ಪಟಾಕಿ ಏತಕ್ಕೆ ಹೊಡೆಯಬಾರದು??

ಪಟಾಕಿ ಏತಕ್ಕೆ ಹೊಡೆಯಬಾರದು??

ಬರಹ

ಇತ್ತೀಚಿನ ದಿನಗಳಲ್ಲಿ ದೀಪಾವಳಿ ಬಂತೆಂದರೆ ಅಲ್ಲಲ್ಲಿ ಕೇಳಿ ಬರುವ ಮಾತುಗಳೆಂದರೆ ಪಟಾಕಿ ಹೊಡೆಯಬೇಡಿ. ಶಬ್ಧ ಮಾಲಿನ್ಯ ಪರಿಸರ ಮಾಲಿನ್ಯ ಆಗುತ್ತದೆ ಎಂದು. ಅಲ್ಲಾ ಸ್ವಾಮಿ ವರ್ಷಕ್ಕೆ ಒಂದು ಸಲ ಬರುವ ದೀಪಾವಳಿಯಂದು ಪಟಾಕಿ ಹೊಡೆದರೆ ಪರಿಸರ ಮಾಲಿನ್ಯ ಆಗುತ್ತದೆ ಎಂದಾದರೆ ವರ್ಷಪೂರ್ತಿ ಹೊಗೆ ಉಗುಳುವ ಕಾರ್ಖಾನೆಗಳಿಂದ ಆಗುತ್ತಿರುವುದು ಏನು? ದಿನ ಬೆಳಿಗ್ಗೆಯಿಂದ ರಾತ್ರಿ ತನಕ ರಸ್ತೆಯಲ್ಲಿ ಹೊಗೆ ಉಗುಳುವ ವಾಹನಗಳಿಂದ ಆಗುತ್ತಿರುವುದು ಏನು.
ಇದೆಲ್ಲಾ ಕೇವಲ ನಮ್ಮ ಸಂಸ್ಕ್ರುತಿಯನ್ನು ಹಾಳು ಮಾಡಲು ಕೆಲವು ಬುದ್ಧಿಜೀವಿ ಕಿಡಿಗೇಳಿಗಳು ಮಾಡಿದ ಹುನ್ನಾರ ಅಷ್ಟೇ. ಮೊದಲು ಗಣೇಶ ಕೂಡಿಸುವುದು ಅದನ್ನು ಕೆರೆಗೆ ಬಿಡುವುದರಿಂದ ನೀರು ಕಲುಷಿತಗೊಳ್ಳುತ್ತಿದೆ ಎಂದರು. ಅದೇ ಕಾರ್ಖಾನೆಗಳು ಕೆರೆಗೆ ಬಿಡುವ ಕಲುಷಿತ ನೀರಿನ ಬಗ್ಗೆ ಯಾಕೆ ಇವರು ಮಾತಾಡುವುದಿಲ್ಲ. ಈಗ ದೀಪಾವಳಿಗೆ ಪಟಾಕಿ ಹೊಡೆಯಬೇಡಿ ಎನ್ನುತ್ತಿದ್ದಾರೆ. ಇವರಿಗೆ ನಿಜವಾಗಿಯೂ ಪರಿಸರ ಕಾಳಜಿ ಇದ್ದಲ್ಲಿ ಮರಗಳ ಮಾರಣಹೋಮ ನಿಲ್ಲಿಸಲಿ, ಎಷ್ಟು ಜನ ತಮ್ಮ ಮನೆಯ ಮುಂದೆ ಗಿಡಗಳನ್ನು ನೆಡುತ್ತಿದ್ದಾರೆ. ಅದು ಬಿಟ್ಟು ಪಟಾಕಿ ಹೊಡೆಯಬೇಡಿ ಎನ್ನುವುದು ಎಷ್ಟು ಸರಿ..
ಆದರೆ ಸಂತೋಷದ ಸಂಗತಿ ಎಂದರೆ ಪ್ರತಿವರ್ಷ ಗಣೇಶ ಕೂಡಿಸುವುದು, ವರ್ಷ ವರ್ಷ ಪಟಾಕಿ ಹೊಡೆಯುವುದು ಹೆಚ್ಚುತ್ತಿರುವುದು ಖುಷಿ ಕೊಡುತ್ತಿದೆ. ಆದ್ದರಿಂದ ಹೆಚ್ಚು ಹೆಚ್ಚು ಪಟಾಕಿ ಹೊಡೆಯಿರಿ ಬೆಳಕಿನ ಹಬ್ಬದ ಬೆಳಕನ್ನು ಹೆಚ್ಚಿಸಿ.
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು..