ಆನೆ ಬಂತು ಆನೆ 3

ಆನೆ ಬಂತು ಆನೆ 3

ರೇಂಜ್ ಆಫೀಸರ್ ಮತ್ತು ಇತ್ತರರು ದೇಹ ಇದ್ದ ಜಾಗಕ್ಕೆ ಬರುವ ವೇಳೆಗೆ ಇನ್ಸ್ಪೆಕ್ಟರ್ ಪ್ರತಾಪ್ ಮತ್ತು ನಾಲಕ್ಕು ಜನ ಕಾನ್ಸ್ಟೇಬಲ್ ಅಲ್ಲಿಗೆ ಬಂದರು . ಪೋಲಿಸ್ ನವರು ದೇಹ ಬಿದ್ದ ಜಾಗದ ಮಾರ್ಜರ್ ಮಾಡಿದ್ದರು. ದೇಹವನ ಪೋಸ್ಟ್ ಮಾರ್ಟಂ ಗೆ ಲ್ಯಾಬ್ ಗೆ ಕಳಿಸಿದರು . ಸುತ್ತಲು ಯಾವುದಾದರು ಸುಳಿವು ಸಿಗಬಹುದೆಂದು ಹುಡಿಕ್ಕಿದರು. ಪೋಲಿಸ್ ನವರಿಗೆ ಒಬ್ಬ ಹುಡುಗನ ಕೈ ಗೆ ಹಾಕುವಂತ ಬ್ರೇಸ್ ಲೈಟ್ ಸಿಕ್ಕಿತು ಮತ್ತು ಎರಡು ID ಕಾರ್ಡ್ ಸಿಕ್ಕಿದವು , ಅದನು ಸಿಜ ಮಾಡಿದ್ದರು . ರೇಂಜ್ ಆಫೀಸರ್ ಜೊತೆ ಸ್ವಲ್ಪ ಹೊತ್ತು ಮಾತನಾಡಿ ಅಲ್ಲಿಂದ ಹೊರಟ್ಟು ಹೋದರು.

ರೇಂಜ್ ಆಫೀಸರ್ " ರೀ ಶಂಕರಪ್ಪ , ಹೊಟ್ಟೆ ಬೇರೆ ತುಂಬಾ ಹಸಿತ್ತಿದೆ , ಇಲ್ಲಿ ಯಾವ ಹೊಟ್ಟೇಲ್ ಕೂಡ ಇಲ್ಲ , ಟೈಮ್ ಅಲ್ಲೇ ೪ (PM ) ಆಗಿದೆ , ಆ ಸಾಬಿಗೆ ಫೋನ್ ಮಾಡಿ ಏನಾದರು ತರೋಕೆ ಹೇಳಿ , ನಾನು ಇಲ್ಲೇ ಕಟ್ಟೆ ಕಡೆ ಹೋಗಿ ಬರುತ್ತೀನಿ , ನೀವು ಹೋಗೋ ಹಾಗಿದ್ರೆ ಹೋಗಿ ಬನ್ನಿ " ಅಂತ ಹೇಳುತ್ತಾ ಕಟ್ಟೆ ಕಡೆ ಹೊರಟ್ಟರು.

ಎಲ್ಲರು ತಮ್ಮ ತಮ್ಮ ದೇಹದ ಕಾರ್ಯ ಗಳ್ಳನೆಲ್ಲ ಮುಗಿಸಿಕೊಂಡು , ಜೀಪ್ ಹತ್ತಿ ಜೇನಿನ ಹೊಳೆ ಕಡೆ ನಡೆದರು. ಜೇನಿನ ಹೊಳೆ ಒಂದು ಸುಂದರ , ಭಯಂಕರ ಕಾಡು. ಅಲ್ಲಿ ವಿವಿದ ಬಗೆಯ ಜೀವ ಸಂಪನ್ಮೂಲ ಇದೆ . ಅಲ್ಲಿಗೆ ಮಾಮೂಲಿ ಮನುಷ್ಯನಿಗೆ ಹೋಗಲು ಅವಕಾಶ ಇಲ್ಲ. ಆದರೆ ಕೆಲವು ಫಾರೆಸ್ಟ್ ಡಿಪಾರ್ಟ್ಮೆಂಟ್ ನವರ ಸಹಾಯದಿಂದ ಒಳ್ಳಗೆ ಬಂದು ಕಷ್ಟಕ್ಕೆ ಸಿಕ್ಕಿ ಜೇವ ತೆತ್ತವರು ಅನೇಕ ಮಂದಿ. ಜೇನಿನ ಹೊಳೆಗೆ ಒಳ್ಳೆಯ ರಸ್ತೆ ಇಲ್ಲ , ದೂರವಾಣಿ ಸಂಪರ್ಕವು ಇಲ್ಲ , ಎಲ್ಲದಕು gprs ಸಹಾಯ ಬೇಕು . ಮನು ಕುಲದ ವಿಕಾಸ ಇದೆ.

