ಸಾಮ್ರಾಟನ ಸಂದೇಶ: ಫ್ರಾನ್ಜ್ ಕಾಫ್ಕಾ
ನಿನ್ನ ಮನೆಯ ಬಾಗಿಲನ್ನು ಅವನು ಮುಷ್ಟಿಯಲ್ಲಿ ಗುದ್ದುವ, ನಿನಗೆ ಪ್ರಿಯವಾಗುವ ಸದ್ದನ್ನು ಖಂಡಿತವಾಗಿಯೂ ನೀನು ಕೇಳುತ್ತೀಯೆ. ಈಗ ವ್ಯರ್ಥವಾಗಿ ದಣಿಯುತ್ತಿದ್ದಾನೆ. ಅರಮನೆಯ ಒಳಮನೆಯ ಒಳಕೋಣೆಯಲ್ಲಿ ದಾರಿ ಬಿಡಿಸಿಕೊಳ್ಳುತ್ತಿದ್ದಾನೆ. ಅವನು ಹೊರಗೆ ಬರುವುದೇ ಅಸಾಧ್ಯ. ಹಾಗೆ ಬಂದರೂ ಏನೂ ಸಾಧಿಸಿದ ಹಾಗೆ ಆಗುವುದಿಲ್ಲ. ಆಮೇಲೆ ಅವನು ಮೆಟ್ಟಿಲು ಇಳಿಯುವುದಕ್ಕೆ ಹೆಣಗಬೇಕು. ಹಾಗೆ ಮೆಟ್ಟಿಲಿಳಿದರೂ ಏನೂ ದಕ್ಕಿದಂತೆ ಅಲ್ಲ. ಸಭಾ ಮಂಟಪಗಳನ್ನು ದಾಟಬೇಕು. ಸಭಾಮಂಟಪಗಳನ್ನು ದಾಟಿದ ಮೇಲೆ ಅರಮನೆಯ ಹೊರಾಂಗಣಕ್ಕೆ ಬರಬೇಕು. ಹೊರಾಂಗಣದಲ್ಲಿ ಮತ್ತಷ್ಟು ಮೆಟ್ಟಿಲುಗಳು, ಮತ್ತಷ್ಟು ಸಭಾಂಗಣಗಳು. ಮತ್ತೆ ಇನ್ನೊಂದು ಅರಮನೆ. ಹೀಗೆ ಅರಮನೆಯಿಂದ ಪೂರ್ತಿ ಹೊರಗೆ ಬರುವುದಕ್ಕೆ ಸಾವಿರ ವರ್ಷವಾದರೂ ಬೇಕು. ಹಾಗೂ ಅವನು ಮಹಾದ್ವಾರದಿಂದಾಚೆಗೆ ಕಾಲಿಟ್ಟರೆ-ಎಂದೂ ಸಾಧ್ಯವಾಗದ ಕೆಲಸ ಅದು-ಜಗತ್ತಿನ ಕೇಂದ್ರವಾಗಿರುವ ರಾಜಧಾನಿ ಎಂಬ ಮಹಾ ನಗರ ಅವನಿಗೆದುರಾಗಿ ಬಿದ್ದುಕೊಂಡಿರುತ್ತದೆ. ರಾಜಧಾನಿ ಗಸಿ ತುಂಬಿ ಬಿರಿಯುವಂತಿರುತ್ತದೆ. ಕಿಕ್ಕಿರಿದ ಜನ ಸಂದಣಿ ಇರುತ್ತದೆ. ಯಾರೂ, ಸತ್ತ ಮನುಷ್ಯನ ಸಂದೇಶ ಹೊತ್ತು ತಂದವನೂ ಕೂಡ, ಹೆಣಗಿ, ಹೋರಾಡಿ, ಜಾಗಮಾಡಿಕೊಂಡು ಮುಂದೆ ಸರಿಯಲು ಆಗುವುದಿಲ್ಲ. ಸಂಜೆ ಕತ್ತಲಿಳಿಯುತ್ತಿರುವಾಗ ನೀನೇ ಕಿಟಕಿಯ ಬಳಿ ಕೂತು ಸಂದೇಶದ ಕನಸು ಕಾಣುತ್ತಿರು.