ಅವರ ಸ್ಥಾನಗಳನು ತುಂಬಲು ಇನ್ನಾರೂ ಬಾರರು!!!

ಅವರ ಸ್ಥಾನಗಳನು ತುಂಬಲು ಇನ್ನಾರೂ ಬಾರರು!!!

ತನ್ನ ದೀರ್ಘ ಪಯಣದ ಕೊನೆ ಕಂಡರು ಜ್ಯೊತಿ ಬಸು


ಮಾರ್ಗದರ್ಶಕರಿಲ್ಲದಂತೆ ಈಗ ಎಡಪಂಥೀಯರ ಬಸ್ಸು


 


ಆ ಜ್ಯೊತಿ ಬಸುವಿಗೆ ಕನ್ನಡಿಗರೆಲ್ಲರೂ ಸದಾ ಋಣಿಗಳು


ಆತನೇ ಆಗಿದ್ದಿದ್ದರೆ ಗೌಡರಾಗುತ್ತಿರಲಿಲ್ಲ ಪ್ರಧಾನಿಗಳು


 


ನಿನ್ನೆ ಆ ಸಾವಿನ ಸುದ್ದಿಯ ಓದಿ, ಕೇಳಿ, ಮಲಗಿ ಎದ್ದು


ಬೆಳಗಾಗುವಾಗ ಊರೆಲ್ಲಾ ಇನ್ನೊಂದು ಸಾವಿನ ಸದ್ದು


 


ತನ್ನ ಶಿಷ್ಯ ರಾಮಾಚಾರಿಯ ಹಿಂಬಾಲಿಸಿ ನಡೆದೇ ಬಿಟ್ರು


ನಶ್ವರರು ಎಲ್ಲರೆಂದು ಬೋಧಿಸಿ ಹೋದರು ನಮ್ಮೀ ಮೇಷ್ಟ್ರು


 


ಗಾನಲೋಕದಲ್ಲೊಬ್ಬ ಅಶ್ವತ್ಥ ನಟನೆಯಲ್ಲೊಬ್ಬನೇ ಅಶ್ವತ್ಥ


ಇಬ್ಬರನೂ ಕಳೆದುಕೊಂಡೀಗ ಆ ಲೋಕಗಳೆರಡೂ ಅಸ್ವಸ್ಥ


 


ಮೂರೇ ವಾರಗಳಲ್ಲಿ ಅಗಲಿದ ನಾಲ್ವರೂ ಮಹಾ ಸಾಧಕರು


ಸದ್ಯಕ್ಕೆ ಅವರ ಸ್ಥಾನಗಳನು ತುಂಬಲು ಇನ್ನಾರೂ ಬಾರರು!!!


********************************


 


-ಆಸು ಹೆಗ್ಡೆ


 


 

Rating
No votes yet

Comments