ಬಿಡುಗಡೆಯ ಹಾಡುಗಳು (ಭಾಗ ೧೬) - ಹುಲಕುಂದ ಭೀಮಕವಿ

ಕಳೆದ ವಾರ ಹುಲಕುಂದ ಭೀಮಕವಿಯವರ ನೀಳ್ಗವನ ‘ಪವಿತ್ರ ಖಾದಿ’ ಯ ಮೊದಲ ಭಾಗವನ್ನು ಪ್ರಕಟ ಮಾಡಿದ್ದೆವು. ಈ ವಾರ ಅದರ ಕೊನೆಯ ಭಾಗವನ್ನು ಆಯ್ದು ಪ್ರಕಟಿಸಿದ್ದೇವೆ.
ಪವಿತ್ರ ಖಾದಿ (ಭಾಗ ೨)
ಹಣಯಿಲ್ಲದಕ್ಕ ನೀವು ಹೆಣದಂಗ ಕಾಣತೀರಿ ಕೊರಳಾನ ಭಂಗಾರ
ಸಮಾನ । ಒತ್ತಿ ಇಟ್ಟ ನೀವೆಲ್ಲರು ಕಟ್ಟತೀರಿ ಕರಿಮಣಿ । ನಷ್ಟ ಮಾಡಿ
ಬಿಟ್ಟಿರವ್ವಾ ಮನಿತನಾ । ಎಂತ ದಡ್ಡತನ ॥
ಶಾಂತಿಯಿಂದ ಶ್ಯಾಣ್ಯಾರಾಗಿ ಭ್ರಾಂತಿಬಿಟ್ಟ ಕೇಳಬೇಕ ಸತ್ಯವಂತ ಮಹಾ
ತ್ಮರ ವಚನವಾ । ಭಂಗಾರೇನು ಕಡಿಮಿಯಿಲ್ಲ ಬಾಳ ದಿವಸ ಹೋಗುದಿಲ್ಲ
ಹೇಳಿದಂಗ ಕೇಳಿದರ ಎಲ್ಲಾ ಜನಾ । ಸಿಗತತಿ ಪುನಃ ॥
ಭಂಗಾರದಿಂದ ಶಿಂಗಾರ ಮೊದಲಿನವರ ಜಂತ್ರ ತಿರುವಿ ದಿನಾ
ಭಂಗಾರಗಳಿಸಿ ಮಾಡಿಸಿಕೊಂಡಿದ್ದರ ಸಮಾನಾ । ಕೊಡಿ ಅರವಿಅಂತ
ತೊಡತಿದ್ರ । ನೂಲ ತಗುತಿದ್ರ । ರೂಪಾಯಿ ಗಳಸತಿದ್ರ । ಮೊದ
ಲಿನ ಜನಾ । ಹಿಡಿರೆಂತ ಬಿರಾಡಕ್ಕ ತಗೆದು ಕೊಡತಿದ್ರ ಹಣಾ ।
ಈಗಿನವರು ಚೈನಿಮಾಡತಾರ । ಬೈತಲಿ ತೆಗಿತಾರ । ಯಂಣಿ ಹಚ್ಚಿ
ದಿನಾ । ಅಳಗಾಲ ಒಡದರೊ ಉಳಿಯಲಿಲ್ಲ ಉತ್ಪನ್ನ ॥
ಚರಖಾ ತಿರುವಿ ನೀವೆಲ್ಲಾರು ದೊರಕಿಸಬೇಕ ಉತ್ಪನ್ನ । ತರಕ ಮಾಡಿ
ಬಿಡರೆವ್ವಾ ಚೈನಿ ಗುಣಾ ॥
ಇಷ್ಟೆಲ್ಲಾ ಕೇಳಿ ನೀವು ನಿಷ್ಟಾದಿಂದ ನಡೆದರ ಶ್ರೇಷ್ಟವಾಗತತಿ ನಮ್ಮ ಹಿಂದು
ಸ್ತಾನ । ಯಾವದೇನು ಕಡಮಿಯಿಲ್ಲ ಎರಡನೇಯವರು ಬೇಕಾಗಿಲ್ಲ ।
