ಗಾಂಧಿನಗರದಲ್ಲಿ ಉತ್ತರ ಕರ್ನಾಟಕ....

ಗಾಂಧಿನಗರದಲ್ಲಿ ಉತ್ತರ ಕರ್ನಾಟಕ....

ಬರಹ

ನಾವ್ ಬಂದೇವ..ನಾವ್ ಬಂದೇವ...ಸಿನಿಮಾ ನೋಡಾಕ್. ಸಿನಿಮಾ ನೋಡಿ, ಚಿತ್ರಾ ಮಾಡಾಕ್. ನಾವ್ ಹಿಂಗ. ಸಿನಿಮಾದ ಹುಚ್ಚನ್ಯಾಗ್ ಖಬರ್ ಇಲ್ದಂಗ ಕೆಲ್ಸಾ ಮಾಡ್ತೀವಿ. ನಿಜಾರೀ....ಉತ್ತರ ಕರ್ನಾಟಕದ ಮಂದಿ ಹಿಂಗ...

ಕನ್ನಡ ಫಿಲ್ಮ್ ಇಂಡಸ್ಟ್ರೀಯಾಗ ಉತ್ತರ ಕರ್ನಾಟಕದ ಮಂದಿನ ಜಾಸ್ತಿ ಅದಾರ್. ಎಲ್ಯಾರ್ ಹೋಗ್ರಿ, ಖಡಕ್ ಮಾತಿನ ಮನುಷ್ಯ ಸಿಕ್ಕಬಿಡ್ತಾನ್. ತೆರೆ ಹಿಂದ ಹೋದ್ರಂತು ಮುಗಿತ್. ನಮ್ಮೂರ್ ಬಿಜಾಪುರ್. ನಮ್ಮೂರ್ ಹುಬ್ಬಳಿ ಅನ್ನೋ ಹುಡುಗ್ರು ಸಿಕ್ಕ ಬಿಡ್ತಾರೆ. ಅದೇನ್ ಚಟಾನೋ ಏನ್. ಸಿನಿಮಾ ಹುಚ್ಚಿನ ಮಂದಿ ಸೀದಾ ಯಾವುದಾರ ಕೆಲ್ಸಕ್ಕ ಬಂದ ಬಿಡ್ತಾರೆ....

ಈಗ ಪರದೆ ಮ್ಯಾಲ್ ಕಾಣು ಮಂದಿನೂ ಹೆಚ್ಚ ಆಗ್ಯಾರ್. ಆದ್ರ, ಹಂಗ ಬಂದ ಜನಕ್ಕ ಇಲ್ಲಿ ಹೆಚ್ಚ್ ಹಾಸ್ಯ ಪಾತ್ರಾನಾ ಸಿಕ್ತಾವು. ಉತ್ತರ ಕರ್ನಾಟಕದ ಮಾತು ಬೆಂಗಳೂರ್ ಮಂದಿನ ನಗುಸ್ತಾವು. ಅದ ರೀತಿ ಕಾಡ್ಸು ಹಂಗ ಮಾಡ್ತಾವು. ರಾಜು ತಾಳಿಕೋಟಿ ಮಾತ್ ಕೇಳಿ ಅದೆಷ್ಟ ಜನ ನಗುದಿಲ್ಲ ಹೇಳ್ರಿ. 'ಮನಸಾರೆ" ಫಿಕ್ಚರ್ ನ್ಯಾಗಂತು ನಗುದ್ ನಗುದ್. "ಪಂಚರಂಗಿ" ನೂ ಹಂಗ ಐತಿ...

ಮತ್ತೊಂದ್ ಮದುವೇನಾ..! ಅನ್ನೊ ಚಿತ್ರದಾಗ ರಾಜು ನಗಸಾಕ ಮತ್ತ ಸಜ್ಜ. ಆದ್ರೆ, ಇದ ಹಾಸ್ಯದ ಕತೀ ಆತ್. ಹೀರೋ ಆಗು ಹುಡುಗ್ರು ಬರಾಕುಂತಾರ್. "ಗವಿಪುರ' ಅನ್ನೊ ಸಿನಿಮಾದ ಹೀರೊ ಸುರಜ್ ಧಾರವಾಡ ಹುಡುಗ. ಆದ್ರ, ಇವರ ಊರು ಬಿಜಾಪುರ್ ಜಿಲ್ಲಾ ಸಾಸನೂರು. ಹೀರೋಯಿನ್ ರಾಣೆಬೆನ್ನೂರ್ ದಾಕಿ. ಆದ್ರೆ ಸೌಜನ್ಯ ಅನ್ನು ಕಪ್ಪ ಹುಡುಗಿ ಹುಟ್ಟಿದ ಬೆಂಗಳೂರ್. ಬೆಳದಿದ್ದ ಬೆಂಗಳೂರ್. ಹಂಗಾಗಿ ಅಳ್ ಹುರುದಂಗ ಇಂಗ್ಲೀಷ್ ಮಾತಾಡ್ತಾಳ. ತಲಿನೂವು ಆಗುವಂಗ ಒಟಾ..ಒಟಾನೂ ಅಂತಾಳ. ಆದ್ರೆ, ನೋಡಾಕ ಚೆಂದ ಅದಾಳ್. ಶಾಣೆನೂ ಅದಾಳ.. ಸಿನಿಮಾ ರೆಡಿ ಆದ್ ಮ್ಯಾಲ್ ನೋಡಬೇಕ ಇವರ ಆಟ...

ಇವರಂಗ ಇನ್ನು ಬಾಳ ಮಂದಿ ಬರಾಕುಂತಾರ. ಆದ್ರ ಅದೃಷ್ಟಾ ಯಾರಿಗೈತೋ ಏನೊ. ಬಿಳಿ ಪರದೆ ಮ್ಯಾಲ್ ಮಿಂಚಾಕ ಹುಬ್ಬಳಿ ಮಂದಿ 'ದ್ರೋಹಿ' ಅನ್ನು ಚಿತ್ರಾ ಮಾಡ್ಯಾರ್ ಇವರ ಕತಿ ಏನ್ ಐತೋ ಏನೋ..ರೊಕ್ಕಾ ಹಾಕಿ ಗೆಲ್ಲು ಲೆಕ್ಕಾ ಮಾಡ್ಯಾರ್. ಇವರನ್ನ ಸಿದ್ಧರೂಢರ ಕಾಯಬೇಕು..

-ರೇವನ್ ಪಿ.ಜೇವೂರ್