ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!
ಯಾರೋ ಕೂಗಿದಂತಾಯ್ತು ಕುಮಾರನಿಗೆ
ಅಲ್ಲಿ ಹೊರಟಿತ್ತು ತೇಜಸ್ವಿನಿಯ ಮೆರವಣಿಗೆ
ಅತ್ತ ತೇಜಸ್ವಿನಿಯ ನಿದ್ದೆಗೂ ಭಂಗ ಬಂತು
ಯೋಗಿಯ ವಿಜಯ ಘೋಷ ಕೇಳಿ ಬಂತು
ಬಂಗಾರಪ್ಪ ತೂಕಡಿಸಿ ಬೆಚ್ಚಿ ಬಿದ್ದ ಕೂತಲ್ಲೇ
ರಾಘವೇಂದ್ರನ ಜಪ ಮಾಡುತ್ತಿದ್ದ ಹಗಲಲ್ಲೇ
ಸಾಂಗ್ಲಿಯಾನನ ಬಡಬಡಿಕೆ ಅರೆ ನಿದ್ರೆಯಲ್ಲಿ
ಗೋಪಿನಾಥಗೆ ಮಾತ್ರ ಗೊರಕೆ ನಿಶ್ಚಿಂತೆಯಲ್ಲಿ
ಅನಂತನಿಗಿಲ್ಲಿ ಹಗಲೆಲ್ಲಾ ಕೃಷ್ಣನದೇ ಧ್ಯಾನ
ಕೃಷ್ಣನಿಗೂ ಈಗ ಅನಂತ ನಾಮದಲೇ ಸ್ನಾನ
ಗೌಡರೂ ಚೆನ್ನಮ್ಮನೂ ಮತ್ತೆ ಆಗಿ ತಯಾರು
ಕನಸಲ್ಲೇ ಏರಿದ್ದಾರೆ ಪ್ರಧಾನಮಂತ್ರಿಯ ಕಾರು
ಖರ್ಗೆ ಸೋತರೆ ಸಿದ್ರಾಮಯ್ಯನದು ಕುಹಕ ನಗೆ
ಯಾರೇನೆಂದರೂ ವಿರೊಧ ಪಕ್ಷದ ಕುರ್ಚಿ ತನಗೇ
ಎಲ್ಲರೊಳಗೂ ಒಂದಲ್ಲ ಒಂದು ರೀತಿಯ ತಳಮಳ
ಏನಾಗುವುದೋ ಫಲಿತಾಂಶ ಎಂದೆನ್ನುವ ಕಳವಳ
ಈ ಕಾಯುವಿಕೆ ಬೇಕಿಲ್ಲ ಸೋತರೂ ಇಲ್ಲ ಚಿಂತೆ
ಮನದೊಳಗೀಗ ವಿಚಿತ್ರ ಯೋಚನೆಗಳದೇ ಸಂತೆ
ಈ ಒಂದೊಂದು ದಿನವೂ ಒಂದೊಂದು ವರ್ಷದಂತೆ
ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಿದೆಯಂತೆ
Rating
Comments
ಉ: ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!
In reply to ಉ: ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!! by vinayak.mdesai
ಉ: ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!
ಉ: ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!
In reply to ಉ: ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!! by Shashikanth. Birge
ಉ: ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!
ಉ: ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!
In reply to ಉ: ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!! by ambika
ಉ: ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!