ಬಯಕೆ (ಭಾಗ 1)

ಬಯಕೆ (ಭಾಗ 1)

ಇಂದು ಬಯಕೆ ಎಂದರೇನು? ಬಯಕೆ ಹೇಗಿದ್ದರೆ ಜೀವನ ಸುಂದರ ? ಇದರ ಬಗ್ಗೆ ತಿಳಿದುಕೊಳ್ಳೋಣ. ಈ ಜಗತ್ತಿನಲ್ಲಿ ಅಸಂಖ್ಯಾ ವಸ್ತುಗಳಿವೆ. ಆ ವಸ್ತುಗಳ ಜ್ಞಾನ ಮಾಡಿಕೊಳ್ಳುತ್ತೇವೆ. ಅವುಗಳಲ್ಲಿ ಕೆಲವು ನಮಗೆ ಹಿಡಿಸುತ್ತದೆ, ಹಿತ ಉಂಟು ಮಾಡುತ್ತವೆ. ಯಾವುದು ನಮಗೆ ಹಿಡಿಸಿತು?. ಹಿತವುಂಟು ಮಾಡಿತು? ಆ ವಸ್ತುವನ್ನು ಮನಸ್ಸು ಬೇಕು ಎನಿಸುತ್ತದೆ. ಇದಕ್ಕೆ ಬಯಕೆ ಎನ್ನುವರು. ಬಯಸಿದ ವಸ್ತು ಹಾಗೆ ದೊರಕುವುದಿಲ್ಲ. ಆ ವಸ್ತುಗಳನ್ನು ಪಡೆಯಲು ಶ್ರಮ ಪಡಬೇಕಾಗುತ್ತದೆ. ದುಡಿಯಬೇಕಾಗುತ್ತದೆ, ಪ್ರಯತ್ನ ಮಾಡಬೇಕಾಗುತ್ತದೆ. ವಸ್ತುವಿನ ಜ್ಞಾನ ಆಗಿ, ಅದು ನಮಗೆ ಹಿತವಾಯಿತು ಅಂದಾಗ, ಬಯಕೆಯಾಗುತ್ತದೆ. ಅದು ದೊರೆತಾಗ ನಾವು ಸುಖಿಯಾದೋ ಎನಿಸುತ್ತದೆ. ಆದರೆ ನಮ್ಮ ಎಲ್ಲಾ ಪ್ರಯತ್ನ ಸಫಲವಾಗಬಹುದು ಅಥವಾ ವಿಫಲ ಆಗಬಹುದು. ಸಫಲವೇ ಆಗಲಿ, ವಿಫಲವೇ ಆಗಲಿ ಬಯಕೆ ಹಾಗೆ ಉಳಿಯುತ್ತದೆ. ಬಯಕೆ ಹಾಗೆ ಉಳಿಯಿತು ಅಂದರೆ ನಮಗೆ ಹತಾಶೆಯಾಗುತ್ತದೆ. ಅಂದರೆ ಬದುಕಿನ ವೈಭವ ಕಳೆದುಕೊಂಡಂತೆ ಆಗುತ್ತದೆ. ಯಾವ ಮನುಷ್ಯ ಸಣ್ಣಪುಟ್ಟ ವಸ್ತುಗಳನ್ನು ಬಯಸುತ್ತಾನೋ?. ಆತನಿಗೆ ಆ ವಸ್ತುವಿನ ಜ್ಞಾನ ಆಗುತ್ತದೆ. ಆ ವಸ್ತು ಸುಲಭವಾಗಿ ಪಡೆಯುತ್ತಾನೆ. ಸುಖವಾಗಿ ಇರುತ್ತಾನೆ. ಸಮಾಧಾನವಾಗಿರುತ್ತಾನೆ. ಏಕೆಂದರೆ ಬಯಕೆ ಸರಳ ಮತ್ತು ಚಿಕ್ಕದಾಗಿರುತ್ತದೆ.

