ಮಾತಿನಲ್ಲಿ ಹುರುಳು

ಮಾತಿನಲ್ಲಿ ಹುರುಳು

ಕೆಲದಿನಗಳ ಹಿಂದೆ ಒಂದು ಸರಸ್ವತಿ ಸ್ತುತಿಯ ಅನುವಾದದ ಪ್ರಯತ್ನ ಮಾಡಿದ್ದೆ. ಇವತ್ತು ಶಿವ-ಪಾರ್ವತಿಯರ ಮೇಲೊಂದು ಸ್ತುತಿ.

 

ಕಾಳಿದಾಸನ  ರಘುವಂಶದ ಮಂಗಳ ಶ್ಲೋಕ ಹೀಗಿದೆ:

 

वागर्थाविव सम्पृक्तौ वागर्थ प्रतिपत्तयॆ |

जगतः पितरौ वन्दे पार्वती परमेश्वरौ ॥

 

ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||

 

ಕನ್ನಡಕ್ಕೆ ನನ್ನ ಪ್ರಯತ್ನ:

 
ನಾ ತಲೆವಾಗುವೆ ಶಿವಶಿವೆಗೆ
ಈ ಜಗದಲೆಲ್ಲರ ಹೆತ್ತವರ 
ಬಿಡದೊಡಗೂಡಿಯೆ ಇರುವರಿಗೆ
ಮಾತಲಿ ಹುರುಳು ಬೆಸೆದಂತೆ
 
ಪದಪದಕ್ಕೆ ಅನುವಾದ ಮಾಡದಿದ್ದರೂ, ಒಟ್ಟಾರೆ ಭಾವನೆಯನ್ನು ಕನ್ನಡಕ್ಕೆ ತರುವ ಪ್ರಯತ್ನವಷ್ಟೇ.
 
ಶಿವ ಪಾರ್ವತಿಯರನ್ನು ಸ್ಮರಿಸುವುದು ಅವರವರಿಗೆ ಬಿಟ್ಟದ್ದು. ಆದರೆ, ಏನು ಮಾತಾಡುವಾಗಲೂ ಹುರುಳಿಲ್ಲದೇ ಆಡಬಾರದು
ಎಂಬುದಕ್ಕೆ ಒಂದು ಎಚ್ಚರಿಕೆ ಇದು ಎಲ್ಲರಿಗೆ ;)

 

-ಹಂಸಾನಂದಿ

Rating
No votes yet