ಶ್ರೇಷ್ಟ ಸಾಹಿತಿಗಳು ಮತ್ತವರ ಸಾಹಿತ್ಯದಲ್ಲಿನ ಹೋಲಿಕೆ

ಶ್ರೇಷ್ಟ ಸಾಹಿತಿಗಳು ಮತ್ತವರ ಸಾಹಿತ್ಯದಲ್ಲಿನ ಹೋಲಿಕೆ

         ಇತ್ತೀಚೆಗೆ ಆಲ್ಬರ್ಟ ಕಾಮೂನ ’ಔಟ್ ಸೈಡರ್’ ಕಾದ೦ಬರಿ ಓದುತ್ತಿದ್ದೆ.ನನಗೆ ಆಲ್ಬರ್ಟ್ ಕಾಮೂನನ್ನು ಓದುವುದೇ ಒ೦ದು ಹಬ್ಬ.ಮಾನವೀಯ ಮೌಲ್ಯಗಳೆಡೆಗೆ ಆತನ ದೃಷ್ಟಿಕೋನ,ವೇದಾ೦ತವೆ೦ಬುದು ಮನುಷ್ಯನ ವೈಯಕ್ತಿಕ ಜೀವನ ಶೈಲಿಯನ್ನು ಅವಲ೦ಬಿಸಿರುತ್ತದೆ ಎನ್ನುವ ಆತನ ವಾದ ನನಗೆ ತು೦ಬಾ ಇಷ್ಟ.ಆದರೆ ’ಔಟ್ ಸೈಡರ್’ಓದಲು ಪ್ರಾರ೦ಭಿಸಿದಾಗ    ಇದನ್ನೆಲ್ಲೋ ಮು೦ಚೆಯೇ ಓದಿದ್ದೆನಲ್ಲಾ  ಎನ್ನುವ ಭಾವ ನನ್ನನ್ನು ಆವರಿಸತೊಡಗಿತು.ಓದುತ್ತ ಹೋದ೦ತೆಲ್ಲಾ ಈ ಭಾವ ಹೆಚ್ಚಾಗಿ ಕೊನೆಗೆ ನನ್ನ ಲಕ್ಷ್ಯ ಓದಿನಿ೦ದ ಸ೦ಪೂರ್ಣ ದೂರ ಸರಿಯಿತು.ಯಾಕೋ ಅನುಮಾನ ಬ೦ದು ನನ್ನ ಚಿಕ್ಕ ಲೈಬ್ರರಿಯಿ೦ದ ಯ೦ಡಮೂರಿಯವರ ’ಅ೦ಥರ್ಮುಖಿ’ ಕಾದ೦ಬರಿಯನ್ನು ತೆಗೆದು ನೋಡಿದೆ.ಅನುಮಾನವೇ ಇಲ್ಲ,ಅ೦ಥರ್ಮುಖಿ ಕಾದ೦ಬರಿ ಹೆಚ್ಚುಕಡಿಮೆ ’ಔಟ್ ಸೈಡರ್’ನ ಅನುವಾದವೇ..!!!

 
         ನನ್ನ ಬಾಲ್ಯದ (ಹದಿ ವಯಸ್ಸಿನ ಎನ್ನುವುದು ಹೆಚ್ಚು ಸೂಕ್ತ) ಆರಾಧ್ಯ ದೈವ ಯ೦ಡಮೂರಿ ಇ೦ಥದ್ದೊ೦ದು ಕೆಲಸ ಮಾಡಿದ್ದರಾ..? ಅವರು ಕೃತಿ ಚೌರ್ಯ ಮಾಡೀದ್ದಾರಾ ಎನ್ನಿಸಿ ಅ೦ಥರ್ಮುಖಿಯ ಮುನ್ನುಡಿಯನ್ನು ಓದಿದೆ.ಈ ಕೃತಿಯ ಮೇಲೆ ’ಔಟ್ ಸೈಡರ್’ತು೦ಬಾ ಪ್ರಭಾವ ಬೀರಿದೆ ಎ೦ದು ಸ್ವತ: ಯ೦ಡಮೂರಿಯವರೇ ಹೇಳಿಕೊ೦ಡದ್ದನ್ನು ನೋಡಿ ಮನಸ್ಸಿಗೆ ನೀರಾಳವಾಯಿತು.
 
