ಪುಸ್ತಕ ಪರಿಚಯ

ಲೇಖಕರು: Ashwin Rao K P
December 31, 2021
ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಅನುಮಾನಾಸ್ಪದ ಸಾವಿನ ಕುರಿತು ಬೆಳಕು ಚೆಲ್ಲುವ ‘ತಾಷ್ಕೆಂಟ್ ಡೈರಿ' ಎಂಬ ಪುಸ್ತಕ ಬರೆದ ಖ್ಯಾತ ಲೇಖಕರಾದ ಎಸ್.ಉಮೇಶ್ ಅವರ ಲೇಖನಿಯಿಂದ ಹೊರಬಂದ ನೂತನ ಕೃತಿ ‘ಸಿಯಾಚಿನ್'. ಜಗತ್ತಿನ ಭಯಾನಕ ಯುದ್ಧಭೂಮಿಯ ಸಾಹಸಗಾಥೆ ಇದು. ಜನ ಸಾಮಾನ್ಯರಿಗೆ ಹೋಗಲು ಕಷ್ಟ ಸಾಧ್ಯವಾದ, ಅಲ್ಲಿಯ ಬಗ್ಗೆ ಕೇಳಿಯಷ್ಟೇ ತಿಳಿದಿರುವವರಿಗೆ ಸಮಗ್ರ ಮಾಹಿತಿಯನ್ನು ಒಂದು ಪ್ರವಾಸ ಕಥನದ ರೀತಿಯಲ್ಲಿ ಬರೆದಿದ್ದಾರೆ. ಲೇಖಕರು ಸಿಯಾಚಿನ್ ದಾರಿಯಲ್ಲಿ ಕಂಡ ಪ್ರತಿಯೊಂದು ಪುಟ್ಟ…
ಲೇಖಕರು: addoor
December 30, 2021
ಕುವೆಂಪು ಅವರ “ಮಲೆನಾಡಿನ ಚಿತ್ರಗಳು" ಹಲವು ಬಾರಿ ಮರುಮುದ್ರಣವಾಗಿರುವ ಕನ್ನಡದ ಜನಜನಿತ ಪುಸ್ತಕ. “ಮಲೆನಾಡಿಗೆ ಬಾ" ಎಂಬ ಕವಿತೆ ಮತ್ತು ಹನ್ನೆರಡು ಅಕ್ಷರಚಿತ್ರಗಳ ಮೂಲಕ ಮಲೆನಾಡಿನ ಪ್ರಕೃತಿ ಮತ್ತು ಬದುಕನ್ನು ಅಮರವಾಗಿಸಿರುವ ಪುಸ್ತಕ. (ಮೊದಲ ಮುದ್ರಣ ೧೯೩೩) “ಮಲೆನಾಡಿನ ಚಿತ್ರಗಳು" ಮೂಡಿ ಬಂದ ಬಗೆಯನ್ನು ಮುನ್ನುಡಿಯಲ್ಲಿ ಕುವೆಂಪು ಅವರ ಆಪ್ತವಾಗಿ ಹೀಗೆ ತಿಳಿಸಿದ್ದಾರೆ: “ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರುನಾಡಿನ ಚೆಲುವು ಗೆಲುವುಗಳನ್ನೂ…
ಲೇಖಕರು: Ashwin Rao K P
December 28, 2021
ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು ಪುಸ್ತಕ ಬರೆದವರು ಪತ್ರಕರ್ತರಾದ ರವಿ ಬೆಳಗೆರೆ ಇವರು. ಇವರು ತಮ್ಮ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ಇಲ್ಲಿ ಆರು ದಶಕ ಅವಿಚ್ಛಿನ್ನವಾಗಿ ಹಾರಿದ್ದು ಕಾಂಗ್ರೆಸ್ ಪತಾಕೆ. ನನ್ನ ಜಿಲ್ಲೆಯ ಕೆನ್ನೆ, ಬೆಟ್ಟಗಳ ಎದೆಗೆ ಮೊದಲ ಹಾರೆ ಹಾಕಿದ್ದೂ ಕಾಂಗ್ರೆಸಿಗರೇ. ಇಂದಿರಾ ಗಾಂಧಿಯಿಂದ ಹಿಡಿದು ಸೋನಿಯಾ ಗಾಂಧಿಯ ತನಕ ನಿರಂತರವಾಗಿ ಕಾಂಗ್ರೆಸ್ ಅಧಿನಾಯಕರು ಹೇಳಿದ ಸರಣಿ ಸುಳ್ಳುಗಳನ್ನು ನಮ್ಮ ಜನ ಕೇಳಿಸಿಕೊಂಡೇ ಬಂದಿದ್ದಾರೆ. ಬಡತನ ಮತ್ತು ಅಮಾಯಕತೆ…
ಲೇಖಕರು: Ashwin Rao K P
