಧ: ರುಚಿ
August 03, 2023
ಕಾದ ತವಾಗೆ ಒಂದು ಚಮಚ ಎಣ್ಣೆಯನ್ನು ಹಾಕಿ. ಅದಕ್ಕೆ ರವೆ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ರಾಗಿ ಹುಡಿಯನ್ನು ಸೇರಿಸಿ ಐದು ನಿಮಿಷ ಕಾಲ ಚೆನ್ನಾಗಿ ಹುರಿಯಿರಿ. ಅದನ್ನು ಒಲೆಯಿಂದ ತೆಗೆದು ಪಕ್ಕಕ್ಕೆ ಇಡಿ. ಕಾದ ತವಾಗೆ ಮತ್ತೆ ಎರಡು ಚಮಚ ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ, ಕಡಲೇ ಬೇಳೆ, ಗೋಡಂಬಿ ಹಾಕಿ ಚೆನ್ನಾಗಿ ಒಗ್ಗರಣೆ ತಯಾರಿಸಿ.
ಇದಕ್ಕೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕರಿಬೇವು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಎರಡೂವರೆ ಕಪ್ ನೀರನ್ನು ಸೇರಿಸಿ ರುಚಿಗೆ…