ಉದಾಹರಣೆಗೆ ಒಂದು ಪಕ್ಷಿ ಸಣ್ಣ ಮರಿಯಾಗಿ ಬೆಳೆಯುತ್ತಿತ್ತು. ಅಂದರೆ ಅದಕ್ಕೆ ರೆಕ್ಕೆ ಬಲಿತೂ ಅಂದರೆ ಹಾರುತ್ತದೆ, ಎಲ್ಲಾ ಕಡೆ ನೋಡುತ್ತದೆ. ಅದು ಎಲ್ಲಾ ಇಚ್ಚಿಸುವುದಿಲ್ಲ. ನನಗೇನು ಹಿಡಿಸುತ್ತದೆ ಅಲ್ಲಿಗೆ ಹಾರುತ್ತದೆ. ಅದು ಸಿಕ್ಕಿತು, ತಿಂದು ಸಂತೋಷಪಡುತ್ತದೆ. ಸಿಗಲಿಲ್ಲ ಅದನ್ನು ಮರೆತು ಬೇರೆ ಕಡೆ ಎಲ್ಲಿ ಸುಲಭವಾಗಿ ದೊರಕುತ್ತೋ ಅಲ್ಲಿಗೆ ಹಾರುತ್ತದೆ. ಇದು ಸುಖ ಅಥವಾ ದುಃಖದ ಸೂತ್ರ. ಮೊದಲು ವಸ್ತುವಿನ ಜ್ಞಾನ, ಜ್ಞಾನದ ನಂತರ ಇಚ್ಛೆ, ಇಚ್ಛೆಯ ನಂತರ ನಡೆಯುವ ಪ್ರಯತ್ನದ ಸಫಲತೆ ಅಥವಾ ವಿಫಲತೆ. ಇದು ಶ್ರೀಮಂತರೇ ಇರಲಿ ಬಡವರಿರಲಿ ಎಲ್ಲರಿಗೂ ಅಷ್ಟೇ. ಉದಾಹರಣೆಗೆ ಒಬ್ಬ ಭಿಕ್ಷುಕ ಇದ್ದಾನೆ ಎಂದು ಭಾವಿಸಿ. ಆತನ ಇಚ್ಛೆ ಏನು ಅಂದರೆ, ಆತನ ಭಿಕ್ಷಾ ಪಾತ್ರೆ ತುಂಬಬೇಕು. ಅಷ್ಟು ತುಂಬಿತು ಅಂದರೆ ಮುಂದೆ ಹೋಗುವುದಿಲ್ಲ. ಒಂದು ಮರದ ಕೆಳಗೆ ಕುಳಿತು ಊಟ ಮಾಡುತ್ತಾನೆ. ಉಳಿದದ್ದನ್ನು ಹೊರಗೆ ಚೆಲ್ಲುತ್ತಾನೆ. ಅದನ್ನು ಪಕ್ಷಿಗಳು ತಿಂದು ಆನಂದ ಪಡುತ್ತವೆ. ಈತ ಮರದ ಕೆಳಗೆ ಆನಂದವಾಗಿ ವಿಶ್ರಮಿಸುತ್ತಾನೆ. ಇದು ಭಿಕ್ಷುಕನ ಬಯಕೆ. ಅದೇ ರೀತಿ ಒಬ್ಬ ದೊಡ್ಡ ಮನುಷ್ಯ ಒಂದು ಸುಂದರ ವಾಹನ ನೋಡಿದ, ಇಚ್ಚೆ ಪಟ್ಟ, ಬಯಕೆ ಶುರುವಾಯಿತು. ಅದನ್ನು ಪಡೆದುಕೊಳ್ಳಲು ಪ್ರಯತ್ನ ಶುರು ಮಾಡುತ್ತಾನೆ. ಅದು ಸಿಗಲಿಲ್ಲ ಹತಾಶೆ ಹೊಂದುತ್ತಾನೆ. 

