ಕವಿ ಮತ್ತು ಕವಿತೆ By ನಂದೀಶ್ ಬಂಕೇನಹಳ್ಳಿ on Thu, 05/09/2013 - 15:28 ಕವನ ತನ್ನ ಪಾಡಿಗೆ ತಾನು, ಕವಿತೆ ಗೀಚುತ್ತಾ ಇದ್ದ ಕವಿಗೆ, ಒಲಿಯಿತು ಪ್ರಶಸ್ತಿಯ ಗರಿ. ಕೊರಳ ತುಂಬ ಹಾರ ತುರಾಯಿ. ತುಂಬಿ ತುಳುಕಿತು ಅಭಿನಂದನೆಗಳ ಸುರಿಮಳೆ. ದೊರೆಯಿತು ಅದ್ಯಾವುದೋ ಸಮ್ಮೇಳನದ ಅಧ್ಯಕ್ಷ ಸ್ಥಾನ. ಮತ್ಯಾವುದೋ ಅಧ್ಯಯನ ಕೇಂದ್ರದ ಸಾರಥ್ಯ. ಕವಿ ಈಗ ಕಾರ್ಯನಿರತ, ಕವಿತೆ ಮತ್ತೆ ಅನಾಥ. Log in or register to post comments