ಪರೀಕ್ಷೆ
ಸಖೀ,
ರಾಮಾಯಣದಲಿ,
ವನವಾಸ ಮಾಡಬೇಕಾಗಿ
ಬಂದುದು ಸಾಧ್ವಿ ಸೀತೆಗೆ;
ಕ್ರೂರಿ ಮಂಥರೆಗೂ ಅಲ್ಲ,
ದುಷ್ಟೆ ಕೈಕಯಿಗೂ ಅಲ್ಲ.
ಮಹಾಭಾರತದಲಿ ಕಷ್ಟವನುಂಡವರು,
ಕೃಷ್ಣನ ಸಖರಾದ ಪಾಂಡವರು;
ಧರ್ಮ ಭ್ರಷ್ಟರಾದ ಕೌರವರಲ್ಲ.
ಅಂದು ಸತ್ಯವಾದಿ ಹರಿಶ್ಚಂದ್ರನಿಗೂ
ಬಂದಿತ್ತು ಕೇಡುಗಾಲ,
ಆಗಿದ್ದ, ಆತನೂ
ಸ್ಮಶಾನದಲಿ ದ್ವಾರಪಾಲ.
ರಾಮನ ಪಾದ ಸ್ಪರ್ಶಕ್ಕಾಗಿ
ಕಲ್ಲಾಗಿ ಕಾದಿರಲಿಲ್ಲವೇ ಅಹಲ್ಯೆ?
ಒಮ್ಮೆ ಯೋಚಿಸಿ ನೋಡು,
ನಿಜವಾಗಿ ನೀನಿದನೆಲ್ಲ ಬಲ್ಲೆ.
ಜೀವನದಲಿ ಕಷ್ಟವನು
ಅನುಭವಿಸ ಬೇಕಾದವರು,
ಆ ದೇವನಿಗೆ ಪ್ರಿಯರಾದ,
ಸದ್ಗುಣಿಗಳು ಸಖೀ.
ದುರ್ಗುಣಿಗಳು ಎಂತಿದ್ದರೆ
ಅವನಿಗೆ ಏನಂತೆ?
ತನಗೆ ಪ್ರಿಯರಾದವರ
ಪರೀಕ್ಷೆ ನಿತ್ಯ ನಡೆಸ
ಬೇಕಾಗಿದೆಯಂತೆ
ಚಿನಿವಾರನ ಪೆಟ್ಟಿಂದಲೇ
ಚಿನ್ನಕ್ಕೆ ಶೋಭೆ ಬರುವಂತೆ
ಈ ನಿತ್ಯ ಪರೀಕ್ಷೆಗಳಿಂದಲೇ
ನಾವೂ ಪರಿಶುದ್ಧರಾಗಬೇಕಂತೆ
ಅದಕಾಗಿ ಜೀವನದಲಿ
ಸದಾ ಎಚ್ಚರವಿರಬೇಕು
ಯಾವುದೇ ಅನಾಚಾರ
ಆಗದಂತೆ ದೃಢ ಚಿತ್ತರಾಗಿರಬೇಕು
ಕಷ್ಟ-ಕಾರ್ಪಣ್ಯಗಳನು ನಾವು,
ಅಂದು ಕಲ್ಲಾಗಿದ್ದ ಅಹಲ್ಯೆಯಂತಿದ್ದು
ಸಹಿಸಬೇಕು, ಜಯಿಸಬೇಕು
ಜಲಧಾರೆಗೆ ಎದುರಾಗಿ
ಈಜಿ ದಡವ ಸೇರುವಂತೆ
ಎಲ್ಲವನೂ ದಾಟಿ ಈ ಆತ್ಮವನು,
ಆ ಪರಮಾತ್ಮನಲಿ ಲೀನವಾಗಿಸಬೇಕು!
*-*-*-*-*-*-*-*-*-*
Comments
ಉ: ಪರೀಕ್ಷೆ
In reply to ಉ: ಪರೀಕ್ಷೆ by roopablrao
ಉ: ಪರೀಕ್ಷೆ
In reply to ಉ: ಪರೀಕ್ಷೆ by asuhegde
ಉ: ಪರೀಕ್ಷೆ
In reply to ಉ: ಪರೀಕ್ಷೆ by Nagaraj.G
ಉ: ಪರೀಕ್ಷೆ
In reply to ಉ: ಪರೀಕ್ಷೆ by asuhegde
ಉ: ಪರೀಕ್ಷೆ
In reply to ಉ: ಪರೀಕ್ಷೆ by Nagaraj.G
ಉ: ಪರೀಕ್ಷೆ
In reply to ಉ: ಪರೀಕ್ಷೆ by asuhegde
ಉ: ಪರೀಕ್ಷೆ
In reply to ಉ: ಪರೀಕ್ಷೆ by Nagaraj.G
ಉ: ಪರೀಕ್ಷೆ
In reply to ಉ: ಪರೀಕ್ಷೆ by asuhegde
ಉ: ಪರೀಕ್ಷೆ
ಉ: ಪರೀಕ್ಷೆ
In reply to ಉ: ಪರೀಕ್ಷೆ by msudan86
ಉ: ಪರೀಕ್ಷೆ
ಉ: ಪರೀಕ್ಷೆ
In reply to ಉ: ಪರೀಕ್ಷೆ by avikamath77
ಉ: ಪರೀಕ್ಷೆ
ಉ: ಪರೀಕ್ಷೆ
In reply to ಉ: ಪರೀಕ್ಷೆ by manjunath s reddy
ಉ: ಪರೀಕ್ಷೆ
ಉ: ಪರೀಕ್ಷೆ