December 24, 2021
ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಜೋಗಿಯವರು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದ ಲೇಖನಗಳ ಸಂಗ್ರಹವೇ ‘ರವಿ ಕಂಡದ್ದು-ರವಿ ಕಾಣದ್ದು’. ರವಿ ಕಂಡದ್ದು ವಿಭಾಗದಲ್ಲಿ ರವಿ ಬೆಳಗೆರೆಯವರ ಲೇಖನಗಳಿವೆ. ಇವುಗಳ ವೈಶಿಷ್ಟ್ಯವೆಂದರೆ ಬದುಕನ್ನು ತಲಸ್ಪರ್ಶಿಯಾಗಿ ನೋಡುವ ಕ್ರಮ. ಕಂಡದ್ದನ್ನು ಚುರುಕಾಗಿ, ಆಸಕ್ತ ಪೂರ್ಣವಾಗಿ ದಾಖಲಿಸುವ ಅಭಿವ್ಯಕ್ತಿ ವಿಧಾನ ಮತ್ತು ಇವೆಲ್ಲಕ್ಕೂ ಒಂದು ಆರೋಗ್ಯಪೂರ್ಣ ವ್ಯಂಗ್ಯವನ್ನು ಬೆರೆಸಿ ಹೇಳಬಲ್ಲ ಜೀವಂತ ಶೈಲಿ. ಲಾಲ್ ಬಾಗ್ ಪ್ರೇಮಿಗಳ ಬಗ್ಗೆಯಾಗಲೀ, ಶೆಟ್ಟರುಗಳ…
ಲೇಖಕರು: addoor
December 23, 2021
ಜಯಶ್ರೀ ಕಾಸರವಳ್ಳಿ ಅವರ ಎರಡನೆಯ ಕಥಾ ಸಂಕಲನ ಇದು. ಶಿವಮೊಗ್ಗದಲ್ಲಿ ಬಾಲ್ಯದ ಶಿಕ್ಷಣ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದವರು. ಹಲವು ವರುಷ ಚೆನ್ನೈಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಅನಂತರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವಿಶಿಷ್ಟ ಸಂವೇದನೆಯ ಕತೆಗಾರ್ತಿಯೆಂದು ಗುರುತಿಸಲ್ಪಟ್ಟಿರುವ ಜಯಶ್ರೀ, "ನನ್ನ ಮಾತಿ"ನಲ್ಲಿ ಬಾಲ್ಯದ ಘಟನೆಯೊಂದನ್ನು ಹಂಚಿಕೊಂಡು (ಮೂರು ಹೆಣ್ಣು ಮಕ್ಕಳನ್ನು ಹೆತ್ತ ತಾಯಿಯೊಬ್ಬಳು, ಗಂಡು ಮಗುವಿಗಾಗಿ ಮನೆಯವರೆಲ್ಲರ ಒತ್ತಾಯಕ್ಕೆ…
ಲೇಖಕರು: Ashwin Rao K P
December 21, 2021
ಹೆಸರೇ ಹೇಳುವಂತೆ ಇದೊಂದು ಅಡುಗೆ ಪುಸ್ತಕ. ಚಪಾತಿಗೆ ಸೂಕ್ತವೆನಿಸುವ ೧೦೦ ಕರಿಗಳನ್ನು ಅಥವಾ ಮೇಲೋಗರಗಳನ್ನು ಲೇಖಕಿಯವರು ಈ ಪುಸ್ತಕದಲ್ಲಿ ನೀಡಿದ್ದಾರೆ. ದಿನಕ್ಕೊಂದು ಕರಿಯನ್ನು ಮಾಡಿದರೂ ನೂರು ದಿನಕ್ಕೆ ತೊಂದರೆಯಿಲ್ಲ.   ಕರ್ನಾಟಕ ಸರಕಾರದಲ್ಲಿ ಸಚಿವೆಯಾಗಿದ್ದ ರಾಣಿ ಸತೀಶ್ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ ಹದವರಿತು ಅಡುಗೆ ಮಾಡುವುದು ಒಂದು ಕಲೆ. ಅಡುಗೆಯಲ್ಲಿ ವೈವಿಧ್ಯತೆಯನ್ನು ಕಾಣಿಸುವ ಕಲಾವಂತಿಕೆಯ ಜೊತೆಗೆ ಬದುಕಿಗೆ ಶಕ್ತಿ ಕೊಡುವ,…