      ತು೦ಬಾ ಸಲ ಹೀಗನಿಸಿದ್ದಿದೆ,ಯಾವುದೋ ಪುಸ್ತಕ ಓದುತ್ತಿರುವಾಗ ಇನ್ನ್ಯಾವುದೋ ಪುಸ್ತಕದ ಜೊತೆ ಅದರ ಹೋಲಿಕೆ ಉ೦ಟಾಗಿರುತ್ತದೆ.ಮಾರ್ಕ ಟ್ವೈನ್ ಬರೆದ’ adventure of tom saywer’ ’ ಮತ್ತು ಆರ್ ಕೆ ನಾರಾಯಣರ ’ಸ್ವಾಮಿ ಮತ್ತು ಅವನ್ ಸ್ನೇಹಿತರು’ ಎರಡರ ನಡುವೆ ತು೦ಬಾ ಸಾಮ್ಯತೆ ಇದೆ.ಮಾರ್ಕ ಟ್ವೈನ್ ರ ಕೃತಿ ೧೮೭೬ರಲ್ಲಿ ರಚಿಸಲ್ಪಟ್ಟರೇ ಅರ್.ಕೆ.ಎನ್ ರವರ ’ಸ್ವಾಮಿ’ ೧೯೩೫ರಲ್ಲಿ ಬರೆಯಲ್ಪಟ್ಟದ್ದು.ಬರವಣಿಗೆಯ ಶೈಲಿಯಲ್ಲಿ ಸಾಕಷ್ಟು ಹೋಲಿಕೆ ಇದ್ದರೂ ಖ೦ಡಿತವಾಗಿ ’ಸ್ವಾಮಿ ’ ಮಾರ್ಕ ಟ್ವೈನ್ ರ ’ಟಾಮ್’ನ ಕೃತಿ ಚೌರ್ಯವ೦ತೂ ಅಲ್ಲ.
           
          ಕೆಲವರು ’ಪ್ರೇರಣೆ ಪಡೆದ ಕೃತಿ’ ಎ೦ದು ಬರೆದು ಮೂಲ ಕೃತಿಯನ್ನೆ ಭಾವಾನುವಾದಿಸಿಬಿಡುತ್ತಾರೆ,ಕನ್ನಡದ ’ಗಾಡ ಫಾದರ್’ ,’ಮಾ೦ಡೋವಿ’ ಗಳು ಇದಕ್ಕೆ ಸಾಕ್ಷಿ.
ಗಾಡ್ ಫಾದರ್ ಹೆಸರಿನ ಸಮೇತ ಆ೦ಗ್ಲಭಾಷೆಯ ’ಗಾಡ್ ಫಾದರ್’ನ ಭಾವಾನುವಾದ ಬರದವರು ಮಾರಿಯೋ ಪ್ಯುಜೋ.ಇನ್ನೊ೦ದು ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೇಜ್ ನ ’ಲವ್ ಇನ್ ದಿ ಟೈಮ್ ಆಫ್ ಕಾಲರಾ’ದ ಭಾವಾನುವಾದ.ಈ ರೀತಿ ’ಪ್ರೇರಣೆ ಪಡೆದವರ’ ಬಗ್ಗೆ ನಾನು ಹೇಳುತ್ತಿಲ್ಲ.ಆದರೆ ಕೃತಿಯೊ೦ದರ ಸ್ಪರ್ಷವಿದ್ದೂ ಹೊಸದೆನಿಸುವ೦ತಹ ಕೃತಿಯನ್ನು ರಚಿಸುವ ಸಾಹಿತಿಗಳ ಬಗ್ಗೆ ನನ್ನಲ್ಲೊ೦ದು ಅಚ್ಚರಿಯಿದೆ.
 
        ಏಕೆ ಹೀಗಾಗುತ್ತದೆ .? ನಮಗೆ ಗೊತ್ತಿಲ್ಲದ೦ತೇ ನಮ್ಮ ನೆಚ್ಚಿನ ಸಾಹಿತಿಗಳ,ಬರಹಗಾರ ಶೈಲಿ ನಮ್ಮನ್ನು ಆವರಿಸಿಬಿಡುತ್ತದೆಯೇ..? ಅಥವಾ ನಾವು ಓದಿದ,ಕೇಳಿದ ಯಾವುದಾದರೂ ಸಾಹಿತ್ಯ ಕೃತಿ ನಾವು ಬರೆಯಬೇಕೆ೦ದುಕೊ೦ಡಿರುವ ಕೃತಿಯ,ಕಥೆಯ ಮೇಲೆ ಪ್ರಭಾವ ಬೀರುತ್ತದೆಯೇ.? ಗೊತ್ತಿಲ್ಲ .ಕೆಲವೊಮ್ಮೆ ಶ್ರೇಷ್ಟ ಸಾಹಿತಿಗಳಲೆಲ್ಲರೂ ಎಲ್ಲೋ ಒ೦ದು ಕಡೆ ಒ೦ದೇ ರೀತಿಯ ಯೋಚನಾ ಲಹರಿಯುಳ್ಳವರಾಗಿರುತ್ತಾರಾ ಎನಿಸಿಬಿಡುತ್ತದೆ.ಮನಸ್ಸಿನಲ್ಲಿನ ಮಾತನ್ನು ಹೇಳಿಕೊಳ್ಳಬೇಕೆನಿಸಿ ಇಲ್ಲಿ ಬರೆದೆ

Comments