ಜೇನಿನ ಹೊಳೆಗೆ ಹೋಗುವ ಎನ್ತ್ರನ್ಸೆ ನಲ್ಲಿ ರಹಿಮ ತಮ್ಮ ಮುಂದಿನ ಪಯಣಕೆ ಬೇಕ್ಕಾದ ಎಲ್ಲ ವಸ್ತುಗಳ ಜೊತೆ , ತನ್ನ ಲಗೇಜ್ ಆಟೋ ದೊಂದಿಗೆ ಬಂದಿದ. ಅವನ ಜೊತೆ ಅವನ ಸಿಸಿಯ ಕೂಡ ಬಂದಿದ. ರಹಿಮ ಶರ್ಟ್ ಜೆಬ್ಬಿನಿಂದ ಒಂದು ಮೊಟ್ಟು ಬೀಡಿ ತೆಗೆದು ಬಾಯಿ ಗೆ ಇಟ್ಟು ಕೊಂಡು , ಬೆಂಕಿ ಪೊಟ್ಟಣ ಕ್ಕೆ ಪೈಜಾಮದ ಜೆಬ್ಬಿಗೆ ಕೈ ಹಾಕಿ ಹುಡುಕುತ್ತ ಇದ್ದ , ಅವಾಗ ಯಾವುದೊ ಜೀಪಿನ ಶಬ್ದ ಆಯಿತು . ಜೀಪ್ ಇವನು ನಿಂತಿದ ಕಡೆ ಬಂದು ನಿಂತ್ತಿತು. ಜೀಪ್ ಇಂದ ರೇಂಜ್ ಆಫೀಸರ್ ಕೆಳಗೆ ಇಳಿದು ಬಂದರು. ಆಫೀಸರ್ ನ ನೋಡಿ ರಹಿಮ ಬೀಡಿ ತೆಗೆದು ಬಿಸಾಕ್ಕಿದ , ಮುಗುಳು ನಗೆ ಯೊಂದಿಗೆ
" ಏನ್ ಸಾಬ್ , ಇಷ್ಟು ಹೊತ್ತು ಮಾಡಿ ಬಿಟ್ಟಿರಿ ನೀವು , ನಾನು ಇಲ್ಲಿ ೨ ಗಂಟೆ ಇಂದ ಕಾಯುತ್ತ ಇದೆ "  ,
" ಲೇ ಸಾಬಿ ನೀನು ಕಾಯುತ್ತ ಇದೆ ಅಂತ ನಾನು ನೀನು ಹೇಳಿದ ಟೈಮ್ ಗೆ ಬರ ಬೇಕ್ಕಿತ್ತ , ಏನೋ ಮಧ್ಯ ಬೇರೆ ಕೆಲಸ ಆಯಿತು ಅದಕ್ಕೆ ಲೇಟ್ " ,
" ಯಾಕ ಸಾಬ್ ಎಲ್ಲ ಟಿಕ್ ಇದೆ ತಾನೇ , ನಿಮ್ಮಗೆ ಏನು ತೊಂದರೆ ಆಗಿಲ್ಲ ತಾನೆ , ಮೊದಲೇ ಶೈತನ ಇರೋ ಜಾಗ ಇವು ",
" ಏನಯ್ಯ ಅದು ಶೈತಾನ್ , ಪ್ರಾಣಿಗಳು ನಿನ್ನಗೆ ಶೈತಾನ್ ಆಗಿ ಕಾಣಿಸುತಾವ , ಸರಿ ಎಲ್ಲ ಬೇಕ್ಕಾದ ವಸ್ತು ತಂದ್ದಿದಿಯ ತಾನೆ "
" ಮಾ ಕಿ  ಕಸಂ ಎಲ್ಲ ತಂದ್ದಿದಿನಿ ಸಾಬ್ " ಅಂತ ತನ್ನ ಕೈ ನ ಗಾಡಿ ಹತ್ತಿರ ತೋರಿಸಿದ.
" ಎ ಸಾಬಿ ನಾವು ಹೋಗುತ್ತಾ ಇರೋದು ಆನೆ ಹಿಡಿಯೋಕ್ಕೆ , ಇನ್ನು ಆ ಆನೆ ಕ್ಯಾಂಪ್ ಗೆ ಫೋನ್ ಮಾಡಿಲ್ಲ , ಇವಾಗ ನಾನು ಫೋನ್ ಮಾಡಿದರು , ಅವರು ಬರೋಕ್ಕೆ ಇನ್ನು ಒಂದು ದಿನ ಆಗಬಹುದು , ಅಲ್ಲಿವರೆಗೂ ನಾವು ಅದರ ಹಿಂದೆ ಹೋಗ ಬೇಕು , ಮೊದಲೇ ಇಲ್ಲಿ ತಿನ್ನೋಕ್ಕೆ ಆಗಲಿ ಕುಡಿಯೋಕ್ಕೆ ಆಗಲಿ ಏನು ಸಿಗೋಲ್ಲ , ಜೊತೆಗೆ ಪ್ರಾಣ ತೆಗೆಯೋ ಅಂತ ಜೀವಿಗಳು ಇವೆ , ಅದಕ್ಕೆ ಬೇಕಾದ ಅಡುಗೆ ಮಾಡೋ ಸ್ಟವ್ , ಸಿಲಿಂಡರ್ , ನೀರು , ಟೆಂಟ್ ಹಾಕೋಕೆ ಬೇಕಾದ ಶಾಮಿಯಾನ ಎಲ್ಲ ತಂದಿದಿಯ "
" ಎಲ್ಲ ಇದೆ ಸಾಬ್ , ಅರೆ ಅಲ್ಲ ಏನು ಬಂತು ಮಲ್ಮತ್ ಗ್ರಹಚಾರ "
"ಸರಿ ನಡಿ ಹೊರಡೋಣ " ಅಂತ ಆಫೀಸರ್ ಜೀಪ್ ಹತ್ತಿರಕ್ಕೆ ಹೆಜ್ಜೆ ಹಾಕಿದರು , ಮತ್ತೆ ಹಿಂದೆ ತಿರುಗಿ "ಸಾಬಿ ಜೀಪ್ ಹಿಂದೆ ಬಂದು ಕೂತ್ತಿಕೊ , ನಿಮ್ಮ ಹುಡುಗನಿಗೆ ಗಾಡಿ ಫಾಲೋ ಮಾಡೋಕೆ ಹೇಳು " ಅಂತ ಹೇಳಿ ಜೀಪ್ ಹತ್ತಿದರು. ರಹಿಮ ಆಫೀಸರ್ ಆರ್ಡರ್ ಅಂತೆ ಜೀಪ್ ಹತ್ತಿದ . ರಹಿಮ ಸಿಸಿಯ ಜೀಪ್ ಫಾಲೋ ಮಾಡಲು ಅನುವಾದ. ಜೀಪ್ , ಲಗೇಜ್ ಆಟೋ ಜೇನಿನ ಹೊಳೆ ಒಳ್ಳಗೆ ಹೊರಟ್ಟಿತು.

