ರಾಜ್ಯೋತ್ಸವ ಓಟ ೨೦೦೮

ರಾಜ್ಯೋತ್ಸವ ಓಟ ೨೦೦೮

ಬರಹ

ಕರ್ನಾಟಕ, ಒಂದೇ ರಾಜ್ಯ, ಒಂದೇ ಭಾಷೆ, ಗಂಧದ ನಾಡು ಮತ್ತು ಕಸ್ತೂರಿ ಬೀಡು. ಏಕೀಕರಣದ ಬಳಿಕ ಕರ್ನಾಟಕ ನವೆಂಬರ್ ೧ರಂದು ಉದಯಿಸಿತ್ತು. ಅಂದಿನಿಂದಲೂ ಈ ದಿನವನ್ನು ಕನ್ನಡ ರಾಜ್ಯೋತ್ಸವ ಎಂದೇ ನಾಡಿನ ಉದ್ದಗಲಕ್ಕೂ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯ ರಾಜ್ಯೋತ್ಸವವನ್ನು ೨೦೦೮ರ ನವೆಂಬರ್ ೧ರ ಶನಿವಾರದಂದು ಆಚರಿಸಲಾಗುತ್ತಿದೆ. ಅಂದು ಸರ್ಕಾರಿ ರಜೆ. ಆದರೂ ಎಲ್ಲೆಡೆ ಧ್ವಜಾರೋಹಣ ಮಾಡಲಾಗುತ್ತದೆ. ದಿನವಿಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

೫೩ನೇ ಕನ್ನಡ ರಾಜ್ಯೋತ್ಸವದ ದಿನದಂದು ನಾಡಿನ ಜನತೆಗೆ ವಿನೂತನ ಕೊಡುಗೆ ನೀಡಲು ಬಯಸಿರುವ ಬೆಂಗಳೂರು ಮೂಲದ ಕ್ರೀಡಾ ನಿರ್ವಹಣಾ ಸಂಸ್ಥೆ, ಟ್ರಿಪಲ್ ಟ್ರೀ ಎಕ್ಸಿಬಿಷನ್ ಅಂಡ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ರಾಜ್ಯದ ಐದು ನಗರಗಳಲ್ಲಿ ’ರಾಜ್ಯೋತ್ಸವ ಓಟ ೨೦೦೮’ ಹಮ್ಮಿಕೊಂಡಿದೆ. ಅಂದು ಈ ಓಟದಲ್ಲಿ ರಾಜ್ಯದ ಜನತೆ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದೆ.

ಈ ಓಟವನ್ನು ಏಕ ಕಾಲಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ಐದು ಜಿಲ್ಲೆ (ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಮತ್ತು ಧಾರವಾಡ) ಗಳಲ್ಲಿ ಆಯೋಜಿಸಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿ ಇಂತಹ ವಿಭಿನ್ನ ಹಾಗೂ ವಿಶೇಷ ಓಟವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗೆ ಕೆಳಗಿನ ಕೊಂಡಿಯನ್ನು ಚಿಟುಕಿಸಿ...
ರಾಜ್ಯೋತ್ಸವ ಓಟ...