ಸಾವಲಂಬಿಯಾಗಿ ನಮ್ಮಯಲ್ಲ ಜನಾ । ದುಡಿಯಬೇಕ ದಿನಾ ॥
ರಾಟಿಮೆಟಿ ಉದ್ಯೋಗ ನೀವು ರಾತ್ರಿ ಹಗಲಿ ನಡೆಸಿದರ
ಖಾತ್ರಿಯಿಂದ ಹೋಗತದ ಬಡತನ ।
ಕಂಬಾರ ಬಡಿಗೇರ ಪಿಂಜಾರ ನೇಕಾರ ತಟಗಾರ
ಬಣಗಾರ ಉಪಜೀವನಾ । ಸಾಗತತಿ ದಿನಾ ॥
ಖಾದಿಕೇಂದ್ರ ಗ್ರಾಮೋದ್ಯೋಗ ಚರಖಾಸಂಘ ಮೊದಲ ಮಾಡಿ ಎಷ್ಟೋ
ಸಂಘ ಮಾಡಿದಾರ ಸ್ಥಾಪನಾ । ಪೊಡವಿಯೊಳಗಿನ ಕೂಲಿಕಾರ ಧೃಢದಿಂದ
ಇದರೊಳಗ ದುಡದರ ಪ್ರತಿದಿನಾ । ಸಿಗತತಿ ಹಣಾ ॥
ಹನ್ನೊಂದು ಸಾವಿರದಾ ಐದನೂರ ಎಂಬತ್ತೊಂದ ಮಂದಿ ನೇಕಾರಜನಾ ।
ಒಂದು ಲಕ್ಷನಾಲ್ವತ್ತೊಂಭತ್ತ ಸಾವಿರದಾ ಒಂದನೂರಾ ಇಪ್ಪತ್ತೊಂಭತ್ತ
ಜನಾ । ನೂಲತಾರಾ ದಿನಾ । ಹತ್ತು ಲಕ್ಷ ಹತ್ತು ಸಾವಿರದಾ ವಂಬಯ್ಯನೂರು
ತೊಂಬತ್ತೇಳ । ವರ್ಷ ಉಳಸತಾರ ಇಷ್ಟು ಹಣಾ । ಕೋಟಿ ಮಂದಿ
ನೊಲವರು ತೊಂಭತ್ತ ಲಕ್ಷ ನೆಯ್ಯುವರು ಬಿಟ್ಟು ಬಿಡದೆ ದುಡದರ
ಎಷ್ಟೋ ಹಣ । ಉಳುತತಿ ದಿನಾ ॥
ಕಷ್ಟ ಪಟ್ಟ ನಿತ್ಯ ದುಡಿಬೇಕ । ಕೈಕೆಲಸ ಬೆಳಸುದಕ । ನೂಲ ತೆಗಿಬೇಕ
ಖಾದಿ । ನೇದ ದಿನಾ ಚರಖಾ ಸಂಘಕ್ಕೆ ಓದಕೊಡಬೇಕ ನೇಕಾರ ಜನಾ ।
ಮೆಂಬರಾಗಬೇಕ । ಖಾದಿ ತೊಡಬೇಕ । ಬೆಂಬಲ ಕೊಡಬೇಕ ।
ಕಾಂಗ್ರೆಸಕ ಪೂರ್ಣ । ಅಂದರ ಸ್ವರಾಜ್ಯ ಆಗತತಿ ಸ್ವಾಧೀನಾ ॥
ಹಿಂಸಾ ಬಿಡಬೇಕ । ಸತ್ಯ ನುಡಿಬೇಕ । ಕೊಳ್ಳುದೆ ಬಿಡಬೇಕ ಪರದೇಶಿ
ಸಾಮಾನಾ । ಇದರಂತೆ ನಡೆದು ನೀವು ಗಳಿಸಬೇಕ ಉತ್ಪನ್ನಾ ॥
ಆ ದೋಷರಹಿತ ಗಾಂಧಿಯವರ ದಾಸನಾದ ಹುಲಕುಂದ ದೇಶಭಕ್ತ
ಭೀಮರಾಯರ ಕವನಾ