ಅಂದರೆ ಬಯಕೆ ನಮಗೆ ಎಟುಗುವಷ್ಟು ಇದ್ದರೆ, ಅದನ್ನು ಸುಲಭವಾಗಿ ಪೂರೈಸಿಕೊಳ್ಳಬಹುದು. ಒಬ್ಬ ಮನುಷ್ಯ ಹೊರಬೇಕೆಂದರೆ ಬಹಳ ತ್ರಾಸ ಆಗದಂತೆ ಹೊರಬೇಕು. ಅಂದರೆ ಆಗ ಆತ ಸಫಲ. ಹೊರಲಾರದಷ್ಟನ್ನು ಹೊತ್ತರೆ, ಬಾರವಾಗಿ ಅಲ್ಲೇ ಬಿಡುತ್ತಾನೆ, ಹತಾಶೆ ಹೊಂದುತ್ತಾನೆ. ಇದು ಮನುಷ್ಯರು ಹತಾಶೆ ಹೊಂದಲು ಕಾರಣ. ಪ್ರಯತ್ನ ಇಲ್ಲ ಅಂತ ಅಲ್ಲ. ಪ್ರಯತ್ನ ಇದೆ. ಆದರೆ ಬಯಕೆ ನಮಗೆ ನಿಲುಕಲಾರದಷ್ಟು ಇದೆ. ಅದು ನಿಲುಕುವುದಿಲ್ಲ ಎಂದಾಗ, ಅದನ್ನು ಹೇಗಾದರೂ ಮಾಡಿ ಪಡೆಯಬೇಕೆಂದು ನಿರ್ಧರಿಸಿದರೆ, ಆತ ಅದನ್ನು ಪಡೆಯಲು ಅಡ್ಡದಾರಿ ಹಿಡಿಯುತ್ತಾನೆ. ಹೀಗೆಲ್ಲ ನೋಡುತ್ತಾ ಇದ್ದೀವಲ್ಲ ರಾಜಕೀಯ, ಭ್ರಷ್ಟಾಚಾರ, ಲಂಚ ಇದೆಲ್ಲ ಯಾಕೆ ಅಂದರೆ ಬಯಕೆ ಹೆಚ್ಚು, ನಮ್ಮ ಸಾಮರ್ಥ್ಯ ಮೀರಿದ್ದು. ಅದನ್ನು ಪಡೆದೆ ತೀರಬೇಕೆಂಬ ಹಟ. ಇದರಿಂದ ಅಪ್ರಾಮಾಣಿಕನಾಗುತ್ತಾನೆ. ಸರಿ ತಪ್ಪು ಯೋಚಿಸುವುದಿಲ್ಲ. ಇದರಿಂದ ಕೈ ಕೆಡಿಸಿಕೊಳ್ಳುತ್ತಾನೆ, ಮನಸ್ಸು ಕೆಡಿಸಿಕೊಳ್ಳುತ್ತಾನೆ, ಸಂಬಂಧ ಕಳೆದುಕೊಳ್ಳುತ್ತಾನೆ, ಗೌರವ ಕಳೆದುಕೊಳ್ಳುತ್ತಾನೆ. ಆದ್ದರಿಂದ ಎಲ್ಲಾ ಬಯಕೆ ಕೆಟ್ಟದ್ದಲ್ಲ. ಯಾವುದು ನಮ್ಮ ಸಾಮರ್ಥ್ಯ, ಆರ್ಥಿಕ ಸ್ಥಿತಿಗೆ ಎಟುಕುವಂತಿದೆ ಅದು ಕೆಟ್ಟದ್ದಲ್ಲ. ಅದು ಎಟುಕದಂತಿದ್ದರೆ ಕೆಟ್ಟದ್ದು. ಅದಕ್ಕಾಗಿ ನಾವು ಬಯಕೆ ನಿಯಂತ್ರಿಸಬೇಕು. ಬಯಸಿದ್ದು ಪಡೆಯೋದು ಬಹಳ ಕಷ್ಟ. ಸುಖದ ಸೂತ್ರ ಬಯಕೆಯ ನಿಯಂತ್ರಣ. ವಸ್ತುಗಳು ಇರುವುದು