ಜೀಪ್ ಸ್ವಲ್ಪ ದೂರ ಆ ಕೆಟ್ಟ ರಸ್ತೆ ಲ್ಲಿ ಹೋಗುತ್ತಾ ಇದ್ದ ಹಾಗೆ ಆನೆಯ ಜೋರು ಗಂಟಲಿನ ಶಬ್ದ ಕೇಳಿಸಿತ್ತು. ರೇಂಜ್ ಆಫೀಸರ್ " ರೀ ಶಂಕರಪ್ಪ , ಆನೆ ಇಲ್ಲೇ ಎಲ್ಲೋ ಇರೋ ಹಾಗೆ ಇದೆ " ಜೀಪ್ ನಿಲ್ಲಿಸಿ.
" ಅಯ್ಯೋ ಸಾರ್ , ಆನೆ ಗಂಟಲು ದೊಡ್ಡದು , ದೂರದಿಂದ ಕೇಳಿಸುತ್ತ ಇದೆ ಅನ್ನಿಸುತ್ತೆ "
" ಏನಯ್ಯ ಸಾಬಿ , ನಿನಗೂ ಹೀಗೆ ಅನಿಸುತ್ತಾ ಹೆಂಗೆ "
"ಹೂ ಸಾರ್ "
"ಸರಿ ನಡೀರಿ ಇನ್ನು ಸ್ವಲ್ಪ ಮುಂದೆ ಹೋಗಿ ನೋಡೋಣ" ಅಂತ ಹೇಳುತ್ತಾ ಆಫೀಸರ್ ತಮ್ಮ ಪ್ಯಾಂಟ್ ಜೆಬ್ಬಿನಿಂದ ಸಂಸುಂಗ್ ಗ್ಯಾಲಕ್ಸಿ ನೋಟ್ ೨ ಮೊಬೈಲ್ ತೆಗೆದು ಕೊಂಡು GPRS ಆನ್ ಮಾಡಿದರು. ಆನೆ ಕ್ಯಾಂಪ್ ಗೆ ಫೋನ್ ಮಾಡಿದರು . " ಎ ಸಾಬಿ ಗಜೇಂದ್ರ ಆನೆ ಕ್ಯಾಂಪ್ naale ಬರುತ್ತೆ , ಅವರಿಗೂ ಊಟದ ವ್ಯವಸ್ತೆ ಆಗಲ್ಲಿ "
"ಅರೆ ಇಸ್ಕಿ , "
" ಲೇ ಸಾಬಿ , ಆ ಕಾಡು ಕುರಿ ಆಗಲ್ಲೆ ನಿನ್ನ ಕಣ್ಣಿಗೆ ಬಿತ್ತಾ"
ರಹಿಮ ತಲೆ ಕೆಳಕ್ಕೆ ಹಾಕಿದ.

ಜೀಪ್ ಸ್ವಲ್ಪ ದೂರ ಸಾಗಿತು. ಆಫೀಸರ್ " ರೀ ಶಂಕರಪ್ಪ , ಏನ್ ರೀ ನಾವು ಅಲ್ಲೇ ತಮಿಳ್ ನಾಡಿನ ಕಡೆ ಹೋಗಿದಿವಿ ಅನಿಸುತ್ತೆ , ಗಾಡಿ ನಿಲಿಸಿ " ಅಂತ ಹೇಳಿದರು.