ಸ್ಟೇಟಸ್ ಕತೆಗಳು (ಭಾಗ ೧೩೨೧) - ಭಗವಂತ

ದೇವರು ಯಾಕೆ ಇಷ್ಟು ಕ್ರೂರಿ? ಬದುಕಿನ ಆಸೆ ಹೊಂದಿದವರನ್ನ ತನ್ನ ಬಳಿಗೆ ಕರೆಸಿಕೊಳ್ಳುತ್ತಿದ್ದಾನೆ. ಇದು ತಪ್ಪಲ್ಲವೇ? ಹೀಗ್ಯಾಕೆ ಮಾಡ್ತಾನೆ ದೇವರು? ಪ್ರಶ್ನೆ ಖಾರವಾಗಿತ್ತು ಸಂಸ್ಕೃತ ಪ್ರಾಧ್ಯಾಪಕ ವಾಗೀಶರ ಬಳಿ. ಉತ್ತರವನ್ನು ಸಮಂಜಸವಾಗಿ ನೀಡಿದರೂ, ನೋಡಿ ನೀವೊಂದು ಮದ್ದಿನ ಬಾಟಲ್ ಖರೀದಿಸುತ್ತೀರಿ. ಮನೆಯ ಟೇಬಲ್ ಮೇಲೆ ಜೋಡಿಸಿಟ್ಟಿದ್ದೀರಿ, ಆ ಮದ್ದಿಗೆ ಒಂದು ದಿನ ಕೊನೆಯ ದಿನವಿರುತ್ತದೆ. ಆ ದಿನದ ನಂತರ ಆ ಮದ್ದು ಉಪಯೋಗಕ್ಕಿಲ್ಲ. ಹೀಗಿರುವಾಗ ಒಂದು ದಿನ ನಿನ್ನ ಕೈ ಜಾರಿ ಆ ಮದ್ದಿನ ಬಾಟಲ್ ಜಾರಿ ಬಿದ್ದು ಒಡೆದು ಹೋಗುತ್ತದೆ. ಆಗ ನೀನು ಮದ್ದು ತಯಾರು ಮಾಡಿದವರ ತಪ್ಪೆಂದು ವಾದಿಸುತ್ತೀಯಾ ಇಲ್ಲಾ ತಾನೆ. ಹಾಗೆಯೇ ನಮ್ಮ ಜೀವನವನ್ನ ಕಾಪಾಡಿಕೊಳ್ಳಬೇಕಾದ್ದು ನಮ್ಮ ಜವಾಬ್ದಾರಿ. ಆರೋಗ್ಯ ನಿರ್ಲಕ್ಷಿಸದೆ ಎಲ್ಲವನ್ನು ಕಾಲ ಕಾಲಕ್ಕೆ ಸರಿಯಾಗಿ ನಿರ್ವಹಿಸದರೆ ನಿನ್ನ expair ದಿನಾಂಕ ಬರುವವರೆಗೂ ಬದುಕುತ್ತೀಯಾ? ನಮ್ಮನ್ನ ಭೂಮಿಗೆ ಕಳುಹಿಸಿದ ಭಗವಂತ ಯಾವತ್ತೂ ನಮ್ಮ ಸಾವನ್ನ ಬಯಸುವವನಲ್ಲ. ಅರ್ಥವಾಯಿತು ತಾನೆ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