ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

Comments

ಬರಹ

ನಮ್ಮನೆ ಮಗುವಿಗೆ ನಾಮಕರಣ ಮಾಡಲು ಪಕ್ಕದ ಮನೆಯವರ ಒಪ್ಪಿಗೆ ಬೇಕಂತೆ!... ಮಹಾರಾಷ್ಟ್ರ ಮತ್ತು ಎಂ.ಇ.ಎಸ್ ನ ಹೊಸ ತಗಾದೆ ಇದು. ಅಲ್ಲ ಸ್ವಾಮಿ, ಬೆಳಗಾಲಿಯೇನು ಮಹಾರಾಷ್ಟ್ರದಲ್ಲಿದೆಯೋ ಅಥವ ಕರ್ನಾಟಕದಲ್ಲೋ ಎಂಬ ಸಂಶಯ ಬರುತ್ತೆ ಇವರ ಮಾತು ಕೇಳಿದರೆ. ಕನ್ನಡದ ನೀರು, ಗಾಳಿ ಬೆಳಕು ಸೇವಿಸಲು ಬೇಕು.. ಆದರೆ ಕನ್ನಡ ಬೇಡ.. ಕರ್ನಾಟಕ ಬೇಡ.. ಇದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್) ಎಂಬ ಸಂಸ್ಥೆಯ ನಿಲುವು. ಹಾಳಾಗಿ ಹೋಗಲಿ, ಅವರ ಮನೋಭಾವ ಅವರ ಬಳಿ ಇರಲಿ ಅಂತ ಸುಮ್ಮನೆ ಇರೋಕೂ ಬಿಡೋಲ್ಲ.. ಬೆಳಗಾಂ ಅನ್ನು ಬೆಳಗಾವಿ ಎಂದು ಕನ್ನಡತನ್ನಕ್ಕೆ ಒಪ್ಪುವಂತೆ ಸರ್ಕಾರ ನಾಮಕರಣ ಮಾಡಿದರೆ ಅದಕ್ಕೂ ತಕರಾರು... ಮಹಾರಾಷ್ಟ್ರ ಸರ್ಕಾರದ ಬೆಂಬಲೆ ಬೇರೆ ಇವರಿಗೆ... ನನ್ನ ನೆಲದಲ್ಲಿ ನಾವು ವಿಧಾನ ಸೌಧ ನಿರ್ಮಿಸೋದಕ್ಕೆ ಇವರ ವಿರೋಧ... ಸರ್ವೋಚ್ಛ ನ್ಯಾಯಾಲಯಕ್ಕೆ ದೂರು.... ಇದು ಉದ್ಧಟತನದ ಪರಮಾವಧಿಯಲ್ಲದೇ ಮತ್ತಿನ್ನೇನು? ನಾವೇನು ಅವರ ಸಾಂಗ್ಲಿಯಲ್ಲೋ, ಪುಣೆಯಲ್ಲೋ ವಿಧಾನ ಸೌಧ ನಿರ್ಮಿಸುತ್ತಿಲ್ಲವಲ್ಲಾ... ಅವರ ಕೊಲ್ಹಾಪುರವನ್ನೇನೂ ಮರು ನಾಮಕರಣ ಮಾಡ್ತಾ ಇಲ್ವಲ್ಲಾ.. ನಮ್ಮ ನೆಲದಲ್ಲಿ ನಾವು ಮಾಡೊ ಕಾಯಕಗಳನ್ನು ಪ್ರಶ್ನಿಸಲು, ವಿರೋಧಿಸಲು ಅವರು ಯಾರು!. ಕಾರವಾರ, ಸೂಪಾ ತಮಗೆ ಬೇಕು ಅಂತ ಗೋವಾನೂ ಕೂಗ್ತಾ ಇದೆ. ಶಾಂತ ಪ್ರಿಯರು ಎಂದ ಮಾತ್ರಕ್ಕೆ ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಏನು ಬೇಕಾದರೂ ಮಾಡಬಹುದು ಎಂಬ ಧೋರಣೆ ಇವರುಗಳದ್ದು. ನಮ್ಮ ಮೌನವನ್ನು ಬಲಹೀನತೆಯೆಂಸು ತಪ್ಪಾಗಿ ಅರ್ಥೈಸುತ್ತಿರೋ ಹಾಗಿದೆ ಇವರೆಲ್ಲ.. ಕನ್ನಡಿಗನಾಗಿ ಮಹಾರಾಷ್ಟ್ರ, ಎಂ.ಇ.ಎಸ್ ನ ಈ ಧೋರಣೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಧಿಕ್ಕಾರವಿರಲಿ ಇವರುಗಳ ಈ ಆಷಾಢಭೂತಿತನಕ್ಕೆ!.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet