ಒಂದು ಒಳ್ಳೆಯ ನುಡಿ - 183

ಒಂದು ಒಳ್ಳೆಯ ನುಡಿ - 183

* ನಾವು ಮಾಡುವ ಕೆಲಸ ಕಾರ್ಯ, ನಿತ್ಯದ ದುಡಿಮೆಯೇ ನಾವು ನಂಬಿಕೊಂಡು ಬಂದ ದೇವರು. ಅದನ್ನು ಅಪವಿತ್ರಗೊಳಿಸದೆ, ಅಪಮಾನಮಾಡದೆ ಬಾಳುವುದೇ ಬದುಕು.

***

* ಧರ್ಮವೆಂದರೆ ಕ್ಷಮಾಗುಣ, ಉತ್ತಮ ನಡೆನುಡಿ, ಅಂತರಂಗದ ಶುಚಿ, ಇಂದ್ರಿಯಗಳ ಹತೋಟಿ, ಸತ್ಯ, ಪ್ರಾಮಾಣಿಕತೆ, ಒಳ್ಳೆಯ ವಿದ್ಯಾಬುದ್ಧಿ, ಸಹನೆ, ತ್ಯಾಗ. ಇವುಗಳನ್ನು ಆಚರಣೆಯಲ್ಲಿ ತಂದರೆ ಅದಕ್ಕಿಂತ ದೊಡ್ಡ ಧರ್ಮವಿಲ್ಲ.

***

* ನಾವು ಮಾಡುವ ಕೆಲಸ ಕಾರ್ಯ, ನಿತ್ಯದ ದುಡಿಮೆಯೇ ನಾವು ನಂಬಿಕೊಂಡು ಬಂದ ದೇವರು. ಅದನ್ನು ಅಪವಿತ್ರಗೊಳಿಸದೆ, ಅಪಮಾನಮಾಡದೆ ಬಾಳುವುದೇ ಬದುಕು.

***

* ಇನ್ನೇನು ಕನ್ನಡಮ್ಮನ ಬಗ್ಗೆ ಹಾಡಿ ಹೊಗಳಲು ಪದಗಳು ಸಾಲದು ಎಂಬ ಹಾಗೆ ಕನ್ನಡ ರಾಜ್ಯೋತ್ಸವದ  ಬೆಳಗಿಗೆ ಒಂದಿರುಳೇ ಇರುವುದು. ಈ ಸಮಯದಲ್ಲಾದರೂ ಶುದ್ಧಕನ್ನಡ ಭಾಷೆಯಲ್ಲಿ ವ್ಯವಹರಿಸಿ, ನಾಡುನುಡಿ, ನೆಲಜಲ, ತಾಯಿಋಣ ತೀರಿಸೋಣ.

***

* ಬರೆಯೋಣ, ಓದೋಣ, ಬೆಳಗಿಸೋಣ, ಕಲಿಯೋಣ, ಕಲಿಸೋಣ ತಾಯಿಭಾಷೆಯ, ಹೊನ್ನುಡಿಯ, ಚೆಲ್ನುಡಿಯ, ನಲ್ನುಡಿಯ.ಮಾತಿನಲ್ಲಿ ಹೇಳಿದರೆ ಸಾಲದು, ಕೃತಿಯಲ್ಲೂ ಅನುಷ್ಠಾನಗೊಳ್ಳಬೇಕು. ‘ಸಿರಿಗನ್ನಡಂ ಗೆಲ್ಗೆ, ಜೈ ಕನ್ನಡಾಂಬೆ’

-ರತ್ನಾ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