ಕನ್ನಡದಲ್ಲಿ ಬಹುವಚನ ಪ್ರತ್ಯಯಗಳು

ಕನ್ನಡದಲ್ಲಿ ಬಹುವಚನ ಪ್ರತ್ಯಯಗಳು


ಕನ್ನಡದಲ್ಲಿ  ಬಹುವಚನ ಪ್ರತ್ಯಯ ಪ್ರಯೋಗಗಳ ದ ಬಗ್ಗೆ ಕೆಲ ದಿನಗಳ ಹಿಂದೆ ಒಂದು ಚರ್ಚೆ ನೋಡಿದೆ. ವಿಜಯ ಕರ್ನಾಟಕದಲ್ಲಿನ  "ಎರಡು ರಸ್ತೆ " ಪ್ರಯೋಗ ಸರಿಯೇ ತಪ್ಪೇ ಎಂದು. 

 

ಅದರ ನೆಪದಿಂದ ಈ ಬರಹ. 

...................................

ಕನ್ನಡದಲ್ಲಿ ಬಹು ವಚನ ಪ್ರತ್ಯಯಗಳು ಐದು ರೀತಿಯಾಗಿ ಪ್ರಯೋಗಿಸಲ್ಪಡುತ್ತವೆ.

೧. ಗಳು ......


>ನಪುಂಸಕ ನಾಮಗಳಿಗೆ
ಉದಾ.  ಕಲ್ಲುಗಳು, ಹುಳುಗಳು,  

  
>ಕೆಲ ವಿಶಿಷ್ಟ ನಾಮಗಳಿಗೆ

ಉದಾ.  ಗುರುಗಳು,  ವ್ಯಾಪಾರಿಗಳು,

 

೨. ಅವರು / ಅಂದಿರು


>ಸಂಬಂಧವಾಚಕ ನಾಮಗಳಿಗೆ

ಉದಾ. ಮಾವಂದಿರು, ತಾಯಂದಿರು  

         ಮಾವನವರು, ತಂದೆಯವರು,

೩. ಆರು / ರು


> ವಿಶೇಷಣಗಳಿಗೆ

ಉದಾ. ಸಣ್ಣವರು, ಜಾಣರು 

>ಇತರ ನಾಮಗಳಿಗೆ 

ಉದಾ. ಹುಡುಗರು 

೪. ಕಳ್ 

ಉದಾ. ಮಕ್ಕಳು 

 

೫. ಶೂನ್ಯ ಸಂದರ್ಭದಲ್ಲಿ

ಪ್ರತ್ಯಯವಿಲ್ಲದೆಯೇ ಬಹುವಚನ ಬಳಕೆಗೊಳ್ಳುವುದು.


ಉದಾ. ಆನೆ ಬಂದವು 

         ಎಲೆ ಉದುರಿದವು

 

       

( ಅಂದ ಹಾಗೆ ವಿಜಯ ಕರ್ನಾಟಕದಲ್ಲಿನ ಪದೋನ್ನತಿ ಅನ್ನೋ ಅಂಕಣ ವನ್ನು ನಾನು ಗಮನಿಸುತ್ತಿರುತ್ತೇನೆ. ಪ್ರತಿಯೊಂದು ಪದವನ್ನೂ ಶತಾಯ ಗತಾಯ ಸಂಸ್ಕ್ರುತದ್ದೆಂದು ಹೇಳುವ ಹೊಲಸು ಮನಸ್ಕತೆ ಅಲ್ಲಿ ಕಾಣುತ್ತೆ. ನನ್ನ ಪ್ರಕಾರ ಇದು ಭಾಷಾ ಶಾಸ್ತ್ರಕ್ಕೆ ಮಾಡುವ ದ್ರೋಹ.  ಅದ್ಯಾರು ಆ ಅಂಕಣ ಬರೀತಾರೋ ?...) 

 

 
Rating
No votes yet

Comments