ಬಿಡುಗಡೆಯ ಹಾಡುಗಳು (ಭಾಗ ೧೬) - ಹುಲಕುಂದ ಭೀಮಕವಿ

ಬಿಡುಗಡೆಯ ಹಾಡುಗಳು (ಭಾಗ ೧೬) - ಹುಲಕುಂದ ಭೀಮಕವಿ

ಕಳೆದ ವಾರ ಹುಲಕುಂದ ಭೀಮಕವಿಯವರ ನೀಳ್ಗವನ ‘ಪವಿತ್ರ ಖಾದಿ’ ಯ ಮೊದಲ ಭಾಗವನ್ನು ಪ್ರಕಟ ಮಾಡಿದ್ದೆವು. ಈ ವಾರ ಅದರ ಕೊನೆಯ ಭಾಗವನ್ನು ಆಯ್ದು ಪ್ರಕಟಿಸಿದ್ದೇವೆ.

ಪವಿತ್ರ ಖಾದಿ (ಭಾಗ ೨)

ಹಣಯಿಲ್ಲದಕ್ಕ ನೀವು ಹೆಣದಂಗ ಕಾಣತೀರಿ ಕೊರಳಾನ ಭಂಗಾರ

ಸಮಾನ । ಒತ್ತಿ ಇಟ್ಟ ನೀವೆಲ್ಲರು ಕಟ್ಟತೀರಿ ಕರಿಮಣಿ । ನಷ್ಟ ಮಾಡಿ

ಬಿಟ್ಟಿರವ್ವಾ ಮನಿತನಾ । ಎಂತ ದಡ್ಡತನ ॥

 

ಶಾಂತಿಯಿಂದ ಶ್ಯಾಣ್ಯಾರಾಗಿ ಭ್ರಾಂತಿಬಿಟ್ಟ ಕೇಳಬೇಕ ಸತ್ಯವಂತ ಮಹಾ

ತ್ಮರ ವಚನವಾ । ಭಂಗಾರೇನು ಕಡಿಮಿಯಿಲ್ಲ ಬಾಳ ದಿವಸ ಹೋಗುದಿಲ್ಲ

ಹೇಳಿದಂಗ ಕೇಳಿದರ ಎಲ್ಲಾ ಜನಾ । ಸಿಗತತಿ ಪುನಃ ॥

 

ಭಂಗಾರದಿಂದ ಶಿಂಗಾರ ಮೊದಲಿನವರ ಜಂತ್ರ ತಿರುವಿ ದಿನಾ

ಭಂಗಾರಗಳಿಸಿ ಮಾಡಿಸಿಕೊಂಡಿದ್ದರ ಸಮಾನಾ । ಕೊಡಿ ಅರವಿಅಂತ

ತೊಡತಿದ್ರ । ನೂಲ ತಗುತಿದ್ರ । ರೂಪಾಯಿ ಗಳಸತಿದ್ರ । ಮೊದ

ಲಿನ ಜನಾ । ಹಿಡಿರೆಂತ ಬಿರಾಡಕ್ಕ ತಗೆದು ಕೊಡತಿದ್ರ ಹಣಾ ।

 

ಈಗಿನವರು ಚೈನಿಮಾಡತಾರ । ಬೈತಲಿ ತೆಗಿತಾರ । ಯಂಣಿ ಹಚ್ಚಿ 

ದಿನಾ । ಅಳಗಾಲ ಒಡದರೊ ಉಳಿಯಲಿಲ್ಲ ಉತ್ಪನ್ನ ॥

ಚರಖಾ ತಿರುವಿ ನೀವೆಲ್ಲಾರು ದೊರಕಿಸಬೇಕ ಉತ್ಪನ್ನ । ತರಕ ಮಾಡಿ

ಬಿಡರೆವ್ವಾ ಚೈನಿ ಗುಣಾ ॥

 

ಇಷ್ಟೆಲ್ಲಾ ಕೇಳಿ ನೀವು ನಿಷ್ಟಾದಿಂದ ನಡೆದರ ಶ್ರೇಷ್ಟವಾಗತತಿ ನಮ್ಮ ಹಿಂದು

ಸ್ತಾನ । ಯಾವದೇನು ಕಡಮಿಯಿಲ್ಲ ಎರಡನೇಯವರು ಬೇಕಾಗಿಲ್ಲ ।

ಸಾವಲಂಬಿಯಾಗಿ ನಮ್ಮಯಲ್ಲ ಜನಾ । ದುಡಿಯಬೇಕ ದಿನಾ ॥

 

ರಾಟಿಮೆಟಿ ಉದ್ಯೋಗ ನೀವು ರಾತ್ರಿ ಹಗಲಿ ನಡೆಸಿದರ

ಖಾತ್ರಿಯಿಂದ ಹೋಗತದ ಬಡತನ ।

ಕಂಬಾರ ಬಡಿಗೇರ ಪಿಂಜಾರ ನೇಕಾರ ತಟಗಾರ

ಬಣಗಾರ ಉಪಜೀವನಾ । ಸಾಗತತಿ ದಿನಾ ॥

 

ಖಾದಿಕೇಂದ್ರ ಗ್ರಾಮೋದ್ಯೋಗ ಚರಖಾಸಂಘ ಮೊದಲ ಮಾಡಿ ಎಷ್ಟೋ

ಸಂಘ ಮಾಡಿದಾರ ಸ್ಥಾಪನಾ । ಪೊಡವಿಯೊಳಗಿನ ಕೂಲಿಕಾರ ಧೃಢದಿಂದ

ಇದರೊಳಗ ದುಡದರ ಪ್ರತಿದಿನಾ । ಸಿಗತತಿ ಹಣಾ ॥

 

ಹನ್ನೊಂದು ಸಾವಿರದಾ ಐದನೂರ ಎಂಬತ್ತೊಂದ ಮಂದಿ ನೇಕಾರಜನಾ ।

ಒಂದು ಲಕ್ಷನಾಲ್ವತ್ತೊಂಭತ್ತ ಸಾವಿರದಾ ಒಂದನೂರಾ ಇಪ್ಪತ್ತೊಂಭತ್ತ

ಜನಾ । ನೂಲತಾರಾ ದಿನಾ । ಹತ್ತು ಲಕ್ಷ ಹತ್ತು ಸಾವಿರದಾ ವಂಬಯ್ಯನೂರು

ತೊಂಬತ್ತೇಳ । ವರ್ಷ ಉಳಸತಾರ ಇಷ್ಟು ಹಣಾ । ಕೋಟಿ ಮಂದಿ 

ನೊಲವರು ತೊಂಭತ್ತ ಲಕ್ಷ ನೆಯ್ಯುವರು ಬಿಟ್ಟು ಬಿಡದೆ ದುಡದರ 

ಎಷ್ಟೋ ಹಣ । ಉಳುತತಿ ದಿನಾ ॥

 

ಕಷ್ಟ ಪಟ್ಟ ನಿತ್ಯ ದುಡಿಬೇಕ । ಕೈಕೆಲಸ ಬೆಳಸುದಕ । ನೂಲ ತೆಗಿಬೇಕ

ಖಾದಿ । ನೇದ ದಿನಾ ಚರಖಾ ಸಂಘಕ್ಕೆ ಓದಕೊಡಬೇಕ ನೇಕಾರ ಜನಾ ।

 

ಮೆಂಬರಾಗಬೇಕ । ಖಾದಿ ತೊಡಬೇಕ । ಬೆಂಬಲ ಕೊಡಬೇಕ ।

ಕಾಂಗ್ರೆಸಕ ಪೂರ್ಣ । ಅಂದರ ಸ್ವರಾಜ್ಯ ಆಗತತಿ ಸ್ವಾಧೀನಾ ॥

 

ಹಿಂಸಾ ಬಿಡಬೇಕ । ಸತ್ಯ ನುಡಿಬೇಕ । ಕೊಳ್ಳುದೆ ಬಿಡಬೇಕ ಪರದೇಶಿ

ಸಾಮಾನಾ । ಇದರಂತೆ ನಡೆದು ನೀವು ಗಳಿಸಬೇಕ ಉತ್ಪನ್ನಾ ॥

 

ಆ ದೋಷರಹಿತ ಗಾಂಧಿಯವರ ದಾಸನಾದ ಹುಲಕುಂದ ದೇಶಭಕ್ತ

ಭೀಮರಾಯರ ಕವನಾ