ಪುಸ್ತಕ ಪರಿಚಯ
ಲೇಖಕರು: hema hebbagodi
July 08, 2013
ಅವಳು ಎಲ್ಲ ಮಕ್ಕಳಂತೆ ಎಲ್ಲದರ ಬಗ್ಗೆ ಅಪಾರ ಕುತೂಹಲ ಮತ್ತು ಅಚ್ಚರಿ ತುಂಬಿಕೊಂಡ ಹುಡುಗಿ. ಅವಳು ಕುತೂಹಲ ತಡೆಯಲಾಗದೆ ಮಾಡುತ್ತಿದ್ದ ಕೆಲಸಗಳೇ ದೊಡ್ಡವರ ಲೋಕದಲ್ಲಿ ತುಂಟತನ ಎಂದು ಕರೆಸಿಕೊಳ್ಳುತ್ತಿದ್ದ ತರಲೆಗಳು. ಶಾಲೆಗೆ ಸೇರಿದ ಹೊಸದರಲ್ಲಿ ಆ ಶಾಲೆಯ ಡೆಸ್ಕ್ ಅವಳ ಇಂತಹ ಕುತೂಹಲ ಮತ್ತು ಮೆಚ್ಚುಗೆಗೆ ಕಾರಣವಾಯಿತು. ತೆಗೆದು ಮುಚ್ಚಬಹುದಾಗಿದ್ದ ಆ ಡೆಸ್ಕ್ ಅವಳ ಪ್ರೀತಿಯ ಆಟದ ವಸ್ತುವಾಯಿತು. ಅದೇ ಅವಳ ಟೀಚರ್ಗೆ ಕಿರಿಕಿರಿಯುಂಟುಮಾಡಿತು. ಇದು ಸಾಲದೆಂಬಂತೆ ಬೀದಿ ಹಾಡುಗಾರರ ಕಡೆಗಿನ ಇವಳ…
5
ಲೇಖಕರು: hema hebbagodi
July 03, 2013
ಸಿನೆಮಾ... ಸಿನೆಮಾ...ಸಿನೆಮಾ... ನಮ್ಮ ಬದುಕನ್ನು ವ್ಯಾಪಿಸಿರುವ ರೀತಿಯೇ ಅನನ್ಯ. ಸಿನೆಮಾ ಆಧುನಿಕ ಬದುಕಿನಲ್ಲಿ ಒಂದು ಧರ್ಮದ ಹಾಗೆ ಎನ್ನುವುದು ನಿಜವಲ್ಲವೆ. ಬದುಕಿನ ಹಲವು ರೀತಿ ರಿವಾಜುಗಳನ್ನು ಸಿನೆಮಾ ಪ್ರಭಾವಿಸುವ ರೀತಿ ಕುತೂಹಲಕಾರಿಯಾದದ್ದು. ಅದರಲ್ಲೂ ಸಣ್ಣ ವಯಸ್ಸಿನ ಬೆರಗು ಕಣ್ಣುಗಳ ಮೂಲಕ ನಮ್ಮೊಳಗೆ ಪ್ರವೇಶ ಪಡೆಯುವ ನಮ್ಮ ನೆಚ್ಚಿನ ತಾರೆಯರು ತಮ್ಮೆಲ್ಲ ಹಾವಭಾವ ನಡೆನುಡಿಗಳೊಂದಿಗೆ ನಮ್ಮ ಬದುಕಿನ ಹಲವು ವರ್ತನೆಗಳನ್ನು ಸೂಕ್ಷ್ಮವಾಗಿ ಪ್ರಭಾವಿಸುತ್ತಿರುತ್ತಾರೆ. ನಮ್ಮ ಹಾವಭಾವ,…
1
ಲೇಖಕರು: sunilkgb
June 17, 2013
ಬಹಳ ದಿನಗಳಿಂದ ಏನನ್ನು ಸರಿಯಾಗಿ ಓದಲಾಗುತ್ತಿರಲಿಲ್ಲಾ,ನಿನ್ನೆ ಹಟಕ್ಕೆ ಬಿದ್ದು ಎಸ್.ಎಲ್.ಭೈರಪ್ಪ ನವರ ಜಲಪಾತ ಕಾದಂಬರಿಯನ್ನು ಅರಗಿಸಿಕೊಂಡೆ.ಕಲೆಯ ಹುಟ್ಟು ಮತ್ತು ಉದ್ದೇಶ,ಲೈಂಗಿಕ ತೃಪ್ತಿ ಮತ್ತು ಜೀವನ ಸೃಷ್ಟಿಯ ಪೂರಕತೆ,ನಗರ ಮತ್ತು ಹಳ್ಳಿ ಜೀವನದ ತಾಕಲಾಟ ಜಲಪಾತದಲ್ಲಿ ಚರ್ಚಿತವಾದ ವಿಷಯಗಳು.ಚಿತ್ರಕಲೆ ಮತ್ತು ಶಾಸ್ತ್ರೀಯ ಸಂಗೀತದಿಂದ ಸಮಾನ ಅಂತರ ಕಾಯ್ದುಕೊಂಡಿರು ನನಗೆ ಕಾದಂಬರಿಯಲ್ಲಿನ ಕಲೆಯ ಒಳ-ಹೊರವು,ಕಲೆಯ ಉದ್ದೇಶ ಅಷ್ಟೋಂದು ರುಚಿಸುವುದಿಲ್ಲವಾದರು ಚಿತ್ರಕಲೆಯನ್ನು ನೋಡುವ…
ಲೇಖಕರು: hema hebbagodi
June 15, 2013
“ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,
ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ
ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು
ಬದುಕಿಗೂ ಈ ಕರಿ ನೀರಲ್ಲಿ
ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ
ಅತ್ತಿತ್ತ ದೋಣಿ ಸಂಚಾರ, ಒಂದು ನಡುಗಡ್ಡೆಯಿಂದಿನ್ನೊಂದಕ್ಕೆ
ಜಿಗಿದು ಹಾರಿ, ಈಜಾಡಿ ಪಾರಾಗಿ, ಬದುಕಿ ಉಳಿಯುವ ಬಂಟ
ರಿದ್ದರೂ ಸಿಕ್ಕುವುದೆಲ್ಲ ಪರಕೀಯ. ಅಕಸ್ಮಾತ್ತಾಗಿ
ತನ್ನ ಇನ್ನೊಂದರ್ಧ, ಎಲ್ಲಾದರೂ ಕ್ಷಣಾರ್ಧ
ಸಿಕ್ಕಿದವನೆ ಕೃತಾರ್ಥ, ಭಾಗ್ಯವಂತ”.. (ಚಿಂತಾಮಣಿಯಲ್ಲಿ…
1
ಲೇಖಕರು: partha1059
June 08, 2013
ಪುರಾಣಪುರುಷ ಶ್ರೀಕೃಷ್ಣನ ಕಥೆಯನ್ನು ತಮ್ಮ ಕಲ್ಪನೆಯಲ್ಲಿ ಮೂಡಿಸಿದ್ದಾರೆ ಶ್ರೀ ಮುನಿಷಿಯವರು ಇಂಗ್ಲೀಷ್ ಬಾಷೆಯಲ್ಲಿ ಅದನ್ನು ಕನ್ನಡಕ್ಕೆ ತಂದಿರುವರು ಸಿದ್ದವನಹಳ್ಳಿ ಕೃಷ್ಣ ಶರ್ಮರು. ಒಂಬತ್ತು ಪುಸ್ತಕಗಳ ಹತ್ತು ಬಾಗಗಳಲ್ಲಿ ಕತೆ ಸಾಗುತ್ತದೆ.
ಮೊದಲಿಗೆ ಕೃಷ್ಣ ಹುಟ್ಟುವ ಮೊದಲಿನ ಸನ್ನಿವೇಶ ಆಗಿನ ರಾಜಕೀಯ ಸ್ಥಿತ್ಯಂತರ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತ ಸಾಗುತ್ತಾರೆ ಲೇಖಕರು. ಮೂಲಕತೆಯಲ್ಲಿನ ಹಲವು ಅನುಮಾನಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ಕೃಷ್ಣನು ಚಿಕ್ಕಮಗುವಾಗಿರುವಾಗ…
4
ಲೇಖಕರು: hema hebbagodi
May 28, 2013
‘ಭೂಮಿಗೆ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಶಕ್ತಿಯಿದೆ ದುರಾಶೆಗಳನ್ನಲ್ಲ’ ಕೇಳಿ ಕೇಳಿ ಕ್ಲೀಷೆಯಾಗಿರುವ ಮಾತು. ‘ಪರಿಸರ ಉಳಿಸಿ ಮರ ಗಿಡ ಬೆಳಸಿ’, ‘ಕಾಡಿದ್ದರೆ ನಾಡು ನಾಡಿದ್ದರೆ ನಾವು’.. ಇಂತಹ ಹತ್ತು ಹಲವು ಮಾತುಗಳನ್ನು ‘ಪರಿಸರ ದಿನ’ದ ಭಾಷಣಗಳಲ್ಲಿ ಬರಹಗಳಲ್ಲಿ ನೋಡುತ್ತಲೋ ಓದುತ್ತಲೋ ಕೇಳುತ್ತಲೋ ಇರುತ್ತೇವೆ. ಆದರೆ ನಮ್ಮಲ್ಲಿ ಎಷ್ಟು ಮಂದಿಗೆ ‘ಹೌದು ಪರಿಸರವನ್ನು ಉಳಿಸಿಕೊಳ್ಳಲು ನಾನು ಕೂಡ ಪ್ರಯತ್ನಪಡಬೇಕು’ ಎಂದು ಮನಸ್ಸು ಎಚ್ಚರಗೊಳ್ಳುತ್ತದೆ? ನಮ್ಮಿಂದಾಗಬಹುದಾದ್ದನ್ನು ‘ಅಯ್ಯೋ ಬಿಡಿ…
4