ಮುಚ್ಚಿಟ್ಟ ಸತ್ಯ
ಕನಕನತ್ತಲೇ ತಿರುಗಿ ನಿಂತ ಕೃಷ್ಣ
ಶಬರಿಯತ್ತ ನಡೆಯುತ್ತಲೇ ಬಂದ ರಾಮ
ಅಂತ್ಯಜನ ಜೊತೆಗೆ ಇರಬಯಸುವ ಮೋಹ;
ಕತೆ ಕೇಳುತ್ತ ದುಃಖ ಉಮ್ಮಳಿಸಿ
ಪರಮಾತ್ಮನ ಸಮಾನತೆಗೆ ಕೈ ಮುಗಿಯುವವರಿಗೆ
ಒಳಗೇ ಮುಚ್ಚಿಟ್ಟ ಸತ್ಯ ಅರ್ಥವಾಗುವುದಿಲ್ಲ:
ಇದೆಲ್ಲ ಈ ವ್ಯವಸ್ಥೆಯ ಮತ್ತೊಂದು ಮುಖ-
ಹತ್ತಿರ ಬರಬಲ್ಲ ತಾಕತ್ತು ಇದ್ದವರಿಗೆಲ್ಲ
ಗುರಿ ಮುಟ್ಟುವ ಮೊದಲೇ ಶೈತ್ಯೋಪಚಾರ
ಮುಖ್ಯವಾಹಿನಿಯಿಂದ ದೂರದೂರಕ್ಕೇ ಇಡುವ
ಕಂದಕದ ಆಳ ಹೆಚ್ಚಿಸಿದವರ ದಿವ್ಯ ಹುನ್ನಾರ!
*******
Rating