ತಿಳಿದುಕೊಳ್ಳುವುದಕ್ಕೆ, ಅನುಭವಿಸುವುದಕ್ಕೆ (ಸಂತೋಷ ಪಡುವುದಕ್ಕೆ) ವಿನಹ, ಬಯಸಲು ಅಲ್ಲ. ಜಗತ್ತಿನ ಎಲ್ಲಾ ವಸ್ತು ಪಡೆಯಲು ಸಾಧ್ಯವಿಲ್ಲ. ದುಡಿದು ಸ್ವಲ್ಪ ಸ್ವಲ್ಪ ಪಡೆಯಬಹುದು. ಎಲ್ಲಾ ಇಚ್ಛೆ ಪೂರೈಸುವುದಲ್ಲ. ಸ್ವಲ್ಪ ಇಚ್ಚೆ ಪೂರೈಸಿ ಕೊಳ್ಳಬಹುದು. ಜ್ಞಾನದಲ್ಲಿ, ಅನುಭವದಲ್ಲಿ ನಿಯಂತ್ರಣ ಅಲ್ಲ. ಬಯಕೆಯಲ್ಲಿ ನಿಯಂತ್ರಣ. ಏನು ಬೇಕು ? ವಿಚಾರ ಮಾಡಬೇಕೆ ವಿನಹ. ಬಯಸಿದ ಬಳಿಕ ಹೇಗೆ ಪಡೆಯಬೇಕು ಅಂತ ಅಲ್ಲ. ಅದು ನನ್ನ ಬುದ್ಧಿ ಸಾಮರ್ಥ್ಯ, ಹಣದ ಸ್ಥಿತಿ ಎಷ್ಟು?. ಇದು ನಿಲುಕುವಂತೆ ಇರಬೇಕು. ಜಗತ್ತನೆಲ್ಲಿ ತಿಳಿಯಬೇಕು. ಉದಾಹರಣೆಗೆ, ಈ ಭೂಮಿ ಎಷ್ಟು ಫಲವತ್ತತೆ ಇದೆ ?. ಏನು ಹಾಕಬಹುದು?. ಏನು ಬೆಳೆಯಬಹುದು?. ಬೆಳೆಯುತ್ತದೆ ತಿಳಿದುಕೊಳ್ಳಬಹುದು. ಅದೇ ರೀತಿ ಸಾಗರದಲ್ಲಿ ನೀರೆಷ್ಟಿದೆ?. ತಿಳಿದುಕೊಳ್ಳಬಹುದು. ಹೊಳೆ ಹರಿಯುತ್ತಾ ಇದ್ದರೆ, ಎಷ್ಟು ಹರಿಯುತ್ತಿದೆ?. ತಿಳಿದುಕೊಳ್ಳಬಹುದು. ಎಲ್ಲಾ ಕುಡಿದು ಬಿಡಬೇಕು ಅಂತ ಬಯಸಬಾರದು. ಜಗತ್ತು , ವಸ್ತುಗಳು ತಿಳಿದುಕೊಳ್ಳುವುದಕ್ಕೆ ಮತ್ತು ತಿಳಿದು ಆನಂದ ಪಡುವುದಕ್ಕೆ ಅಂತ ತಿಳಿಯಬೇಕು. ಎಲ್ಲಾ ವಸ್ತುಗಳು ಸ್ಥಾನ ಬಂಧಿತ, ಕಾಲಬಂಧಿತ. ಪ್ರತಿಯೊಂದು ವಸ್ತುವಿಗೂ ವಿರೋಧಿ ಮುಖಗಳು ಇರುತ್ತವೆ. ಒಂದು ಮುಖ ಕಂಡರೆ, ಇನ್ನೊಂದು ಮುಖ ಕಾಣುವುದಿಲ್ಲ. 

(ಇನ್ನೂ ಇದೆ)

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