ಭಿಕ್ಷೆ ಬೇಡುವ ಹುಚ್ಚು ಹೋಗಿಲ್ಲ !

ಭಿಕ್ಷೆ ಬೇಡುವ ಹುಚ್ಚು ಹೋಗಿಲ್ಲ !

ಇನ್ನೂ ನಮ್ಮ ಬೆಂಗಳೂರಿನಲ್ಲಿ ಭಿಕ್ಷೆಬೇಡುವ ಹುಚ್ಚು ಬಿಟ್ಟಂತಿಲ್ಲ. ಎಲ್ಲಿಯಾದರೂ ಕಸಗುಡಿಸಿ ಮನೆ ಕೆಲಸಮಾಡಿದರೂ ಒಬ್ಬ ತನ್ನ ಹೊಟ್ಟೆ ತುಂಬಿಕೊಳ್ಳಬಹುದು.  ಹೀನಾಯವಾಗಿ ಒಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಯನ್ನು ತಂದುಕೊಳ್ಳಬಾರದು. ಮುಂಬೈನಲ್ಲಿ ಭಿಕ್ಶೆಬೇಡುವ ವರ್ಗದವರು ಯಾರೆಂದರೆ, ಅಂಗವಿಕಲರು ಅಥವಾ ಯಾರಾದರೂ ಬೇಕಂತಲೇ ಹೊಡೆದು ಗಾಯಮಾಡಿ ಕೈ ಕತ್ತರಿಸಿ ಬೇಡುವ ಅಭ್ಯಾಸವನ್ನು ಹುಟ್ಟಿಸಿ, ಅವರಿಂದ ತಮ್ಮ ಗಳಿಕೆಯನ್ನು ಪಡೆಯುತ್ತಾರೆ.

ಅವರು ಸಾಮಾನ್ಯವಾಗಿ ರೈಲ್ವೆ ನಿಲ್ದಾಣ ಇಲ್ಲವೇ ರಸ್ತೆಗಳ  ಅಮ್ಚುಗಳಲ್ಲಿಗಳಲ್ಲಿ  ಅಥವಾ ದೇವಸ್ಥಾನಗಳ ಅಕ್ಕ ಪಕ್ಕದಲ್ಲಿ ಕುಳಿತು ಭಿಕ್ಷೆಬೇಡುವುದನ್ನು ನಾವು ಗಮನಿಸಬಹುದು. ಒಂದು ಗಮ್ಮತ್ತೆಂದರೆ ಇವರ ಬಳಿ ೫೦೦ ರೂ ನೋಟಿಗೂ ತಕ್ಷಣ ಚಿಲ್ಲರೆ ದೊರೆಯುತ್ತದೆ. ನೋಡಿ ತೆಗೆದುಕೊಳ್ಳಬೇಕು ಅಷ್ಟೆ ಖೋಟ ನೋಟು ಬದಲಾಯಿಸುವುದರಲ್ಲಿ ನಿಸ್ಸೀಮರಿವರು. 

'ಮುಂಬೈನ ಹಾಜಿ ಆಲಿ ಬಳಿಯ ದರ್ಗದ ಭಿಕ್ಷುಕರು' ಅತ್ಯಂತ ಹೀನಾವಸ್ಥೆಯಲ್ಲಿ ಬಿದ್ದುಕೊಂಡಿರುತ್ತಾರೆ. ಯಾಕೆಂದರೆ ರುಂಡ ಮತ್ತು ಎದೆಭಾಗ ಮಾತ್ರ ಅವರು ಹೊಂದಿದ್ದು ಅದರಲ್ಲೇ ಪುಟ್ ಪಾತ್ ಮೇಲೆ ಹೊರಳಾಡುತ್ತಾ ಎರಡು ಕಾಸಿಗಾಗಿ ಅಂಗಲಾಚುಚ ಅವರ ಆರ್ತನಾದವನ್ನು ಆಲಿಸಿದಾಗಲೇ  ಭಿಕ್ಷಾವೃತ್ತಿಯನ್ನು ಹೇರಿ 'ಈ ಪಾಪಿಗಳ ಹತ್ತಿರ ಹಣಗಳಿಸುವ ಚಂಡಾಲರ ಕೃರತ್ವದ ದೃಷ್ಯದ ಅರಿವಾಗುವುದು' !
'ಬೆಗ್ಗರ್ಸ್ ಕಾಲೋನಿ' ಅಂತ ಕೇಳಿದಿನಿ ಆದೃ ಅಲ್ಲಿನ ಪರಿಸ್ಥಿತಿ ಚೆನ್ನಾಗಿಲ್ಲ ಅಂತ ತಿಳೀತು. ವಯಸ್ಸಾದವರು ಮನೆ ಮಠವಿಲ್ಲದವರು ಏನುಮಾಡಬೇಕು ಪಾಪ !