ಕನ್ನಡಕ್ಕೂ ಮತ್ತು ಕೆನಡಾಕ್ಕೂ ವ್ಯತ್ಯಾಸ ಗೊತಾಗ್ತಿಲ್ಲ.... ಕ್ಷಮಿಸಿ ಸರ್!!!!!!!!!!!!

ಕನ್ನಡಕ್ಕೂ ಮತ್ತು ಕೆನಡಾಕ್ಕೂ ವ್ಯತ್ಯಾಸ ಗೊತಾಗ್ತಿಲ್ಲ.... ಕ್ಷಮಿಸಿ ಸರ್!!!!!!!!!!!!

ಹೋದ ವಾರ ನಮ್ಮ ಭಾರತ ಸರಕಾರದ ಮಾನವ ಸಂಪನ್ಮೂಲ ಸಚಿವರಾದ ಶ್ರೀ ಕಪಿಲ್ ಸಿಬಲ್ ಅವರು ಸೂಚಿಸಿದ ಸಲಹೆಯನ್ನೇನಾದರು ಜಾರಿಗೆ ತಂದರೆ ಮೇಲೆ ಹೇಳಿರುವ ಮಾತುಗಳನ್ನ ನಾವುಗಳು ನಮ್ಮ ಮುಂದಿನ ಪೀಳಿಗೆಯ ಜನರಿಂದ ಕೇಳಬಹುದು. ವಿಷಯ ಏನಪ್ಪಾ ಅಂತ ಅಂದರೆ ಕಪಿಲ್ ಸಿಬಲ್ ಅವರು ಶಾಲಾ ಮತ್ತು ಉನ್ನತ ಕಲಿಕಾ ವ್ಯವಸ್ಥೆಗಳಲ್ಲಿ ಕ್ರಾಂತಿಕಾರೀ ಬದಲಾವಣೆಗಳನ್ನು ಮಾಡಲು ಕೆಲವು ಪ್ರಸ್ತಾವನೆಗಳನ್ನು ಸೂಚಿಸಿದ್ದಾರೆ.

ಹಾಗೆ ಇವರು ಈ ಪ್ರಸ್ತಾವನೆಗಳನ್ನು ಎಲ್ಲರ ಮುಂದೆ ಇಡೋದಕ್ಕೆ ಕಾರಣ ಪ್ರೊ|| ಯಶ್ಪಾಲ್ ಅನ್ನೋರ ಸಾರಥ್ಯದಲ್ಲಿ ಇದ್ದ "ಉನ್ನತ ಶಿಕ್ಷಣದ ನವೀಕರಣ ಮತ್ತು ಪುನರುಜ್ಜೀವನಕ್ಕೆ ಸಂಬಂಧಿಸಿದ ಸಲಹಾ ಸಮಿತಿ" ನೀಡಿರುವ ವರದಿ.

ಸೋಜಿಗದ ವಿಷಯಾ ಏನಂದ್ರೆ ಈ ವರದಿಯನ್ನು ಕೇಂದ್ರ ಸರಕಾರ ಯಾವುದೇ ರಾಜ್ಯಸರಕಾರಗಳ ಅಭಿಪ್ರಾಯವನ್ನು ಪಡೆಯದೆ ತಯಾರಿಸಿದೆ ಹಾಗು ಯಾವುದೇ ಸರಕಾರದ ನಡುಬಲೆ ತಾಣದಲ್ಲಿ ಪ್ರಕಟಿಸಿಲ್ಲ. ಇದಕ್ಕೆ ಕಾರಣ ಏನು ಅನ್ನೋದನ್ನ ಅವರನ್ನೇ ಕೇಳಿ ತಿಳಿಯಬೇಕು.

ಭಾರತ ಒಂದು ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ದೇಶ ಅನ್ನೋದನ್ನೇ ಮರೆತಂತಿರುವ ಕೇಂದ್ರ ಸರಕಾರ ತನ್ನ ಸರ್ವಾಧಿಕಾರಿ ಧೋರಣೆಯನ್ನು ಇಲ್ಲಿ ತೋರಿಸಿದೆ, ಹಾಗೆಯೇ ಕೇವಲ ಇಂಗ್ಲಿಷನಿಂದ ಮಾತ್ರ ಒಂದು ದೇಶ ಉದ್ಧಾರ ಆಗೋಕೆ ಸಾಧ್ಯ ಅನ್ನೋ ಹಸಿ ಹಸಿ ಸುಳ್ಳನ್ನ ಜನರ ಜನರ ಮೇಲೆ ಹೇರೋ ಪ್ರಯತ್ನವನ್ನ ಕೇಂದ್ರ ಸರಕಾರ ಮಾಡುತ್ತಿದೆಯಾ?????

ಈ ಕೆಳಗಿನ ಕೊಂಡಿಯಲ್ಲಿ ನೋಡಿ:
http:/ /enguru.blogspot.com/2009/06/eega-kapil-sibal-avaru-enu-maadabeku.html

ಈ ಲೇಖನ ಓದಿದ ಮೇಲೆ ನನಗೆ ಅನಿಸಿದ್ದು ಏನೆಂದರೆ ಕಪಿಲ್ ಸಿಬಲ್ ಮತ್ತು ತಂಡದವರು ಅಂದುಕೊಂಡ ಪ್ರಕಾರ ಬದಲಾವಣೆಗಳಾದಲ್ಲಿ ನಮ್ಮ ಮಕ್ಕಳು ಕನ್ನಡಕ್ಕೂ ಕೆನೆಡಾಕ್ಕು ವ್ಯತ್ಯಾಸ ಗೊತ್ತಾಗುತ್ತಿಲ್ಲ ಕ್ಷಮಿಸಿ ಸಾರ್ ಅನ್ನೋ ದಿನಗಳನ್ನ ನಾವು ಕಾಣಬಹುದು......

ನೀವು ಏನಂತೀರಾ???????

Rating
No votes yet

Comments