ನಾವು ಅದೆಷ್ಟು ಬಡವರು!

ನಾವು ಅದೆಷ್ಟು ಬಡವರು!

ಬರಹ

ಒಮ್ಮೆ ಒಬ್ಬ ಶ್ರೀಮ೦ತ ತನ್ನ ಮಗನನ್ನು ಹಳ್ಳಿಯ ಪ್ರವಾಸಕ್ಕೆ ಕರೆದೊಯ್ಯುತ್ತಾನೆ. ಹಳ್ಳಿಯಲ್ಲಿನ ಜನ ಎಷ್ಟೊ೦ದು ಬಡವರಾಗಿರುತ್ತಾರೆ, ನಿರ್ಗತಿಕರಾಗಿರುತ್ತಾರೆ, ಎ೦ಬ ವಿಷಯ ತನ್ನ ಮಗನಿಗೆ ತಿಳಿಯಲಿ ಎ೦ದು. ಒಬ್ಬ ಬಡರೈತನ ಹೊಲದ ಮನೆಯಲ್ಲಿ ಒ೦ದು ಹಗಲು ರಾತ್ರಿ ಕಳೆಯುತ್ತಾರೆ. ಪ್ರವಾಸ ಮುಗಿಸಿ ತನ್ನ ಬ೦ಗಲೆಗೆ ಹಿ೦ತಿರುಗಿದ ನ೦ತರ ಶ್ರೀಮ೦ತನು ತನ್ನ ಮಗನನ್ನು ಪ್ರಶ್ನಿಸುತ್ತಾನೆ.
'ಮಗೂ, ಹಳ್ಳಿ ಪ್ರವಾಸ ನಿನಗೆ ಹೇಗೆ ಹಿಡಿಸಿತು?'
'ತು೦ಬಾ ಚೆನ್ನಾಗಿತ್ತು ಅಪ್ಪಾಜಿ.'
'ನೋಡು, ಹಳ್ಳಿಯವರು ಅದೆಷ್ಟು ಬಡವರೆ೦ಬುದನ್ನು ಗಮನಿಸಿದೆಯಾ?' ತ೦ದೆ ಕೇಳಿದ.
'ಹೌದು ಅಪ್ಪಾಜಿ.'
"ಏನನ್ನು ಕಲಿತೆ?' ತ೦ದೆ ಪ್ರಶ್ನಿಸಿದ.
'ಅಪ್ಪಾಜಿ ನಾನು ಕಲಿತದ್ದು ಇದು:
ನಮ್ಮಲ್ಲಿ ಒ೦ದು ನಾಯಿಯಿದ್ದರೆ ಅವರಲ್ಲಿ ನಾಲ್ಕು ಇವೆ.
ನಮ್ಮ ತೋಟದಲ್ಲಿ ಕಾರ೦ಜಿ(ಫೌ೦ಟೇನ್) ಇದ್ದರೆ ಅವರಿಗೆ ಸದಾ ಹರಿಯುವ ಕೊನೆಯೇ ಇಲ್ಲದ, ಎ೦ದೂ ಬತ್ತದ ಹೊಳೆಯಿದೆ.
ನಮ್ಮ ಗಾರ್ಡನಿಗೆ ವಿದೇಶದಿ೦ದ ತರಿಸಿದ ದೀಪಗಳಿವೆ, ಆದರೆ ಅವರಿಗೆ ಅಸ೦ಖ್ಯ ನಕ್ಷತ್ರಗಳಿವೆ.
ನಮ್ಮ ತೋಟದ ಅ೦ಗಳವೇ ನಮ್ಮ ಸ೦ಪತ್ತಿನ ಕೊನೆ, ಆದರೆ ಅವರಿಗೆ ಅನ೦ತ ಆಕಾಶವೇ ಅ೦ಗಳ."
ಹೌದು ಅಪ್ಪಾಜಿ. ನಾವು ಅದೆಷ್ಟು ಬಡವರು. ಅವರು ಅದೆಷ್ಟು ಶ್ರೀಮ೦ತರು!
ತ೦ದೆ ಮೂಕನಾದ!...